ETV Bharat / state

ಮಹಾಮಳೆಗೆ ತತ್ತರಿಸಿದೆ ಕರಾವಳಿ: ಸಂಪೂರ್ಣ ಅಸ್ತವ್ಯಸ್ತಗೊಂಡ ಜನಜೀವನ...!

ಕಾರವಾರ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ಮುಳುಗಡೆಯಾಗಿದ್ದ ಕರಾವಳಿ ಇಂದು ಕೂಡಾ ಜಲಾವೃತಗೊಂಡಿದ್ದು, ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

author img

By

Published : Aug 7, 2019, 6:55 PM IST

ಮಹಾಮಳೆಗೆ ತತ್ತರಿಸಿದೆ ಕರಾವಳಿ; ಸಂಪೂರ್ಣ ಅಸ್ತವ್ಯಸ್ತಗೊಂಡ ಜನಜೀವನ

ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ಮುಳುಗಡೆಯಾಗಿದ್ದ ಕರಾವಳಿ ಇಂದೂ ಕೂಡ ಜಲಾವೃತಗೊಂಡಿದ್ದು, ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ ಅಕ್ಷರಶಃ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿವೆ. ಇದಲ್ಲದೇ ಕರಾವಳಿಯಲ್ಲಿಯೂ ಮಳೆ‌ ಮುಂದುವರಿದಿದ್ದು, ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಹೊರ ಬಿಡಲಾಗುತ್ತಿದೆ.

ಮಹಾಮಳೆಗೆ ಕಾರವಾರದಲ್ಲಿ ಜನಜೀವನ ಅಸ್ತವ್ಯಸ್ತ

ಇದರಿಂದ ಕಾಳಿ ನದಿಯಂಚಿನ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ನೂರಾರು ಮನೆಗಳು ಸತತ ಮೂರು ದಿನಗಳಿಂದ ಮುಳುಗಡೆಯಾಗಿವೆ. ಅಂಕೋಲಾದಲ್ಲಿ ಗಂಗಾವಳಿ, ಕುಮಟಾದಲ್ಲಿ ಅಘನಾಶಿ ನದಿ ಇಂದು ಕೂಡ ತುಂಬಿ ಹರಿಯುತ್ತಿದ್ದು, ಈ ಭಾಗದ ಸಾವಿರಾರು ಮನೆಗಳು ಮುಳುಗಡೆಯಾಗಿವೆ. ಜಿಲ್ಲಾಡಳಿತ, ತಾಲೂಕು ಆಡಳಿತ ನಿರಾಶ್ರಿತರು ಮತ್ತು ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದೆ. ಪೊಲೀಸರು, ಕರಾವಳಿ ಕಾವಲು ಪಡೆ ನೌಕಾನೆಲೆ ಸಿಬ್ಬಂದಿ ನೆರೆ ಸಂತೃಪ್ತ ರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸತತ ಮೂರು ದಿನದಿಂದ ಶ್ರಮಿಸುತ್ತಿವೆ.

ಕದ್ರಾ ಜಲಾಶಯದಿಂದ ಮತ್ತೆ ೧.೫ ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಕಾರಣ ಕದ್ರಾ, ಮಲ್ಲಾಪುರ, ಕೈಗಾವಾಡದಲ್ಲಿ ಜಲ ದಿಗ್ಬಂದನಕ್ಕೊಳಗಾಗಿದ್ದ ಸುಮಾರು 300 ಕ್ಕೂ ಹೆಚ್ಚು ಜನರನ್ನು ನೌಕಾನೆಲೆ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಮಹಾಮಳೆಗೆ ಜಿಲ್ಲಾದ್ಯಂತ ತೆರೆದಿರುವ ಸುಮಾರು 50 ಗಂಜಿ ಕೇಂದ್ರಗಳಲ್ಲಿ 1,700 ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ದಾಖಲೆಯ ಮಳೆಯಾದ ಕಾರಣ ಕೃಷಿ ಹಾಗೂ ಜಮೀನುಗಳು ಜಲಾವೃತಗೊಂಡಿದ್ದು, ಹಾನಿ ಸಂಭವಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾ ಮಳೆ ಕರಾವಳಿ ಭಾಗದ ಜನ ಜೀವನವನ್ನು ನರಕವಾಗಿಸಿದೆ.

ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ಮುಳುಗಡೆಯಾಗಿದ್ದ ಕರಾವಳಿ ಇಂದೂ ಕೂಡ ಜಲಾವೃತಗೊಂಡಿದ್ದು, ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ ಅಕ್ಷರಶಃ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿವೆ. ಇದಲ್ಲದೇ ಕರಾವಳಿಯಲ್ಲಿಯೂ ಮಳೆ‌ ಮುಂದುವರಿದಿದ್ದು, ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಹೊರ ಬಿಡಲಾಗುತ್ತಿದೆ.

