ETV Bharat / state

ಮುರುಡೇಶ್ವರ ಬಸ್ತಿಮಕ್ಕಿ ಬಳಿ ಬಸ್ ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು - Bus bike accident

ಮುರುಡೇಶ್ವರದ ಬಸ್ತಿಮಕ್ಕಿ ಕ್ರಾಸ್ ಬಳಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

dinesh
ದಿನೇಶ್​ ನಾರಾರಾಣ ಶೆಟ್ಟಿ
author img

By

Published : Dec 24, 2019, 8:50 PM IST

ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿಮಕ್ಕಿ ಕ್ರಾಸ್ ಎಂಬಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಗಂಭೀರ ಸ್ಥಿತಿಯಲ್ಲಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.

ಮೃತ ಬೈಕ್ ಸವಾರ ದಿನೇಶ್​ ನಾರಾರಾಣ ಶೆಟ್ಟಿ(45) ಬಸ್ತಿ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೋರ್ವ ಬೈಕ್ ಹಿಂಬದಿ ಸವಾರ ಅಭಿ ಬಾಬು ಕುಂಬಾರ (18) ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಗಣೇಶ ಟ್ರಾವೆಲ್​ಗೆ ಸಂಬಂಧಿಸಿದ ಬಸ್ಸೊಂದು ಭಟ್ಕಳದಿಂದ ಹೊನ್ನಾವರ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ ಬಸ್​​ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇನ್ನೋರ್ವ ಹಿಂಬದಿ ಸವಾರನಿಗೆ ತಲೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಆರೋಪಿ ಕಾರ್ಕಳ ಮೂಲದ ಬಸ್ ಚಾಲಕ ಇಸ್ಮಾಯಿಲ್ ಖಾದರ್​ನನ್ನು ಬಂಧಿಸಿ, ಪೊಲೀಸರು ಬಸ್​ ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಾಘವೇಂದ್ರ ಕುಂಬಾರ ಎಂಬುವವರು ಮುರುಡೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿಮಕ್ಕಿ ಕ್ರಾಸ್ ಎಂಬಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಗಂಭೀರ ಸ್ಥಿತಿಯಲ್ಲಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.

ಮೃತ ಬೈಕ್ ಸವಾರ ದಿನೇಶ್​ ನಾರಾರಾಣ ಶೆಟ್ಟಿ(45) ಬಸ್ತಿ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೋರ್ವ ಬೈಕ್ ಹಿಂಬದಿ ಸವಾರ ಅಭಿ ಬಾಬು ಕುಂಬಾರ (18) ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಗಣೇಶ ಟ್ರಾವೆಲ್​ಗೆ ಸಂಬಂಧಿಸಿದ ಬಸ್ಸೊಂದು ಭಟ್ಕಳದಿಂದ ಹೊನ್ನಾವರ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ ಬಸ್​​ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇನ್ನೋರ್ವ ಹಿಂಬದಿ ಸವಾರನಿಗೆ ತಲೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಆರೋಪಿ ಕಾರ್ಕಳ ಮೂಲದ ಬಸ್ ಚಾಲಕ ಇಸ್ಮಾಯಿಲ್ ಖಾದರ್​ನನ್ನು ಬಂಧಿಸಿ, ಪೊಲೀಸರು ಬಸ್​ ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಾಘವೇಂದ್ರ ಕುಂಬಾರ ಎಂಬುವವರು ಮುರುಡೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Intro:ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿಮಕ್ಕಿ ಕ್ರಾಸ್ ಎಂಬಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಗಂಭೀರ ಸ್ಥಿತಿ ಯಲ್ಲಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.Body:ಮೃತ ಬೈಕ್ ಸವಾರ ದಿನೇಶ ನಾರಾರಾಣ ಶೆಟ್ಟಿ(45) ಬಸ್ತಿ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೋರ್ವ ಬೈಕ್ ಹಿಂಬದಿ ಸವಾರ ಅಭಿ ಬಾಬು ಕುಂಬಾರ (18) ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಗಣೇಶ ಟ್ರಾವೆಲಗೆ ಸಂಬಂಧಿಸಿದ ಬಸ್ಸೊಂದು ಭಟ್ಕಳದಿಂದ ಹೊನ್ನಾವರ ಕಡೆಗೆ ಇಳಿಜಾರು ರಸ್ತೆಯಲ್ಲಿ ಅತಿವೇಗವಾಗ ಹೋಗುತ್ತಿರುವಾಗ ಬಸ್ತಿಮಕ್ಕಿ ಕ್ರಾಸ್ ಹತ್ತಿರ ಮುರುಡೇಶ್ವರ ನಾಕಾ ಕಡೆಯಿಂದ ಬೈಕ್ ಸವಾರ ಬಜಾಜ್ ಪ್ಲಾಟಿನಮ್ ಬೈಕನಲ್ಲಿ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ದಾಟಲು ಕಚ್ಚಾ ರಸ್ತೆಯಲ್ಲಿ ನಿಂತುಕೊಂಡವನಿಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಬೈಕ್ ಸವಾರನ್ನು ಬೈಕ್ ಸಮೇತ ಇನ್ನೊಂದು ರಸ್ತೆಗೆ ಎಳೆದುಕೊಂಡು ಹೋಗಿದ್ದು ತಲೆಯ ಹಿಂಬಾಗಕ್ಕೆ ಬಾರಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದು, ಇನ್ನೋರ್ವ ಹಿಂಬದಿ ಸವಾರನಿಗೆ ತಲೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಆರೋಪಿ ಕಾರ್ಕಳ ಮೂಲದ ಬಸ್ ಚಾಲಕ ಇಸ್ಮಾಯಿಲ್ ಖಾದರನನ್ನು ಬಂಧಿಸಿ ಬಸ್ಸನ್ನು ಪೊಲೀಸರು ವಶಪಡಿಸಿಕೊಂದಿದ್ದು, ಈ ಕುರಿತು ರಾಘವೇಂದ್ರ ಕುಂಬಾರ ಎಂಬುವವರು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.