ETV Bharat / state

ಹಸಿರು ಸಮೃದ್ಧಿಗಾಗಿ 'ಸಸ್ಯಸಂತೆ': ಶಿರಸಿಯಲ್ಲಿ 2.5 ಲಕ್ಷ ಸಸಿ ಮಾರಾಟ ಮಾಡುವ ಗುರಿ

author img

By

Published : Jun 25, 2019, 9:17 PM IST

ಹಸಿರು ವೃದ್ಧಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ಮಾರಾಟ ಮಾಡಲು ಸಸ್ಯ ಸಂತೆಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ವೃತ್ತದಲ್ಲಿರುವ ಕದಂಬ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಆಯೋಜಿಸಲಾಗಿದೆ.

ಸಸ್ಯಸಂತೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ವೃತ್ತದಲ್ಲಿರುವ ಕದಂಬ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಹಸಿರು ವೃದ್ಧಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ಮಾರಾಟ ಮಾಡಲು ಸಸ್ಯ ಸಂತೆ ಆಯೋಜಿಸಲಾಗಿದೆ.

ಶಿರಸಿಯಲ್ಲಿ ಸಸ್ಯಸಂತೆ

ತೆಂಗು, ಮಾವು, ಏಲಕ್ಕಿ, ಕಾಳುಮೆಣಸು, ರುದ್ರಾಕ್ಷಿ ಗಿಡ, ಬಕ್ಕೆ, ಪತ್ರೆ ಗಿಡಗಳು, ಅಡಿಕೆ ಸಸಿ, ಜಾಯಿಕಾಯಿ, ಹಲಸು, ವಿವಿಧ ಕಾಡು ಜಾತಿಯ ಗಿಡಗಳು ಸೇರಿ 55ಕ್ಕೂ ಅಧಿಕ ತಳಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿವೆ. ಡಿಸಿಎಫ್ ಎಸ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಒಂದು ತಿಂಗಳುಗಳ ಕಾಲ ಸಸ್ಯ ಸಂತೆ ನಡೆಯಲಿದೆ. ರಿಯಾಯಿತಿ ದರದಲ್ಲಿ ರೈತರಿಗೆ ಸಸಿಗಳು ದೊರೆಯಲಿವೆ.

ಕದಂಬ ಮಾರ್ಕೆಟಿಂಗ್​ ಸೊಸೈಟಿ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮಾತನಾಡಿ, ಕಳೆದ 7 ವರ್ಷದಿಂದ ಸಸ್ಯ ಸಂತೆ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ 1.5 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿದೆ. ಈ ಬಾರಿ 2.5 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ರೈತರು ಬೆಳೆದ ಗಿಡಗಳನ್ನು ತಂದು ಮಾರಾಟ ಮಾಡುವ ಅವಕಾಶವೂ ಇದೆ ಎಂದರು.

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ವೃತ್ತದಲ್ಲಿರುವ ಕದಂಬ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಹಸಿರು ವೃದ್ಧಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ಮಾರಾಟ ಮಾಡಲು ಸಸ್ಯ ಸಂತೆ ಆಯೋಜಿಸಲಾಗಿದೆ.

ಶಿರಸಿಯಲ್ಲಿ ಸಸ್ಯಸಂತೆ

ತೆಂಗು, ಮಾವು, ಏಲಕ್ಕಿ, ಕಾಳುಮೆಣಸು, ರುದ್ರಾಕ್ಷಿ ಗಿಡ, ಬಕ್ಕೆ, ಪತ್ರೆ ಗಿಡಗಳು, ಅಡಿಕೆ ಸಸಿ, ಜಾಯಿಕಾಯಿ, ಹಲಸು, ವಿವಿಧ ಕಾಡು ಜಾತಿಯ ಗಿಡಗಳು ಸೇರಿ 55ಕ್ಕೂ ಅಧಿಕ ತಳಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿವೆ. ಡಿಸಿಎಫ್ ಎಸ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಒಂದು ತಿಂಗಳುಗಳ ಕಾಲ ಸಸ್ಯ ಸಂತೆ ನಡೆಯಲಿದೆ. ರಿಯಾಯಿತಿ ದರದಲ್ಲಿ ರೈತರಿಗೆ ಸಸಿಗಳು ದೊರೆಯಲಿವೆ.

