ETV Bharat / state

ಶ್ರಮಜೀವಿ ರೈತನಿಗೆ ಸಿಗುತ್ತಿಲ್ಲ ಸರ್ಕಾರದ ಸೌಲಭ್ಯ: ಹೆಗಲ ಮೇಲೆ ನೊಗ ಹೊತ್ತ ಕೃಷಿಕರು..!

author img

By

Published : Aug 18, 2019, 11:52 PM IST

Updated : Aug 19, 2019, 7:06 AM IST

ಸರ್ಕಾರವೇನೋ ರೈತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕೃಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ಪರಿಚಯಿಸುತ್ತದೆ. ಆದರೆ ಇದರ ಸದುಪಯೋಗ ಪಡೆಯುವುದು ಕೆಲವೇ ಕೆಲವು ಮಂದಿ ಮಾತ್ರ. ಇದಕ್ಕೆ ಉತ್ತಮ ಉದಾಹರಣೆಯಂತಿದೆ ಕೊರಟಗೆರೆ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಕೆಲ ಸಣ್ಣ ರೈತರು ಹೆಗಲ ಮೇಲೆ ನೊಗ ಹೊತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು.

ಹೆಗಲ ಮೇಲೆ ನೊಗ ಹೊತ್ತ ಕೃಷಿಕರು

ತುಮಕೂರು: ವಿವಿಧ ಯೋಜನೆಯಡಿ ರೈತನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸರ್ಕಾರದಿಂದ ಹಲವು ಕೃಷಿ ಪರಿಕರಗಳನ್ನು ಪರಿಚಯಿಸಿ, ಸಬ್ಸಿಡಿ ದರದಲ್ಲಿ ಕೃಷಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಆದರೆ ಬಹುತೇಕ ಯೋಜನೆಗಳು ಅತಿ ಸಣ್ಣ ರೈತರಿಗೆ ತಲುಪುತ್ತಲೇ ಇಲ್ಲ ಎಂಬ ಆರೋಪಗಳಿವೆ.

ಈ ಆರೋಪಗಳಿಗೆ ಸಾಕ್ಷಿ ಎಂಬಂತೆ ಕೊರಟಗೆರೆ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಕೆಲ ಸಣ್ಣ ರೈತರು ಹೆಗಲ ಮೇಲೆ ನೊಗ ಹೊತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಹೀಗಾಗಿ ಒಂದು ದಿನ ಪಕ್ಕದ ಹೊಲದಲ್ಲಿ ಹೋಗಿ ಕೆಲಸ ಮಾಡಿದರೆ ಇನ್ನೊಂದು ದಿನ ಅದೇ ಹೊಲದವರು ಬಂದು ಮತ್ತೊಂದು ಹೊಲದಲ್ಲಿ ಕೃಷಿ ಚಟುವಟಿಕೆಗೆ ಸಹಕಾರಿಯಾಗುತ್ತಿದ್ದಾರೆ. ಅದೇ ರೀತಿ ಹೆಗಲ ಮೇಲೆ ನೇಗಿಲು ರೂಪದಲ್ಲಿ ಕೃಷಿ ಪರಿಕರವನ್ನು ಇಟ್ಟುಕೊಂಡು ಭೂಮಿ ಹದ ಮಾಡುತ್ತಿರುವುದು ಕೊರಟಗೆರೆ ತಾಲೂಕಿನಲ್ಲಿ ಕಂಡುಬರುತ್ತಿದೆ.

ಹೆಗಲ ಮೇಲೆ ನೊಗ ಹೊತ್ತ ಕೃಷಿಕರು

ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಎತ್ತುಗಳು ಕೂಡ ಸಿಗದಿರುವುದು ರೈತರ ಕ್ಲಿಷ್ಟಕರ ಪರಿಸ್ಥಿತಿಗೆ ಕಾರಣವಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯವಿರುವ ಪರಿಕರಗಳನ್ನು ಪಡೆಯುವ ಒಂದು ಮಾರ್ಗದರ್ಶನ ಇಲ್ಲದೇ ಇರುವುದನ್ನು ಕೂಡ ಇಲ್ಲಿ ಗಮನಿಸಬೇಕಿದೆ. ಅತಿ ಸಣ್ಣ ರೈತರು ಇಲ್ಲಿ ಅನಿವಾರ್ಯವಾಗಿ ಭುಜದ ಮೇಲೆ ನೇಗಿಲು ಹೊತ್ತು ಬೇಸಾಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ನಮ್ಮ ಕೃಷಿ ಇಲಾಖೆಯಿಂದ ಸಾಕಷ್ಟು ಪರಿಕರಗಳು ಲಭ್ಯವಿದೆ. ಆದರೆ ಅಗತ್ಯವಿರುವ ರೈತರು ಮುಂದೆ ಬರುತ್ತಿಲ್ಲ. ಸಾಕಷ್ಟು ಪ್ರಚಾರವನ್ನು ಕೂಡ ಮಾಡುತ್ತಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ.

