ETV Bharat / state

ಭಟ್ಕಳದಲ್ಲಿ ಸಾರ್ವಜನಿಕರು-ಅಂಗಡಿಕಾರರ ನಡುವೆ ಮಾತಿನ ಚಕಮಕಿ.. - ಭಟ್ಕಳ ಸಾರ್ವಜನಿಕರಿಗೂ ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ ಸುದ್ದಿ

ಸ್ಥಳೀಯ ನಾಗರಿಕರು ಚರಂಡಿ ಕಾಮಗಾರಿಗೆ ತಡೆಯೊಡ್ಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೂ ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರದಂದು ಮುರ್ಡೇಶ್ವರದ ರಥಬೀದಿಯಲ್ಲಿ ನಡೆದಿದೆ.

ಮಾತಿನ ಚಕಮಕಿ
author img

By

Published : Nov 19, 2019, 9:42 PM IST

ಭಟ್ಕಳ: ನಗರದ ಸ್ಥಳೀಯ ನಾಗರಿಕರು ಚರಂಡಿ ಕಾಮಗಾರಿಗೆ ತಡೆಯೊಡ್ಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೂ ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರದಂದು ಮುರ್ಡೇಶ್ವರದ ರಥಬೀದಿಯಲ್ಲಿ ನಡೆದಿದೆ.

ಸ್ಥಳೀಯ ನಾಗರಿಕರು ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ..

ವಿಶ್ವ ಪ್ರಸಿದ್ಧ ಮುರ್ಡೇಶ್ವರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರ ದಟ್ಟಣೆ, ಪಾರ್ಕಿಂಗ್ ಅವ್ಯವಸ್ಥೆಗೆ ರಸ್ತೆಗಳು ಇಕ್ಕಟ್ಟಾಗಿರುವುದೂ ಮುಖ್ಯ ಕಾರಣವಾಗಿದೆ. ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುವ ಎಡ ಭಾಗದ ಗ್ರಾಮ ಪಂಚಾಯತ್ ಮಾವಳ್ಳಿ-2 ಸರ್ಕಾರಿ ಜಾಗದ ಸರ್ವೇ ನಂ. 23ರಲ್ಲಿ ಗಡಿ ಗುರುತು ಮಾಡಿ ರಸ್ತೆಗೆ ಬಳಸಿಕೊಳ್ಳುವುದರ ಬದಲು ಹಳೆಯ ರಸ್ತೆಯಿದ್ದಷ್ಟೇ ಗುರುತು ಮಾಡಿ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ಅಂಗಡಿಕಾರರಿಗೆ ತೀವ್ರವಾದ ಮಾತಿನ ಚಕಮಕಿ ಉಂಟಾಗಿ, ಪೊಲೀಸ್ ಮಧ್ಯ ಪ್ರವೇಶಿಸಿದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.

ನಂತರ ಸ್ಥಳಕ್ಕೆ ಪಂಚಾಯತ್ ಪಿಡಿಒ ಬರುವ ತನಕ ಕಾಮಗಾರಿಗೆ ತಡೆಯೊಡ್ಡಿದ್ದು, ನಂತರ ಸ್ಥಳಕ್ಕಾಗಮಿಸಿದ ಪಿಡಿಒ ಸ್ಥಳದಲ್ಲೇ ಸಹಾಯಕ ಆಯುಕ್ತರಿಗೆ ದೂರವಾಣಿ ಕರೆಯ ಮೂಲಕ ಘಟನೆ ಬಗ್ಗೆ ತಿಳಿಸಿದರು. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಡಿಸೆಂಬರ್​​ 11ರ ನಂತರ ಸಭೆ ಕರೆದು ಈ ವಿಷಯ ಪ್ರಸ್ತಾಪಿಸೋಣ ಅಲ್ಲಿಯವರೆಗೆ ಈ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು.

