ETV Bharat / state

ಕಾಂಗ್ರೆಸ್ ಟಿಕೆಟ್‌: ಆರ್‌.ವಿ.ದೇಶಪಾಂಡೆ ವಿರುದ್ಧ ಪ್ರಣವಾನಂದ ಸ್ವಾಮೀಜಿ ಅಸಮಾಧಾನ

author img

By

Published : Apr 2, 2023, 6:50 AM IST

ಆರ್.ವಿ.ದೇಶಪಾಂಡೆಯವರು ಕಾಂಗ್ರೆಸ್​ ಟಿಕೆಟ್​ಗೆ ನಾಮಧಾರಿಗಳ ಬದಲಾಗಿ ಮೇಲಿನ ವರ್ಗದವರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಅವರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ- ಪ್ರಣವಾನಂದ ಸ್ವಾಮೀಜಿ.

Etv BharatPranavananda Swamiji reaction on r v deshpande
ನಾಮಧಾರಿ ಸಮಾಜಕ್ಕೆ ಟಿಕೆಟ್​ ನೀಡದಕ್ಕೆ ಪ್ರಣವಾನಂದ ಸ್ವಾಮೀಜಿ ಆಕ್ರೋಶ
ಪ್ರಣವಾನಂದ ಸ್ವಾಮೀಜಿ ಅಸಮಾಧಾನ

ಕಾರವಾರ: ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ 3 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನುಳಿದ ಮೂರು ಕ್ಷೇತ್ರದಲ್ಲಿ ಬಹುಸಂಖ್ಯಾತ ನಾಮಧಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಈಡಿಗ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಆರ್.ವಿ.ದೇಶವಾಂಡೆ ವಿರುದ್ಧ ಆಕ್ರೋಶ ಹೊರ ಹಾಕಿದರು.

ಈ ಕುರಿತು ಮಾತನಾಡಿರುವ ಸ್ವಾಮೀಜಿ, ಉತ್ತರ ಕನ್ನಡದಲ್ಲಿ ನಾಮಧಾರಿ ಸಮುದಾಯ 5 ರಿಂದ 6 ಲಕ್ಷ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂದರೆ, 80 ರಿಂದ ಒಂದು ಲಕ್ಷ ಮತದಾರರನ್ನು ಹೊಂದಿದ್ದರೂ ಈ ಯಾವ ಕ್ಷೇತ್ರದಲ್ಲಿಯೂ ನಾಮಧಾರಿ ಸಮುದಾಯಕ್ಕೆ ಟಿಕೆಟ್​ ಘೋಷಿಸಿಲ್ಲ ಎಂದರು.

'ನಾಮಧಾರಿ ಸಮಾಜ ಮುಗಿಸು ಯತ್ನ': ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ಕ್ಷೇತ್ರಗಳಲ್ಲಿ ಆರ್.ವಿ.ದೇಶಪಾಂಡೆ ಅವರು ಕಾಂಗ್ರೆಸ್​ ಟಿಕೆಟ್​ಗೆ ಮೇಲಿನ ವರ್ಗದವರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇನೆ. ನಾಮಧಾರಿ ಸಮಾಜವನ್ನು ಮುಗಿಸು ಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್​.ವಿ.ದೇಶಪಾಂಡೆಯವರ ನಡೆಯನ್ನು ಇಡೀ ನಾಮಧಾರಿ ಸಮುದಾಯ ಅಷ್ಟೇ ಅಲ್ಲ ಈಡಿಗ, ಬಿಲ್ಲವ ಸಮುದಾಯವೂ ಖಂಡಿಸುತ್ತಿದೆ. ಒಂದು ವೇಳೆ ಅಲ್ಲಿನ ನಾಮಧಾರಿಗಳಿಗೆ ಅನ್ಯಾಯವಾದರೇ ಮಂಗಳೂರಿನ ಬಿಲ್ಲವರು, ಶಿವಮೊಗ್ಗದ ದಿವರು ಮತ್ತು ರಾಜ್ಯಾದ್ಯಂತ ಇರುವ ಈಡಿಗರು ಅವರ ಜೊತೆ ನಿಂತುಕೊಂಡು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಕಾಂಗ್ರೆಸ್​ ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ನಾಮಧಾರಿ ನಾಯಕರಿಗೆ ಟಿಕೆಟ್​ ನೀಡಬೇಕು. ಇಲ್ಲವಾದರೆ ನಾನೇ ಸ್ವತಃ ಉತ್ತರಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಕೈಗೊಂಡು ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಪಾಂಡೆ ಪ್ರತಿಕ್ರಿಯೆ: ಪ್ರಣವಾನಂದ ಸ್ವಾಮೀಜಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಆರ್.ವಿ.ದೇಶಪಾಂಡೆ, ಸ್ವಾಮೀಜಿ ಮಾತಿನಿಂದ ನನ್ನ ಮನಸ್ಸಿಗೆ ನೋವಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ನಾಮಧಾರಿ ಸಮಾಜ ಹಾಗೂ ನನ್ನ ಸಂಬಂಧ ಬಹಳ ಪ್ರೀತಿಯ ಮತ್ತು ಬಹಳ ವರ್ಷಗಳಿಂದ ಪರಸ್ಪರ ಗೌರವದ ಸಮನ್ವಯತೆಯನ್ನು ಹೊಂದಿದೆ. ನನ್ನ ಜೀವನದಲ್ಲಿಯೇ ಜಾತಿ ರಾಜಕಾರಣ ಮಾಡಿಲ್ಲ ಎಂದರು.

