ETV Bharat / state

ಒಂದು ದೇಹ ಎರಡು ಮುಖ... ಕುಮಟಾದಲ್ಲಿದೆ ಅಪರೂಪದ ಶಂಕರನಾರಾಯಣನ ವಿಗ್ರಹ! - ಕಾರವಾರ ಒಂದು ದೇಹ ಎರಡು ಮುಖ ಹೊಂದಿರುವ ಸುದ್ದಿ

ಕುಮಟಾ ಪಟ್ಟಣದ ಭಸ್ತಿಕೇರಿಯಲ್ಲಿರುವ  ಒಂದು ದೇಹ ಎರಡು ಮುಖಗಳನ್ನೊಳಗೊಂಡಿರುವ ಶಂಕರನಾರಾಯಣ ದೇವರಿಗೆ ಧಾತ್ರಿ ಹವನ, ದುರ್ಗಾ ಚಂಡಿಕಾ ಯಾಗ, ಮಯೂರಿಕಾ ಪೂಜೆ, ಮಹಾಪೂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು.

ಒಂದು ದೇಹ ಎರಡು ಮುಖ
author img

By

Published : Nov 27, 2019, 3:51 AM IST

ಕಾರವಾರ : ಒಂದು ದೇಹ ಎರಡು ಮುಖಗಳನ್ನೊಳಗೊಂಡಿರುವ ಶಂಕರನಾರಾಯಣ ದೇವರ ವಿಗ್ರವಿದ್ದು, ದೇಶದಲ್ಲಿಯೇ ಎಲ್ಲಿಯೂ ಕಾಣಸಿಗದ ಈ ವಿಗ್ರಹ ಕುಮಟಾ ಪಟ್ಟಣದ ಭಸ್ತಿಕೇರಿಯಲ್ಲಿದೆ, ದೇವರಿಗೆ ಕಾರ್ತಿಕ ಅಮವಾಸೆಯಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷ ಕಾರ್ತಿಕ ಅಮವಾಸೆ ದಿನ ನಡೆಯುವ ವನಭೋಜನ ಕಾರ್ಯಕ್ರಮ ವಿಶೇಷವಾಗಿದ್ದಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಧಾತ್ರಿ ಹವನ, ದುರ್ಗಾ ಚಂಡಿಕಾ ಯಾಗ, ಮಯೂರಿಕಾ ಪೂಜೆ, ಮಹಾಪೂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ದೇವಾಲಯದಲ್ಲಿ ಸುಮಾರು ಎರಡು ಸಾವಿರ ವರ್ಷಕ್ಕೂ ಹಳೆಯದಾದ ಶಂಕರ ಮತ್ತು ನಾರಾಯಾಣ ಎಂಬ ಎರಡು ಮುಖವನ್ನು ಹೊಂದಿರುವ ವಿಗ್ರಹ ಇದ್ದು, ಇಂತಹ ಪುರುತಾನ ವಿಗ್ರಹವನ್ನು ಹೊಂದಿರುವ ಕ್ಷೇತ್ರ ಇದೀಗ ಭಕ್ತರ ಪಾಲಿಗೆ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ, ಬೇಡಿದ್ದನ್ನು ಕರುಣಿಸುವ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ. ದೇವಾಲಯಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಭಕ್ತರು ಆಗಮಿಸುತ್ತಾರೆ.

ಕಾರವಾರ : ಒಂದು ದೇಹ ಎರಡು ಮುಖಗಳನ್ನೊಳಗೊಂಡಿರುವ ಶಂಕರನಾರಾಯಣ ದೇವರ ವಿಗ್ರವಿದ್ದು, ದೇಶದಲ್ಲಿಯೇ ಎಲ್ಲಿಯೂ ಕಾಣಸಿಗದ ಈ ವಿಗ್ರಹ ಕುಮಟಾ ಪಟ್ಟಣದ ಭಸ್ತಿಕೇರಿಯಲ್ಲಿದೆ, ದೇವರಿಗೆ ಕಾರ್ತಿಕ ಅಮವಾಸೆಯಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷ ಕಾರ್ತಿಕ ಅಮವಾಸೆ ದಿನ ನಡೆಯುವ ವನಭೋಜನ ಕಾರ್ಯಕ್ರಮ ವಿಶೇಷವಾಗಿದ್ದಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಧಾತ್ರಿ ಹವನ, ದುರ್ಗಾ ಚಂಡಿಕಾ ಯಾಗ, ಮಯೂರಿಕಾ ಪೂಜೆ, ಮಹಾಪೂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ದೇವಾಲಯದಲ್ಲಿ ಸುಮಾರು ಎರಡು ಸಾವಿರ ವರ್ಷಕ್ಕೂ ಹಳೆಯದಾದ ಶಂಕರ ಮತ್ತು ನಾರಾಯಾಣ ಎಂಬ ಎರಡು ಮುಖವನ್ನು ಹೊಂದಿರುವ ವಿಗ್ರಹ ಇದ್ದು, ಇಂತಹ ಪುರುತಾನ ವಿಗ್ರಹವನ್ನು ಹೊಂದಿರುವ ಕ್ಷೇತ್ರ ಇದೀಗ ಭಕ್ತರ ಪಾಲಿಗೆ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ, ಬೇಡಿದ್ದನ್ನು ಕರುಣಿಸುವ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ. ದೇವಾಲಯಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಭಕ್ತರು ಆಗಮಿಸುತ್ತಾರೆ.