ಮಹಾಮಳೆಗೆ ಕಾರವಾರದಲ್ಲಿ ಜನಜೀವನ ಅಸ್ತವ್ಯಸ್ತ

ಇದರಿಂದ ಕಾಳಿ ನದಿಯಂಚಿನ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳ ನೂರಾರು ಮನೆಗಳು ಸತತ ಮೂರು ದಿನಗಳಿಂದ ಮುಳುಗಡೆಯಾಗಿವೆ. ಅಂಕೋಲಾದಲ್ಲಿ ಗಂಗಾವಳಿ, ಕುಮಟಾದಲ್ಲಿ ಅಘನಾಶಿ ನದಿ ಇಂದು ಕೂಡ ತುಂಬಿ ಹರಿಯುತ್ತಿದ್ದು, ಈ ಭಾಗದ ಸಾವಿರಾರು ಮನೆಗಳು ಮುಳುಗಡೆಯಾಗಿವೆ. ಜಿಲ್ಲಾಡಳಿತ, ತಾಲೂಕು ಆಡಳಿತ ನಿರಾಶ್ರಿತರು ಮತ್ತು ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದೆ. ಪೊಲೀಸರು, ಕರಾವಳಿ ಕಾವಲು ಪಡೆ ನೌಕಾನೆಲೆ ಸಿಬ್ಬಂದಿ ನೆರೆ ಸಂತೃಪ್ತ ರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸತತ ಮೂರು ದಿನದಿಂದ ಶ್ರಮಿಸುತ್ತಿವೆ.

ಕದ್ರಾ ಜಲಾಶಯದಿಂದ ಮತ್ತೆ ೧.೫ ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಕಾರಣ ಕದ್ರಾ, ಮಲ್ಲಾಪುರ, ಕೈಗಾವಾಡದಲ್ಲಿ ಜಲ ದಿಗ್ಬಂದನಕ್ಕೊಳಗಾಗಿದ್ದ ಸುಮಾರು 300 ಕ್ಕೂ ಹೆಚ್ಚು ಜನರನ್ನು ನೌಕಾನೆಲೆ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಮಹಾಮಳೆಗೆ ಜಿಲ್ಲಾದ್ಯಂತ ತೆರೆದಿರುವ ಸುಮಾರು 50 ಗಂಜಿ ಕೇಂದ್ರಗಳಲ್ಲಿ 1,700 ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ದಾಖಲೆಯ ಮಳೆಯಾದ ಕಾರಣ ಕೃಷಿ ಹಾಗೂ ಜಮೀನುಗಳು ಜಲಾವೃತಗೊಂಡಿದ್ದು, ಹಾನಿ ಸಂಭವಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾ ಮಳೆ ಕರಾವಳಿ ಭಾಗದ ಜನ ಜೀವನವನ್ನು ನರಕವಾಗಿಸಿದೆ.

Intro:


Body:ಮಳೆಗೆ ತತ್ತರಿಸಿದ ಕರಾವಳಿ... ಮೂರನೇ ದಿನವೂ ನೀರಾದ ಬದುಕು!

ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಸಂಪೂರ್ಣ ನೀರುಪಾಲಾಗಿದೆ. ಕಳೆದ ಎರಡು ದಿನಗಳಿಂದ ಮುಳುಗಡೆಯಾಗಿದ್ದ ಕರಾವಳಿ ಇಂದು ಕೂಡ ಜಲಾವೃತಗೊಂಡಿದ್ದು, ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಎಂದೂ ಕಂಡರಿಯದಂತ ಮಹಾಮಳೆಗೆ ಅಕ್ಷರಶಃ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಘಟ್ಟದ ಮೇಲ್ಬಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಾಳಿ, ಅಘನಾಶಿನಿ, ಶರಾವತಿ, ಗಂಗಾವಳಿ ನದಿಗಳು ಉಕ್ಕಿ ಹರಿಯುತ್ತಿವೆ. ಇದಲ್ಲದೆ ಕರಾವಳಿಯಲ್ಲಿಯೂ ಮಳೆ‌ ಮುಂದುವರಿದಿದ್ದು, ಕದ್ರಾ ಜಲಾಶಯದಿಂದ ನಿರಂತರವಾಗಿ ನೀರನ್ನು ಹೊರ ಬಿಡಲಾಗುತ್ತಿದೆ.
ಇದರಿಂದ ಕಾಳಿ ನದಿಯಂಚಿನ ಸುಮಾರು ೨೦ಕ್ಕೂ ಹೆಚ್ಚು ಹಳ್ಳಿಯ ನೂರಾರು ಮನೆಗಳು ಸತತ ಮೂರು ದಿನಗಳಿಂದ ಮುಳುಗಡೆಯಾಗಿವೆ. ಅಂಕೋಲಾದಲ್ಲಿ ಗಂಗಾವಳಿ, ಕುಮಟಾದಲ್ಲಿ ಅಘನಾಶಿ ನದಿ ಇಂದು ಕೂಡ ತುಂಬಿ ಹರಿಯುತ್ತಿದ್ದು, ಈ ಭಾಗದ ಸಾವಿರಾರು ಮನೆಗಳು ಮುಳುಗಡೆಯಾಗಿವೆ. ಅಲ್ಲದೆ ಎಲ್ಲೆಡೆ ಜಿಲ್ಲಾಡಳಿತ, ತಾಲ್ಲೂಕಾಡಳಿತ ಕಾರ್ಯಪ್ರವೃತವಾಗಿದೆ. ಪೊಲೀಸರು, ಕರಾವಳಿ ಕಾವಲು ಪಡೆ ನೌಕಾನೆಲೆ ಸಿಬ್ಬಂದಿ ನೆರೆ ಸಂತೃಪ್ತ ರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸತತ ಮೂರು ದಿನದಿಂದ ಶ್ರಮಿಸುತ್ತಿವೆ.
ಕದ್ರಾ ಜಲಾಶಯದಿಂದ ಮತ್ತೆ ೧.೫ ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಕಾರಣ ಕದ್ರಾ, ಮಲ್ಲಾಪುರ, ಕೈಗಾವಾಡದಲ್ಲಿ ಜಲ ದಿಗ್ಬಂದನಕ್ಕೊಳಗಾಗಿದ್ದ ಸುಮಾರು ೩೦೦ ಕ್ಕೂ ಹೆಚ್ಚು ಜನರನ್ನು ನೌಕಾನೆಲೆ ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಸ್ಥಳಾಂತರಿಸಿದ್ದಾರೆ.
ಇನ್ನು ಕದ್ರಾ ಜಲಾಶಯದಿಂದ ಯಾವುದೇ ಸರಿಯಾದ ಮಾಹಿತಿ ನೀಡದೇ ಏಕಾಏಕಿ ನೀರು ಬಿಟ್ಟಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಇವರೆಗೆ ನೀರು ಬಿಟ್ಟಾಗ ಗದ್ದೆಗಳಿಗೆ ನೀರು ತುಂಬುತಿತ್ತೆ ವಿನಃ ಮನೆಗಳಿಗೆ ನುಗ್ಗುತ್ತಿರಲಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗಿದೆ. ಹೊರಗಡೆ ಹೊಗಲು ರಸ್ತೆಗಳು ಕಟ್ಟಾಗಿವೆ. ಇದೀಗ ನಮ್ಮ ಸ್ಥಿತಿ ಮನೆಯಲ್ಲಿಯೂ ಇರಲಾರದೇ ಹೊರಗು ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮಲ್ಲಾಪುರದ ಸ್ಥಳೀಯರಾದ ಸಂತೋಷ ಬಾಂದೇಕರ್.
ಮಹಾಮಳೆಗೆ ಜಿಲ್ಲೆಯಾದ್ಯಂತ ತೆರೆದಿರುವ ಸುಮಾರು ೫೦ ಗಂಜಿ ಕೇಂದ್ರಗಳಲ್ಲಿ ೧,೭೦೦ ಕ್ಕೂ ಹೆಚ್ಚು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ದಾಖಲೆಯ ಮಳೆಯಾದ ಕಾರಣ ಕೃಷಿ ಹಾಗೂ ಜಮೀನುಗಳು ಜಾಲವೃತಗೊಂಡಿದ್ದು, ಹಾನಿ ಸಂಭವಿಸಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾ ಮಳೆ ಕರಾವಳಿ ಭಾಗದ ಜನ ಜೀವನವನ್ನು ನರಕವಾಗಿಸಿದೆ. ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದು, ಮನೆ ಜಮೀನುಗಳು ಮುಳುಗಡೆಯಾಗಿ ಮುಂದೇನು ಎನ್ನುವ ಚಿಂತೆ ಸುರುವಾಗಿದೆ. ಮಳೆ ನಾಳೆಯಾದರು ಶಾಂತವಾಗಿ ಜನ ಜೀವನ ಯಥಾಸ್ಥಿತಿಗೆ ಮರಳುವಂತಾಗಲಿ ಎಂಬುದು ಜನರು ಆಶಯವಾಗಿದೆ.

ಬೈಟ್ ೧ ಸಂತೋಷ್ ಬಾಂದೇಕರ್, ಮಲ್ಲಾಪುರ ಹಿಂದುವಾಡಾ ನಿವಾಸಿ

ಬೈಟ್ ೨ ಗುರುದಾಸ್ ಸಾವಂತ್, ಖಾರ್ಗಾ ನಿವಾಸಿ






Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.