ETV Bharat / state

ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ ಮೌಲ್ಯದ ಸಾಮಗ್ರಿ ಭಸ್ಮ

author img

By

Published : Jan 31, 2023, 4:01 PM IST

ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ - ಲಕ್ಷಾಂತರ ರೂ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ - ಸೋಮವಾರ ರಾತ್ರಿ ನಡೆದ ಘಟನೆ - ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ.

fire-accident-in-karwar
ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ
ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ

ಕಾರವಾರ: ಗುಜರಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಗುಜರಿ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಇಲ್ಲಿಯ ಕುಮಟಾ ಪಟ್ಟಣದ ಅಳ್ವೇಕೋಡಿಯಲ್ಲಿ ನಡೆದಿದೆ. ಕುಮಟಾದ ಬಾಷಾ ಶೇಖ್‌ ಎನ್ನುವವರಿಗೆ ಸೇರಿದ ಗುಜರಿ ಅಂಗಡಿಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಈಡಿ ಗುಜರಿ ರಾಶಿಯನ್ನು ಸುತ್ತುವರಿದಿತ್ತು. ಪ್ಲಾಸ್ಟಿಕ್, ಮರದ ಪೀಠೋಪಕರಣಗಳು ಇದ್ದ ಕಾರಣ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.

ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕಾಗಮಿಸಿದ ಕುಮಟಾ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ‌ ನಂದಿಸುವ ಕಾರ್ಯಕ್ಕೆ ಇಳಿದಿದ್ದರು. ಬೆಂಕಿ ಜ್ವಾಲೆ ಹೆಚ್ಚುತ್ತಲೆ ಇದ್ದು ಪಕ್ಕದ ಮನೆಗಳಿಗೂ ಬೆಂಕಿ ತಗಲುವ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಕೋಲಾ ಮತ್ತು ಹೊನ್ನಾವರದ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಜಂಟಿಯಾಗಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಬಗ್ಗೆ ಕುಮಟಾ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯಿ ಹೊತ್ತೊಯ್ದ ಚಿರತೆ ಸಿಸಿಟಿವಿಯಲ್ಲಿ ಸೆರೆ: ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ರಾಮನಗರದಲ್ಲಿ ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಮನಗರದ ಅಗೋಸ್ತಿನ ಸಾಲೀಸ್ ರೊಡ್ರೀಗಸ್ ಎಂಬುವವರ ಮನೆಯ ಟೆರಸ್ ಮೇಲೆ ಮಲಗಿದ್ದ ನಾಯಿಯನ್ನು ಚಿರತೆ ಬೇಟೆಯಾಡಿ ಹೊತ್ತೊಯ್ದಿತ್ತು. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟ ಜೋರಾಗಿದ್ದು, ಅನೇಕ ನಾಯಿ, ಜಾನುವಾರುಗಳನ್ನ ಭೇಟೆಯಾಡಿ ಹೊತ್ತೊಯ್ದಿದೆ. ಆದರೆ, ನಿರಂತರವಾಗಿ ಚಿರತೆ ದಾಳಿ ಮಾಡುತ್ತಿರುವುದರಿಂದ ಆತಂಕಗೊಂಡ ಸ್ಥಳೀಯರು ಚಿರತೆ ಸೆರೆ‌ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶೂ ಒಳಗೆ ಅಡಗಿದ್ದ ನಾಗರಹಾವು.. ವಿಡಿಯೋ

ಹೆದ್ದಾರಿ ದಾಟಲು ಪರದಾಡಿದ ನಾಗರ ಹಾವು(ಕಾರವಾರ): ಬೃಹತ್ ಗಾತ್ರದ ನಾಗರ ಹಾವೊಂದು ಹೆದ್ದಾರಿ ದಾಟಲು ಪರದಾಡಿದ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್ ಬಳಿ ನಡೆದಿದೆ. ಸುಮಾರು 6 ಅಡಿ ಉದ್ದದ ಹಾವು ಹೆದ್ದಾರಿ ದಾಟುಲ ರಸ್ತೆ ಮೇಲೆ ಬಂದಿದ್ದು, ಅತ್ತ ದಾಟಲೂ ಆಗದೇ, ಹಿಂದೆ ತಿರುಗಿಯೂ ಹೋಗದೇ ರಸ್ತೆಯ ಮಧ್ಯದಲ್ಲೇ ನಿಂತಿದೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳು ಸಂಚರಿಸಲಾಗದೇ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ಸುಮಾರು ಅರ್ಧ ಗಂಟೆ ಕಾಲ ಹಾವಿನಿಂದಾಗಿ ಅಂಚಾರಕ್ಕೆ ಅಡೆತಡೆಯುಂಟಾಗಿತ್ತು.

ಈ ವೇಳೆ ಸ್ಥಳೀಯರು ಉರಗ ಪ್ರೇಮಿ ಪವನ ನಾಯ್ಕ ಎಂಬುವವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪವನ್ ಹೆದ್ದಾರಿಯಲ್ಲಿ ನಿಂತಿದ್ದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅದನ್ನು ರಸ್ತೆ ಸಮೀಪದಲ್ಲೇ ಇದ್ದ ಪೊದೆಗೆ ಬಿಟ್ಟಿದ್ದು, ಹಾವನ್ನು ಹಿಡಿದ ಬಳಿಕ ವಾಹನ ಸಂಚಾರ ಪ್ರಾರಂಭವಾಯಿತು.

