ETV Bharat / state

ಭಟ್ಕಳದ ಸಬ್ಬತ್ತೆಯಲ್ಲಿ ಕೊಳೆತ ಸ್ಥಿತಿಯಲ್ಲಿ ನಾಲ್ಕು ಮಂಗಗಳು ಪತ್ತೆ - ಪಶು ವೈದ್ಯಾಧಿಕಾರಿ ಡಾ. ಮಿಥುನ

ಭಟ್ಕಳದ ಕೋಣಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬತ್ತೆ ಹಡೀನಲ್ಲಿ ನಾಲ್ಕು ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದರಿಂದ ಕೋಣಾರ ವ್ಯಾಪ್ತಿಯ‌ ಜನರು ಮಂಗನ ಕಾಯಿಲೆಯ ಭೀತಿ ಎದುರಿಸುವಂತಾಗಿದೆ.

ಕೊಳೆತಿರುವ ಸ್ಥಿತಿಯಲ್ಲಿ ನಾಲ್ಕು ಮಂಗಗಳು ಪತ್ತೆ
author img

By

Published : Nov 10, 2019, 5:58 PM IST

ಭಟ್ಕಳ: ಕೋಣಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬತ್ತೆ ಹಡೀನಲ್ಲಿನ ಗಣೇಶ ಹೆಬ್ಬಾರ ಎಂಬುವವರ ಮನೆಯ ತೋಟದಲ್ಲಿ 4 ಮಂಗಗಳು ಹಾಗೂ ಒಂದು ಮರಿ ಮಂಗ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಕಳೆದ 10 ದಿನದ ಹಿಂದೆ ಈ ಮಂಗಗಳು ಸಾವನ್ನಪ್ಪಿವೆ ಎನ್ನಲಾಗ್ತಿದೆ. ಮಂಗಗಳು ಸಂಪೂರ್ಣ ಕೊಳೆತ ಸ್ಥಿತಿಗೆ ತಲುಪಿದ ಹಿನ್ನೆಲೆ ಸ್ಥಳೀಯರು ಅಲ್ಲಿನ ಅರಣ್ಯ ಇಲಾಖೆ ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೊಳೆತಿರುವ ಸ್ಥಿತಿಯಲ್ಲಿ ನಾಲ್ಕು ಮಂಗಗಳು ಪತ್ತೆ

ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯಾಧಿಕಾರಿ ಡಾ. ಮಿಥುನ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ಸತ್ತ ಎಲ್ಲ ಮಂಗಗಳ ಪರಿಶೀಲನೆ ನಡೆಸಿದ್ದು, ಮಂಗಗಳು ಕೊಳೆತ ಸ್ಥಿತಿಗೆ ತಲುಪಿದ್ದರಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಂಗಗಳ ಸಾವು ನಿಗೂಢ:

ಈ ಹಿಂದೆ ಬೈಲೂರಿನ ಹೆದ್ದಾರಿಯಲ್ಲಿ ಮಂಗವೊಂದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿತ್ತು. ಅದಾದ ಬಳಿಕ ಸಬ್ಬತ್ತೆಯಲ್ಲಿ ನಾಲ್ಕು ಮಂಗಗಳು ಸಾವನ್ನಪ್ಪಿವೆ. ಇದರಿಂದ ಕೋಣಾರ ವ್ಯಾಪ್ತಿಯ‌ ಜನರು ಮಂಗನ ಕಾಯಿಲೆಯ ಭೀತಿ ಎದುರಿಸುವಂತಾಗಿದೆ.

