ETV Bharat / state

ಸುದೀಪ್​ ಅಭಿಮಾನಿ ಮೇಲೆ ಅವಧೂತ ವಿನಯ ಗುರೂಜಿ ಶಿಷ್ಯರಿಂದ ಹಲ್ಲೆಯಂತೆ!? - ಅವಧೂತ ವಿನಯ ಗುರೂಜಿ

ಸುದೀಪ್​ ಅಭಿಮಾನಿಗೆ ಅವಧೂತ ವಿನಯ ಗುರೂಜಿಯ ಶಿಷ್ಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿನಯ ಗುರೂಜಿಯ ಶಿಷ್ಯರಿಂದ ಹಲ್ಲೆ
author img

By

Published : Oct 15, 2019, 8:43 PM IST

Updated : Oct 15, 2019, 9:07 PM IST

ಉಡುಪಿ: ಸ್ಯಾಂಡಲ್​​ವುಡ್ ಸ್ಟಾರ್ ವಾರ್​​ ಹೆಸರಲ್ಲಿ ಅವರ ಅಭಿಮಾನಿಗಳು ಹೊಡೆದಾಡಿಕೊಳ್ಳೋದನ್ನು ಕೇಳಿದ್ದೇವೆ. ಆದರೆ ಇದೊಂಥರಾ ಡಿಫರೆಂಟ್ ಕೇಸ್, ಇಲ್ಲಿ ಒದೆ ತಿಂದವನು ನಟ ಸುದೀಪ್ ಅಭಿಮಾನಿ. ಹೀಗೆ ಸುದೀಪ್​ ಅಭಿಮಾನಿಗೆ ಅವಧೂತ ವಿನಯ ಗುರೂಜಿಯ ಶಿಷ್ಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅವದೂತ ವಿನಯ್ ಗುರೂಜಿಯವರು ನಟ ಸುದೀಪ್​​ಗೆ ಅವಮಾನ ಮಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕೊನೆಗೆ ತಾವು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ ಎಂದು ಗುರೂಜಿ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು. ಹೀಗೆ ಹೈ ಲೆವಲ್​ನಲ್ಲಿ ಈ ಪ್ರಕರಣ ರಾಜಿಯಾದರೂ, ತಳಮಟ್ಟದಲ್ಲಿ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಟ ಸುದೀಪ್ ಅಭಿಮಾನಿ ರತ್ನಾಕರ ಎಂಬವರ ಮೇಲೆ, ವಿನಯ ಗುರೂಜಿಯ ಶಿಷ್ಯರು ಎಂದು ಹೇಳಿಕೊಂಡು ಏಳೆಂಟು ಮಂದಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಾಯಾಳು ರತ್ನಾಕರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸುದೀಪ್​ ಅಭಿಮಾನಿ ಮೇಲೆ ಅವಧೂತ ವಿನಯ ಗುರೂಜಿ ಶಿಷ್ಯರಿಂದ ಹಲ್ಲೆಯಂತೆ!?

