ETV Bharat / state

ಮುರುಡೇಶ್ವರ ಕಡಲ ತೀರದಲ್ಲಿ ಅಲೆಗಳ ಅಬ್ಬರ: ಕೊಚ್ಚಿಹೋದ ಗೂಡಂಗಡಿಗಳು

ಭಟ್ಕಳ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆ, ಗಾಳಿಯಿಂದ ಪ್ರವಾಸಿ ತಾಣ ಮುರುಡೇಶ್ವರದ ಕಡಲ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡ ಅಂಗಡಿಗಳಿಗೆ ಅಪ್ಪಳಿಸಿವೆ. ಕಾಯ್ಕಿಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮರ ಬಿದ್ದು ಎರಡು ಮನೆಗಳು ಜಖಂಗೊಂಡಿವೆ.

author img

By

Published : Oct 24, 2019, 2:44 PM IST

ಭಟ್ಕಳ ತಾಲೂಕಿನದ್ಯಂತ ಭಾರಿ ಮಳೆ, ಗಾಳಿ

ಭಟ್ಕಳ: ತಾಲೂಕಿನಾದ್ಯಂತ ರಾತ್ರಿ ಪೂರ್ತಿ ಸುರಿದ ಭಾರಿ ಗಾಳಿ, ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು. ಇಲ್ಲಿನ ಪ್ರವಾಸಿ ತಾಣವಾದ ಮುರುಡೇಶ್ವರದ ಕಡಲ ತೀರದಲ್ಲಿ ಅಲೆಗಳ ಏರಿಳಿತ ಜೋರಾಗಿದ್ದು, ದಡದಲ್ಲಿನ ದೋಣಿ ಹಾಗೂ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ತೇಲಿ ಹೋಗಿವೆ.

ಭಟ್ಕಳ ತಾಲೂಕಿನದ್ಯಂತ ಭಾರಿ ಮಳೆ, ಗಾಳಿ

ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಹವಮಾನ ವೈಪರಿತ್ಯ ಉಂಟಾಗಿದ್ದು, ಬೆಳಗ್ಗೆ ಸಮಯದಲ್ಲಿ ಚಳಿ ಆವರಿಸಿಕೊಂಡು, ಮಧ್ಯಾಹ್ನವಾಗುತ್ತಿದಂತೆ ಉರಿ ಬಿಸಿಲು ಕಾಣಿಸಿಕೊಳ್ಳುತ್ತದೆ. ಸಂಜೆ ಆಗುತ್ತಿದಂತೆ ಮತ್ತೆ ಮಳೆ, ಗುಡುಗು ಆರಂಭವಾಗುತ್ತಿದೆ.

ಮರ ಬಿದ್ದು ಮನೆಗೆ ಜಖಂ: ಮುರುಡೇಶ್ವರದ ಕಾಯ್ಕಿಣಿ ಪಂಚಾಯಿತ ವ್ಯಾಪ್ತಿಯ ಬೆದರು ಮನೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಗೋಳಿಮರ ಕುಸಿದು ಎರಡು ಮನೆಗಳು ಸಂಪೂರ್ಣ ಜಖಂ ಆಗಿವೆ.

ಮಾದೇವಿ ನಾಯ್ಕ, ಮಂಜಮ್ಮ ಎಂ ನಾಯ್ಕ ಎನ್ನುವವರ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ಗ್ಯಾಸ್ ಸೋರಿಕೆ ಆತಂಕದ ಹಿನ್ನಲೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಟ್ಕಳ: ತಾಲೂಕಿನಾದ್ಯಂತ ರಾತ್ರಿ ಪೂರ್ತಿ ಸುರಿದ ಭಾರಿ ಗಾಳಿ, ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು. ಇಲ್ಲಿನ ಪ್ರವಾಸಿ ತಾಣವಾದ ಮುರುಡೇಶ್ವರದ ಕಡಲ ತೀರದಲ್ಲಿ ಅಲೆಗಳ ಏರಿಳಿತ ಜೋರಾಗಿದ್ದು, ದಡದಲ್ಲಿನ ದೋಣಿ ಹಾಗೂ ಗೂಡಂಗಡಿಗಳು ಅಲೆಗಳ ಹೊಡೆತಕ್ಕೆ ತೇಲಿ ಹೋಗಿವೆ.

ಭಟ್ಕಳ ತಾಲೂಕಿನದ್ಯಂತ ಭಾರಿ ಮಳೆ, ಗಾಳಿ

ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಹವಮಾನ ವೈಪರಿತ್ಯ ಉಂಟಾಗಿದ್ದು, ಬೆಳಗ್ಗೆ ಸಮಯದಲ್ಲಿ ಚಳಿ ಆವರಿಸಿಕೊಂಡು, ಮಧ್ಯಾಹ್ನವಾಗುತ್ತಿದಂತೆ ಉರಿ ಬಿಸಿಲು ಕಾಣಿಸಿಕೊಳ್ಳುತ್ತದೆ. ಸಂಜೆ ಆಗುತ್ತಿದಂತೆ ಮತ್ತೆ ಮಳೆ, ಗುಡುಗು ಆರಂಭವಾಗುತ್ತಿದೆ.