ದೊಡ್ಡ ಪಕ್ಷಿಯಿಂದ ಮಂಗಗಳ ಸಾವು?:

ಆಹಾರ ಹುಡುಕಿ ಬರುವ ದೊಡ್ಡ ಪಕ್ಷಿಗಳಾದ ಹದ್ದು, ಗಿಡುಗ ಹಾಗೂ ಮಂಗಗಳ ಮಧ್ಯೆ ಕಾದಾಟ ಉಂಟಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದಾಗಿದೆ. ಇದು ಯಾವೊಬ್ಬ ಸ್ಥಳೀಯರ ಗಮನಕ್ಕೆ ಬಾರದೇ ಕೊಳೆತಿರಬಹುದು ಎಂಬ ಮಾತು ಸ್ಥಳೀಯವಾಗಿದೆ ಕೇಳಿ ಬಂದಿದೆ.

ಭಟ್ಕಳ: ಕೋಣಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬ್ಬತ್ತೆ ಹಡೀನಲ್ಲಿನ ಗಣೇಶ ಹೆಬ್ಬಾರ ಎಂಬುವವರ ಮನೆಯ ತೋಟದಲ್ಲಿ 4 ಮಂಗಗಳು ಹಾಗೂ ಒಂದು ಮರಿ ಮಂಗ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಕಳೆದ 10 ದಿನದ ಹಿಂದೆ ಈ ಮಂಗಗಳು ಸಾವನ್ನಪ್ಪಿವೆ ಎನ್ನಲಾಗ್ತಿದೆ. ಮಂಗಗಳು ಸಂಪೂರ್ಣ ಕೊಳೆತ ಸ್ಥಿತಿಗೆ ತಲುಪಿದ ಹಿನ್ನೆಲೆ ಸ್ಥಳೀಯರು ಅಲ್ಲಿನ ಅರಣ್ಯ ಇಲಾಖೆ ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೊಳೆತಿರುವ ಸ್ಥಿತಿಯಲ್ಲಿ ನಾಲ್ಕು ಮಂಗಗಳು ಪತ್ತೆ

ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯಾಧಿಕಾರಿ ಡಾ. ಮಿಥುನ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ಸತ್ತ ಎಲ್ಲ ಮಂಗಗಳ ಪರಿಶೀಲನೆ ನಡೆಸಿದ್ದು, ಮಂಗಗಳು ಕೊಳೆತ ಸ್ಥಿತಿಗೆ ತಲುಪಿದ್ದರಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಂಗಗಳ ಸಾವು ನಿಗೂಢ:

ಈ ಹಿಂದೆ ಬೈಲೂರಿನ ಹೆದ್ದಾರಿಯಲ್ಲಿ ಮಂಗವೊಂದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿತ್ತು. ಅದಾದ ಬಳಿಕ ಸಬ್ಬತ್ತೆಯಲ್ಲಿ ನಾಲ್ಕು ಮಂಗಗಳು ಸಾವನ್ನಪ್ಪಿವೆ. ಇದರಿಂದ ಕೋಣಾರ ವ್ಯಾಪ್ತಿಯ‌ ಜನರು ಮಂಗನ ಕಾಯಿಲೆಯ ಭೀತಿ ಎದುರಿಸುವಂತಾಗಿದೆ.

ದೊಡ್ಡ ಪಕ್ಷಿಯಿಂದ ಮಂಗಗಳ ಸಾವು?:

ಆಹಾರ ಹುಡುಕಿ ಬರುವ ದೊಡ್ಡ ಪಕ್ಷಿಗಳಾದ ಹದ್ದು, ಗಿಡುಗ ಹಾಗೂ ಮಂಗಗಳ ಮಧ್ಯೆ ಕಾದಾಟ ಉಂಟಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದಾಗಿದೆ. ಇದು ಯಾವೊಬ್ಬ ಸ್ಥಳೀಯರ ಗಮನಕ್ಕೆ ಬಾರದೇ ಕೊಳೆತಿರಬಹುದು ಎಂಬ ಮಾತು ಸ್ಥಳೀಯವಾಗಿದೆ ಕೇಳಿ ಬಂದಿದೆ.

