ETV Bharat / state

ದಲಿತ ಚಳವಳಿಯ ಗಟ್ಟಿದನಿ ಸಾಹಿತಿ ಕೆ ಬಿ ಸಿದ್ದಯ್ಯ ಇನ್ನು ನೆನಪಷ್ಟೇ..

author img

By

Published : Oct 18, 2019, 8:55 AM IST

Updated : Oct 18, 2019, 8:28 PM IST

ಸಾಹಿತಿ, ಹೋರಾಟಗಾರ ಕೆ ಬಿ ಸಿದ್ದಯ್ಯ (70) ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ವಿಧಿವಶರಾದರು.

ಸಾಹಿತಿ ಕೆ.ಬಿ.ಸಿದ್ದಯ್ಯ

ಬೆಂಗಳೂರು/ತುಮಕೂರು : ಸಾಹಿತಿ, ಹೋರಾಟಗಾರ ಕೆ ಬಿ ಸಿದ್ದಯ್ಯ (70) ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

80ರ ದಶಕದಲ್ಲಿ ದಲಿತ ಚಳವಳಿಯ ಮುಂಚೂಣಿಯಲ್ಲಿದ್ದವರು ಸಾಹಿತಿ ಕೆ ಬಿ ಸಿದ್ದಯ್ಯ. ಪ್ರತಿ ಹೋರಾಟಗಳ ಸಂದರ್ಭಕ್ಕೆ ಅನುಗುಣವಾಗಿ ಕವಿತೆ ರಚಿಸಿ ಹಾಡುವ ಮೂಲಕ ಚಳವಳಿ ಕಾವು ಪಡೆದುಕೊಳ್ಳಲು ಸಹಕಾರ ನೀಡುತ್ತಿದ್ದರು. ದಲಿತ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿದ್ದಯ್ಯನವರು, ದಕ್ಕಲ ಕಥಾದೇವಿ,ಬಕಾಲ, ಗಲ್ಲೆಭಾನಿ ಸೇರಿ ಹಲವು ಖಂಡಕಾವ್ಯ ರಚಿಸಿದ್ದಾರೆ. ಸಮಾಜದ ನೋವು ನಲಿವುಗಳಿಗೆ ಧ್ವನಿಯಾಗಿದ್ದವರು ಕೆ ಬಿ ಸಿದ್ದಯ್ಯ, ಶ್ರೀಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದರು.

ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:15ರ ಸುಮಾರಿಗೆ ಕೊನೆಯುಸಿರೆಳೆದರು. ಸಿದ್ದಯ್ಯನವರ ಅಗಲಿಕೆಯಿಂದ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯವೃಂದ ಶೋಕಸಾಗರದಲ್ಲಿ ಮುಳುಗಿದೆ.

ಬೆಂಗಳೂರು/ತುಮಕೂರು : ಸಾಹಿತಿ, ಹೋರಾಟಗಾರ ಕೆ ಬಿ ಸಿದ್ದಯ್ಯ (70) ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

80ರ ದಶಕದಲ್ಲಿ ದಲಿತ ಚಳವಳಿಯ ಮುಂಚೂಣಿಯಲ್ಲಿದ್ದವರು ಸಾಹಿತಿ ಕೆ ಬಿ ಸಿದ್ದಯ್ಯ. ಪ್ರತಿ ಹೋರಾಟಗಳ ಸಂದರ್ಭಕ್ಕೆ ಅನುಗುಣವಾಗಿ ಕವಿತೆ ರಚಿಸಿ ಹಾಡುವ ಮೂಲಕ ಚಳವಳಿ ಕಾವು ಪಡೆದುಕೊಳ್ಳಲು ಸಹಕಾರ ನೀಡುತ್ತಿದ್ದರು. ದಲಿತ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿದ್ದಯ್ಯನವರು, ದಕ್ಕಲ ಕಥಾದೇವಿ,ಬಕಾಲ, ಗಲ್ಲೆಭಾನಿ ಸೇರಿ ಹಲವು ಖಂಡಕಾವ್ಯ ರಚಿಸಿದ್ದಾರೆ. ಸಮಾಜದ ನೋವು ನಲಿವುಗಳಿಗೆ ಧ್ವನಿಯಾಗಿದ್ದವರು ಕೆ ಬಿ ಸಿದ್ದಯ್ಯ, ಶ್ರೀಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದರು.

ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:15ರ ಸುಮಾರಿಗೆ ಕೊನೆಯುಸಿರೆಳೆದರು. ಸಿದ್ದಯ್ಯನವರ ಅಗಲಿಕೆಯಿಂದ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯವೃಂದ ಶೋಕಸಾಗರದಲ್ಲಿ ಮುಳುಗಿದೆ.

Intro:Body:ಸಾಹಿತಿ ಸಿದ್ದಯ್ಯ ಸಾವು......

ತುಮಕೂರು
ಸಾಹಿತಿ, ಹೋರಾಟಗಾರ ಕೆ.ಬಿ.ಸಿದ್ದಯ್ಯ ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು.
80ರ ದಶಕದಲ್ಲಿ ದಲಿತ ಚಳವಳಿಯ ಮುಂಚೂಣಿಯಲ್ಲಿದ್ರು.
ಹೋರಾಟಗಳ ಅಯಾಯ ಸಂದರ್ಭಗಳಿಗೆ ಅನುಗುಣವಾಗಿ ಹಾಡುಗಳನ್ನು ರಚಿಸಿ ಹಾಡುವ ಮೂಲಕ ಚಳುವಳಿ ಕಾವು ಪಡೆದುಕೊಳ್ಳಲು ಸಹಕಾರಿ ಯಾಗಿರುತ್ತಿದ್ರು. ದಲಿತ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ರು.

ದಕ್ಕಲ ಕಥಾದೇವಿ,ಬಕಾಲ,ಗಲ್ಲೆಭಾನಿ ಸೇರಿದಂತೆ ಹಲವು ಖಂಡಕಾವ್ಯ ರಚಿಸಿ. ಸಮಾಜದ ನೋವು ನಲಿವುಗಳಿಗೆ ಧ್ವನಿಯಾಗಿದ್ದರು.
ಕೆ.ಬಿ.ಸಿದ್ದಯ್ಯ ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ನಿವೃತ್ತ ರಾಗಿದ್ದರು.

ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಇಂದು ಬೆಳಗಿನ ಜಾವ 4:15ರಲ್ಲಿ ಕೊನೆಯುಸಿರೆಳೆದರು. ಪತ್ನಿ. ಪುತ್ರ.ಪುತ್ರಿ ಹಾಗೂ ಅಪಾರ ಶಿಷ್ಯ ವೃಂದ ವನ್ನು ಅಗಲಿದ್ದಾರೆ.Conclusion:
Last Updated : Oct 18, 2019, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.