ETV Bharat / state

ಕೊನೆಗೂ ಬೋನಿಗೆ ಬಿತ್ತು ಐವರ ಸಾವಿಗೆ ಕಾರಣವಾದ ಚಿರತೆ - Leopard

ತುಮಕೂರು ಜಿಲ್ಲೆಯಲ್ಲಿ ಒಂದು ವರ್ಷದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವು ತರಿಸಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದೆ.

Leopard
ಚಿರತೆ
author img

By

Published : Dec 16, 2020, 5:45 PM IST

ತುಮಕೂರು: ಮೂರು ಗ್ರಾಮಗಳಲ್ಲಿ ಒಂದೇ ವರ್ಷದಲ್ಲಿ ಐದು ಮಂದಿ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಈ ಪ್ರದೇಶಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.

ಒಟ್ಟು 46 ಟ್ರ್ಯಾಕ್ ಕ್ಯಾಮೆರಾಗಳನ್ನು ಚಿರತೆಗೆ ಬಲಿಯಾಗಿದ್ದ ಜನರು ವಾಸಿಸುತ್ತಿದ್ದ ಪ್ರದೇಶದಲ್ಲಿ ಅಳವಡಿಸಲಾಗಿತ್ತು. ಈ ಮೂಲಕ ಚಿರತೆಯ ಚಲನವಲನವನ್ನು ಸಂಗ್ರಹಿಸಲಾಗುತ್ತಿತ್ತು. ಹೀಗೆ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಗಂಡು ಚಿರತೆ ಅತಿ ಹೆಚ್ಚು ಬಾರಿ ಸೆರೆಯಾಗಿತ್ತು.

ಬೋನಿಗೆ ಬಿದ್ದ ಚಿರತೆ

ಒಂದು ವರ್ಷದಿಂದ ಈ ಗಂಡು ಚಿರತೆ ಓಡಾಡುತ್ತಿದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ಟ್ರ್ಯಾಪ್​ ಬೋನ್​ ಸಹ ಅಳವಡಿಸಿದೆ. ಆದ್ರೆ ಚಿರತೆ ಮಾತ್ರ ಬೋನಿಗೆ ಬೀಳುತ್ತಿರಲಿಲ್ಲ. ಇದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ತಲೆನೋವು ತರಿಸಿತ್ತು.

ಅರಣ್ಯ ಇಲಾಖೆ ಸಾಕಷ್ಟು ಯೋಜನೆ ರೂಪಿಸಿ, ಬನ್ನಿ ಕುಪ್ಪೆ ಪ್ಲಾಂಟೇಷನ್​ನಲ್ಲಿ ಕೊಟ್ಟಿಗೆ ಸ್ವರೂಪದಲ್ಲಿ ಬೋನು ಇರಿಸಿತ್ತು. ಅಂತಿಮವಾಗಿ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನಲ್ಲಿದ್ದ ಚಿರತೆಗೆ ಅರಿವಳಿಕೆ ಮದ್ದು ನೀಡಿದ್ದಾರೆ. ಪ್ರಜ್ಞೆ ತಪ್ಪಿದ ಪ್ರಾಣಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಟ್ಟಿದ್ದಾರೆ.

ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳು ಓಡಾಡುತ್ತಿದ್ದು, ಅವುಗಳನ್ನು ಸೆರೆ ಹಿಡಿಯಲು ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದರು.

ಓದಿ: ಕುಮಾರಸ್ವಾಮಿ ಹುಟ್ಟುಹಬ್ಬ: ಸಿಹಿ ಹಂಚಿ ಸಂಭ್ರಮಿಸಿದ ಜೆಡಿಎಸ್​​​​​ ಕಾರ್ಯಕರ್ತರು

ತುಮಕೂರು: ಮೂರು ಗ್ರಾಮಗಳಲ್ಲಿ ಒಂದೇ ವರ್ಷದಲ್ಲಿ ಐದು ಮಂದಿ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಈ ಪ್ರದೇಶಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.

ಒಟ್ಟು 46 ಟ್ರ್ಯಾಕ್ ಕ್ಯಾಮೆರಾಗಳನ್ನು ಚಿರತೆಗೆ ಬಲಿಯಾಗಿದ್ದ ಜನರು ವಾಸಿಸುತ್ತಿದ್ದ ಪ್ರದೇಶದಲ್ಲಿ ಅಳವಡಿಸಲಾಗಿತ್ತು. ಈ ಮೂಲಕ ಚಿರತೆಯ ಚಲನವಲನವನ್ನು ಸಂಗ್ರಹಿಸಲಾಗುತ್ತಿತ್ತು. ಹೀಗೆ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಗಂಡು ಚಿರತೆ ಅತಿ ಹೆಚ್ಚು ಬಾರಿ ಸೆರೆಯಾಗಿತ್ತು.

ಬೋನಿಗೆ ಬಿದ್ದ ಚಿರತೆ

ಒಂದು ವರ್ಷದಿಂದ ಈ ಗಂಡು ಚಿರತೆ ಓಡಾಡುತ್ತಿದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ಟ್ರ್ಯಾಪ್​ ಬೋನ್​ ಸಹ ಅಳವಡಿಸಿದೆ. ಆದ್ರೆ ಚಿರತೆ ಮಾತ್ರ ಬೋನಿಗೆ ಬೀಳುತ್ತಿರಲಿಲ್ಲ. ಇದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ತಲೆನೋವು ತರಿಸಿತ್ತು.

ಅರಣ್ಯ ಇಲಾಖೆ ಸಾಕಷ್ಟು ಯೋಜನೆ ರೂಪಿಸಿ, ಬನ್ನಿ ಕುಪ್ಪೆ ಪ್ಲಾಂಟೇಷನ್​ನಲ್ಲಿ ಕೊಟ್ಟಿಗೆ ಸ್ವರೂಪದಲ್ಲಿ ಬೋನು ಇರಿಸಿತ್ತು. ಅಂತಿಮವಾಗಿ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನಲ್ಲಿದ್ದ ಚಿರತೆಗೆ ಅರಿವಳಿಕೆ ಮದ್ದು ನೀಡಿದ್ದಾರೆ. ಪ್ರಜ್ಞೆ ತಪ್ಪಿದ ಪ್ರಾಣಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಟ್ಟಿದ್ದಾರೆ.

ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳು ಓಡಾಡುತ್ತಿದ್ದು, ಅವುಗಳನ್ನು ಸೆರೆ ಹಿಡಿಯಲು ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದರು.

ಓದಿ: ಕುಮಾರಸ್ವಾಮಿ ಹುಟ್ಟುಹಬ್ಬ: ಸಿಹಿ ಹಂಚಿ ಸಂಭ್ರಮಿಸಿದ ಜೆಡಿಎಸ್​​​​​ ಕಾರ್ಯಕರ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.