ಕಾರವಾರ: ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯೊಂದನ್ನು ರಕ್ಷಣೆ ಮಾಡಿರುವ ಘಟನೆ ಶಿರಸಿ ತಾಲೂಕಿನ ಜಾನ್ಮನೆ ವಲಯದ ಶಿರಗುಣಿಯಲ್ಲಿ ನಡೆದಿದೆ. ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಜಿ ಹೆಗಡೆ, ಶಿವಮೊಗ್ಗದ ವನ್ಯಜೀವಿ ವೈದ್ಯರ ಸಹಕಾರದಿಂದ ಚುಚ್ಚುಮದ್ದು ನೀಡಿ ಚಿರತೆ ರಕ್ಷಿಸಲಾಗಿದೆ. ಚಿರತೆಯನ್ನು ಬೋನಿನಲ್ಲಿ ಹಾಕಿಕೊಂಡು ಒಯ್ಯಲಾಗಿದ್ದು ಸದ್ಯ ಸ್ಥಳೀಯರ ಆತಂಕ ದೂರವಾಗಿದೆ.
ಓದಿ :ಉತ್ತರಪ್ರದೇಶ ಚುನಾವಣೆ: ಇಂದು 6ನೇ ಹಂತದ ಮತದಾನ..ಸಿಎಂ ಯೋಗಿ, ಮಾಜಿ ಸಚಿವ ಪ್ರಸಾದ್ ಮೌರ್ಯ ಅದೃಷ್ಟ ಪರೀಕ್ಷೆ