ಕುಂದಾಪುರದ ನಿವಾಸಿ ರತ್ನಾಕರ್ ತನ್ನ ಫೇಸ್​​ಬುಕ್​​ ಅಕೌಂಟ್​​​ನಲ್ಲಿ ವಿನಯ್ ಗುರೂಜಿ ವಿರುದ್ಧ ಬಂದಿದ್ದ ಕೆಲವೊಂದು ಪೋಸ್ಟ್ ಶೇರ್ ಮಾಡಿದ್ದ. ಈ ಮೂಲಕ ಸುದೀಪ್ ಬಗ್ಗೆ ಅಭಿಮಾನ ತೋರ್ಪಡಿಸಿದ್ದ. ಇದರಿಂದ ಕೆರಳಿದ ಒಂದು ಗುಂಪು ಏಕಾಏಕಿ ಬೈಕ್​​ನ ರಾಡ್ ಬಳಸಿ, ರತ್ನಾಕರ್ ಮೇಲೆ ಹಲ್ಲೆ ಮಾಡಿದೆ. ನಾವು ವಿನಯ್ ಗುರೂಜಿ ಶಿಷ್ಯರು, ಗುರೂಜಿಗೆಗೆ ಫೇಸ್​​ಬುಕ್​ನಲ್ಲಿ ಅವಹೇಳನ ಮಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಗುರುರಾಜ್ ಪುತ್ರನ್, ಸಂತೋಷ್, ಪ್ರದೀಪ್, ರವಿರಾಜ್ ಬಂಧಿತ ಆರೋಪಿಗಳು. ಉಳಿದವರ ಪತ್ತೆಗೆ ಎರಡು ತಂಡಗಳನ್ನೂ ರಚಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ: ಸ್ಯಾಂಡಲ್​​ವುಡ್ ಸ್ಟಾರ್ ವಾರ್​​ ಹೆಸರಲ್ಲಿ ಅವರ ಅಭಿಮಾನಿಗಳು ಹೊಡೆದಾಡಿಕೊಳ್ಳೋದನ್ನು ಕೇಳಿದ್ದೇವೆ. ಆದರೆ ಇದೊಂಥರಾ ಡಿಫರೆಂಟ್ ಕೇಸ್, ಇಲ್ಲಿ ಒದೆ ತಿಂದವನು ನಟ ಸುದೀಪ್ ಅಭಿಮಾನಿ. ಹೀಗೆ ಸುದೀಪ್​ ಅಭಿಮಾನಿಗೆ ಅವಧೂತ ವಿನಯ ಗುರೂಜಿಯ ಶಿಷ್ಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅವದೂತ ವಿನಯ್ ಗುರೂಜಿಯವರು ನಟ ಸುದೀಪ್​​ಗೆ ಅವಮಾನ ಮಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕೊನೆಗೆ ತಾವು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ ಎಂದು ಗುರೂಜಿ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು. ಹೀಗೆ ಹೈ ಲೆವಲ್​ನಲ್ಲಿ ಈ ಪ್ರಕರಣ ರಾಜಿಯಾದರೂ, ತಳಮಟ್ಟದಲ್ಲಿ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಟ ಸುದೀಪ್ ಅಭಿಮಾನಿ ರತ್ನಾಕರ ಎಂಬವರ ಮೇಲೆ, ವಿನಯ ಗುರೂಜಿಯ ಶಿಷ್ಯರು ಎಂದು ಹೇಳಿಕೊಂಡು ಏಳೆಂಟು ಮಂದಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಾಯಾಳು ರತ್ನಾಕರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸುದೀಪ್​ ಅಭಿಮಾನಿ ಮೇಲೆ ಅವಧೂತ ವಿನಯ ಗುರೂಜಿ ಶಿಷ್ಯರಿಂದ ಹಲ್ಲೆಯಂತೆ!?

ಕುಂದಾಪುರದ ನಿವಾಸಿ ರತ್ನಾಕರ್ ತನ್ನ ಫೇಸ್​​ಬುಕ್​​ ಅಕೌಂಟ್​​​ನಲ್ಲಿ ವಿನಯ್ ಗುರೂಜಿ ವಿರುದ್ಧ ಬಂದಿದ್ದ ಕೆಲವೊಂದು ಪೋಸ್ಟ್ ಶೇರ್ ಮಾಡಿದ್ದ. ಈ ಮೂಲಕ ಸುದೀಪ್ ಬಗ್ಗೆ ಅಭಿಮಾನ ತೋರ್ಪಡಿಸಿದ್ದ. ಇದರಿಂದ ಕೆರಳಿದ ಒಂದು ಗುಂಪು ಏಕಾಏಕಿ ಬೈಕ್​​ನ ರಾಡ್ ಬಳಸಿ, ರತ್ನಾಕರ್ ಮೇಲೆ ಹಲ್ಲೆ ಮಾಡಿದೆ. ನಾವು ವಿನಯ್ ಗುರೂಜಿ ಶಿಷ್ಯರು, ಗುರೂಜಿಗೆಗೆ ಫೇಸ್​​ಬುಕ್​ನಲ್ಲಿ ಅವಹೇಳನ ಮಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಗುರುರಾಜ್ ಪುತ್ರನ್, ಸಂತೋಷ್, ಪ್ರದೀಪ್, ರವಿರಾಜ್ ಬಂಧಿತ ಆರೋಪಿಗಳು. ಉಳಿದವರ ಪತ್ತೆಗೆ ಎರಡು ತಂಡಗಳನ್ನೂ ರಚಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