ನಂತರ ಸಾರ್ವಜನಿಕರು ರಸ್ತೆ ಅಗಲೀಕರಣದ ಕುರಿತು ಪಿಡಿಒ ನಟರಾಜ ಅವರಿಗೆ ಸ್ಥಳದಲ್ಲಿಯೇ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರ ಪರವಾಗಿ ಮಾತನಾಡಿದ ಶ್ರೀಧರ್ ನಾಯ್ಕ, ಮುರ್ಡೇಶ್ವರದ ಕಲ್ಯಾಣಿ ಪಕ್ಕದಲ್ಲಿನ ರಸ್ತೆಯ ಅಭಿವೃದ್ಧಿ ಮಾಡುತ್ತಿದ್ದು, ಹಿಂದಿನ ರಸ್ತೆಯಲ್ಲೇ ಕಾಮಗಾರಿ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು, ಅಂಗಡಿಕಾರರು ಮುಂತಾದವರು ಉಪಸ್ಥಿತರಿದ್ದರು.

ಭಟ್ಕಳ: ನಗರದ ಸ್ಥಳೀಯ ನಾಗರಿಕರು ಚರಂಡಿ ಕಾಮಗಾರಿಗೆ ತಡೆಯೊಡ್ಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೂ ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರದಂದು ಮುರ್ಡೇಶ್ವರದ ರಥಬೀದಿಯಲ್ಲಿ ನಡೆದಿದೆ.

ಸ್ಥಳೀಯ ನಾಗರಿಕರು ಮತ್ತು ಅಂಗಡಿಕಾರರ ನಡುವೆ ಮಾತಿನ ಚಕಮಕಿ..

ವಿಶ್ವ ಪ್ರಸಿದ್ಧ ಮುರ್ಡೇಶ್ವರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರ ದಟ್ಟಣೆ, ಪಾರ್ಕಿಂಗ್ ಅವ್ಯವಸ್ಥೆಗೆ ರಸ್ತೆಗಳು ಇಕ್ಕಟ್ಟಾಗಿರುವುದೂ ಮುಖ್ಯ ಕಾರಣವಾಗಿದೆ. ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುವ ಎಡ ಭಾಗದ ಗ್ರಾಮ ಪಂಚಾಯತ್ ಮಾವಳ್ಳಿ-2 ಸರ್ಕಾರಿ ಜಾಗದ ಸರ್ವೇ ನಂ. 23ರಲ್ಲಿ ಗಡಿ ಗುರುತು ಮಾಡಿ ರಸ್ತೆಗೆ ಬಳಸಿಕೊಳ್ಳುವುದರ ಬದಲು ಹಳೆಯ ರಸ್ತೆಯಿದ್ದಷ್ಟೇ ಗುರುತು ಮಾಡಿ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ಅಂಗಡಿಕಾರರಿಗೆ ತೀವ್ರವಾದ ಮಾತಿನ ಚಕಮಕಿ ಉಂಟಾಗಿ, ಪೊಲೀಸ್ ಮಧ್ಯ ಪ್ರವೇಶಿಸಿದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.

ನಂತರ ಸ್ಥಳಕ್ಕೆ ಪಂಚಾಯತ್ ಪಿಡಿಒ ಬರುವ ತನಕ ಕಾಮಗಾರಿಗೆ ತಡೆಯೊಡ್ಡಿದ್ದು, ನಂತರ ಸ್ಥಳಕ್ಕಾಗಮಿಸಿದ ಪಿಡಿಒ ಸ್ಥಳದಲ್ಲೇ ಸಹಾಯಕ ಆಯುಕ್ತರಿಗೆ ದೂರವಾಣಿ ಕರೆಯ ಮೂಲಕ ಘಟನೆ ಬಗ್ಗೆ ತಿಳಿಸಿದರು. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಡಿಸೆಂಬರ್​​ 11ರ ನಂತರ ಸಭೆ ಕರೆದು ಈ ವಿಷಯ ಪ್ರಸ್ತಾಪಿಸೋಣ ಅಲ್ಲಿಯವರೆಗೆ ಈ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು.

