ಉಡುಪಿ: ಹಲವು ದಿನಗಳಿಂದ ಮಾಯವಾದ ವರುಣನಿಗಾಗಿ ಉಡುಪಿಯ ನಾಗರಿಕರು ದೇವರ ಮೊರೆ ಹೋಗಿದ್ದಾರೆ.
ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ಕೃಷ್ಣಮಠದಲ್ಲಿ ನಾಗರಿಕರೊಂದಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಸನ್ನಿಧಿಯಲ್ಲೂ ಪ್ರಾರ್ಥನೆ ಮಾಡಲಾಯಿತು.
ಪರ್ಯಾಯ ಪಲಿಮಾರು, ಅದಮಾರು ಮಠಾಧೀಶರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಕಳೆದ ಒಂದು ವಾರದಿಂದ ನಗರದ ನಿವಾಸಿಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ವರುಣನ ಕೃಪೆಗಾಗಿ ಪೂಜೆ, ಪ್ರಾರ್ಥನೆ, ಜಪ - ತಪ ಗಳನ್ನು ನಡೆಸಲಾಯಿತು.