ETV Bharat / state

ಹಾಡಹಗಲೇ ಮನೆ ದರೋಡೆ ಮಾಡಿದ್ದ ಖದೀಮರ ಬಂಧನ: ಚಿನ್ನಾಭರಣ ವಶ - undefined

ಹಗಲು ಹೊತ್ತಿನಲ್ಲೇ ಮನೆ ದರೋಡೆ ಮಾಡುತ್ತಿದ್ದ 6 ಜನರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ, ನಗದು- ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತುಮಕೂರಿನ ಅರಕೆರೆ ಕ್ರಾಸ್​ನ ಮನೆಯೊಂದರಲ್ಲಿ ದರೋಡೆ ಮಾಡಿದ್ದ 6 ಜನರನ್ನು ಬಂಧಿಸಲಾಗಿದೆ
author img

By

Published : Jul 6, 2019, 3:01 AM IST

ತುಮಕೂರು: ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಮನೆ ದರೋಡೆ ಮಾಡಿದ್ದ 6 ಮಂದಿ ದರೋಡೆಕೋರರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

mtmk
ತುಮಕೂರಿನ ಅರಕೆರೆ ಕ್ರಾಸ್​ನ ಮನೆಯೊಂದರಲ್ಲಿ ದರೋಡೆ ಮಾಡಿದ್ದ 6 ಜನರನ್ನು ಬಂಧಿಸಲಾಗಿದೆ.

ಇಲ್ಲಿನ ಅರಕೆರೆ ಕ್ರಾಸ್​ನಲ್ಲಿ ಮೇ 26ರಂದು ಹಗಲು ಹೊತ್ತಿನಲ್ಲಿ ಲೀಲಾವತಿ ಅವರ ಮನೆ ಬಾಡಿಗೆಯ ಮುಂಗಡ ಹಣ ಕೊಡುವ ನೆಪದಲ್ಲಿ ಒಳನುಗ್ಗಿದ 6 ಮಂದಿ, ಏಕಾಏಕಿ ಅವರನ್ನು ಹಿಡಿದು ಥಳಿಸಿ ಬಳಿಕ ಕೈ-ಕಾಲು ಕಟ್ಟಿ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು. ನಂತರ ಮನೆಯಲ್ಲಿದ್ದ ಬೀರುವನ್ನು ಒಡೆದು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದರು.

ತುಮಕೂರು ಗ್ರಾಮಾಂತರ ಪೊಲೀಸರು 6 ಮಂದಿ ದರೋಡೆಕೋರರನ್ನು ಬಂಧಿಸಿ 9 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಪಿ.ವೆಂಕಟೇಶ್, ಸಂದೀಪುಡಿ ಮುರಳಿ ಮಣಿ ಸ್ವರೂಪ್, ಪಲ್ಲುಪು ತಿರುಪುತೇಂದ್ರ, ನರಸಿಂಹ ಮತ್ತು ಬೆಂಗಳೂರಿನ ವೈ.ಎಸ್.ಬಾಬು, ದಾವಣಗೆರೆಯ ಕೆಟಿ ಶಿವಾನಂದ ಪೂಜಾರಿ ಬಂಧಿತ ಆರೋಪಿಗಳು.

ತುಮಕೂರು: ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಮನೆ ದರೋಡೆ ಮಾಡಿದ್ದ 6 ಮಂದಿ ದರೋಡೆಕೋರರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

mtmk
ತುಮಕೂರಿನ ಅರಕೆರೆ ಕ್ರಾಸ್​ನ ಮನೆಯೊಂದರಲ್ಲಿ ದರೋಡೆ ಮಾಡಿದ್ದ 6 ಜನರನ್ನು ಬಂಧಿಸಲಾಗಿದೆ.

