ತುಮಕೂರು: ಚಿತ್ರನಟ ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿ ಇಬ್ಬರು ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಂಡಿದ್ದಾರೆ.
ತಿಪಟೂರಿನ ವಿವೇಕಾನಂದ ನಗರದ ನಿವಾಸಿ ರವಿಕುಮಾರ್ ಹಾಗೂ ಅವರ ಮಗ ನಟರಾಜ ಎಂಬುವವರು ಕೇಶಮುಂಡನ ಮಾಡಿಸಿಕೊಂಡರು. ನಂತರ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಆರತಿ ಬೆಳಗಿ, ಎಡೆ ಇರಿಸಿದರು. ನಂತರ ವಿಧಿ-ವಿಧಾನದಂತೆ ಪೂಜೆ ಸಲ್ಲಿಸಿದರು.
ಈ ವೇಳೆ ನೆರೆದಿದ್ದ ಬಡಾವಣೆಯ ನಾಗರಿಕರು ಸ್ಥಳಕ್ಕೆ ತೆರಳಿ ಭಾವಚಿತ್ರದ ಎದುರು ಇರಿಸಲಾಗಿದ್ದ ಧೂಪ ಬೆಳಗಿದರು. 11ನೇ ದಿನದ ಕಾರ್ಯಕ್ಕೆ ನಾವು ಸಮಾಧಿ ಬಳಿಗೆ ಹೋಗಬೇಕಾದ ಕಾರಣ, ಇಂದು ಕೇಶಮುಂಡನ ಕಾರ್ಯ ನಡೆಸಿದ್ದೇವೆ ಎಂದು ರವಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ನಟನೆಯಲ್ಲಿ ಪಳಗಿದ್ದ ಪುನೀತ್: ಹಿರಿಯ ನಟ ಹೊನ್ನವಳ್ಳಿ ಕೃಷ್ಣ