ETV Bharat / state

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುತ್ಥಾನಕ್ಕೆ ದೇವರ ಮೊರೆ : ಆಡಳಿತ ಮಂಡಳಿಯಿಂದ ಆರೂಢ ಪ್ರಶ್ನೆ - ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಆರೂಢ ಪ್ರಶ್ನೆ

ಪ್ರಶ್ನಾಚಿಂತನೆಯಲ್ಲಿ ಅನೇಕ ದೋಷಗಳು ಕಂಡು ಬಂದಿದ್ದು, ಶಾಪಗ್ರಸ್ತ ಭೂಮಿಯಲ್ಲಿ ದೈವದ ಸಾನಿಧ್ಯವು ಪತ್ತೆಯಾಗಿದೆ. ದೇವರು ಮತ್ತು ದೈವಕ್ಕೆ ಭಕ್ತಿ ತೋರಿಸಿ ಮುನ್ನಡೆದರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂಬ ಭರವಸೆ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.

Ashtamangala Prashne at Brahmavara Sugar Factory
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುತ್ಥಾನಕ್ಕೆ ದೇವರ ಮೊರೆ
author img

By

Published : Mar 23, 2021, 11:31 PM IST

ಉಡುಪಿ : ಸಕ್ಕರೆ ಕಾರ್ಖಾನೆ ಮುಚ್ಚಿದರೆ ಎಲ್ಲರೂ ಸರ್ಕಾರದ ಮೊರೆ ಹೋಗ್ತಾರೆ. ಆದರೆ, ಉಡುಪಿಯಲ್ಲಿ ಮಾತ್ರ ಮುಚ್ಚಿದ ಕಾರ್ಖಾನೆಯ ಆಡಳಿತ ಮಂಡಳಿಯವರು ದೇವರ ಮೊರೆ ಹೋಗಿದ್ದಾರೆ.

ಹೌದು, ಏನೇ ಪ್ರಯತ್ನ ಮಾಡಿದರೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರುತ್ಥಾನ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ, ರೈತರು ಕಬ್ಬು ಬೆಳೆಯುತ್ತಿಲ್ಲ. ತುಕ್ಕು ಹಿಡಿದು ಕಾರ್ಖಾನೆ ಕುಸಿಯುವ ಹಂತ ತಲುಪಿದೆ. ಹೀಗಾಗಿ, ದೈವದ ಶಾಪ ಮತ್ತು ದೇವರ ಅವಕೃಪೆಯಿಂದಲೇ ಹೀಗಾಗಿದೆ ಎಂದು ಭಾವಿಸಿರುವ ನೂತನ ಆಡಳಿತ ಮಂಡಳಿಯವರು, ಕೇರಳದ ಪ್ರಸಿದ್ಧ ತಂತ್ರಿಗಳನ್ನು ಕರೆದು ಆರೂಢ ಪ್ರಶ್ನೆ ಇಟ್ಟಿದ್ದಾರೆ. ಈ ಪ್ರಶ್ನಾಚಿಂತನೆಯಲ್ಲಿ ಅನೇಕ ದೋಷಗಳು ಕಂಡು ಬಂದಿದ್ದು, ಶಾಪಗ್ರಸ್ತ ಭೂಮಿಯಲ್ಲಿ ದೈವದ ಸಾನಿಧ್ಯವು ಪತ್ತೆಯಾಗಿದೆ. ದೇವರು ಮತ್ತು ದೈವಕ್ಕೆ ಭಕ್ತಿ ತೋರಿಸಿ ಮುನ್ನಡೆದರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂಬ ಭರವಸೆ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುತ್ಥಾನಕ್ಕೆ ದೇವರ ಮೊರೆ

ಓದಿ : 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ: ದೇವನಹಳ್ಳಿ ಐತಿಹಾಸಿಕ ಕೋಟೆಯಲ್ಲಿ ಸ್ವಚ್ಛತಾ ಶ್ರಮದಾನ

ಇಷ್ಟಕ್ಕೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಪೂಜೆ ಸಿಗದೆ ಬೇಸರಗೊಂಡ ದೈವ ಪಂಜುರ್ಲಿಯಂತೆ. ಕರಾವಳಿಯ ಕಾರಣಿಕದ ದೈವಗಳಲ್ಲಿ ಒಂದಾದ ಪಂಜುರ್ಲಿಯ ಸಾನಿಧ್ಯ ಕಾರ್ಖಾನೆ ಒಳಪಟ್ಟ ಭೂಪ್ರದೇಶದಲ್ಲಿ ಇದೆ ಎಂದು ಹೇಳಲಾಗ್ತಿದೆ. ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಹುಡುಕಿದಾಗ ಸನ್ನಿಧಾನವೂ ಸಿಕ್ಕಿದೆ. ಹೀಗಾಗಿ, ಗಣಪತಿಯ ಆರಾಧನೆ ನಡೆಸಬೇಕು ಎಂದು ಆರೂಢ ಪ್ರಶ್ನೆಯಲ್ಲಿ ಕಂಡುಬಂದಿದೆ. ದೋಷ ಪರಿಹಾರಕ್ಕಾಗಿ ದುರ್ಗಾ ಹೋಮ, ಗಣಪತಿ ಹೋಮ, ಪಾರಾಯಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅಪ್ಪಣೆಯಾಗಿದೆ. ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಪ್ರಾಯಶ್ಚಿತ್ತ ಕಾರ್ಯಗಳನ್ನು ನಡೆಸಿದರೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂದು ದೇವರ ಅಭಯವು ಸಿಕ್ಕಿದೆ.