ಮರ ಬಿದ್ದು ಮನೆಗೆ ಜಖಂ: ಮುರುಡೇಶ್ವರದ ಕಾಯ್ಕಿಣಿ ಪಂಚಾಯಿತ ವ್ಯಾಪ್ತಿಯ ಬೆದರು ಮನೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಗೋಳಿಮರ ಕುಸಿದು ಎರಡು ಮನೆಗಳು ಸಂಪೂರ್ಣ ಜಖಂ ಆಗಿವೆ.

ಮಾದೇವಿ ನಾಯ್ಕ, ಮಂಜಮ್ಮ ಎಂ ನಾಯ್ಕ ಎನ್ನುವವರ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ಗ್ಯಾಸ್ ಸೋರಿಕೆ ಆತಂಕದ ಹಿನ್ನಲೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಭಟ್ಕಳ: ತಾಲೂಕಿನಾದ್ಯಂತ ರಾತ್ರಿ ಪೂರ್ತಿ ಸುರಿದ ಬಾರಿ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು .ಇಲ್ಲಿನ ಪ್ರವಾಸಿ ತಾಣವಾದ ಮುರುಡೇಶ್ವರದ ಕಡಲ ತೀರದಲ್ಲಿ ಅಲೆಗಳ ಉಬ್ಬರ ಇಳಿತ ಹೆಚ್ಚಾಗಿದ್ದು ತಡದಲ್ಲಿರುವ ದೋಣಿ ಹಾಗೂ ಗೂಡಂಗಡಿಗಳೆಲ್ಲಾ ಅಲೆಗಳ ಸೆಳೆತಕ್ಕೆ ತೇಳಿಕೊಂಡು ಹೋಗಿದೆ.Body:ಭಟ್ಕಳ: ತಾಲೂಕಿನಾದ್ಯಂತ ರಾತ್ರಿ ಪೂರ್ತಿ ಸುರಿದ ಬಾರಿ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು .ಇಲ್ಲಿನ ಪ್ರವಾಸಿ ತಾಣವಾದ ಮುರುಡೇಶ್ವರದ ಕಡಲ ತೀರದಲ್ಲಿ ಅಲೆಗಳ ಉಬ್ಬರ ಇಳಿತ ಹೆಚ್ಚಾಗಿದ್ದು ತಡದಲ್ಲಿರುವ ದೋಣಿ ಹಾಗೂ ಗೂಡಂಗಡಿಗಳೆಲ್ಲಾ ಅಲೆಗಳ ಸೆಳೆತಕ್ಕೆ ತೇಳಿಕೊಂಡು ಹೋಗಿದೆ.



ಕಳೆದ ಒಂದುವಾರದಿಂದ ಭಟ್ಕಳ ತಾಲೂಕಿನಾದ್ಯಂತ ವಿಚಿತ್ರ ರೀತಿಯಲ್ಲಿ ಹವಮಾನವಿದ್ದು ಬೆಳಿಗ್ಗೆ ಸಮಯದಲ್ಲಿ ಚಳಿ ಆವರಿಸಿಕೊಂಡು ಮದ್ಯಾಹ್ನವಾಗುತ್ತಿದಂತೆ ಉರಿ ಬಿಸಿಲಿನಲ್ಲಿ ಶೆಕೆಯ ಕಾಟ ಸಂಜೆ ಆಗುತ್ತಿದಂತೆ ಮಳೆಯ ಮಳೆ ಗುಡುಗು ಆರಂಭವಾಗಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು .

ಆದರೆ ನಿನ್ನೆ ಮುಂಜಾನೆಯಿಂದಲೇ ಸುರಿಯುತ್ತಿರುವ ಮಳೆ ಜನರ ಜೀವನ ಅಸ್ತವ್ಯಸ್ತ ಮಾಡಿದ್ದು ನಿನ್ನೆ ತಡ ರಾತ್ರಿಯಿಂದ ವಿಪರೀತ ಗಾಳಿ ಮಳೆಗೆ ಮುರುಡೇಶ್ವದಲ್ಲಿನ ಕಡಲ ತೀರದಲ್ಲಿನ ಗೂಡಂಗಡಿ ಮತ್ತು ದೋಣಿಗಳೆಲ್ಲ ಗಾಳಿ ಮಳೆಗೆ ತೇಲಿಹೋಗುತ್ತಿದ್ದು ದೋಣಿ ಹಾಗೂ ಅಂಗಡಿ ಮಾಲೀಕರಲ್ಲೇ ತಮ್ಮ ತಮ್ಮ ದೋಣಿ ಹಾಗೂ ಅಂಗಡಿ ತೇಲಿಗಾಗುತ್ತಿರುದನ್ನು ಹಿಡುದುಕೊಂಡು ದಡಕ್ಕೆ ತರುವ ದ್ರಶ್ಯಗಳು ಕಂಡು ಬಂತು.Conclusion:ಉದಯ ನಾಯ್ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.