ಇಲ್ಲಿನ ಅರಕೆರೆ ಕ್ರಾಸ್​ನಲ್ಲಿ ಮೇ 26ರಂದು ಹಗಲು ಹೊತ್ತಿನಲ್ಲಿ ಲೀಲಾವತಿ ಅವರ ಮನೆ ಬಾಡಿಗೆಯ ಮುಂಗಡ ಹಣ ಕೊಡುವ ನೆಪದಲ್ಲಿ ಒಳನುಗ್ಗಿದ 6 ಮಂದಿ, ಏಕಾಏಕಿ ಅವರನ್ನು ಹಿಡಿದು ಥಳಿಸಿ ಬಳಿಕ ಕೈ-ಕಾಲು ಕಟ್ಟಿ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು. ನಂತರ ಮನೆಯಲ್ಲಿದ್ದ ಬೀರುವನ್ನು ಒಡೆದು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದರು.

ತುಮಕೂರು ಗ್ರಾಮಾಂತರ ಪೊಲೀಸರು 6 ಮಂದಿ ದರೋಡೆಕೋರರನ್ನು ಬಂಧಿಸಿ 9 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಪಿ.ವೆಂಕಟೇಶ್, ಸಂದೀಪುಡಿ ಮುರಳಿ ಮಣಿ ಸ್ವರೂಪ್, ಪಲ್ಲುಪು ತಿರುಪುತೇಂದ್ರ, ನರಸಿಂಹ ಮತ್ತು ಬೆಂಗಳೂರಿನ ವೈ.ಎಸ್.ಬಾಬು, ದಾವಣಗೆರೆಯ ಕೆಟಿ ಶಿವಾನಂದ ಪೂಜಾರಿ ಬಂಧಿತ ಆರೋಪಿಗಳು.

Intro:ಆರು ಮಂದಿ ದರೋಡೆಕೋರರ ಬಂಧನ ಚಿನ್ನಾಭರಣ ವಶ......

ತುಮಕೂರು
ಬಾಡಿಗೆಗೆ ಮನೆ ಬಗ್ಗೆ ಮಾತುಕತೆ ನಡೆಸುವ ನೆಪದಲ್ಲಿ ಮನೆಗೆ ದರೋಡೆ ಮಾಡಿದ್ದ ಆರು ಮಂದಿ ದರೋಡೆಕೋರರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೇ 26ರಂದು ಹಗಲು ಹೊತ್ತಿನಲ್ಲಿ ತುಮಕೂರಿನ ಅರಕೆರೆ ಕ್ರಾಸ್ ನಲ್ಲಿ ಇರುವ ಲೀಲಾವತಿ ಅವರ ಮನೆ ಬಾಡಿಗೆಯ ಅಡ್ವಾನ್ಸ್ ಹಣ ಕೊಡುವ ನೆಪದಲ್ಲಿ ಒಳನುಗ್ಗಿದ 6ಮಂದಿ ಏಕಾಏಕಿ ಅವರನ್ನು ಹಿಡಿದು ಥಳಿಸಿದ್ದಾರೆ.
ಅವರ ಕೈ-ಕಾಲು ಕಟ್ಟಿ ಕೊಲೆ ಮಾಡುವುದಾಗಿ ಧಮಕಿ ಹಾಕಿದ್ದಾರೆ ನಂತರ ಮನೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ತುಮಕೂರು ಗ್ರಾಮಾಂತರ ಪೊಲೀಸರು ಆರು ಮಂದಿ ದರೋಡೆಕೋರರನ್ನು ಬಂಧಿಸಿ 9,73,000 ರೂ ನಗದು, 50,500 ರೂ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶ ಮೂಲದ ಆರೋಪಿಗಳಾದ ಪಿ ವೆಂಕಟೇಶ್, ಸಂದೀಪುಡಿ ಮುರಳಿ ಮಣಿ ಸ್ವರೂಪ್, ಪಲ್ಲುಪು ತಿರುಪುತೇಂದ್ರ, ನರಸಿಂಹ ಮತ್ತು ಬೆಂಗಳೂರಿನ ವೈಎಸ್ ಬಾಬು, ದಾವಣಗೆರೆಯ ಕೆಟಿ ಶಿವಾನಂದ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.Body:TumakuruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.