ETV Bharat / state

ಶಿರಸಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಥಳಿತ

author img

By

Published : Jul 29, 2019, 7:34 PM IST

ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಕಾಮುಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಸಾರ್ವಜನಿಕರಿಂದ ಒದೆ ತಿಂದು ನಂತರ ಪೊಲೀಸರ ಅತಿಥಿಯಾದ ಘಟನೆ ಉತ್ತರ ಕನ್ನಡದ ‌ಶಿರಸಿ ತಾಲೂಕಿನಲ್ಲಿ ನಡೆದಿದೆ.

ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ

ಶಿರಸಿ: ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಕಾಮುಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚರಕ್ಕೆ ಯತ್ನಿಸಿ, ಸಾರ್ವಜನಿಕರಿಂದ ಒದೆ ತಿಂದು ನಂತರ ಪೊಲೀಸರ ಅತಿಥಿಯಾದ ಘಟನೆ ಉತ್ತರ ಕನ್ನಡದ ‌ಶಿರಸಿ ತಾಲೂಕಿನಲ್ಲಿ ನಡೆದಿದೆ.

uttarkannada
ವಿದ್ಯಾರ್ಥಿನಿಯ ಅತ್ಯಾಚರಕ್ಕೆ ಯತ್ನಿಸಿದ ಆರೋಪಿ

ಮಂಜಗುಣಿಯ ಪ್ರಕಾಶ ಚಂದು ಮರಾಠಿ (24) ಬಂಧಿತ ಆರೋಪಿ. ವಿದ್ಯಾರ್ಥಿನಿ ಎಂದಿನಂತೆ ಕಾಲೇಜು ಮುಗಿಸಿಕೊಂಡು ಅರಣ್ಯ ಪ್ರದೇಶದ ರಸ್ತೆಯಲ್ಲಿ ಮನೆಗೆ ನಡೆದು ಸಾಗುತಿದ್ದಾಗ ಆರೋಪಿ ಅವಳ ಹಿಂದೆ ಹೋಗಿ ಯಾರೂ ಇಲ್ಲದಿರುವದನ್ನು ಗಮನಿಸಿ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚೀರಿಕೊಂಡಿದ್ದಾಳೆ. ಚೀರಾಟದ ಶಬ್ದ ಅದೇ ರಸ್ತೆಯಿಂದ ಸಾಗುತಿದ್ದ ವ್ಯಕ್ತಿಯೋರ್ವರಿಗೆ ಕೇಳಿಸಿದ್ದು, ತಕ್ಷಣ ವಿದ್ಯಾರ್ಥಿನಿ ನೆರವಿಗೆ ಬಂದು ಕಾಪಾಡಿದ್ದಾರೆ.

ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಸ್ಥಳಕ್ಕೆ ಬಂದ ಗ್ರಾಮಸ್ಥರು ಪ್ರಕಾಶನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ: ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಕಾಮುಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚರಕ್ಕೆ ಯತ್ನಿಸಿ, ಸಾರ್ವಜನಿಕರಿಂದ ಒದೆ ತಿಂದು ನಂತರ ಪೊಲೀಸರ ಅತಿಥಿಯಾದ ಘಟನೆ ಉತ್ತರ ಕನ್ನಡದ ‌ಶಿರಸಿ ತಾಲೂಕಿನಲ್ಲಿ ನಡೆದಿದೆ.