Intro:ಭಟ್ಕಳದ ಸಬ್ಬತ್ತೆಯಲ್ಲಿ ನಿಗೂಢವಾಗಿ ಸತ್ತು ಕೊಳೆತಿರುವ ನಾಲ್ಕು ಮಂಗಗಳು'



' ಮರಣೋತ್ತರ ಪರೀಕ್ಷೆಗೆ ಅರ್ಹವಾಗದೇ ಸಾವಿಗೆ ಕಾರಣ ತಿಳಿಯದಿರುವ ಪ್ರಕರಣ'



'ಮಂಗನ ಕಾಯಿಲೆಯ ಭೀತಿ ಎದುರಿರುತ್ತಿರುವ ಕೋಣಾರ ಪಂಚಾಯತ ಜನರು'



ಭಟ್ಕಳ: ಇಲ್ಲಿನ ಕೋಣಾರ ಗ್ರಾಮ ಪಂಚಾಯತಿ ವ್ಯಾಪಿಯ ಸಬ್ಬತ್ತೆ ಹಡೀನಲ್ಲಿನ ಗಣೇಶ ಹೆಬ್ಬಾರ ಎಂಬುವವರ ಮನೆಯ ತೋಟದಲ್ಲಿ 4 ಮಂಗಗಳು ಹಾಗೂ ಒಂದು ಮರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಶನಿವಾರದಂದು ನಡೆದಿದ್ದು ಈ ಪ್ರಕರಣ ತಾಲೂಕನ್ನೆ ಬೆಚ್ಚಿ ಬಿಳಿಸಿದೆ.Body:ಕಳೆದ 10 ದಿನದ ಹಿಂದೆ ಈ ಮಂಗಗಳು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದ್ದು, ಶನಿವಾರದಂದು ಬೆಳಿಗ್ಗೆ ಸಂಪೂರ್ಣ ಕೊಳೆತ ಸ್ಥಿತಿಗೆ ತಲುಪಿದ ಹಿನ್ನೆಲೆ ಸ್ಥಳಿಯರು ಅಲ್ಲಿನ ಅರಣ್ಯ ಇಲಾಖೆ ವೀಕ್ಷಕರಿಗೆ ಮಾಹಿತಿ ತಿಳಿಸಿದ್ದಾರೆ.



ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದಾಗ ಮಂಗಗಳು ಬೇರೆ ಬೇರೆ ಕಡೆಯಲ್ಲಿ ದೇಹವೂ ಕೊಳೆತ ಸ್ಥಿತಿಯಲ್ಲಿ ನೊಣದಿಂದ ತುಂಬಿಕೊಂಡಿರುವುದು ಕಂಡು ಬಂದಿದೆ. ಈ ಪೈಕಿ ಒಂದು ಮಂಗವೂ ಸದ್ಯಕ್ಕೆ ಸತ್ತಿರುವಂತಹ ಅನುಮಾನದಿಂದ

ಅರಣ್ಯ ಇಲಾಖೆ ಅಧಿಕಾರಿಗಳು ಪಶು ವೈದ್ಯಾಧಿಕಾರಿ ಡಾ. ಮಿಥುನ ಅವರಿಗೆ ಮಾಹಿತಿ ತಿಳಿಸಿದ್ದು ತಕ್ಷಣಕ್ಕೆ ಸಿಬ್ಬಂದಿಗಳ‌ ಜೊತೆಗೆ ಬಂದ ಪಶು ವೈದ್ಯ ಡಾ.‌ಮಿಥುನ ಅವರು ಎಲ್ಲಾ ಸತ್ತ ಮಂಗಗಳ ಪರಿಶೀಲನೆ ಕೈಗೊಂಡಿದ್ದಾರೆ.



