ETV Bharat / state

ಬೆಂಗಳೂರನ್ನು ಮತ್ತೆ ಲಾಕ್​ಡೌನ್​ ಮಾಡುವುದು ಸೂಕ್ತ: ಜಿ. ಪರಮೇಶ್ವರ್

ಸೆಪ್ಟಂಬರ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಈಗಾಗಲೇ ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಜನರಲ್ಲಿ ಸೋಂಕಿನ ಕುರಿತು ಭಯದ ವಾತಾವರಣ ಇದ್ದಿದ್ದರಿಂದಲೇ ಇದರ ಪ್ರಮಾಣ ಕಡಿಮೆ ಇತ್ತು. ಆದರೆ ಲಾಕ್​ಡೌನ್​​ ಸಡಿಲಿಕೆ ನಂತರ ಜನರ ಬೇಕಾಬಿಟ್ಟಿ ಓಡಾಟದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.

author img

By

Published : Jun 23, 2020, 3:42 PM IST

nfections is likely to increase in September
ಜಿ.ಪರಮೇಶ್ವರ್

ತುಮಕೂರು: ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಪ್ರಸ್ತುತ ಸನ್ನಿವೇಶದಲ್ಲಿ ಹಂತ ಹಂತವಾಗಿ ಬೆಂಗಳೂರನ್ನು ಲಾಕ್​ಡೌನ್ ಮಾಡುವುದು ಸೂಕ್ತವೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸಲಹೆ ನೀಡಿದ್ದಾರೆ.

ನಗರದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರವು ಮುಂಬೈ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಲಾಕ್​ಡೌನ್ ಸಡಿಲಿಕೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೊರೊನಾ ಸೋಂಕು ಹೆಚ್ಚಲಿದೆ ಎಂಬ ಕುರಿತು ಈ ಮೊದಲೇ ನಿರೀಕ್ಷೆ ಹೊಂದಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಈಗಾಗಲೇ ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಜನರಲ್ಲಿ ಸೋಂಕಿನ ಕುರಿತು ಭಯದ ವಾತಾವರಣ ಇದ್ದಿದ್ದರಿಂದಲೇ ಇದರ ಪ್ರಮಾಣ ಕಡಿಮೆ ಇತ್ತು. ಆದರೆ ಲಾಕ್​ಡೌನ್​​ ಸಡಿಲಿಕೆ ನಂತರ ಜನರ ಬೇಕಾಬಿಟ್ಟಿ ಓಡಾಟದಿಂದ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮೊದಲ ಹಂತದ ಲಾಕ್​ಡೌನ್ ನಿಂದ ಉತ್ತಮ ಫಲಿತಾಂಶ ದೊರೆತಿತ್ತು ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಜಿ. ಪರಮೇಶ್ವರ್​​

ಹಂತ-ಹಂತವಾಗಿಯಾದರೂ ಬೆಂಗಳೂರು ನಗರದಲ್ಲಿ ಲಾಕ್​ಡೌನ್ ಮಾಡಬೇಕಿದೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಜನರು ತಮಗೆ ಅರಿವಿಲ್ಲದಂತೆ ಸೋಂಕನ್ನು ತರುತ್ತಿದ್ದಾರೆ ಎಂದರು.

ಡಿಕೆಶಿ ಪದಗ್ರಹಣ ಕುರಿತು ಮಾತನಾಡಿ, ಜುಲೈ 2 ರಂದು ಸರ್ಕಾರ ಅವಕಾಶ ಕೊಟ್ಟರೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ವೇಳೆ ಸಂಪೂರ್ಣ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತುಮಕೂರು: ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಪ್ರಸ್ತುತ ಸನ್ನಿವೇಶದಲ್ಲಿ ಹಂತ ಹಂತವಾಗಿ ಬೆಂಗಳೂರನ್ನು ಲಾಕ್​ಡೌನ್ ಮಾಡುವುದು ಸೂಕ್ತವೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸಲಹೆ ನೀಡಿದ್ದಾರೆ.

ನಗರದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರವು ಮುಂಬೈ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಲಾಕ್​ಡೌನ್ ಸಡಿಲಿಕೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೊರೊನಾ ಸೋಂಕು ಹೆಚ್ಚಲಿದೆ ಎಂಬ ಕುರಿತು ಈ ಮೊದಲೇ ನಿರೀಕ್ಷೆ ಹೊಂದಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಈಗಾಗಲೇ ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಜನರಲ್ಲಿ ಸೋಂಕಿನ ಕುರಿತು ಭಯದ ವಾತಾವರಣ ಇದ್ದಿದ್ದರಿಂದಲೇ ಇದರ ಪ್ರಮಾಣ ಕಡಿಮೆ ಇತ್ತು. ಆದರೆ ಲಾಕ್​ಡೌನ್​​ ಸಡಿಲಿಕೆ ನಂತರ ಜನರ ಬೇಕಾಬಿಟ್ಟಿ ಓಡಾಟದಿಂದ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮೊದಲ ಹಂತದ ಲಾಕ್​ಡೌನ್ ನಿಂದ ಉತ್ತಮ ಫಲಿತಾಂಶ ದೊರೆತಿತ್ತು ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಜಿ. ಪರಮೇಶ್ವರ್​​

ಹಂತ-ಹಂತವಾಗಿಯಾದರೂ ಬೆಂಗಳೂರು ನಗರದಲ್ಲಿ ಲಾಕ್​ಡೌನ್ ಮಾಡಬೇಕಿದೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಜನರು ತಮಗೆ ಅರಿವಿಲ್ಲದಂತೆ ಸೋಂಕನ್ನು ತರುತ್ತಿದ್ದಾರೆ ಎಂದರು.

ಡಿಕೆಶಿ ಪದಗ್ರಹಣ ಕುರಿತು ಮಾತನಾಡಿ, ಜುಲೈ 2 ರಂದು ಸರ್ಕಾರ ಅವಕಾಶ ಕೊಟ್ಟರೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ವೇಳೆ ಸಂಪೂರ್ಣ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.