ಶಿರಸಿ : ಯಲ್ಲಾಪುರದ ಬಾಳೆಹದ್ದ ಕ್ರಾಸ್ ಬಳಿ ಕಾರು ಮತ್ತು ಪಿಕಪ್ ವಾಹನದ ನಡುವೆ ಮುಖಾಮುಖಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಮೈಸೂರಿನ ಎಬಿವಿಪಿ ಮುಖಂಡ ರವಿಕುಮಾರ್ ಹಾಗೂ ಬೈರುಂಬೆ ಸೂರಿಮನೆ ನಿವಾಸಿಗಳಾದ ಮಹಾಬಲೇಶ್ವರ ಹೆಗಡೆ ಮತ್ತು ಶಾರದಾ ಹೆಗಡೆ ಮೃತ ದುರ್ದೈವಿಗಳೆಂದು ಗುರುತು ಪತ್ತೆ ಮಾಡಲಾಗಿದೆ.
ಪಿಕಪ್ ವಾಹನ ಸವಾರರಾದ ಮೈಸೂರಿನ ಮಾಧವ್ ಮತ್ತು ಶೇಖರ್ಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಬಿವಿಪಿ ಮುಖಂಡರಾಗಿದ್ದ ರವಿಕುಮಾರ್ ಮತ್ತು ಅವರ ತಂಡ ಯಲ್ಲಾಪುರದ ಕಿರವತ್ತಿ ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿ ನೀಡಿ ವಾಪಸ್ ಹೋಗುವಾಗ ಈ ಅಪಘಾತ ಸಂಭವಿಸಿದೆ.