ETV Bharat / state

ಭಾರಿ ಮಳೆಗೆ ಕೈ ಕೊಟ್ಟ ವಿದ್ಯುತ್... ನಿದ್ದೆ ಇಲ್ಲದೇ ಕರಾವಳಿ ಜನರು ಕಂಗಾಲು - undefined

ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಎಂಥಾ ಮಳೆ ಮಾರಾಯರೇ, ಕರೆಂಟ್​ ಇಲ್ಲ ಏನೂ ಇಲ್ಲ. ಇದರಿಂದ ಸೊಳ್ಳೆ ಕಾಟ ತಡಿಯೋಕೆ ಆಗ್ತಿಲ್ಲ. ನಾವು ತಂದ ಐಸ್ ಕ್ರೀಂಗಳು ಹಾಳಾಗುತ್ತಿವೆ ಎಂದು ಕರಾವಳಿ ಜನರು ಗೋಳಾಡುತ್ತಿದ್ದಾರೆ.

ಕಾರವಾರ
author img

By

Published : Jun 13, 2019, 2:00 PM IST

ಕಾರವಾರ : ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ 20 ಗಂಟೆಯಿಂದ ವಿದ್ಯುತ್ ಸ್ಥಗಿತಗೊಂಡ ಕಾರಣ ಸಾರ್ವಜನಿಕರು, ಉದ್ಯಮಿಗಳು ಪರದಾಡುವಂತಾಗಿದೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆ

ನಗರದಲ್ಲಿ ಬುಧವಾರ ಮಧ್ಯಾಹ್ನ ಭಾರಿ ಮಳೆಯಾಗಿದ್ದು, ನಗರದ ಬಾಂಡಿ ಶಿಟ್ಟಾ ಬಳಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ನಗರ ಪ್ರದೇಶಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಥಗಿತಗೊಂಡಿದ್ದು, ಕರೆಂಟ್​ ಇಲ್ಲದೇ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಿದ್ದೆಯಿಲ್ಲದೆ ಜನರ ಪರದಾಟ:

ಬುಧವಾರ ಮಧ್ಯಾಹ್ನದಿಂದಲೆ ವಿದ್ಯುತ್ ಸ್ಥಗಿತಗೊಂಡ ಕಾರಣ ನಗರ ಪ್ರದೇಶದಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ವಿಪರೀತ ಸೆಕೆ ಹಾಗೂ ಸೊಳ್ಳೆ ಕಾಟಕ್ಕೆ ಕಂಗೆಟ್ಟಿರುವ ಜನ ನಿದ್ದೆಯಿಲ್ಲದೇ ಪರದಾಡುತ್ತಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಬಹುತೇಕರು ಊಟ ತಿಂಡಿಗೆ ಹೋಟೆಲ್​ ಕಡೆ ಮುಖ ಮಾಡಿದ್ದರು. ಹೋಟೆಲ್​​​ಗಳೂ ವಿದ್ಯುತ್ ಇಲ್ಲದ್ದಕ್ಕೆ ಬಾಗಿಲು ಮುಚ್ಚಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.


3 ಲಕ್ಷದ ಐಸ್ ಕ್ರೀಂ ಹಾನಿ:

ನಗರದಲ್ಲಿ ಸುಮಾರು 20 ಗಂಟೆಗಳ ಕಾಲ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸ್ಥಗಿತಗೊಳಿಸಿದ್ದರ ಪರಿಣಾಮ ಐಸ್ ಕ್ರೀಂ ಸೇರಿದಂತೆ ಇನ್ನಿತರ ಉದ್ಯಮಗಳಿಗೆ ಭಾರಿ ಹಾನಿಯಾಗಿದೆ.

ಬುಧವಾರ ಮಧ್ಯಾಹ್ನವೇ ವಿದ್ಯುತ್ ತೆಗೆದಿದ್ದಾರೆ. ಈ ಕುರಿತು ಹೆಸ್ಕಾಂನವರನ್ನು ಸಂಪರ್ಕಿಸಿದರೆ ನಮ್ಮ ಕರೆಯನ್ನೇ ಸ್ವೀಕರಿಸಿಲ್ಲ.‌ ಐಸ್ ಕ್ರೀಂ ಅಂಗಡಿ ಮತ್ತು ಫ್ಯಾಕ್ಟರಿಯಲ್ಲಿ ಸುಮಾರು 3 ಲಕ್ಷದ ಐಸ್ ಕ್ರೀಂ ಹಾನಿಯಾಗಿವೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪ್ರತಿ ವರ್ಷ ಮಳೆಗಾಲದಲ್ಲಿ ಹೆಸ್ಕಾಂ ನವರು ಇದೇ ರೀತಿ ಮಾಡುತ್ತಿದ್ದಾರೆ ಎಂದು ನ್ಯಾಚುರಲ್ ಐಸ್ ಕ್ರೀಂ ಅಂಗಡಿ ಮಾಲೀಕ ಚಂದ್ರಕಾಂತ್​ ನಾಯ್ಕ್​ ಆಕ್ರೋಶ ವ್ಯಕ್ತಪಡಿಸಿದರು.

