ETV Bharat / state

ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಅಗತ್ಯವಿದೆ: ಡಾ. ಬರಗೂರು ರಾಮಚಂದ್ರಪ್ಪ - dr baragur ramachandrappa speaks on ayodhye verdict

ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಿಷ್ಣುತೆಯನ್ನು ಕಾಪಾಡಿಕೊಳ್ಳಬೇಕಿದೆ. ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತೇವೆ. ನಾವೆಲ್ಲರೂ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಾಡನ್ನು ಮಾಡಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.

tmk
author img

By

Published : Nov 9, 2019, 3:20 PM IST

ತುಮಕೂರು: ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತುಮಕೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಕನ್ನಡ ರಾಜ್ಯೋತ್ಸವ ಹಾಗೂ ಕಾವ್ಯೋತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ಅಗತ್ಯವಿದ್ದು, ಸಹಿಷ್ಣುತೆಯನ್ನು ಕಾಪಾಡಿಕೊಳ್ಳಬೇಕಿದೆ. ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತೇವೆ. ನಾವೆಲ್ಲರೂ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಾಡನ್ನು ಮಾಡಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.

ಕನ್ನಡ ರಾಜ್ಯೋತ್ಸವ ಹಾಗೂ ಕಾವ್ಯೋತ್ಸವ ಸಮಾರಂಭ

ಅಯೋಧ್ಯೆ ತೀರ್ಪು ಸರಿಯೇ ತಪ್ಪೇ ಎಂದು ಚರ್ಚೆ ಮಾಡುವುದರ ಬದಲಾಗಿ ಸುಪ್ರೀಂ ಕೋರ್ಟಿನ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಬೇರೆ ವಿಷಯಗಳಿಗೆ ದಾರಿದೀಪವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ತುಮಕೂರು: ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತುಮಕೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಕನ್ನಡ ರಾಜ್ಯೋತ್ಸವ ಹಾಗೂ ಕಾವ್ಯೋತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ಅಗತ್ಯವಿದ್ದು, ಸಹಿಷ್ಣುತೆಯನ್ನು ಕಾಪಾಡಿಕೊಳ್ಳಬೇಕಿದೆ. ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತೇವೆ. ನಾವೆಲ್ಲರೂ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಾಡನ್ನು ಮಾಡಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.

ಕನ್ನಡ ರಾಜ್ಯೋತ್ಸವ ಹಾಗೂ ಕಾವ್ಯೋತ್ಸವ ಸಮಾರಂಭ

ಅಯೋಧ್ಯೆ ತೀರ್ಪು ಸರಿಯೇ ತಪ್ಪೇ ಎಂದು ಚರ್ಚೆ ಮಾಡುವುದರ ಬದಲಾಗಿ ಸುಪ್ರೀಂ ಕೋರ್ಟಿನ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಬೇರೆ ವಿಷಯಗಳಿಗೆ ದಾರಿದೀಪವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

Intro:ತುಮಕೂರು: ಅಯೋದ್ಯ ತೀರ್ಪು ಯಾರ ಪರವಾಗಿಯಾದರೂ ಬರಲಿ, ಯಾರ ವಿರೋಧವಾಗಿ ಆದರೂ ಬರಲಿ ಅಥವಾ ಏನೇ ತೀರ್ಪು ಬಂದರೂ ನಾವು ಶಾಂತಿಯನ್ನು ಮತ್ತು ಸೌಹಾರ್ದತೆಯನ್ನು ಕಾಪಾಡಬೇಕಿದೆ. ಸುಪ್ರೀಂ ಕೋರ್ಟ್ ನ ತೀರ್ಪು ಅಂತಿಮವಾಗಿದ್ದು ಎಂದು ಸಾಹಿತಿ ನಾಡೋಜ ಡಾಕ್ಟರ್ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.


