ETV Bharat / state

ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ: ಅನಂತ್ ಕುಮಾರ್​ ಹೆಗಡೆ

ತಮ್ಮ ಹೇಳಿಕೆ ಬಗ್ಗೆ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ನಾಯಕರಿಗೆ ಸಂಸದ ಅನಂತ ಕುಮಾರ್​ ಹೆಗಡೆ ತಿರುಗೇಟು ನೀಡಿದ್ದಾರೆ.

author img

By ETV Bharat Karnataka Team

Published : Jan 16, 2024, 4:11 PM IST

Updated : Jan 16, 2024, 8:07 PM IST

MP Ananth Kumar Hegade
ಸಂಸದ ಅನಂತ ಕುಮಾರ್​ ಹೆಗಡೆ
ಅನಂತ್ ಕುಮಾರ್​ ಹೆಗಡೆ

ಶಿರಸಿ: ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆ ಅಲ್ಲ. ವಿಜಯೇಂದ್ರ ಅವರು ಹೇಳಿರುವ ಮಾತು ಸರಿ ಇದೆ. ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ. ಎಲ್ಲೋ ಸಭೆಯಲ್ಲಿ ಕುಳಿತು ಮಾತನಾಡುವುದು ಸರಿ ಅಲ್ಲ. ಇದರ ಬಗ್ಗೆ ನಾವಿಬ್ಬರು ಕುಳಿತುಕೊಂಡು ಜನರ ಮುಂದೆ ಲೈವ್​ ಚರ್ಚೆ ಮಾಡೋಣ ಎಂದು ಬಿಜೆಪಿ ಸಂಸದ ಅನಂತ ಕುಮಾರ್​ ಹೆಗಡೆ, ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಶಿರಸಿಯ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರು ಯಾರೆಲ್ಲ ಏನೇನು ಮಾತನಾಡಿದ್ದಾರೆ, ಯಾರ ಬಗ್ಗೆ ಹೇಗೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ಹೇಳಬೇಕಾ? ಮಾಜಿ ಸಿಎಂ ಯಡಿಯೂರಪ್ಪ, ಅಮಿತ್​ ಶಾ, ನಮ್ಮ ದೇವಸ್ಥಾನದ ಬಗ್ಗೆ ಕಾಂಗ್ರೆಸ್​ ನಾಯಕರು ಕೀಳಾಗಿ ಮಾತನಾಡಿದ್ದಾರೆ. ಶರದ್​ ಪವಾರ್​ ಮಾತ್ರವಲ್ಲ ಕಾಂಗ್ರೆಸ್​ನ ಬಹುತೇಕ ನಾಯಕರು ಪಿಎಂ ಮೋದಿ ಅವರನ್ನು ಹಿಟ್ಲರ್​ ಎಂದು ಕರೆದಿದ್ದಾರೆ. ಇದಕ್ಕೆಲ್ಲ ಮಾಧ್ಯಮಗಳ ದಾಖಲೆಗಳೇ ಇವೆ" ಎಂದು ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ, ಬಿಜೆಪಿಯವರಿಗೆ ಯಾಕೆ? ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ್​ ಸಿಂಗ್​ ಮೋದಿ ಅವರನ್ನು ರಾವಣ ಎಂದು ಕರೆದರು. ಜಯರಾಂ ರಮೇಶ್​ ಅವರು ಭಸ್ಮಾಸುರ ಎಂದು ಕರೆದರು. ಮಣಿಶಂಕರ್​ ಅಯ್ಯರ್​ ವಿಷಸರ್ಪ ಎಂದು ಕರೆದ್ರು, ಇನ್ನೂ ಏನೆಲ್ಲಾ ಹೇಳಿಸಿಕೊಳ್ಳಬೇಕು ನಾವು?" ಎಂದು ಕೇಳಿದರು.