ನಂತರ ಸಾರ್ವಜನಿಕರು ರಸ್ತೆ ಅಗಲೀಕರಣದ ಕುರಿತು ಪಿಡಿಒ ನಟರಾಜ ಅವರಿಗೆ ಸ್ಥಳದಲ್ಲಿಯೇ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರ ಪರವಾಗಿ ಮಾತನಾಡಿದ ಶ್ರೀಧರ್ ನಾಯ್ಕ, ಮುರ್ಡೇಶ್ವರದ ಕಲ್ಯಾಣಿ ಪಕ್ಕದಲ್ಲಿನ ರಸ್ತೆಯ ಅಭಿವೃದ್ಧಿ ಮಾಡುತ್ತಿದ್ದು, ಹಿಂದಿನ ರಸ್ತೆಯಲ್ಲೇ ಕಾಮಗಾರಿ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು, ಅಂಗಡಿಕಾರರು ಮುಂತಾದವರು ಉಪಸ್ಥಿತರಿದ್ದರು.

Intro:ಭಟ್ಕಳ: ವಿಶ್ವ ಪ್ರಸಿದ್ಧ ಮುರ್ಡೇಶ್ವರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು,ಸಂಚಾರ ದಟ್ಟಣೆ, ಪಾರ್ಕಿಂಗ್ ಅವ್ಯವಸ್ಥೆಗೆ ರಸ್ತೆಗಳು ಇಕ್ಕಟ್ಟಾಗಿರುವುದೂ ಮುಖ್ಯ ಕಾರಣ. ಮೊದಲು ರಸ್ತೆಗಳು ಸರಿಯಾದರೆ ಟ್ರಾಫಿಕ್ ಸಮಸ್ಯೆಯೂ ನೀಗಲಿದೆ. ಈ ಕಾರಣ ಕಾಮಗಾರಿ ಸಮರ್ಪಕವಾದ ದೂರದೃಷ್ಟಿಯಿಲ್ಲದೆ ಸರಿಯಾದ ರೀತಿಯಲ್ಲಿ ಅಳತೆ, ಗಡಿ ಗುರುತು ಇಲ್ಲದೇ ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಚರಂಡಿ ಕಾಮಗಾರಿಗೆ ತಡೆಯೊಡ್ಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೂ ಮತ್ತು ಅಂಗಡಿಕಾರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರದಂದು ಮುರ್ಡೇಶ್ವರದ ರಥಭೀದಿಯಲ್ಲಿ ನಡೆದಿದೆ.Body:ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮುರ್ಡೇಶ್ವರದಲ್ಲಿ ದಿನಮಾನ ಉರುಳಿದಂತೆ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ದೂರದ ಊರ ಪ್ರವಾಸಾರ್ಥಿಗಳಿಗೆ, ವಾರದ ಆರಂಭದಲ್ಲಿ ನಡೆಯುವ ಸಂತೆಗೆ ಆಗಮಿಸುವ ಊರ ನಾಗರಿಕರಿಗೆ ಹೇಳ ತೀರದ ಸಮಸ್ಯೆ ಎದುರಾಗಿದ್ದು, ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುವ ಎಡ ಭಾಗದ ಗ್ರಾಮ ಪಂಚಾಯತ್ ಮಾವಳ್ಳಿ-೨ ಸರಕಾರಿ ಜಾಗದ ಸರ್ವೇ ನಂ. 23ರ 5 ಗುಂಟೆಯಲ್ಲಿ ಗಡಿ ಗುರುತು ಮಾಡಿ ರಸ್ತೆಗೆ ಬಳಸಿಕೊಳ್ಳುವುದರ ಬದಲು ಹಳೆಯ ರಸ್ತೆಯಿದ್ದಷ್ಟೇ ಗುರುತು ಮಾಡಿ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿಸ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ಅಂಗಡಿಕಾರರಿಗೆ ತೀವ್ರವಾದ ಮಾತಿನ ಚಕಮಕಿ ಉಂಟಾಗಿ, ಪೊಲೀಸ್ ಮಧ್ಯ ಪ್ರವೇಶಿಸಿದ ನಂತರ ಸಹಜ ಸ್ಥಿತಿಗೆ ಮರಳಿದರು.ನಂತರ ಸ್ಥಳಕ್ಕೆ ಪಂಚಾಯತ್ ಪಿಡಿಓ ಬರುವ ತನಕ ಕಾಮಗಾರಿಗೆ ತಡೆಯೊಡ್ಡಿದ್ದು ನಂತರ ಸ್ಥಳಕ್ಕಾಗಮಿಸಿದ ಪಿಡಿಓ ಸ್ಥಳದಲ್ಲೇ ಸಹಾಯಕ ಆಯುಕ್ತರಿಗೆ ದೂರವಾಣಿ ಕರೆಯ ಮೂಲಕ  ಘಟನೆ ಬಗ್ಗೆ ತಿಳಿಸಿದ್ದು ಜಿಲ್ಲೆಯಲ್ಲಿ

ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಡಿಸೆಂಬರ, ದಿನಾಂಕ 11ರ ನಂತರ ಸಭೆ ಕರೆದು ಈ ವಿಷಯ ಪ್ರಸ್ತಾಪಿಸೋಣ ಅಲ್ಲಿಯವರೆಗೆ ಈ ಕಾಮಗಾರಿಗೆ ಸ್ಥಗಿತಗೊಳಿಸುತ್ತೇವೆ ಎಂದು ತಿಳಿಸಿದರು



ನಂತರ ಸಾರ್ವಜನಿಕರು ರಸ್ತೆ ಅಗಲಿಕರಣದ ಕುರಿತು

ಪಿಡಿಓ ನಟರಾಜ ಅವರಿಗೆ ಸ್ಥಳದಲ್ಲಿಯೇಮನವಿ ಸಲ್ಲಿಸಿದರು


ಈ ಸಂದರ್ಭದಲ್ಲಿ ಪ್ರತಿಭಟನಾಕಾರ ಪರವಾಗಿ ಮಾತನಾಡಿದ ಶ್ರೀಧರ್ ನಾಯ್ಕ ಮುರ್ಡೇಶ್ವರದ ಕಲ್ಯಾಣಿ ಪಕ್ಕದಲ್ಲಿನ ರಸ್ತೆಯ ಅಭಿವೃದ್ಧಿ ಮಾಡುತ್ತಿದ್ದು, ಹಿಂದಿನ ರಸ್ತೆಯಲ್ಲೇ ಕಾಮಗಾರಿ ಮಾಡುತ್ತಿರುವುದಕ್ಕೆ ನಮ್ಮ ವಿರೋದವಿದೆ. ಸಿಇಓ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 16 ಮೀ. ರಸ್ತೆ ಅಗಲೀಕರಣ ಮಾಡಬೇಕೆಂದು ಠರಾವು ಮಾಡಲಾಗಿತ್ತು. ಆದರೆ ಇಲ್ಲಿ 8 ಮೀಟರಗೆ ಸೀಮಿತಗೊಳಿಸಿ ಸದ್ಯ ಇರುವ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.



ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು, ಅಂಗಡಿಕಾರರು ಮುಂತಾದವರು ಉಪಸ್ಥಿತರಿದ್ದರು


ಬೈಟ್ 1: ಶ್ರೀಧರ್ ನಾಯ್ಕ( ಸ್ಥಳೀಯ ಸಾರ್ವಜನಿಕ)ಬೂದು ಬಣ್ಣದ ಬಿಳಿ ಚುಕ್ಕೆ ಶರ್ಟ್

ಬೈಟ್ 2: ರಾಜಣ್ಣ( ಅಂಗಡಿಕಾರ)ಬಿಳಿ ಬಣ್ಣದ ಕಪ್ಪು ಚುಕ್ಕೆ ಶರ್ಟ್


ಬೈಟ್ 3: ನಟರಾಜ(ಪಿಡಿಓ)

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.