Intro:Body:( ಸರ್ ಬೈಟ್ ಇಲ್ಲ... ಸುದ್ದಿ ಪ್ರಕಟಿಸಲು ಮನವಿ)

ಒಂದು ದೇಹ ಎರಡು ಮುಖ... ಕುಮಟಾದಲ್ಲಿದೆ ಅಪರೂಪದ ಶಂಕರನಾರಾಯಣನ ವಿಗ್ರಹ

ಕಾರವಾರ: ಅದು ಒಂದು ದೇಹ ಎರಡು ಮುಖಗಳನ್ನೊಳಗೊಂಡಿರುವ ಶಂಕರನಾರಾಯಣ ವಿಗ್ರಹ. ಮಾತ್ರವಲ್ಲದೆ ದೇಶದಲ್ಲಿಯೇ ಎಲ್ಲಿಯೂ ಕಾಣಸಿಗದ ಇಂತಹ ಅಪರೂಪದ ವಿಗ್ರಹ ಕುಮಟಾ ಪಟ್ಟಣದ ಭಸ್ತಿಕೇರಿಯಲ್ಲಿದ್ದು, ಭಕ್ತರ ಪಾಲಿಗೆ ಇಷ್ಟಾರ್ಥ ಸಿದ್ದಿಸುವ ಧಾರ್ಮಿಕ ಕ್ಷೇತ್ರವಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಕುಮಟಾ ಪಟ್ಟಣದ ಬಸ್ತಿಕೇರಿ ಬಳಿ ಇರುವ ಶಂಕರನಾರಾಯಣ ದೇವಸ್ಥಾನ ಇದೀಗ ಭಕ್ತರ ಪಾಲಿಗೆ ಸಕಲ ಇಷ್ಟಾರ್ಥ ಸಿದ್ದಿಸುವ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ದೇವಾಲಯದಲ್ಲಿ ಸುಮಾರು ಎರಡು ಸಾವಿರ ವರ್ಷಕ್ಕೂ ಹಳೆಯದಾದ ಶಂಕರ ಮತ್ತು ನಾರಾಯಾಣ ಎಂಬ ಎರಡು ಮುಖವನ್ನು ಹೊಂದಿರುವ ವಿಗ್ರಹ ಇದ್ದು, ಇಂತಹ ವಿಗ್ರಹ ದೇಶದಲ್ಲಿಯೇ ಮತ್ತೆಲ್ಲಿಯೂ ಇಲ್ಲ ಎನ್ನಲಾಗುತ್ತಿದೆ.
ಇಂತಹ ಪುರುತಾನ ವಿಗ್ರಹವನ್ನು ಹೊಂದಿರುವ ಕ್ಷೇತ್ರ ಇದೀಗ ಭಕ್ತರ ಪಾಲಿಗೆ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ, ಬೇಡಿದ್ದನ್ನು ಕರುಣಿಸುವ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ. ದೇವಾಲಯಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಭಕ್ತರು ಆಗಮಿಸುತ್ತಾರೆ.
ಅಲ್ಲದೆ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷ ಕಾರ್ತಿಕ ಅಮವಾಸ್ಯೆ ದಿನ ನಡೆಯುವ ವನಭೋಜನ ಕಾರ್ಯಕ್ರಮ ಪ್ರಮುಖವಾಗಿದ್ದು, ಅದರಂತೆ ಇಂದು ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಧಾತ್ರಿ ಹವನ, ದುರ್ಗಾ ಚಂಡಿಕಾ ಯಾಗ, ಮಯೂರಿಕಾ ಪೂಜೆ, ಮಹಾಪೂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಒಟ್ಟಿನಲ್ಲಿ ಒಂದು ದೇಹ ಎರಡು ಮುಖದ ಅತಿಪುರಾತನ ವಿಗ್ರಹವನ್ನೊಳಗೊಂಡಿರುವ ಅಪರೂಪದ ಶಂಕರ ನಾರಾಯಣ ದೇವಾಲಯವೂ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಭಕ್ತ ಗಣವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಎಲ್ಲರ ಗಮನ ಸೆಳೆದಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.