ETV Bharat / state

ಮಳೆಯ ನಡುವೆಯೇ  ಶೀ ಕೃಷ್ಣನ ಉತ್ಸವ ಭರ್ಜರಿ!

author img

By

Published : Jun 13, 2019, 9:07 AM IST

ಮುಂಗಾರಿನ ಸಿಂಚನದ ಮಧ್ಯೆಯೇ ಉಡುಪಿಯ ಶ್ರೀ ಕೃಷ್ಣ ದೇವರ ಉತ್ಸವ ಅದ್ಧೂರಿಯಾಗಿ ನೆರವೇರಿತು. ಮಳೆಯಲ್ಲೇ ಭಕ್ತರು ರಥ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಉಡುಪಿ

ಉಡುಪಿ : ಕರಾವಳಿಗೆ ಮುಂಗಾರಿನ ಆಗಮನವಾಗಿದ್ದು, ಮಳೆಯಲ್ಲೇ ಉಡುಪಿ ಶ್ರೀ ಕೃಷ್ಣ ದೇವರ ಉತ್ಸವ ನಡೆಯಿತು. ಈ ಉತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಮಳೆಯಲ್ಲೆ ನಡೆದ ಶ್ರೀ ಕೃಷ್ಣ ದೇವರ ರಥೋತ್ಸವ

ನಿತ್ಯೋತ್ಸವ ಪ್ರೀಯನಾದ ಕೃಷ್ಣನಿಗೆ ಉಡುಪಿಯ ರಥಬೀದಿಯಲ್ಲಿ ನಿತ್ಯ ಸಂಜೆ ಉತ್ಸವ ನಡೆಸಲಾಗುತ್ತದೆ. ಅದರಂತೆ ನಿನ್ನೆಯೂ ಕೂಡ ಚಿನ್ನದ ರಥದಲ್ಲಿ ಶ್ರೀ ಕೃಷ್ಣ ದೇವರ ಉತ್ಸವ ನಡೆಸಲಾಯಿತು. ಉತ್ಸವದ ನಡುವೆ ಮಳೆ ಆರಂಭವಾಗಿದ್ದು, ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಈ ಮಳೆಯಲ್ಲೆ ದೇವರಿಗೆ ಆರತಿ ನೆರವೇರಿಸಲಾಯಿತು.

ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಸೇರಿದಂತೆ ಅಷ್ಟಮಠ ಯತಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣ ಜಪ ಮಾಡಿ ರಥ ಎಳೆದಿದ್ದು, ವಿಶೇಷವೆನಿಸಿತು.

ಉಡುಪಿ : ಕರಾವಳಿಗೆ ಮುಂಗಾರಿನ ಆಗಮನವಾಗಿದ್ದು, ಮಳೆಯಲ್ಲೇ ಉಡುಪಿ ಶ್ರೀ ಕೃಷ್ಣ ದೇವರ ಉತ್ಸವ ನಡೆಯಿತು. ಈ ಉತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಮಳೆಯಲ್ಲೆ ನಡೆದ ಶ್ರೀ ಕೃಷ್ಣ ದೇವರ ರಥೋತ್ಸವ

ನಿತ್ಯೋತ್ಸವ ಪ್ರೀಯನಾದ ಕೃಷ್ಣನಿಗೆ ಉಡುಪಿಯ ರಥಬೀದಿಯಲ್ಲಿ ನಿತ್ಯ ಸಂಜೆ ಉತ್ಸವ ನಡೆಸಲಾಗುತ್ತದೆ. ಅದರಂತೆ ನಿನ್ನೆಯೂ ಕೂಡ ಚಿನ್ನದ ರಥದಲ್ಲಿ ಶ್ರೀ ಕೃಷ್ಣ ದೇವರ ಉತ್ಸವ ನಡೆಸಲಾಯಿತು. ಉತ್ಸವದ ನಡುವೆ ಮಳೆ ಆರಂಭವಾಗಿದ್ದು, ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಈ ಮಳೆಯಲ್ಲೆ ದೇವರಿಗೆ ಆರತಿ ನೆರವೇರಿಸಲಾಯಿತು.

ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಸೇರಿದಂತೆ ಅಷ್ಟಮಠ ಯತಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣ ಜಪ ಮಾಡಿ ರಥ ಎಳೆದಿದ್ದು, ವಿಶೇಷವೆನಿಸಿತು.

Intro:Rain rathosava
Udupi:;ಕರಾವಳಿಯಲ್ಲಿ ಸುರಿದ ಮೊದಲ ಮಳೆ ಇಳೆಯನ್ನು ತಂಪಾಗಿಸಿದೆ.ಮುಂಗಾರು ಮಳೆಯು ಕಡಗೋಲು ಕೃಷ್ಣ ನಿಗೂ ತಂಪು ತಂಪಿನ ಸಿಂಚನ ಗೈದಿದೆ.ಉಡುಪಿಯ ಶ್ರೀ ಕೃಷ್ಣ ಚಿನ್ನದ ರಥವೇರಿ ವೈಭವದ ಮರೆವಣಿಗೆ ಹೊರಟದ್ದೇ ತಡ ಧೋ ಅಂತ ಮಳೆ ಸುರಿದಿದೆ. ಮಠದ ರಥಬೀದಿಯಲ್ಲಿ ಕೃಷ್ಣನ ಉತ್ಸವದಲ್ಲಿ ಭಾಗಿಯಾದ ಭಕ್ತರು ಒಂದು ಕಡೆ ಭಕ್ತಿ ಭಾವದಲ್ಲಿ ಮಿಂದೆದ್ರೆ ಮತ್ತೊಂದು ಕಡೆ ಮೊದಲ ಮಳೆಗೆ ಮೈಯೊಡ್ಡಿ ತಣ್ಣನೆಯ ಅನುಭವಕ್ಕೆ ಮೈಮರೆತ್ರು.

