ETV Bharat / state

ಹೆಸ್ಕಾಂ ನಿರ್ಲಕ್ಷ್ಯದಿಂದ ಮೃತಪಟ್ಟ ಜೋಡೆತ್ತು - Hescom

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಬೊಮಡಿಕೊಪ್ಪದಲ್ಲಿ ಮಳೆ ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ಹರಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎರಡು ಎತ್ತುಗಳು ಸಾವನ್ನಪ್ಪಿವೆ. ಇದಕ್ಕೆ ಹೆಸ್ಕಾಂ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ.

ಹೆಸ್ಕಾಂ ನಿರ್ಲಕ್ಷ್ಯದಿಂದ ಮೃತಪಟ್ಟ ಜೋಡೆತ್ತು
author img

By

Published : Jun 16, 2019, 4:43 PM IST

ಶಿರಸಿ: ಮಳೆ-ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಎರಡು ಎತ್ತುಗಳು ಬಲಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಬೊಮಡಿಕೊಪ್ಪದಲ್ಲಿ ಈ ದುರ್ಘಟನೆ ಸಂಭವಿಸಿದೆ.

ತುಂಡಾಗಿ ಬಿದ್ದಿದ್ದ ವಿದ್ಯುತ್​​ ತಂತಿಯನ್ನು ಸೂಕ್ತ ಸಮಯಕ್ಕೆ ತೆರವುಗೊಳಿಸದೇ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಮೃತ ಎತ್ತುಗಳು ಬೊಮಡಿಕೊಪ್ಪದ ವಾಸು ಪಟಕಾರೆ ಎಂಬ ರೈತನಿಗೆ ಸೇರಿವೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ-ಗಾಳಿಗೆ ವಿದ್ಯುತ್ ತುಂಡಾಗಿ ಬಿದ್ದಿದ್ದರೂ ಅದನ್ನು ಹೆಸ್ಕಾಂ ಸಿಬ್ಬಂದಿ ತೆರವುಗೊಳಿಸಿಲ್ಲ. ಹೀಗಾಗಿ ವಿದ್ಯುತ್​ ಶಾಕ್​ನಿಂದ ತನ್ನ ಎತ್ತುಗಳು ಮೃತಪಟ್ಟಿವೆ ಎಂದು ಮಾಲೀಕ ಕಣ್ಣೀರಿಟ್ಟಿದ್ದಾನೆ.

ಮಳೆಯಾಗಿದ್ದರಿಂದ ಭತ್ತದ ಗದ್ದೆ ಕೆಲಸಕ್ಕೆ ರೈತ ಎತ್ತುಗಳನ್ನು ತೆಗೆಡದುಕೊಂಡು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಜೋಡೆತ್ತುಗಳ ಸಾವಿನಿಂದ 60 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕೃಷಿ ಕೆಲಸಕ್ಕೂ ಇದರಿಂದ ಅಡ್ಡಿಯಾಗಿದೆ. ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಎತ್ತಿನ ಮಾಲೀಕನಿಗೆ ಪರಿಹಾರ ಒದಗಿಸಿಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಶಿರಸಿ: ಮಳೆ-ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಎರಡು ಎತ್ತುಗಳು ಬಲಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಬೊಮಡಿಕೊಪ್ಪದಲ್ಲಿ ಈ ದುರ್ಘಟನೆ ಸಂಭವಿಸಿದೆ.

ತುಂಡಾಗಿ ಬಿದ್ದಿದ್ದ ವಿದ್ಯುತ್​​ ತಂತಿಯನ್ನು ಸೂಕ್ತ ಸಮಯಕ್ಕೆ ತೆರವುಗೊಳಿಸದೇ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಮೃತ ಎತ್ತುಗಳು ಬೊಮಡಿಕೊಪ್ಪದ ವಾಸು ಪಟಕಾರೆ ಎಂಬ ರೈತನಿಗೆ ಸೇರಿವೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ-ಗಾಳಿಗೆ ವಿದ್ಯುತ್ ತುಂಡಾಗಿ ಬಿದ್ದಿದ್ದರೂ ಅದನ್ನು ಹೆಸ್ಕಾಂ ಸಿಬ್ಬಂದಿ ತೆರವುಗೊಳಿಸಿಲ್ಲ. ಹೀಗಾಗಿ ವಿದ್ಯುತ್​ ಶಾಕ್​ನಿಂದ ತನ್ನ ಎತ್ತುಗಳು ಮೃತಪಟ್ಟಿವೆ ಎಂದು ಮಾಲೀಕ ಕಣ್ಣೀರಿಟ್ಟಿದ್ದಾನೆ.

