ETV Bharat / state

ಉರುಳಿಬಿದ್ದ ಲಕ್ಸ್​ ಸೋಪ್​ ಲಾರಿ: ಸಾಬೂನು ಕದ್ದೊಯ್ಯಲು ಮುಗಿಬಿದ್ದ ಜನ

ಖಾಸಗಿ ಬಸ್ಸೊಂದು ಮುಂದೆ ಸಾಗುತ್ತಿದ್ದ ಲಕ್ಸ್​ ಸೋಪುಗಳನ್ನು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಆದ್ರೆ ಇದೆಲ್ಲವನ್ನ ಲೆಕ್ಕಿಸದ ಜನ ಮಾತ್ರ ಲಾರಿಯಲ್ಲಿದ್ದ ಲಕ್ಸ್​ ಸೋಪುಗಳನ್ನು ಕದ್ದೊಯ್ಯುವುದರಲ್ಲಿ ಬ್ಯುಸಿಯಾಗಿದ್ದರು.

author img

By

Published : Nov 3, 2019, 4:20 PM IST

Updated : Nov 3, 2019, 4:56 PM IST

ಸೋಪ್​ ಕದ್ದೊಯ್ಯಲು ಮುಗಿಬಿದ್ದ ಜನ

ತುಮಕೂರು: ನಗರದ ಹೊರವಲಯದಲ್ಲಿರುವ ಊರುಕೆರೆ ಪೋಸ್ಟ್ ಬಳಿ ಬೆಳಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಲಾರಿಯಲ್ಲಿದ್ದ ಲಕ್ಸ್ ಸೋಪು ರಸ್ತೆ ತುಂಬಾ ಚೆಲ್ಲಾಡಿದ್ದವು. ಈ ವೇಳೆ ಸೋಪುಗಳನ್ನು ಕದ್ದೊಯ್ಯಲು ಸಾರ್ವಜನಿಕರು ನಾ ಮುಂದು ತಾ ಮುಂದು ಎನ್ನುತ್ತ ಮುಗಿಬಿದ್ದಿದ್ದರು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ

ಲಾರಿಗೆ ಬಸ್ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ,16 ಮಂದಿಗೆ ಗಂಭೀರ ಗಾಯ..

ಖಾಸಗಿ ಬಸ್​ವೊಂದು ಮುಂದೆ ಸಾಗುತ್ತಿದ್ದ ಲಕ್ಸ್​ ಸೋಪುಗಳನ್ನು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಲಾರಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು.

ರಾಮಪ್ಪ ಎರೆಬಳ್ಳಿ(45), ಫಜಲ್ ವುಲ್ಲಾ (35) ಸೇರಿ ಮೂವರು ಮೃತಪಟ್ಟಿದ್ದರೆ, ಗೊಟ್ಟೆನಾಯ್ಡು(57) , ಕೀರ್ತಿ , ಅಶ್ವಿನ್ ಕುಮಾರ್, ರಾಜೇಶ ಎಂಬುವರಿಗೆ ಗಾಯಗಳಾಗಿವೆ.

ತುಮಕೂರು: ನಗರದ ಹೊರವಲಯದಲ್ಲಿರುವ ಊರುಕೆರೆ ಪೋಸ್ಟ್ ಬಳಿ ಬೆಳಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಲಾರಿಯಲ್ಲಿದ್ದ ಲಕ್ಸ್ ಸೋಪು ರಸ್ತೆ ತುಂಬಾ ಚೆಲ್ಲಾಡಿದ್ದವು. ಈ ವೇಳೆ ಸೋಪುಗಳನ್ನು ಕದ್ದೊಯ್ಯಲು ಸಾರ್ವಜನಿಕರು ನಾ ಮುಂದು ತಾ ಮುಂದು ಎನ್ನುತ್ತ ಮುಗಿಬಿದ್ದಿದ್ದರು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ

ಲಾರಿಗೆ ಬಸ್ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ,16 ಮಂದಿಗೆ ಗಂಭೀರ ಗಾಯ..

ಖಾಸಗಿ ಬಸ್​ವೊಂದು ಮುಂದೆ ಸಾಗುತ್ತಿದ್ದ ಲಕ್ಸ್​ ಸೋಪುಗಳನ್ನು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಲಾರಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು.

ರಾಮಪ್ಪ ಎರೆಬಳ್ಳಿ(45), ಫಜಲ್ ವುಲ್ಲಾ (35) ಸೇರಿ ಮೂವರು ಮೃತಪಟ್ಟಿದ್ದರೆ, ಗೊಟ್ಟೆನಾಯ್ಡು(57) , ಕೀರ್ತಿ , ಅಶ್ವಿನ್ ಕುಮಾರ್, ರಾಜೇಶ ಎಂಬುವರಿಗೆ ಗಾಯಗಳಾಗಿವೆ.

Intro:Body:ಅಪಘಾತ : ಲಕ್ಸ್ ಸೋಪ್ ಗಾಗಿ ಮುಗಿಬಿದ್ದ ಜನ......

ತುಮಕೂರು
ತುಮಕೂರು ನಗರದ ಹೊರವಲಯದ ಊರುಕೆರೆ ಪೋಸ್ಟ್ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಲಾರಿಯಲ್ಲಿದ್ದ ಲಕ್ಸ್ ಸೋಪು ರಸ್ತೆ ತುಂಬಾ ಚೆಲ್ಲಾಡಿದ್ದ ನ್ನು ಗಮನಿಸಿದ ಸಾರ್ವಜನಿಕರು ಬಾಚಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಳಿಗ್ಗೆ ನ್ಯಾಷನಲ್ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಮುಂದೆ ಸಾಗುತ್ತಿದ್ದ ಲಕ್ಸು ಸೋಪು ತುಂಬಿದ ಲಾರಿಗೆ ಡಿಕ್ಕಿ ಹೊಡೆದಿತ್ತು ಇದರಿಂದ ಲಾರಿ ಪಲ್ಟಿಯಾಗಿತ್ತು.
ಹೀಗಾಗಿ ಲಕ್ಸು ಸೋಪು ರಸ್ತೆ ತುಂಬೆಲ್ಲಾ ಚೆಲ್ಲಾಡಿತ್ತು.
ಸೋಪ್ ಗಾಗಿ ಜನ ಮುಗಿಬಿದ್ದದ್ದು ಸಾಮಾನ್ಯವಾಗಿತ್ತು.
ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಮೃತಪಟ್ಟವರನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಿಡಕನಕಟ್ಟೆ ಗ್ರಾಮದ ರಾಮಪ್ಪ ಎರೆಬಳ್ಳಿ( 45 ),
ಬೆಂಗಳೂರಿನ ಮೈಸೂರು ರಸ್ತೆಯ ಫಜಲ್ ವುಲ್ಲಾ (35) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ
ಬಸ್ ನಲ್ಲಿ ಪ್ರಯಾಣಿಕರಾದ ಕೊಟ್ಟೇಶ್ವರ ಬಿನ್ ಲೇಟ್ ಗೊಟ್ಟೆನಾಯ್ಡು , 57 ವರ್ಷರವರಿಗೆ ಬಲಗಾಲು ಮುರಿದಿತ್ತು. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಕೀರ್ತಿ ಎಂಬುವವರ ಕುತ್ತಿಗೆಯ ಮೂಳೆ ಮುರಿದಿದೆ.
ಅಶ್ವಿನ್ ಕುಮಾರ್ ಕುತ್ತಿಗೆಯ ಮೂಳೆ ಮುರಿದಿದೆ. ರಾಜೇಶ ಎಂಬುವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆConclusion:
Last Updated : Nov 3, 2019, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.