ಇದನ್ನೂ ಓದಿ: ತಂದೆ ಮಗಳು ಸಜೀವ ದಹನ: ಮನಕಲಕುವ ದಾರುಣ ಘಟನೆ..!

ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ

ಕಾರವಾರ: ಗುಜರಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಗುಜರಿ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಇಲ್ಲಿಯ ಕುಮಟಾ ಪಟ್ಟಣದ ಅಳ್ವೇಕೋಡಿಯಲ್ಲಿ ನಡೆದಿದೆ. ಕುಮಟಾದ ಬಾಷಾ ಶೇಖ್‌ ಎನ್ನುವವರಿಗೆ ಸೇರಿದ ಗುಜರಿ ಅಂಗಡಿಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಈಡಿ ಗುಜರಿ ರಾಶಿಯನ್ನು ಸುತ್ತುವರಿದಿತ್ತು. ಪ್ಲಾಸ್ಟಿಕ್, ಮರದ ಪೀಠೋಪಕರಣಗಳು ಇದ್ದ ಕಾರಣ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.

ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕಾಗಮಿಸಿದ ಕುಮಟಾ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ‌ ನಂದಿಸುವ ಕಾರ್ಯಕ್ಕೆ ಇಳಿದಿದ್ದರು. ಬೆಂಕಿ ಜ್ವಾಲೆ ಹೆಚ್ಚುತ್ತಲೆ ಇದ್ದು ಪಕ್ಕದ ಮನೆಗಳಿಗೂ ಬೆಂಕಿ ತಗಲುವ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಕೋಲಾ ಮತ್ತು ಹೊನ್ನಾವರದ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಜಂಟಿಯಾಗಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಬಗ್ಗೆ ಕುಮಟಾ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯಿ ಹೊತ್ತೊಯ್ದ ಚಿರತೆ ಸಿಸಿಟಿವಿಯಲ್ಲಿ ಸೆರೆ: ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ರಾಮನಗರದಲ್ಲಿ ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಮನಗರದ ಅಗೋಸ್ತಿನ ಸಾಲೀಸ್ ರೊಡ್ರೀಗಸ್ ಎಂಬುವವರ ಮನೆಯ ಟೆರಸ್ ಮೇಲೆ ಮಲಗಿದ್ದ ನಾಯಿಯನ್ನು ಚಿರತೆ ಬೇಟೆಯಾಡಿ ಹೊತ್ತೊಯ್ದಿತ್ತು. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟ ಜೋರಾಗಿದ್ದು, ಅನೇಕ ನಾಯಿ, ಜಾನುವಾರುಗಳನ್ನ ಭೇಟೆಯಾಡಿ ಹೊತ್ತೊಯ್ದಿದೆ. ಆದರೆ, ನಿರಂತರವಾಗಿ ಚಿರತೆ ದಾಳಿ ಮಾಡುತ್ತಿರುವುದರಿಂದ ಆತಂಕಗೊಂಡ ಸ್ಥಳೀಯರು ಚಿರತೆ ಸೆರೆ‌ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶೂ ಒಳಗೆ ಅಡಗಿದ್ದ ನಾಗರಹಾವು.. ವಿಡಿಯೋ

ಹೆದ್ದಾರಿ ದಾಟಲು ಪರದಾಡಿದ ನಾಗರ ಹಾವು(ಕಾರವಾರ): ಬೃಹತ್ ಗಾತ್ರದ ನಾಗರ ಹಾವೊಂದು ಹೆದ್ದಾರಿ ದಾಟಲು ಪರದಾಡಿದ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್ ಬಳಿ ನಡೆದಿದೆ. ಸುಮಾರು 6 ಅಡಿ ಉದ್ದದ ಹಾವು ಹೆದ್ದಾರಿ ದಾಟುಲ ರಸ್ತೆ ಮೇಲೆ ಬಂದಿದ್ದು, ಅತ್ತ ದಾಟಲೂ ಆಗದೇ, ಹಿಂದೆ ತಿರುಗಿಯೂ ಹೋಗದೇ ರಸ್ತೆಯ ಮಧ್ಯದಲ್ಲೇ ನಿಂತಿದೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳು ಸಂಚರಿಸಲಾಗದೇ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ಸುಮಾರು ಅರ್ಧ ಗಂಟೆ ಕಾಲ ಹಾವಿನಿಂದಾಗಿ ಅಂಚಾರಕ್ಕೆ ಅಡೆತಡೆಯುಂಟಾಗಿತ್ತು.

ಈ ವೇಳೆ ಸ್ಥಳೀಯರು ಉರಗ ಪ್ರೇಮಿ ಪವನ ನಾಯ್ಕ ಎಂಬುವವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪವನ್ ಹೆದ್ದಾರಿಯಲ್ಲಿ ನಿಂತಿದ್ದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅದನ್ನು ರಸ್ತೆ ಸಮೀಪದಲ್ಲೇ ಇದ್ದ ಪೊದೆಗೆ ಬಿಟ್ಟಿದ್ದು, ಹಾವನ್ನು ಹಿಡಿದ ಬಳಿಕ ವಾಹನ ಸಂಚಾರ ಪ್ರಾರಂಭವಾಯಿತು.

ಇದನ್ನೂ ಓದಿ: ತಂದೆ ಮಗಳು ಸಜೀವ ದಹನ: ಮನಕಲಕುವ ದಾರುಣ ಘಟನೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.