ತುಮಕೂರು: ವಿವಿಧ ಯೋಜನೆಯಡಿ ರೈತನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸರ್ಕಾರದಿಂದ ಹಲವು ಕೃಷಿ ಪರಿಕರಗಳನ್ನು ಪರಿಚಯಿಸಿ, ಸಬ್ಸಿಡಿ ದರದಲ್ಲಿ ಕೃಷಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಆದರೆ ಬಹುತೇಕ ಯೋಜನೆಗಳು ಅತಿ ಸಣ್ಣ ರೈತರಿಗೆ ತಲುಪುತ್ತಲೇ ಇಲ್ಲ ಎಂಬ ಆರೋಪಗಳಿವೆ.

ಈ ಆರೋಪಗಳಿಗೆ ಸಾಕ್ಷಿ ಎಂಬಂತೆ ಕೊರಟಗೆರೆ ತಾಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಕೆಲ ಸಣ್ಣ ರೈತರು ಹೆಗಲ ಮೇಲೆ ನೊಗ ಹೊತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಹೀಗಾಗಿ ಒಂದು ದಿನ ಪಕ್ಕದ ಹೊಲದಲ್ಲಿ ಹೋಗಿ ಕೆಲಸ ಮಾಡಿದರೆ ಇನ್ನೊಂದು ದಿನ ಅದೇ ಹೊಲದವರು ಬಂದು ಮತ್ತೊಂದು ಹೊಲದಲ್ಲಿ ಕೃಷಿ ಚಟುವಟಿಕೆಗೆ ಸಹಕಾರಿಯಾಗುತ್ತಿದ್ದಾರೆ. ಅದೇ ರೀತಿ ಹೆಗಲ ಮೇಲೆ ನೇಗಿಲು ರೂಪದಲ್ಲಿ ಕೃಷಿ ಪರಿಕರವನ್ನು ಇಟ್ಟುಕೊಂಡು ಭೂಮಿ ಹದ ಮಾಡುತ್ತಿರುವುದು ಕೊರಟಗೆರೆ ತಾಲೂಕಿನಲ್ಲಿ ಕಂಡುಬರುತ್ತಿದೆ.

ಹೆಗಲ ಮೇಲೆ ನೊಗ ಹೊತ್ತ ಕೃಷಿಕರು

ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಎತ್ತುಗಳು ಕೂಡ ಸಿಗದಿರುವುದು ರೈತರ ಕ್ಲಿಷ್ಟಕರ ಪರಿಸ್ಥಿತಿಗೆ ಕಾರಣವಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯವಿರುವ ಪರಿಕರಗಳನ್ನು ಪಡೆಯುವ ಒಂದು ಮಾರ್ಗದರ್ಶನ ಇಲ್ಲದೇ ಇರುವುದನ್ನು ಕೂಡ ಇಲ್ಲಿ ಗಮನಿಸಬೇಕಿದೆ. ಅತಿ ಸಣ್ಣ ರೈತರು ಇಲ್ಲಿ ಅನಿವಾರ್ಯವಾಗಿ ಭುಜದ ಮೇಲೆ ನೇಗಿಲು ಹೊತ್ತು ಬೇಸಾಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ನಮ್ಮ ಕೃಷಿ ಇಲಾಖೆಯಿಂದ ಸಾಕಷ್ಟು ಪರಿಕರಗಳು ಲಭ್ಯವಿದೆ. ಆದರೆ ಅಗತ್ಯವಿರುವ ರೈತರು ಮುಂದೆ ಬರುತ್ತಿಲ್ಲ. ಸಾಕಷ್ಟು ಪ್ರಚಾರವನ್ನು ಕೂಡ ಮಾಡುತ್ತಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ.

Intro:ಹೆಗಲ ಮೇಲೆ ನೊಗ ಹೊತ್ತು ಕೃಷಿಯಲ್ಲಿ ತೊಡಗಿದ ರೈತರು......

