ಶಿರಸಿ: ಬಸ್-ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ಸಂಭವಿಸಿದೆ.
![ಶಿರಸಿ](https://etvbharatimages.akamaized.net/etvbharat/prod-images/kn-srs-02-bus-byk-accident-av-ka10005_07072019220714_0707f_1562517434_464.jpg)
ದಾಸನಕೊಪ್ಪದ ಬಳಿಯ ಬುಗಡಿ ಕೊಪ್ಪದ ನಾರಾಯಣ ಕಾನಪ್ಪ ನಾಯ್ಕ್ (38) ಮೃತ ಬೈಕ್ ಸವಾರ. ಈತ ಶಿರಸಿಯಿಂದ ಮನೆಗೆ ಬರುತ್ತಿದ್ದ ವೇಳೆ ಮುಂದಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.