ETV Bharat / state

ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ: ಸಂಪರ್ಕ ಕಡಿದುಕೊಂಡು ದ್ವೀಪದಂತಾದ ಹತ್ತಾರು ಗ್ರಾಮಗಳು

author img

By

Published : Jul 29, 2021, 10:09 AM IST

Updated : Jul 29, 2021, 12:40 PM IST

ಅಂಕೋಲಾ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ 25 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಳೆದ ವರ್ಷದ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ನೀರಿನಿಂದ ಮುಚ್ಚಿ ಹೋಗಿತ್ತಾದರೂ ಹೆಚ್ಚಿನ ಹಾನಿ‌ ಉಂಟಾಗಿರಲಿಲ್ಲ. ಆದರೆ, ಈ ಬಾರಿ ನೀರಿನ ರಭಸಕ್ಕೆ ಸೇತುವೆಯ ಮಧ್ಯಭಾಗ ತುಂಡಾಗಿ ನೆಲಕಚ್ಚಿದೆ.

Gullapur Bridge
ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ: ಸಂಪರ್ಕ ಕಡಿದುಕೊಂಡು ದ್ವೀಪದಂತಾದ ಹತ್ತಾರು ಗ್ರಾಮಗಳು

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಳ್ಳಾಪುರ ಸೇತುವೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಕಳೆದ ಜುಲೈ 23ರಂದು ಅಪ್ಪಳಿಸಿದ ನೆರೆಯಬ್ಬರಕ್ಕೆ ದಶಕಗಳ ಸೇತುವೆ ತುಂಡಾಗಿ ನೆಲಕ್ಕಪ್ಪಳಿಸಿದ್ದು, ಇದ್ದ ಒಂದೇ ಒಂದು ಸಂಪರ್ಕ ಕೊಂಡಿಯೂ ತುಂಡಾಗಿ ಇದೀಗ ನಿತ್ಯ ಓಡಾಟಕ್ಕೆ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗುಳ್ಳಾಪುರ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಕಳೆದ 25 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಳೆದ ವರ್ಷದ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ನೀರಿನಿಂದ ಮುಚ್ಚಿ ಹೋಗಿತ್ತಾದರೂ ಹೆಚ್ಚಿನ ಹಾನಿ‌ ಉಂಟಾಗಿರಲಿಲ್ಲ.

ಸಂಪರ್ಕ ಕಡಿದುಕೊಂಡು ದ್ವೀಪದಂತಾದ ಹತ್ತಾರು ಗ್ರಾಮಗಳು

ಆದರೆ, ಈ ಬಾರಿಯ ಪ್ರವಾಹದಲ್ಲಿ ಸೇತುವೆ ಮುಚ್ಚಿ‌ ಹೆದ್ದಾರಿವರೆಗೂ ನೀರು ತುಂಬಿದ್ದು, ನೀರಿನ ರಭಸಕ್ಕೆ ಸೇತುವೆಯ ಮಧ್ಯಭಾಗ ತುಂಡಾಗಿ ನೆಲಕಚ್ಚಿದೆ. ಇದರಿಂದಾಗಿ ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿ ಕಳಚಿ ದ್ವೀಪಗಳಾಗಿವೆ.

ಅಲ್ಲದೇ, ಎರಡು ದಶಕಗಳ ಬಳಿಕ ಮತ್ತೆ ದೋಣಿ ಮೇಲೆ ಓಡಾಡಬೇಕಾದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಗಂಗಾವಳಿ ನದಿ ಏಕಾಏಕಿ ಉಕ್ಕಿ ಹರಿದಿದ್ದು, ನೀರಿನ ರಭಸಕ್ಕೆ ಇಡೀ ಗ್ರಾಮವೇ ನಲುಗಿ ಹೋಗಿದೆ.

ಈ ಸೇತುವೆ ನದಿ ಪಕ್ಕದ ಹಳವಳ್ಳಿ, ಡೋಂಗ್ರಿ, ಕಮ್ಮಾಣಿ, ಕಲ್ಲೇಶ್ವರ, ಹೆಗ್ಗಾರ್ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ತಾಲೂಕಿನ ಸುಂಕಸಾಳ ಹಾಗೂ ರಾಮನಗುಳಿ ಗ್ರಾಮಗಳ ಬಳಿ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಎರಡು ತೂಗುಸೇತುವೆಗಳನ್ನ ನಿರ್ಮಾಣ ಮಾಡಲಾಗಿತ್ತು.

ಆದ್ರೆ, 2019ರಲ್ಲಿ ಉಂಟಾಗಿದ್ದ ನೆರೆ ಸಂದರ್ಭದಲ್ಲಿ ಎರಡೂ ತೂಗು ಸೇತುವೆಗಳು ಕೊಚ್ಚಿಹೋಗಿದ್ದು, ಇದೊಂದೇ ಸೇತುವೆ ಆಸರೆಯಾಗಿತ್ತು. ಈ ಸೇತುವೆಯೂ ಇದೀಗ ಮುರಿದುಬಿದ್ದಿದ್ದು, ಆದಷ್ಟು ಬೇಗ ಸೇತುವೆ ವ್ಯವಸ್ಥೆ ಮಾಡಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.

