ತುಮಕೂರು: ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹೊಸ ಆಯಾಮಗಳಿಗೆ ಪತ್ರಿಕೋದ್ಯಮವೇ ಬುನಾದಿ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜು ಮತ್ತು ಪತ್ರಿಕೋದ್ಯಮ ವಿಭಾಗ ಆಶ್ರಯದಲ್ಲಿ 'ಹೊಸ ಕಾಲದ ಮಾಧ್ಯಮ, ಭವಿಷ್ಯದ ಅವಕಾಶಗಳು' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಷ್ಟೇ ಅಲ್ಲದೇ, ಸಂವೇದನಾಶೀಲ ಸಮಾಜ ನಿರ್ಮಾಣ ಮಾಡಲು ಪತ್ರಿಕೋದ್ಯಮವೇ ಕಾರಣವಾಗಿದೆ ಎಂದು ಹೇಳಿದರು. ಜೊತೆಗೆ ದುಬೈನ ಹೈಯರ್ ಕಾಲೇಜ್ ಆಫ್ ಟೆಕ್ನಾಲಜೀಸ್ನ ಡಾ. ಎಂ.ಶ್ರೀಶ, ಹೊಸ ಕಾಲದ ಮಾಧ್ಯಮ ಭವಿಷ್ಯದ ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.