Intro:ಌಂಕರ್-ಸ್ಯಾಂಡಲ್ ವುಡ್ ಸ್ಟಾರ್ ಗಳ ಹೆಸರಲ್ಲಿ ಅವರ ಅಭಿಮಾನಿಗಳು ಹೊಡೆದಾಡಿಕೊಳ್ಳೋದನ್ನು ಕೇಳಿದ್ದೇವೆ. ಆದರೆ ಇದೊಂಥರಾ ಡಿಫರೆಂಟ್ ಕೇಸ್, ಇಲ್ಲಿ ಒದೆ ತಿಂದವನು ನಟ ಸುದೀಪ್ ಅಭಿಮಾನಿ. ಏಟು ಬಿಗಿದವರು ಅವಧೂತ ವಿನಯ ಗುರೂಜಿಯ ಶಿಷ್ಯರು! ಅವಧೂತರು ಹೇಳಿದ ಆ ಒಂದು ಮಾತು ಏನೆಲ್ಲಾ ರಾದ್ದಾಂತ ಸೃಷ್ಟಿಸಿದೆ ಗೊತ್ತಾ?



ವಾಯ್ಸ್-ಅವದೂತ ವಿನಯ್ ಗುರೂಜಿಯವರು ನಟ ಸುದೀಪ್ ಗೆ ಅವಮಾನ ಮಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಖತ್ ವೈರಲ್ ಆಗಿತ್ತು. ಕೊನೆಗೆ ನಾನು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ ಎಂದು ಗುರೂಜಿ ಸ್ಪಷ್ಟೀಕರಣವನ್ನೂ ಕೊಟ್ಟಿದ್ದರು. ಹೈ ಲೆವೆಲ್ ನಲ್ಲಿ ಈ ಪ್ರಕರಣ ರಾಜಿಯಾದರೂ, ತಳಮಟ್ಟದಲ್ಲಿ ಗಂಭೀರ ಪರಿಣಾಮಗಳು ಉಂಟಾಗ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಟ ಸುದೀಪ್ ಅಭಿಮಾನಿ ರತ್ನಾಕರ ಎಂಬವರ ಮೇಲೆ, ವಿನಯ ಗುರೂಜಿಯ ಶಿಷ್ಯರು ಎಂದು ಹೇಳಿಕೊಂಡು ಏಳೆಂಟು ಮಂದಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಾಯಾಳು ರತ್ನಾಕರ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.



ಬೈಟ್-ರತ್ನಾಕರ್, ಸುದೀಪ್ ಅಭಿಮಾನಿ



ವಾಯ್ಸ್-ಇಷ್ಟಕ್ಕೂ ಈ ಎಲ್ಲಾ ರಾದ್ದಾಂತಕ್ಕೆ ಕಾರಣವಾಗಿದ್ದು ವಿನಯ್ ಗುರೂಜಿ ಕೊಟ್ಟ ಆ ಒಂದು ಹೇಳಿಕೆ. ಸ್ಟಾರ್ ನಟ ಕಿಚ್ಚ ಸುದೀಪ್ ಬಗ್ಗೆ ಗುರೂಜಿ ಅಪಹಾಸ್ಯ ಮಾಡಿದ್ದ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಹೆಬ್ಬುಲಿ ಎಂದು ಕರೆಸಿಕೊಳ್ಳುವ ಸುದೀಪ್ ನಿಜವಾದ ಹುಲಿ ಬಂದ್ರೆ ಓಡಿ ಹೋಗಲ್ವಾ? ಎಂದು ಗುರೂಜಿ ಕಿಂಡಲ್ ಮಾಡಿದ್ದರು.ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ನಂತ್ರ ನಾನು ಆಡಿದ ಮಾತುಗಳನ್ನು ಎಡಿಟ್ ಮಾಡಲಾಗಿದೆ ಎಂದು ಸಮಜಾಯಿಷಿ ಕೊಟ್ಟದ್ದೂ ಆಯ್ತು. ಅಷ್ಟಕ್ಕೂ ಆ ಎರಡೂ ವಿಡಿಯೋಗಳನ್ನು ಒಮ್ಮೆ ನೋಡಿ.