ಒಟ್ಟಾರೆ, ಏಕಾಏಕಿ ಉಕ್ಕಿಹರಿದ ಗಂಗಾವಳಿ ನದಿಯಬ್ಬರಕ್ಕೆ ಈ ಭಾಗದ ಜನರ ಸಂಪರ್ಕ ಕೊಂಡಿ ಕಡಿತವಾಗಿರೋದು ನಿಜಕ್ಕೂ ದುರಂತವೇ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ, ಆದಷ್ಟು ಶೀಘ್ರದಲ್ಲಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಬೇಕಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲದಲ್ಲೇ ಕುಡಿಯುವ ನೀರಿಗೆ ಪರದಾಟ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಳ್ಳಾಪುರ ಸೇತುವೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಕಳೆದ ಜುಲೈ 23ರಂದು ಅಪ್ಪಳಿಸಿದ ನೆರೆಯಬ್ಬರಕ್ಕೆ ದಶಕಗಳ ಸೇತುವೆ ತುಂಡಾಗಿ ನೆಲಕ್ಕಪ್ಪಳಿಸಿದ್ದು, ಇದ್ದ ಒಂದೇ ಒಂದು ಸಂಪರ್ಕ ಕೊಂಡಿಯೂ ತುಂಡಾಗಿ ಇದೀಗ ನಿತ್ಯ ಓಡಾಟಕ್ಕೆ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗುಳ್ಳಾಪುರ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಕಳೆದ 25 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಳೆದ ವರ್ಷದ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ನೀರಿನಿಂದ ಮುಚ್ಚಿ ಹೋಗಿತ್ತಾದರೂ ಹೆಚ್ಚಿನ ಹಾನಿ‌ ಉಂಟಾಗಿರಲಿಲ್ಲ.

ಸಂಪರ್ಕ ಕಡಿದುಕೊಂಡು ದ್ವೀಪದಂತಾದ ಹತ್ತಾರು ಗ್ರಾಮಗಳು

ಆದರೆ, ಈ ಬಾರಿಯ ಪ್ರವಾಹದಲ್ಲಿ ಸೇತುವೆ ಮುಚ್ಚಿ‌ ಹೆದ್ದಾರಿವರೆಗೂ ನೀರು ತುಂಬಿದ್ದು, ನೀರಿನ ರಭಸಕ್ಕೆ ಸೇತುವೆಯ ಮಧ್ಯಭಾಗ ತುಂಡಾಗಿ ನೆಲಕಚ್ಚಿದೆ. ಇದರಿಂದಾಗಿ ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿ ಕಳಚಿ ದ್ವೀಪಗಳಾಗಿವೆ.

ಅಲ್ಲದೇ, ಎರಡು ದಶಕಗಳ ಬಳಿಕ ಮತ್ತೆ ದೋಣಿ ಮೇಲೆ ಓಡಾಡಬೇಕಾದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಗಂಗಾವಳಿ ನದಿ ಏಕಾಏಕಿ ಉಕ್ಕಿ ಹರಿದಿದ್ದು, ನೀರಿನ ರಭಸಕ್ಕೆ ಇಡೀ ಗ್ರಾಮವೇ ನಲುಗಿ ಹೋಗಿದೆ.

ಈ ಸೇತುವೆ ನದಿ ಪಕ್ಕದ ಹಳವಳ್ಳಿ, ಡೋಂಗ್ರಿ, ಕಮ್ಮಾಣಿ, ಕಲ್ಲೇಶ್ವರ, ಹೆಗ್ಗಾರ್ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ತಾಲೂಕಿನ ಸುಂಕಸಾಳ ಹಾಗೂ ರಾಮನಗುಳಿ ಗ್ರಾಮಗಳ ಬಳಿ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಎರಡು ತೂಗುಸೇತುವೆಗಳನ್ನ ನಿರ್ಮಾಣ ಮಾಡಲಾಗಿತ್ತು.

ಆದ್ರೆ, 2019ರಲ್ಲಿ ಉಂಟಾಗಿದ್ದ ನೆರೆ ಸಂದರ್ಭದಲ್ಲಿ ಎರಡೂ ತೂಗು ಸೇತುವೆಗಳು ಕೊಚ್ಚಿಹೋಗಿದ್ದು, ಇದೊಂದೇ ಸೇತುವೆ ಆಸರೆಯಾಗಿತ್ತು. ಈ ಸೇತುವೆಯೂ ಇದೀಗ ಮುರಿದುಬಿದ್ದಿದ್ದು, ಆದಷ್ಟು ಬೇಗ ಸೇತುವೆ ವ್ಯವಸ್ಥೆ ಮಾಡಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.

ಒಟ್ಟಾರೆ, ಏಕಾಏಕಿ ಉಕ್ಕಿಹರಿದ ಗಂಗಾವಳಿ ನದಿಯಬ್ಬರಕ್ಕೆ ಈ ಭಾಗದ ಜನರ ಸಂಪರ್ಕ ಕೊಂಡಿ ಕಡಿತವಾಗಿರೋದು ನಿಜಕ್ಕೂ ದುರಂತವೇ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ, ಆದಷ್ಟು ಶೀಘ್ರದಲ್ಲಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಬೇಕಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲದಲ್ಲೇ ಕುಡಿಯುವ ನೀರಿಗೆ ಪರದಾಟ

Last Updated : Jul 29, 2021, 12:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.