ETV Bharat / state

ಅನಂತಕುಮಾರ್​ ಹೆಗಡೆ ವಿರುದ್ಧ ಹರಿಹಾಯ್ದ ಮೈತ್ರಿ ಅಭ್ಯರ್ಥಿ ಅಸ್ನೋಟಿಕರ್

ಅನಂತಕುಮಾರ್​ ಹೆಗಡೆ ಹಿಂದುಳಿದ ವರ್ಗದವರ ಜನರ ಮೇಲೆ ಮಾಡಿರುವ ದೌರ್ಜನ್ಯಕ್ಕೆ ತಕ್ಕಾ ಪಾಠ ಕಲಿಸಬೇಕು. ಹಾಗಾಗಿ ಈ ಬಾರಿ ಅವರ ವಿರುದ್ಧ ಸ್ಪರ್ಧೆಗಿಳಿದಿದ್ದೇನೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.‌

author img

By

Published : Apr 17, 2019, 4:30 PM IST

ಆನಂದ ಅಸ್ನೋಟಿಕರ್

ಶಿರಸಿ: ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದ್ರೆ ತನ್ನ ಸ್ಪರ್ಧೆ ಅನಂತಕುಮಾರ್​ ಹೆಗಡೆ ಹಿಂದುಳಿದ ವರ್ಗದ ಜನರ ಮೇಲೆ ಮಾಡಿರುವ ದೌರ್ಜನ್ಯದ ವಿರುದ್ಧದ ಹೋರಾಟ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗುಡುಗಿದ್ದಾರೆ.

ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಸಂಸದರಾಗಿ ಅನಂತಕುಮಾರ್​ ಹೆಗಡೆ ಯಾವ ರೀತಿ ಆಳ್ವಿಕೆ ಮಾಡಿದ್ದಾರೆ ಅನ್ನೋದನ್ನು ಜಿಲ್ಲೆಯ ಜನರಿಗೆ ತಿಳಿಸುತ್ತಿದ್ದೇನೆ. ಅನಂತಕುಮಾರ್​ ಹೆಗಡೆಯನ್ನು ಅಗೌರವಿಸುವ ಮತ್ತು ಟೀಕಿಸುವ ಉದ್ದೇಶ ನನ್ನದಲ್ಲ. ಆದ್ರೆ ರಾಜಕೀಯಕ್ಕಾಗಿ ಹಿಂದುಳಿದ ವರ್ಗದ ಜನರನ್ನು ಬಳಸಿಕೊಂಡಿರುವ ಕುರಿತಂತೆ ಹೋರಾಟ ನಡೆಸುತ್ತಿದ್ದೇನೆ ಎಂದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್

ಕ್ಷೇತ್ರದಲ್ಲಿ ಈಗಾಗಲೇ ನನಗೆ ಗೆಲುವು ಖಚಿತವಾಗಿದೆ. ಈ ಬಗ್ಗೆ ಕರಾವಳಿ ಭಾಗದಲ್ಲಿ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಆನಂದ ಅಸ್ನೋಟಿಕರ್ ಅವರನ್ನ ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಐಟಿ ದಾಳಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐಟಿ ಇಲಾಖೆ ಬ್ಯಾಲೆನ್ಸ್​ ಮಾಡಲು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿರಬಹುದು. ನಾವು ಚುನಾವಣೆಯನ್ನು ಜನರ ಪ್ರೀತಿಯ ಮೇಲೆ ನಡೆಸುತ್ತಿದ್ದೇವೆ. ಕಳೆದ 2 ದಿನಗಳ ಹಿಂದೆ ನನ್ನ ಆಪ್ತನ ಮೇಲೆ ದಾಳಿ ಆಗಿದ್ದರೂ ವ್ಯವಹಾರ ವಿಚಾರದಲ್ಲಿ ನನಗೂ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿರಸಿ: ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆದ್ರೆ ತನ್ನ ಸ್ಪರ್ಧೆ ಅನಂತಕುಮಾರ್​ ಹೆಗಡೆ ಹಿಂದುಳಿದ ವರ್ಗದ ಜನರ ಮೇಲೆ ಮಾಡಿರುವ ದೌರ್ಜನ್ಯದ ವಿರುದ್ಧದ ಹೋರಾಟ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗುಡುಗಿದ್ದಾರೆ.

ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಸಂಸದರಾಗಿ ಅನಂತಕುಮಾರ್​ ಹೆಗಡೆ ಯಾವ ರೀತಿ ಆಳ್ವಿಕೆ ಮಾಡಿದ್ದಾರೆ ಅನ್ನೋದನ್ನು ಜಿಲ್ಲೆಯ ಜನರಿಗೆ ತಿಳಿಸುತ್ತಿದ್ದೇನೆ. ಅನಂತಕುಮಾರ್​ ಹೆಗಡೆಯನ್ನು ಅಗೌರವಿಸುವ ಮತ್ತು ಟೀಕಿಸುವ ಉದ್ದೇಶ ನನ್ನದಲ್ಲ. ಆದ್ರೆ ರಾಜಕೀಯಕ್ಕಾಗಿ ಹಿಂದುಳಿದ ವರ್ಗದ ಜನರನ್ನು ಬಳಸಿಕೊಂಡಿರುವ ಕುರಿತಂತೆ ಹೋರಾಟ ನಡೆಸುತ್ತಿದ್ದೇನೆ ಎಂದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್

ಕ್ಷೇತ್ರದಲ್ಲಿ ಈಗಾಗಲೇ ನನಗೆ ಗೆಲುವು ಖಚಿತವಾಗಿದೆ. ಈ ಬಗ್ಗೆ ಕರಾವಳಿ ಭಾಗದಲ್ಲಿ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಆನಂದ ಅಸ್ನೋಟಿಕರ್ ಅವರನ್ನ ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಐಟಿ ದಾಳಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐಟಿ ಇಲಾಖೆ ಬ್ಯಾಲೆನ್ಸ್​ ಮಾಡಲು ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿರಬಹುದು. ನಾವು ಚುನಾವಣೆಯನ್ನು ಜನರ ಪ್ರೀತಿಯ ಮೇಲೆ ನಡೆಸುತ್ತಿದ್ದೇವೆ. ಕಳೆದ 2 ದಿನಗಳ ಹಿಂದೆ ನನ್ನ ಆಪ್ತನ ಮೇಲೆ ದಾಳಿ ಆಗಿದ್ದರೂ ವ್ಯವಹಾರ ವಿಚಾರದಲ್ಲಿ ನನಗೂ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.