V1_ಮುಂಗಾರು ಮಳೆಯಲ್ಲೇ ಉಡುಪಿ ಕೃಷ್ಣನ ಉತ್ಸವ ನಡೆದಿದೆ. ಈ ಬಾರಿಯ ಬರಗಾಲದ ಬಿಸಿ ಕೃಷ್ಣ ದೇವರಿಗೂ ತಟ್ಟಿತ್ತು. ಮಠದ ಮಧ್ವ ಸರೋವರವೇಬತ್ತಿ ಹೋಗಿತ್ತು. ಇಂದು ಬೀಸಿದ ಗಾಳಿ ಮಳೆ, ಕೃಷ್ಣ ದೇವರಿಗೂ ಹಿತಾನುಭವ ನೀಡಿದೆ. ರಾತ್ರಿಯ ಉತ್ಸವ ಆರಂಭವಾಗುವ ವೇಳೆಯಲ್ಲೇ ಧೋ ಅಂತ ಮಳೆಸುರಿಯಿತು.ಚಿನ್ನದ ರಥವೇರಿದ ಕೃಷ್ಣದೇವರಿಗೆ ಮಳೆಯಲ್ಲೇ ಮಂಗಳಾರತಿ ಮಾಡಲಾಯ್ತು. ಮುಂಗಾರು ಮಳೆಗೆ ಮೈಯ್ಯೊಡ್ಡುತ್ತಲೇ ಕೃಷ್ಣ ನ ಮೆರಣಿಗೆ ಸಾಗಿದ್ದು ವಿಶೇಷವಾಗಿತ್ತು. ಮೊದಲ ಮಳೆಯ ರೋಮಾಂಛನವನ್ನು ಕೃಷ್ಣನ ಜೊತೆ ನೂರಾರು ಭಕ್ತರು ಕೂಡಾ ಅನುಭವಿಸಿದರು.
Byte_ವಿಧ್ಯಾಧೀಶ ಸ್ವಾಮೀಜಿ (ಪರ್ಯಾಯ ಮಠಾಧೀಶರು)


V2- ನಿತ್ಯೊತ್ಸವ ಪ್ರೀಯನಾದ ಕೃಷ್ಣನಿಗೆ ಉಡುಪಿಯ ರಥಬೀದಿ ಯಲ್ಲಿ ಪ್ರತಿ ಸಂಜೆ ಉತ್ಸವ ನಡೆಯುತ್ತೆ.ಅಷ್ಟಮಠ ಯತಿಗಳು ಉತ್ಸವದಲ್ಲಿ ಭಾಗಿಯಾಗುತ್ತಾರೆ.ಇಂದು ಕೂಡ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಕೃಷ್ಣನ ಉತ್ಸವ ಭಾಗಿಯಾಗಿದ್ರು.ಮೊದಲ ಮಳೆಯಲ್ಲಿ ನೆನೆಯುತ್ತಲೇ ಇಬ್ಬರು ಸ್ವಾಮೀಜಿಯವರು ಕೃಷ್ಣ ನನ್ನು ಮನದಲ್ಲಿ ನೆನೆದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣಜಪ ಮಾಡಿ ರಥವೆಳೆದರು. ಮೊದಲ ಮಳೆಯಾದ ಕಾರಣ ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು...ಹರಿಯುವ ಜಲದ ನಡುವೆ ಹರಿಗೆ ಸುವರ್ಣ ರಥೋತ್ಸವ ನಡೆದದ್ದು ವಿಶೇಷವೆನಿಸಿತು.

Byte_02_ವಾಸುದೇವ ಉಪಾಧ್ಯ (ವಿದ್ವಾಂಸರು)

V3_ಇನ್ನಾದರೂ ಬರಗಾಲ ಕಳೆದು ಮುಂಗಾರು ಜನರನ್ನು ಹರಸಲಿ ಎಂದು ಭಕ್ತರು ಕೃಷ್ಣನನ್ನು ಬೇಡಿಕೊಂಡರು.ಮೊದಲ ಮಳೆಗೆ ಭಕ್ತ ಜನರ ಜೊತೆಗೆ ಶ್ರೀ ಕೃಷ್ಣ ಕೂಡ ಮಳೆಯಲಿ ಮಿಂದು ಸಂಭ್ರಮಿಸಿದಂತೆ ಭಾಸವಾಯಿತು.Body:Rain rathaConclusion:Rain ratha

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.