ಒಂದು ವೇಳೆ ಅ ರೀತಿಯ ರಾಜಕಾರಣ ಮಾಡಿದ್ದರೆ ನಾನು ಇಷ್ಟು ವರ್ಷ ರಾಜಕೀಯದಲ್ಲಿ ಇರುತ್ತಿರಲಿಲ್ಲ. ಎಲ್ಲಾ ಜಾತಿ, ಧರ್ಮದವರ ಸಹಕಾರದಿಂದ ಕೆಲಸ ಮಾಡಬೇಕು ಎಂಬುದು ನನ್ನ ಧ್ಯೇಯ, ಧೋರಣೆ ಆಗಿದೆ. ಆ ಪ್ರಕಾರ ಹೆಜ್ಜೆ ಹಾಕುತ್ತ ಬಂದಿದ್ದೇನೆ. ಪೂಜ್ಯ ಸ್ವಾಮೀಜಿಗಳು ತಪ್ಪು ಮಾಹಿತಿಯಿಂದ ಹೇಳಿಕೆ ಕೊಟ್ಟಿದ್ದಾರೆ. ನಾನು ಸ್ವಾಮೀಜಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಹಾಸನ ವಿಧಾನಸಭೆ ಸೇರಿ ಅಭ್ಯರ್ಥಿಗಳ 2ನೇ ಪಟ್ಟಿ ಸೋಮವಾರ ಬಿಡುಗಡೆ: ಹೆಚ್​ಡಿಕೆ

ಪ್ರಣವಾನಂದ ಸ್ವಾಮೀಜಿ ಅಸಮಾಧಾನ

ಕಾರವಾರ: ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ 3 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನುಳಿದ ಮೂರು ಕ್ಷೇತ್ರದಲ್ಲಿ ಬಹುಸಂಖ್ಯಾತ ನಾಮಧಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಈಡಿಗ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಆರ್.ವಿ.ದೇಶವಾಂಡೆ ವಿರುದ್ಧ ಆಕ್ರೋಶ ಹೊರ ಹಾಕಿದರು.

ಈ ಕುರಿತು ಮಾತನಾಡಿರುವ ಸ್ವಾಮೀಜಿ, ಉತ್ತರ ಕನ್ನಡದಲ್ಲಿ ನಾಮಧಾರಿ ಸಮುದಾಯ 5 ರಿಂದ 6 ಲಕ್ಷ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂದರೆ, 80 ರಿಂದ ಒಂದು ಲಕ್ಷ ಮತದಾರರನ್ನು ಹೊಂದಿದ್ದರೂ ಈ ಯಾವ ಕ್ಷೇತ್ರದಲ್ಲಿಯೂ ನಾಮಧಾರಿ ಸಮುದಾಯಕ್ಕೆ ಟಿಕೆಟ್​ ಘೋಷಿಸಿಲ್ಲ ಎಂದರು.