ನನ್ನ ಮುಂದೆ ಬಂದು ಚರ್ಚೆ ಮಾಡಲಿ- ಹೆಗಡೆ ಸವಾಲು: "ನನ್ನ ಹೇಳಿಕೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ನಾಯಕರು ಎಲ್ಲರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಎಂದರೆ ಏನು ಎಂದು ನಾನು ಪಾಠ ಮಾಡುತ್ತೇನೆ. ಏನು ಮಾತನಾಡಬೇಕು, ಯಾವ ಭಾಷೆಯಲ್ಲಿ ಹೇಗೆ ಮಾತನಾಡಬೇಕು, ಸಭ್ಯತೆ ಎಂದರೆ ಏನು ಎಂಬುವುದನ್ನು ನೀವು ತಿಳಿದುಕೊಳ್ಳಿ" ಎಂದರು.

"ನಾಲ್ಕೂವರೆ ವರ್ಷ ಎಲ್ಲಿದ್ರು, ಕುಂಭಕರ್ಣ ಎಂಬ ಕಾಂಗ್ರೆಸ್ ಟೀಕೆಗಳಿಗೆಲ್ಲದಕ್ಕೂ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ. ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಆರೋಗ್ಯ ಸರಿಯಾಗಿ ನೋಡಿಕೊಳ್ಳಿ ಎಂಬ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ. ಆರೋಗ್ಯದಲ್ಲಿ ಯಾವುದೇ ಸಂಶಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ನಾವು ಗೆಲ್ಲಿಸುತ್ತೇವೆ. ನನ್ನ ಟಿಕೆಟ್ ಬಗ್ಗೆ ಬೇರೆಯವರಿಗ್ಯಾಕೆ ಚಿಂತೆ. ನನಗೆ ಚಿಂತೆ ಆಗಬೇಕು. ಟಿಕೆಟ್ ಬಗ್ಗೆ ಯೋಚನೆ ಮಾಡೋಕೆ ಹೈಕಮಾಂಡ್ ಇದೆ" ಎಂದು ವಿರೋಧಿಗಳಿಗೆ ತಿರುಗೇಟು ಕೂಡಾ ನೀಡಿದರು.

ಇದನ್ನೂ ಓದಿ: ಹೆಗಡೆ ಪ್ರಚೋದನಾ ಹೇಳಿಕೆಯಿಂದ ಏನಾದರು ಘಟನೆ ನಡೆದರೆ ಅವರೇ ಜವಾಬ್ದಾರರು: ಗೃಹ ಸಚಿವ ಪರಮೇಶ್ವರ್

ಅನಂತ್ ಕುಮಾರ್​ ಹೆಗಡೆ

ಶಿರಸಿ: ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆ ಅಲ್ಲ. ವಿಜಯೇಂದ್ರ ಅವರು ಹೇಳಿರುವ ಮಾತು ಸರಿ ಇದೆ. ಸಂಸ್ಕೃತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ. ಎಲ್ಲೋ ಸಭೆಯಲ್ಲಿ ಕುಳಿತು ಮಾತನಾಡುವುದು ಸರಿ ಅಲ್ಲ. ಇದರ ಬಗ್ಗೆ ನಾವಿಬ್ಬರು ಕುಳಿತುಕೊಂಡು ಜನರ ಮುಂದೆ ಲೈವ್​ ಚರ್ಚೆ ಮಾಡೋಣ ಎಂದು ಬಿಜೆಪಿ ಸಂಸದ ಅನಂತ ಕುಮಾರ್​ ಹೆಗಡೆ, ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಶಿರಸಿಯ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರು ಯಾರೆಲ್ಲ ಏನೇನು ಮಾತನಾಡಿದ್ದಾರೆ, ಯಾರ ಬಗ್ಗೆ ಹೇಗೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ಹೇಳಬೇಕಾ? ಮಾಜಿ ಸಿಎಂ ಯಡಿಯೂರಪ್ಪ, ಅಮಿತ್​ ಶಾ, ನಮ್ಮ ದೇವಸ್ಥಾನದ ಬಗ್ಗೆ ಕಾಂಗ್ರೆಸ್​ ನಾಯಕರು ಕೀಳಾಗಿ ಮಾತನಾಡಿದ್ದಾರೆ. ಶರದ್​ ಪವಾರ್​ ಮಾತ್ರವಲ್ಲ ಕಾಂಗ್ರೆಸ್​ನ ಬಹುತೇಕ ನಾಯಕರು ಪಿಎಂ ಮೋದಿ ಅವರನ್ನು ಹಿಟ್ಲರ್​ ಎಂದು ಕರೆದಿದ್ದಾರೆ. ಇದಕ್ಕೆಲ್ಲ ಮಾಧ್ಯಮಗಳ ದಾಖಲೆಗಳೇ ಇವೆ" ಎಂದು ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ, ಬಿಜೆಪಿಯವರಿಗೆ ಯಾಕೆ? ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ್​ ಸಿಂಗ್​ ಮೋದಿ ಅವರನ್ನು ರಾವಣ ಎಂದು ಕರೆದರು. ಜಯರಾಂ ರಮೇಶ್​ ಅವರು ಭಸ್ಮಾಸುರ ಎಂದು ಕರೆದರು. ಮಣಿಶಂಕರ್​ ಅಯ್ಯರ್​ ವಿಷಸರ್ಪ ಎಂದು ಕರೆದ್ರು, ಇನ್ನೂ ಏನೆಲ್ಲಾ ಹೇಳಿಸಿಕೊಳ್ಳಬೇಕು ನಾವು?" ಎಂದು ಕೇಳಿದರು.