ಉಡುಪಿ : ಸಕ್ಕರೆ ಕಾರ್ಖಾನೆ ಮುಚ್ಚಿದರೆ ಎಲ್ಲರೂ ಸರ್ಕಾರದ ಮೊರೆ ಹೋಗ್ತಾರೆ. ಆದರೆ, ಉಡುಪಿಯಲ್ಲಿ ಮಾತ್ರ ಮುಚ್ಚಿದ ಕಾರ್ಖಾನೆಯ ಆಡಳಿತ ಮಂಡಳಿಯವರು ದೇವರ ಮೊರೆ ಹೋಗಿದ್ದಾರೆ.

ಹೌದು, ಏನೇ ಪ್ರಯತ್ನ ಮಾಡಿದರೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರುತ್ಥಾನ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ, ರೈತರು ಕಬ್ಬು ಬೆಳೆಯುತ್ತಿಲ್ಲ. ತುಕ್ಕು ಹಿಡಿದು ಕಾರ್ಖಾನೆ ಕುಸಿಯುವ ಹಂತ ತಲುಪಿದೆ. ಹೀಗಾಗಿ, ದೈವದ ಶಾಪ ಮತ್ತು ದೇವರ ಅವಕೃಪೆಯಿಂದಲೇ ಹೀಗಾಗಿದೆ ಎಂದು ಭಾವಿಸಿರುವ ನೂತನ ಆಡಳಿತ ಮಂಡಳಿಯವರು, ಕೇರಳದ ಪ್ರಸಿದ್ಧ ತಂತ್ರಿಗಳನ್ನು ಕರೆದು ಆರೂಢ ಪ್ರಶ್ನೆ ಇಟ್ಟಿದ್ದಾರೆ. ಈ ಪ್ರಶ್ನಾಚಿಂತನೆಯಲ್ಲಿ ಅನೇಕ ದೋಷಗಳು ಕಂಡು ಬಂದಿದ್ದು, ಶಾಪಗ್ರಸ್ತ ಭೂಮಿಯಲ್ಲಿ ದೈವದ ಸಾನಿಧ್ಯವು ಪತ್ತೆಯಾಗಿದೆ. ದೇವರು ಮತ್ತು ದೈವಕ್ಕೆ ಭಕ್ತಿ ತೋರಿಸಿ ಮುನ್ನಡೆದರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂಬ ಭರವಸೆ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುತ್ಥಾನಕ್ಕೆ ದೇವರ ಮೊರೆ

ಓದಿ : 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ: ದೇವನಹಳ್ಳಿ ಐತಿಹಾಸಿಕ ಕೋಟೆಯಲ್ಲಿ ಸ್ವಚ್ಛತಾ ಶ್ರಮದಾನ

ಇಷ್ಟಕ್ಕೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಪೂಜೆ ಸಿಗದೆ ಬೇಸರಗೊಂಡ ದೈವ ಪಂಜುರ್ಲಿಯಂತೆ. ಕರಾವಳಿಯ ಕಾರಣಿಕದ ದೈವಗಳಲ್ಲಿ ಒಂದಾದ ಪಂಜುರ್ಲಿಯ ಸಾನಿಧ್ಯ ಕಾರ್ಖಾನೆ ಒಳಪಟ್ಟ ಭೂಪ್ರದೇಶದಲ್ಲಿ ಇದೆ ಎಂದು ಹೇಳಲಾಗ್ತಿದೆ. ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಹುಡುಕಿದಾಗ ಸನ್ನಿಧಾನವೂ ಸಿಕ್ಕಿದೆ. ಹೀಗಾಗಿ, ಗಣಪತಿಯ ಆರಾಧನೆ ನಡೆಸಬೇಕು ಎಂದು ಆರೂಢ ಪ್ರಶ್ನೆಯಲ್ಲಿ ಕಂಡುಬಂದಿದೆ. ದೋಷ ಪರಿಹಾರಕ್ಕಾಗಿ ದುರ್ಗಾ ಹೋಮ, ಗಣಪತಿ ಹೋಮ, ಪಾರಾಯಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅಪ್ಪಣೆಯಾಗಿದೆ. ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಪ್ರಾಯಶ್ಚಿತ್ತ ಕಾರ್ಯಗಳನ್ನು ನಡೆಸಿದರೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗುತ್ತದೆ ಎಂದು ದೇವರ ಅಭಯವು ಸಿಕ್ಕಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.