'ನಾಮಧಾರಿ ಸಮಾಜ ಮುಗಿಸು ಯತ್ನ': ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ಕ್ಷೇತ್ರಗಳಲ್ಲಿ ಆರ್.ವಿ.ದೇಶಪಾಂಡೆ ಅವರು ಕಾಂಗ್ರೆಸ್​ ಟಿಕೆಟ್​ಗೆ ಮೇಲಿನ ವರ್ಗದವರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇನೆ. ನಾಮಧಾರಿ ಸಮಾಜವನ್ನು ಮುಗಿಸು ಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್​.ವಿ.ದೇಶಪಾಂಡೆಯವರ ನಡೆಯನ್ನು ಇಡೀ ನಾಮಧಾರಿ ಸಮುದಾಯ ಅಷ್ಟೇ ಅಲ್ಲ ಈಡಿಗ, ಬಿಲ್ಲವ ಸಮುದಾಯವೂ ಖಂಡಿಸುತ್ತಿದೆ. ಒಂದು ವೇಳೆ ಅಲ್ಲಿನ ನಾಮಧಾರಿಗಳಿಗೆ ಅನ್ಯಾಯವಾದರೇ ಮಂಗಳೂರಿನ ಬಿಲ್ಲವರು, ಶಿವಮೊಗ್ಗದ ದಿವರು ಮತ್ತು ರಾಜ್ಯಾದ್ಯಂತ ಇರುವ ಈಡಿಗರು ಅವರ ಜೊತೆ ನಿಂತುಕೊಂಡು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಕಾಂಗ್ರೆಸ್​ ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ನಾಮಧಾರಿ ನಾಯಕರಿಗೆ ಟಿಕೆಟ್​ ನೀಡಬೇಕು. ಇಲ್ಲವಾದರೆ ನಾನೇ ಸ್ವತಃ ಉತ್ತರಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಕೈಗೊಂಡು ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಪಾಂಡೆ ಪ್ರತಿಕ್ರಿಯೆ: ಪ್ರಣವಾನಂದ ಸ್ವಾಮೀಜಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಆರ್.ವಿ.ದೇಶಪಾಂಡೆ, ಸ್ವಾಮೀಜಿ ಮಾತಿನಿಂದ ನನ್ನ ಮನಸ್ಸಿಗೆ ನೋವಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ನಾಮಧಾರಿ ಸಮಾಜ ಹಾಗೂ ನನ್ನ ಸಂಬಂಧ ಬಹಳ ಪ್ರೀತಿಯ ಮತ್ತು ಬಹಳ ವರ್ಷಗಳಿಂದ ಪರಸ್ಪರ ಗೌರವದ ಸಮನ್ವಯತೆಯನ್ನು ಹೊಂದಿದೆ. ನನ್ನ ಜೀವನದಲ್ಲಿಯೇ ಜಾತಿ ರಾಜಕಾರಣ ಮಾಡಿಲ್ಲ ಎಂದರು.

ಒಂದು ವೇಳೆ ಅ ರೀತಿಯ ರಾಜಕಾರಣ ಮಾಡಿದ್ದರೆ ನಾನು ಇಷ್ಟು ವರ್ಷ ರಾಜಕೀಯದಲ್ಲಿ ಇರುತ್ತಿರಲಿಲ್ಲ. ಎಲ್ಲಾ ಜಾತಿ, ಧರ್ಮದವರ ಸಹಕಾರದಿಂದ ಕೆಲಸ ಮಾಡಬೇಕು ಎಂಬುದು ನನ್ನ ಧ್ಯೇಯ, ಧೋರಣೆ ಆಗಿದೆ. ಆ ಪ್ರಕಾರ ಹೆಜ್ಜೆ ಹಾಕುತ್ತ ಬಂದಿದ್ದೇನೆ. ಪೂಜ್ಯ ಸ್ವಾಮೀಜಿಗಳು ತಪ್ಪು ಮಾಹಿತಿಯಿಂದ ಹೇಳಿಕೆ ಕೊಟ್ಟಿದ್ದಾರೆ. ನಾನು ಸ್ವಾಮೀಜಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಹಾಸನ ವಿಧಾನಸಭೆ ಸೇರಿ ಅಭ್ಯರ್ಥಿಗಳ 2ನೇ ಪಟ್ಟಿ ಸೋಮವಾರ ಬಿಡುಗಡೆ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.