ಕೊನೆಯಲ್ಲಿ ಸದ್ಯಕ್ಕೆ ಸತ್ತಿರುವ ಅನುಮಾನದಲ್ಲಿದ್ದ ಮಂಗದ ಮರಣೋತ್ತರ ಪರೀಕ್ಷೆಗೆ ಮುಂದಾದಾಗ ಅದು ಸಹ ಕೊಳೆತ ಹಂತಕ್ಕೆ ತಲುಪಿರುವುದು ತಿಳಿದು ಬಂದಿದೆ. ಈ ಬಗ್ಗೆ ಪಶು ವೈದ್ಯಾಧಿಕಾರಿ ಡಾ. ಮಿಥುನ ಅವರು ಕೊಳೆತ ಸ್ಥಿತಿಗೆ ತಲುಪಿದ್ದ ಮಂಗವು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾದ್ಯವಿಲ್ಲ ಎಂಬ ಕಾರಣ‌ವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದರು.



ನಿಗೂಢ ಮಂಗಗಳ ಸಾವು: ಈ ಹಿಂದೆ ಬೈಲೂರಿನ ಹೆದ್ದಾರಿ ಯಲ್ಲಿ ಮಂಗವೊಂದು ಸಾವನ್ನಪ್ಪಿದ್ದು ಅದು ಸಹ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಅದಾದ ಬಳಿಕ ಸಬ್ಬತ್ತೆಯ ಈ ಪ್ರಕರಣವೇ ಭಟ್ಕಳದಲ್ಲಿ ಆಗಿರುವುದಾಗಿದೆ.‌ ಸಬ್ಬತ್ತೆಯಲ್ಲಿ ಸತ್ತ 4 ಮಂಗ ಹಾಗೂ ಒಂದು ಮರಿಯ ಮರಣೋತ್ತರ ಪರೀಕ್ಷೆಗೆ ಸಿಗದ ಕಾರಣ ಪ್ರಕರಣ ಬೇದಿಸಲು ಸಾದ್ಯವಿಲ್ಲವಾಗಿದ್ದು, ಕೋಣಾರ ವ್ಯಾಪ್ತಿಯ‌ ಜನರು ಇದರಿಂದ ಮಂಗನ ಕಾಯಿಲೆಯ ಭಯಭೀತಿ ಎದುರಿಸುವಂತಾಗಿದೆ.



ದೊಡ್ಡ ಪಕ್ಷಿಯಿಂದ ಮಂಗಗಳ ಸಾವು!?: ಆಹಾರ ಹುಡುಕಿ ಬರುವ ದೊಡ್ಡ ಪಕ್ಷಿಗಳಾದ ಹದ್ದು ಗಿಡುಗ ಹಾಗೂ ಮಂಗಗಳ ಮಧ್ಯೆ ಕಾದಾಟ ಉಂಟಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದಾಗಿದ್ದು, ಯಾವೊಬ್ಬ ಸ್ಥಳೀಯರ ಗಮನಕ್ಕೆ ಬಾರದೇ ಕೊಳೆತಿರಬಹುದು ಎಂಬ ಮಾತು ಸ್ಥಳೀಯವಾಗಿದೆ ಕೇಳಿ ಬಂದಿದೆ.



' ಸತ್ತ ಮಂಗಗಳ‌ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ಬಳಿಕ ಯಾವೊಂದು ಮಂಗವೂ ಮರಣೋತ್ತರ ಪರೀಕ್ಷೆಗೆ ಅರ್ಹವಲ್ಲ ಎಂಬುದು ಸಾಬೀತಾಯಿತು. ಈ ಪ್ರಕರಣದಲ್ಲಿ ಮಂಗಗಳ ಸಾವು ಮೇಲ್ನೋಟಕ್ಕೆ ಯಾವುದರಿಂದ ಆಗಿರಬಹುದು ಎಂದು ತಿಳಿದು ಬರುತ್ತಿಲ್ಲ. ಈ ಕಾರಣದಿಂದ ಪ್ರಕರಣಕ್ಕೆ ಇತ್ಯರ್ಥ ತಿಳಿಯಲು ಸಾದ್ಯವಿಲ್ಲ.'



ಬೈಟ್ : ಡಾ. ಮಿಥುನ - ಪಶು ವೈದ್ಯಾಧಿಕಾರಿ

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.