ವಾಯ್ಸ್-ಕುಂದಾಪುರದ ನಿವಾಸಿ ರತ್ನಾಕರ್ ಹೇಳಿಕೇಳಿ ಸುದೀಪ್ ಅಭಿಮಾನಿ. ಪೇಸ್ ಬುಕ್ ನಲ್ಲಿ ಆಕ್ಟಿವ್ ಆಗಿರುವ ಇವರು, ತನ್ನ ಅಕೌಂಟ್ ನಲ್ಲಿ ವಿನಿಯ್ ಗುರೂಜಿ ವಿರುದ್ದ ಬಂದಿದ್ದ ಕೆಲವೊಂದು ಪೋಸ್ಟ್ ಗಳನ್ನು ಶೇರ್ ಮಾಡಿದ್ರು. ಈ ಮೂಲಕ ಸುದೀಪ್ ಬಗ್ಗೆ ಅಭಿಮಾನ ಪ್ರಕಟಿಸಿದ್ರು. ಇದರಿಂದ ಕೆರಳಿದ ಒಂದು ತಂಡ ಏಕಾಏಕಿ ಬೈಕ್ ನ ರಾಡ್ ಬಳಸಿ, ರತ್ನಾಕರ್ ಮೇಲೆ ಹಲ್ಲೆ ಮಾಡಿದೆ. ನಾವು ವಿನಯ್ ಗುರೂಜಿ ಶಿಷ್ಯರು, ಗುರೂಜಿಗೆಗೆ ಫೇಸ್ ಬುಕ್ ನಲ್ಲಿ ಅವಹೇಳನ ಮಾಡ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹೊಡೆದಿದ್ದರು. ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಕುಂದಾಪುರ ಪೊಲೀಸರು ತಕ್ಷಣವೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ಗುರುರಾಜ್ ಪುತ್ರನ್, ಸಂತೋಷ್, ಪ್ರದೀಪ್, ರವಿರಾಜ್ ಬಂಧಿತ ಆರೋಪಿಗಳು. ಉಳಿದವರ ಪತ್ತೆಗೆ ಎರಡು ತಂಡಗಳನ್ನೂ ರಚಿಸಲಾಗಿದೆ.



ಬೈಟ್-ನಿಶಾಜೇಮ್ಸ್, ಎಸ್ಪಿ, ಉಡುಪಿ



ಉಡುಪಿ ಜಿಲ್ಲೆಯ ಕುಂದಾಪುರ ಭಾಗದಲ್ಲಿ ಅನೇಕಸಲ ಭೇಟಿ ನೀಡಿರುವ ವಿನಯ್ ಗುರೂಜಿ ಸಾಕಷ್ಟು ಶಿಷ್ಯರನ್ನು ಸಂಪಾಧಿಸಿದ್ದಾರೆ. ಅವರ ಮೇಲೆ ಅಭಿಮಾನ ಇರೋದು ಕೂಡಾ ಸಹಜವೇ, ಆದರೆ ಅಭಿಮಾನದ ಹೆಸರಲ್ಲಿ ಬೀದಿ ರಂಪಾಟ ನಡೆಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡ ಮನುಷ್ಯರೆನಿಸಿಕೊಂಡ ಇಬ್ಬರು ರಾಜಿಯಾಗಿ ವಿವಾದ ಮುಗಿಯಿತು ಅಂದುಕೊಂಡರೂ ಅಭಿಮಾನಿಗಳ ಕಚ್ಚಾಟ ಮಾತ್ರ ಈ ಪ್ರಕರಣವನ್ನು ಇನ್ನೂ ಜೀವಂತವಾಗಿರಿಸಿದೆ.Body:Halle pkgConclusion:Halle pkg
Last Updated : Oct 15, 2019, 9:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.