ಮಳೆಯಾಗಿದ್ದರಿಂದ ಭತ್ತದ ಗದ್ದೆ ಕೆಲಸಕ್ಕೆ ರೈತ ಎತ್ತುಗಳನ್ನು ತೆಗೆಡದುಕೊಂಡು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಜೋಡೆತ್ತುಗಳ ಸಾವಿನಿಂದ 60 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕೃಷಿ ಕೆಲಸಕ್ಕೂ ಇದರಿಂದ ಅಡ್ಡಿಯಾಗಿದೆ. ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಎತ್ತಿನ ಮಾಲೀಕನಿಗೆ ಪರಿಹಾರ ಒದಗಿಸಿಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Intro:ಶಿರಸಿ :
ಮಳೆ ಗಾಳಿಯ ತೀವ್ರತೆಯಿಂದ ರಸ್ತೆ ಮೇಲೆ ಹರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಯಾದ ಸಮಯಕ್ಕೆ ತೆಗೆಯದೇ ಇರುವ ಪರಿಣಾಮ ತಂತಿ ತಗುಲಿ ಶಾಕಿನಿಂದ ಜೋಡೆತ್ತುಗಳು ಸ್ಥಳದಲ್ಲೇ ಅಸುನೀಗಿದ ದಾರುಣ ಘಟನೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಬೊಮಡಿಕೊಪ್ಪದಲ್ಲಿ ನಡೆದಿದೆ. Body:ಯಲ್ಲಾಪುರದ ಕಿರವತ್ತಿಯ ಗ್ರಾಮ ಪಂಚಾಯತ ವ್ಯಾಪ್ತಿಯ ಬೊಮಡಿಕೊಪ್ಪದ ವಾಸು ಪಟಕಾರೆ ಎಂಬ ರೈತನ ಎರಡು ಎತ್ತುಗಳು ವಿದ್ಯುತ್ ಶಾಕಿನಿಂದ ಮೃತಪಟ್ಟಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿವ ಮಳೆ ಗಾಳಿಗೆ ವಿದ್ಯುತ್ ತಂತಿ ಹರಿದು ಬಿದ್ದಿದ್ದರೂ ಅದನ್ನು ಸರಿಯಾದ ಸಮಯಕ್ಕೆ ಹೆಸ್ಕಾಂ ಸಿಬ್ಬಂದಿಗಳು ತೆರವು ಗೊಳಿಸದ ಕಾರಣ ಜೋಡೆತ್ತುಗಳು ಮೃತಪಟ್ಟಿದೆ ಎಂದು ಮಾಲೀಕ ಆರೋಪಿಸಿದ್ದಾನೆ.

ಮಳೆಯಾದ ಕಾರಣ ಭತ್ತದ ಕೆಲಸಕ್ಕೆ ರೈತ ಎತ್ತುಗಳನ್ನು ತೆಗಡದುಕೊಂಡು ಹೋಗುತ್ತಿರುವಾಗ ಈ ದಾರುಣ ಘಟನೆ ನಡೆದಿದೆ. ಜೋಡೆತ್ತುಗಳಿಂದ ೬೦ ಸಾವಿರ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಕೃಷಿ ಕೆಲಸಕ್ಕೂ ಇದರಿಂದ ಅಡ್ಡಿಯಾದಂತಾಗಿದೆ. ತಕ್ಷಣವೇ ವಿದ್ಯುತ್ ಇಲಾಖೆ ತನ್ನ ನಿರ್ಲಕ್ಷಕ್ಕೆ ಮೃತಪಟ್ಟ ಎತ್ತುಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ರೈತ ಸಮೂಹ ಆಗ್ರಹಿಸಿದೆ.
.......
ಸಂದೇಶ ಭಟ್ ಶಿರಸಿ. Conclusion:null

For All Latest Updates

TAGGED:

Hescom
ETV Bharat Logo

Copyright © 2025 Ushodaya Enterprises Pvt. Ltd., All Rights Reserved.