ತುಮಕೂರು
ಶ್ರಮಜೀವಿ ರೈತನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸರ್ಕಾರ ಹಲವು ಕೃಷಿ ಪರಿಕರಗಳನ್ನು ನೀಡುತ್ತಿದೆ ಅಲ್ಲದೆ ಪರಿಚಯಿಸುತ್ತದೆ. ಸಬ್ಸಿಡಿ ದರದಲ್ಲಿ ಕೃಷಿಗೆ ಅನುಕೂಲವಾಗುವಂತಹ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಆದರೆ ಬಹುತೇಕ ಯೋಜನೆಗಳು ಅತಿ ಸಣ್ಣ ರೈತರಿಗೆ ತಲುಪುತ್ತಲೇ ಇಲ್ಲ.
ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದಲ್ಲಿ ಕೆಲ ಸಣ್ಣ ರೈತರು ಹೆಗಲ ಮೇಲೆ ನೊಗ ಹೊತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿದೆ. ಈ ರೀತಿಯಾಗಿ ಕಳೆ ತೆಗೆದು ಭೂಮಿ ಹದ ಮಾಡಿಕೊಳ್ಳುವ ಒಂದು ಪ್ರಕ್ರಿಯೆಗೆ ಸಾಕಷ್ಟು ಕೃಷಿ ಪರಿಕರಗಳು ಕೃಷಿ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದ್ಯಾವುದರ ಮಾಹಿತಿ ಇವರಿಗೆ ಇಲ್ಲದಂತಾಗಿದೆ.
ಹೀಗಾಗಿ ರೈತರು ಪರಸ್ಪರ ಇಂಥ ಕೆಲಸಗಳಲ್ಲಿ ಸಾಥ್ ನೀಡುತ್ತಿದ್ದಾರೆ. ಒಂದು ದಿನ ಪಕ್ಕದ ಹೊಲದಲ್ಲಿ ಹೋಗಿ ಕೆಲಸ ಮಾಡಿದರೆ ಇನ್ನೊಂದು ದಿನ ಅದೇ ಹೊಲದವರು ಬಂದು ಮತ್ತೊಂದು ಹೊಲದಲ್ಲಿ ಕೃಷಿ ಚಟುವಟಿಕೆಗೆ ಸಹಕಾರಿ ಯಾಗುತ್ತಿದ್ದಾರೆ ಅದೇ ರೀತಿ ಬುಜದ ಮೇಲೆ ನೇಗಿಲು ರೂಪದಲ್ಲಿ ಕೃಷಿ ಪರಿಕರವನ್ನು ಇಟ್ಟುಕೊಂಡು ಭೂಮಿ ಹದ ಮಾಡುತ್ತಿರುವುದು ಕೊರಟಗೆರೆ ತಾಲೂಕಿನಲ್ಲಿ ಸರ್ವೇಸಾಮಾನ್ಯವಾಗಿದೆ.
ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಎತ್ತುಗಳು ಕೂಡ ಸಿಗದೆ ಇರುವುದು ಕೂಡ ಸಣ್ಣ ರೈತರಿಗೆ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯವಿರುವ ಪರಿಕರಗಳನ್ನು ಪಡೆಯುವ ಒಂದು ಮಾರ್ಗದರ್ಶನ ಇಲ್ಲದೇ ಇರುವುದು ಕೂಡ ಇಲ್ಲಿ ಗಮನಾರ್ಹ ಅಂಶವಾಗಿದೆ. ಹೀಗಾಗಿ ಅತಿಸಣ್ಣ ರೈತರು ಅನಿವಾರ್ಯವಾಗಿ ಬುಜದ ಮೇಲೆ ನೇಗಿಲು ಹೊತ್ತು ಚಟುವಟಿಕೆಯಲ್ಲಿ ತೊಡಗಿದ್ದಾರೆ.
ನಮ್ಮ ಕೃಷಿ ಇಲಾಖೆಯಿಂದ ಸಾಕಷ್ಟು ಪರಿಕರಗಳು ಲಭ್ಯವಿದೆ ಆದರೆ ಅಗತ್ಯವಿರುವ ರೈತರು ಮುಂದೆ ಬರುತ್ತಿಲ್ಲ ಸಾಕಷ್ಟು ಪ್ರಚಾರವನ್ನು ಕೂಡ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ.
ಬೈಟ್ : ಶ್ರೀನಿವಾಸ್, ರೈತ...


Body:ತುಮಕೂರು


Conclusion:
Last Updated : Aug 19, 2019, 7:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.