ಕದಂಬ ಮಾರ್ಕೆಟಿಂಗ್​ ಸೊಸೈಟಿ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮಾತನಾಡಿ, ಕಳೆದ 7 ವರ್ಷದಿಂದ ಸಸ್ಯ ಸಂತೆ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ 1.5 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿದೆ. ಈ ಬಾರಿ 2.5 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ರೈತರು ಬೆಳೆದ ಗಿಡಗಳನ್ನು ತಂದು ಮಾರಾಟ ಮಾಡುವ ಅವಕಾಶವೂ ಇದೆ ಎಂದರು.

Intro: ಶಿರಸಿ :
ಹಸಿರು ವೃದ್ಧಿಸಲು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅರಣ್ಯ ವೃತ್ತದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕದಂಬ ಮಾರ್ಕೆಟಿಂಗ್ ಸೊಸೈಟಿ ಸಹಯೋಗದಲ್ಲಿ ಸೊಸೈಟಿ ಆವರಣದಲ್ಲಿ ವಿವಿಧ ಜಾತಿ ಗಿಡಗಳ ಮಾರಾಟದ ಸಸ್ಯ ಸಂತೆ ಕಾರ್ಯಕ್ರಮ ನಡೆಯುತ್ತಿದೆ.

Body:ತೆಂಗು, ಮಾವು, ಎಲಕ್ಕಿ, ಕಾಳುಮೆಣಸು, ರುದ್ರಾಕ್ಷಿ ಗಿಡ, ಬಕ್ಕೆ, ಪತ್ರೆ ಗಿಡಗಳು, ಅಡಿಕೆ ಸಸಿ, ಜಾಯಿಕಾಯಿ, ಹಲಸು, ವಿವಿಧ ಕಾಡು ಮರಗಳ ಗಿಡಗಳು ಸೇರಿದಂತೆ ೫೫ ಕ್ಕೂ ಅಧಿಕ ವಿವಿಧ ತಳಿಗಳು ಸಂತೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಡಿಸಿಎಫ್ ಎಸ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಮಂಗಳವಾರದಿಂದ ಒಂದು ತಿಂಗಳುಗಳ ಕಾಲ ಸಸ್ಯ ಸಂತೆ ನಡೆಯಲಿದೆ. ರಿಯಾಯಿತಿ ದರದಲ್ಲಿ ರೈತರಿಗೆ ಅವಶ್ಯವಿದ್ದಷ್ಟು ಸಸಿಗಳು ದೊರಯಲಿದೆ.



ಕದಂಬಾ ಮಾರ್ಕೆಟ್ ನ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮಾತನಾಡಿ, ಕಳೆದ 7 ವರ್ಷದಿಂದ ಸಸ್ಯ ಸಂತೆಯನ್ನು ಆಯೋಜಿಸುತ್ತ ಬಂದಿದ್ದೇವೆ. ಕಳೆದ ವರ್ಷ 1.5 ಲಕ್ಷ ಸಸಿ ಮಾರಾಟಮಾಡಲಾಗಿತ್ತು. ಈ ಬಾರಿ ೨.೫ ಲಕ್ಷ ಸಸಿಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಇಲ್ಲಿ ರೈತರು ಬೆಳೆದ ಗಿಡಗಳನ್ನು ತಂದು ಮಾರಾಟ ಮಾಡುವ ಅವಕಾಶವೂ ಇದ್ದು, ಹೆಚ್ಚೆಚ್ಚು ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
........
ಸಂದೇಶ ಭಟ್ ಶಿರಸಿ. Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.