uttarkannada
ವಿದ್ಯಾರ್ಥಿನಿಯ ಅತ್ಯಾಚರಕ್ಕೆ ಯತ್ನಿಸಿದ ಆರೋಪಿ

ಮಂಜಗುಣಿಯ ಪ್ರಕಾಶ ಚಂದು ಮರಾಠಿ (24) ಬಂಧಿತ ಆರೋಪಿ. ವಿದ್ಯಾರ್ಥಿನಿ ಎಂದಿನಂತೆ ಕಾಲೇಜು ಮುಗಿಸಿಕೊಂಡು ಅರಣ್ಯ ಪ್ರದೇಶದ ರಸ್ತೆಯಲ್ಲಿ ಮನೆಗೆ ನಡೆದು ಸಾಗುತಿದ್ದಾಗ ಆರೋಪಿ ಅವಳ ಹಿಂದೆ ಹೋಗಿ ಯಾರೂ ಇಲ್ಲದಿರುವದನ್ನು ಗಮನಿಸಿ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚೀರಿಕೊಂಡಿದ್ದಾಳೆ. ಚೀರಾಟದ ಶಬ್ದ ಅದೇ ರಸ್ತೆಯಿಂದ ಸಾಗುತಿದ್ದ ವ್ಯಕ್ತಿಯೋರ್ವರಿಗೆ ಕೇಳಿಸಿದ್ದು, ತಕ್ಷಣ ವಿದ್ಯಾರ್ಥಿನಿ ನೆರವಿಗೆ ಬಂದು ಕಾಪಾಡಿದ್ದಾರೆ.

ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಸ್ಥಳಕ್ಕೆ ಬಂದ ಗ್ರಾಮಸ್ಥರು ಪ್ರಕಾಶನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿರಸಿ :
ಕಾಲೇಜು ವಿದ್ಯಾರ್ಥಿನಿಯೋರ್ವಳು ಮನೆಗೆ ಹೋಗುತ್ತಿದ್ದಾಗ ಕಾಮುಕನೊಬ್ಬ ಆಕೆಯ ಮಾನಭಂಗಕ್ಕೆ ಯತ್ನಿಸಿ ನಂತರ ಸಾರ್ವಜನಿಕರಿಂದ ಒದೆ ತಿಂದು ನಂತರ ಪೊಲೀಸರ ಅತಿಥಿಯಾದ ಘಟನೆಯೊಂದು ಉತ್ತರ ಕನ್ನಡದ ‌ಶಿರಸಿ ತಾಲೂಕಿನ ಗೋಳಿ ಕ್ರಾಸ್ ಬಳಿ ನಡೆದಿದೆ.

Body:ಮಂಜಗುಣಿಯ ಪ್ರಕಾಶ ಚಂದು ಮರಾಠಿ (೨೪) ಬಂಧಿತ ಆರೋಪಿಯಾಗಿದ್ದಾನೆ. ವಿದ್ಯಾರ್ಥಿನಿ ಎಂದಿನಂತೆ ಕಾಲೇಜನ್ನು ಮುಗಿಸಿಕೊಂಡು ಅರಣ್ಯ ಪ್ರದೇಶದ ರಸ್ತೆಯಲ್ಲಿ ಮನೆಗೆ ನಡೆದು ಸಾಗುತಿದ್ದಾಗ ಆರೋಪಿ ಅವಳ ಹಿಂದೆ ಹೋಗಿ ಯಾರೂ ಇಲ್ಲದಿರುವದನ್ನು ಗಮನಿಸಿ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಇದರಿಂದ ದಿಗ್ಬ್ರಾಂತಳಾದ ವಿದ್ಯಾರ್ಥಿನಿ ಚಿರಿಕೊಂಡಿದ್ದರಿಂದ ಚಿರಾಟದ ಶಬ್ದ ಅದೇ ರಸ್ತೆಯಿಂದ ಸಾಗುತಿದ್ದ ವ್ಯಕ್ತಿಯೊರ್ವರಿಗೆ ಕೇಳಿಸಿದ್ದು, ತಕ್ಷಣ ವಿದ್ಯಾರ್ಥಿನಿ ನೆರವಿಗೆ ಬಂದು ಕಾಪಾಡಿದ್ದಾರೆ.

ಮಾನಭಂಗದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ ಸ್ಥಳಕ್ಕೆ ಬಂದ ಗ್ರಾಮಸ್ಥರು ಪ್ರಕಾಶನನ್ನು ಥಳಿಸಿ ಪೋಲಿಸರಿಗೆ ನೀಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.........
ಸಂದೇಶ ಭಟ್ ಶಿರಸಿ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.