ನನ್ನ ಮುಂದೆ ಬಂದು ಚರ್ಚೆ ಮಾಡಲಿ- ಹೆಗಡೆ ಸವಾಲು: "ನನ್ನ ಹೇಳಿಕೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ನಾಯಕರು ಎಲ್ಲರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಎಂದರೆ ಏನು ಎಂದು ನಾನು ಪಾಠ ಮಾಡುತ್ತೇನೆ. ಏನು ಮಾತನಾಡಬೇಕು, ಯಾವ ಭಾಷೆಯಲ್ಲಿ ಹೇಗೆ ಮಾತನಾಡಬೇಕು, ಸಭ್ಯತೆ ಎಂದರೆ ಏನು ಎಂಬುವುದನ್ನು ನೀವು ತಿಳಿದುಕೊಳ್ಳಿ" ಎಂದರು.

"ನಾಲ್ಕೂವರೆ ವರ್ಷ ಎಲ್ಲಿದ್ರು, ಕುಂಭಕರ್ಣ ಎಂಬ ಕಾಂಗ್ರೆಸ್ ಟೀಕೆಗಳಿಗೆಲ್ಲದಕ್ಕೂ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ. ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಆರೋಗ್ಯ ಸರಿಯಾಗಿ ನೋಡಿಕೊಳ್ಳಿ ಎಂಬ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ. ಆರೋಗ್ಯದಲ್ಲಿ ಯಾವುದೇ ಸಂಶಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ನಾವು ಗೆಲ್ಲಿಸುತ್ತೇವೆ. ನನ್ನ ಟಿಕೆಟ್ ಬಗ್ಗೆ ಬೇರೆಯವರಿಗ್ಯಾಕೆ ಚಿಂತೆ. ನನಗೆ ಚಿಂತೆ ಆಗಬೇಕು. ಟಿಕೆಟ್ ಬಗ್ಗೆ ಯೋಚನೆ ಮಾಡೋಕೆ ಹೈಕಮಾಂಡ್ ಇದೆ" ಎಂದು ವಿರೋಧಿಗಳಿಗೆ ತಿರುಗೇಟು ಕೂಡಾ ನೀಡಿದರು.

ಇದನ್ನೂ ಓದಿ: ಹೆಗಡೆ ಪ್ರಚೋದನಾ ಹೇಳಿಕೆಯಿಂದ ಏನಾದರು ಘಟನೆ ನಡೆದರೆ ಅವರೇ ಜವಾಬ್ದಾರರು: ಗೃಹ ಸಚಿವ ಪರಮೇಶ್ವರ್

Last Updated : Jan 16, 2024, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.