ಕಾರವಾರ : ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ 20 ಗಂಟೆಯಿಂದ ವಿದ್ಯುತ್ ಸ್ಥಗಿತಗೊಂಡ ಕಾರಣ ಸಾರ್ವಜನಿಕರು, ಉದ್ಯಮಿಗಳು ಪರದಾಡುವಂತಾಗಿದೆ.

ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆ

ನಗರದಲ್ಲಿ ಬುಧವಾರ ಮಧ್ಯಾಹ್ನ ಭಾರಿ ಮಳೆಯಾಗಿದ್ದು, ನಗರದ ಬಾಂಡಿ ಶಿಟ್ಟಾ ಬಳಿ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ನಗರ ಪ್ರದೇಶಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಥಗಿತಗೊಂಡಿದ್ದು, ಕರೆಂಟ್​ ಇಲ್ಲದೇ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಿದ್ದೆಯಿಲ್ಲದೆ ಜನರ ಪರದಾಟ:

ಬುಧವಾರ ಮಧ್ಯಾಹ್ನದಿಂದಲೆ ವಿದ್ಯುತ್ ಸ್ಥಗಿತಗೊಂಡ ಕಾರಣ ನಗರ ಪ್ರದೇಶದಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ವಿಪರೀತ ಸೆಕೆ ಹಾಗೂ ಸೊಳ್ಳೆ ಕಾಟಕ್ಕೆ ಕಂಗೆಟ್ಟಿರುವ ಜನ ನಿದ್ದೆಯಿಲ್ಲದೇ ಪರದಾಡುತ್ತಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಬಹುತೇಕರು ಊಟ ತಿಂಡಿಗೆ ಹೋಟೆಲ್​ ಕಡೆ ಮುಖ ಮಾಡಿದ್ದರು. ಹೋಟೆಲ್​​​ಗಳೂ ವಿದ್ಯುತ್ ಇಲ್ಲದ್ದಕ್ಕೆ ಬಾಗಿಲು ಮುಚ್ಚಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.


3 ಲಕ್ಷದ ಐಸ್ ಕ್ರೀಂ ಹಾನಿ:

ನಗರದಲ್ಲಿ ಸುಮಾರು 20 ಗಂಟೆಗಳ ಕಾಲ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸ್ಥಗಿತಗೊಳಿಸಿದ್ದರ ಪರಿಣಾಮ ಐಸ್ ಕ್ರೀಂ ಸೇರಿದಂತೆ ಇನ್ನಿತರ ಉದ್ಯಮಗಳಿಗೆ ಭಾರಿ ಹಾನಿಯಾಗಿದೆ.

ಬುಧವಾರ ಮಧ್ಯಾಹ್ನವೇ ವಿದ್ಯುತ್ ತೆಗೆದಿದ್ದಾರೆ. ಈ ಕುರಿತು ಹೆಸ್ಕಾಂನವರನ್ನು ಸಂಪರ್ಕಿಸಿದರೆ ನಮ್ಮ ಕರೆಯನ್ನೇ ಸ್ವೀಕರಿಸಿಲ್ಲ.‌ ಐಸ್ ಕ್ರೀಂ ಅಂಗಡಿ ಮತ್ತು ಫ್ಯಾಕ್ಟರಿಯಲ್ಲಿ ಸುಮಾರು 3 ಲಕ್ಷದ ಐಸ್ ಕ್ರೀಂ ಹಾನಿಯಾಗಿವೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪ್ರತಿ ವರ್ಷ ಮಳೆಗಾಲದಲ್ಲಿ ಹೆಸ್ಕಾಂ ನವರು ಇದೇ ರೀತಿ ಮಾಡುತ್ತಿದ್ದಾರೆ ಎಂದು ನ್ಯಾಚುರಲ್ ಐಸ್ ಕ್ರೀಂ ಅಂಗಡಿ ಮಾಲೀಕ ಚಂದ್ರಕಾಂತ್​ ನಾಯ್ಕ್​ ಆಕ್ರೋಶ ವ್ಯಕ್ತಪಡಿಸಿದರು.