Body:ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತುಮಕೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕಾವ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಯೋದ್ಯ ತೀರ್ಪು ಯಾರ ಪರವಾಗಿಯಾದರೂ ಬರಲಿ, ಯಾರ ವಿರೋಧವಾಗಿ ಆದರೂ ಬರಲಿ ಅಥವಾ ಏನೇ ತೀರ್ಪು ಬಂದರೂ ನಾವು ಶಾಂತಿಯನ್ನು ಮತ್ತು ಸೌಹಾರ್ದತೆಯನ್ನು ಕಾಪಾಡಬೇಕಿದೆ. ಸುಪ್ರೀಂ ಕೋರ್ಟ್ ನ ತೀರ್ಪು ಅಂತಿಮವಾಗಿದ್ದು, ನಮಗೆ ವೈಯಕ್ತಿಕವಾಗಿ ತೀರ್ಪು ಇಷ್ಟವಾಗಲಿ, ಇಷ್ಟವಾಗದೆ ಇರಲಿ ಒಂದು ಕಾರ್ಯಕ್ಕೆ ಕೊನೆ ಎನ್ನುವುದು ಇರುತ್ತದೆ, ಆ ಕಾರಣದಿಂದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದರು.
ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದ್ದು, ಸಹಿಷ್ಣುತೆಯನ್ನು ಕಾಪಾಡಿಕೊಳ್ಳಬೇಕಿದೆ. ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತೇವೆ ನಾವೆಲ್ಲರೂ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಾಡನ್ನು ಮಾಡಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಜಾತಿ ಮತ್ತು ಧರ್ಮದ ಕಾರಣಕ್ಕಾಗಿ ಜಗಳವಾಡಿಕೊಂಡು ಬಂದಿದ್ದೇವೆ, ಇದರಿಂದ ದೇಶದ ಸೌಹಾರ್ದತೆಗೆ ಮಾನವೀಯ ಮೌಲ್ಯಕ್ಕೆ ದೇಶದ ಅಮಾಯಕರಿಗೆ ತೊಂದರೆಯಾಗುತ್ತಿದೆ.
1992 ರ ನಂತರ ಉಲ್ಬಣಗೊಂಡಂತಹ ಹಿಂದು ಮುಸ್ಲಿಂ ಬಾಬ್ರಿಮಸೀದಿ ಸಂಘರ್ಷ. ಈಗ ಯಾರದು ತಪ್ಪು ಯಾರದು ಸರಿ ಈ ತೀರ್ಪು ಸರಿಯೇ ತಪ್ಪೇ ಎಂದು ಚರ್ಚೆ ಮಾಡುವುದರ ಬದಲಾಗಿ ಸುಪ್ರೀಂ ಕೋರ್ಟಿನ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಬೇರೆ ವಿಷಯಗಳಿಗೆ ದಾರಿದೀಪವಾಗಬೇಕಿದೆ ಎಂಬುದು ನನ್ನ ಅಭಿಪ್ರಾಯ. ಮತ್ತೆ ಮತ್ತೆ ಹಿಂದೂ-ಮುಸ್ಲಿಂ-ಕ್ರೈಸ್ತ ಇತ್ಯಾದಿ ಕಾರಣಗಳಿಗಾಗಿ ಯಾರು ಸಹ ಕೋರ್ಟಿನ ಮೊರೆ ಹೋಗಬಾರದಂತೆ ಸೌಹಾರ್ದತೆಯ ಮನೋಭಾವವನ್ನು ಎಲ್ಲರೂ ಹೊಂದಬೇಕಿದೆ ಎಂದರು.
ಇತಿಹಾಸವನ್ನು ಇತಿಹಾಸವನ್ನಾಗಿ ಅಧ್ಯಯನಕ್ಕೆ ಬೇಕಾದ ಪಠ್ಯವನ್ನಾಗಿ ನೋಡಬೇಕಿದೆ. ಸಮಕಾಲಿನ ಸಂಘರ್ಷಗಳಿಗಾಗಿ ಪಠ್ಯವನ್ನು ತೆಗೆದುಕೊಳ್ಳಬಾರದು, ಸಂಶೋಧನೆಗೆ ಯೋಗ್ಯವಾದ ಪಠ್ಯವನ್ನಾಗಿ ಕಾಣಬೇಕು. ಧರ್ಮದ ಕಾರಣಕ್ಕಾಗಿ, ದೇವರ ಕಾರಣಕ್ಕಾಗಿ, ರಾಜಕೀಯ ಕಾರಣಕ್ಕಾಗಿ ಬಳಸುವ ಮೂಲಕ ದೇಶದ ಸೌಹಾರ್ದತೆಯನ್ನು ದೇಶದ ಶಾಂತಿಯನ್ನು ಹಾಳು ಮಾಡಬಾರದು ಎಂದರು.
ಬೈಟ್: ಡಾ. ಬರಗೂರು ರಾಮಚಂದ್ರಪ್ಪ, ಸಾಹಿತಿ


Conclusion:ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.