Intro:ಭಾರಿ ಮಳೆಗೆ ಕೈಕೊಟ್ಟ ವಿದ್ಯುತ್... ನಿದ್ದೆಯಿಲ್ಲದೇ ಕಳೆದ ಕಾರವಾರಿಗರು!
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾರವಾರದಲ್ಲಿ ಕಳೆದ ೨೦ ಗಂಟೆಯಿಂದ ವಿದ್ಯುತ್ ಸ್ಥಗೀತಗೊಂಡ ಕಾರಣ ಸಾರ್ವಜನಿಕರು ಉದ್ಯಮಿಗಳು ಪರದಾಡುವಂತಾಗಿದೆ.
ಕಾರವಾರ ನಗರದಲ್ಲಿ ಬುಧವಾರ ಮಧ್ಯಾಹ್ನದ ಭಾರಿ ಮಳೆಯಾಗಿದ್ದು, ನಗರದ ಬಾಂಡಿಶಿಟ್ಟಾ ಬಳಿ ೩೩ಕೆ.ವಿಯ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ನಗರ ಪ್ರದೇಶಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಬುಧವಾರ ಮಧ್ಯಾಹ್ನದಿಂದಲೇ ಸ್ಥಗೀತಗೊಂಡಿದೆ. ಇನ್ನು ಕೂಡ ವಿದ್ಯುತ್ ಬರದ ಕಾರಣ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಿದ್ದೆಯಿಲ್ಲದೆ ಕಳೆದ ಕಾರವಾರಿಗರು!:
ಇನ್ನು ಬುಧವಾರ ಮಧ್ಯಾಹ್ನವೇ ವಿದ್ಯುತ್ ಸ್ಥಗಿತಗೊಂಡಿದ್ದ ಕಾರಣ ನಗರ ಪ್ರದೇಶದಲ್ಲಿ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು. ರಾತ್ರಿ ವಿಪರಿತ ಸೆಕೆ ಹಾಗೂ ಸೊಳ್ಳೆ ಕಾಟಕ್ಕೆ ಜನರು ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದಾರೆ. ಅಲ್ಲದೆ ವಿದ್ಯುತ್ ಇಲ್ಲದ ಕಾರಣ ಬಹುತೇಕರು ಊಟ ತಿಂಡಿಗೆ ಹೊಟೇಲ್ ಕಡೆ ಮುಖಮಾಡಿದ್ದರು. ಆದರೆ ಕೆಲ ಹೊಟೇಲ್ ಗಳು ಕೂಡ ವಿದ್ಯುತ್ ಇಲ್ಲದೆ ಬಾಗಿಲು ಮುಚ್ಚಿದ್ದರಿಂದ ತೊಂದರೆ ಅನುಭವಿಸುವಂತಾಯಿತು.
೩ ಲಕ್ಷದ ಐಸ್ ಕ್ರಿಮ್ ಹಾನಿ:
ನಗರದಲ್ಲಿ ೨೦ ಗಂಟೆಗಳ ಕಾಲ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸ್ಥಗೀತಗೊಂಡ ಪರಿಣಾಮ ಐಸ್ ಕ್ರೀಂ ಸೇರಿದಂತೆ ಇನ್ನಿತರ ಉದ್ಯಮಗಳಿಗೆ ಭಾರಿ ಹಾನಿಯಾಗಿದೆ. ನಗರದ ಕೊಡಿಭಾಗದ ನ್ಯಾಚ್ಯುರಲ್ ಐಸ್ ಕ್ರೀಂ ಅಂಗಡಿ ಹಾಗೂ ಫ್ಯಾಕ್ಟರಿಯಲ್ಲಿ ಸುಮಾರು ೩ ಲಕ್ಷ ವೆಚ್ಚದ ವಿವಿಧ ಐಸ್ ಕ್ರೀಂಗಳು ಹಾನಿಯಾಗಿದೆ‌.
ಈ ಬಗ್ಗೆ ಮಾತನಾಡಿದ ನ್ಯಾಚುರಲ್ ಐಸ್ ಕ್ರೀಂ ಅಂಗಡಿ ಮಾಲಿಕ ಚಂದ್ರಕಾಂತ ನಾಯ್ಕ, ಬುಧವಾರ ಮಧ್ಯಾಹ್ನವೇ ವಿದ್ಯುತ್ ತೆಗೆದಿದ್ದಾರೆ. ಆದರೆ ಈ ಬಗ್ಗೆ ಹೆಸ್ಕಾಂ ನವರನ್ನು ಸಂಪರ್ಕಿಸಿದರೇ ನಮ್ಮ ಕರೆಯನ್ನೆ ಸ್ವೀಕರಿಸಿಲ್ಲ.‌ ವಿದ್ಯುತ್ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ನಮಗೆ ಕೊನೆಗೂ ಇಂದು ಬೆಳಿಗ್ಗೆಯಾದರೂ ಬಂದಿಲ್ಲ. ಇದರಿಂದ ಅಂಗಡಿ ಮತ್ತು ಫ್ಯಾಕ್ಟರಿಯಲ್ಲಿ ೩ ಲಕ್ಷದ ವಿವಿಧ ಐಸ್ ಕ್ರೀಂ ಹಾನಿಯಾಗಿದೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಪ್ರತಿ ವರ್ಷ ಮಳೆಗಾಲದಲ್ಲಿ ಹೆಸ್ಕಾಂ ನವರು ಇದೇ ರಿತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


Body:ಕ


Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.