ETV Bharat / state

'ನಾನು ಸನಾತನ ಧರ್ಮದ ವಿರೋಧಿಯಲ್ಲ, ಅಸಮಾನತೆಯ ವಿರೋಧಿ': ನಟ ಚೇತನ್

author img

By ETV Bharat Karnataka Team

Published : Sep 8, 2023, 5:44 PM IST

Updated : Sep 8, 2023, 6:11 PM IST

ಸನಾತನ ಧರ್ಮ ವಿವಾದ ಕುರಿತು ನಟ ಚೇತನ್​ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Actor Chethan Kumar
ನಟ ಚೇತನ್
ನಟ ಚೇತನ್

ತುಮಕೂರು: ನಾನು ಸನಾತನ ಧರ್ಮದ ವಿರೋಧಿಯಲ್ಲ. ನಾನು ಧರ್ಮದಲ್ಲಿನ ಅಸಮಾನತೆಯ ವಿರೋಧಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ ಎಂದು ನಟ ಚೇತನ್ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಸಚಿವ ಉದಯನಿಧಿ ಸ್ಟಾಲಿನ್​ ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು ಎಂದು ತಿಳಿಸಿದರು.

''ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಮಾತನಾಡಿದವ್ರ ಮೇಲೆ ಎಫ್​ ಐ ಆರ್​ ಹಾಕಿಸಿ, ಕಪಾಳ ಮೋಕ್ಷ ಮಾಡಿಸಿ ಎಂದೆಲ್ಲಾ ಹೇಳೋದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸಚಿವ ಉದಯನಿಧಿ ಸ್ಟಾಲಿನ್​ ಅವರಿಗೂ ಇದೆ, ನಮ್ಮೆಲ್ಲರಿಗೂ ಇದೆ, ಕಾಂಗ್ರೆಸ್​ ಬಿಜೆಪಿಗೂ ಇದೆ. ಯಾರಿಗೇ ಆದರೂ ಯಾವುದೇ ಧರ್ಮವನ್ನು ಆಚರಿಸುವ ಹಕ್ಕಿದೆ. ಅದನ್ನು ಪೂಜಿಸುವ ಹಕ್ಕಿದೆ. ಆದ್ರೆ ಈ ಮೂರು ಧರ್ಮಗಳು ಅಸಮಾನತೆಯ ಸಿದ್ಧಾಂತಗಳು. ಶ್ರೇಣೀಕೃತ ಅಸಮಾನತೆ ಇದೆ. ನಮ್ಮ ದೇಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈವಿಧ್ಯತೆ ಹೆಚ್ಚಾದಷ್ಟು ಒಳ್ಳೆಯದೇ. ಆದ್ರೆ ಸದ್ಯ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಅಸಮಾನತೆಯನ್ನು ಹೋಗಲಾಡಿಸಬೇಕು'' - ನಟ ಚೇತನ್.​

ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ: ಇನ್ನೂ ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು ಎಂದರು. ಕಮ್ಯೂನಿಸ್ಟರು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದು ನಟ ಚೇತನ್​ ತಿಳಿಸಿದರು.

ಕಾಂಗ್ರೆಸ್​ ಗ್ಯಾರಂಟಿ ತೇಪೆ ಹಚ್ಚುವ ಕೆಲಸ: ಕಾಂಗ್ರೆಸ್​ನವರು ತಂದಿರುವ ಐದು ಗ್ಯಾರಂಟಿ ತೇಪೆ ಹಚ್ಚುವ ಕೆಲಸ. ಅದನ್ನು ದೇವರಾಜ್ ಅರಸರ ಆಡಳಿತಕ್ಕೆ ಹೋಲಿಸಬೇಡಿ. ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಸದ್ಯ ರೈತರ ಭೂಮಿಯನ್ನು ಮೈನಿಂಗ್​ಗೆ ಕೊಟ್ಟಿದ್ದಾರೆ. ಮೈನಿಂಗ್ ವಿರುದ್ಧವೇ 2010ರಲ್ಲಿ ಸಿದ್ದರಾಮಯ್ಯನವರೇ ಪಾದಯಾತ್ರೆ ಮಾಡಿದ್ರು. ಈ ರೀತಿಯಾಗಿ ಕಾಂಗ್ರೆಸ್ ಸರ್ಕಾರ ಅನೇಕ ವೈರುಧ್ಯಗಳಿಂದ ಕೂಡಿದ್ದು, ಕಾಂಗ್ರೆಸ್ ಪಕ್ಷದ ನೀತಿ ನಿಲುವುಗಳನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರಾವಣ, ಕಂಸನಿಂದ ಸನಾತನ ಧರ್ಮ ಅಳಿಸಲು ಸಾಧ್ಯವಾಗಿಲ್ಲ, ಅಧಿಕಾರ ದಾಹದ ಪರಾವಲಂಬಿಗಳಿಂದಲೂ ಧಕ್ಕೆಯಾಗದು: ಸಿಎಂ ಯೋಗಿ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್​ ಅವರು ಸನಾತನ ಧರ್ಮದ ಕುರಿತು ಹೇಳಿಕೆ ಕೊಟ್ಟಿದ್ದರು. ಸನಾತನ ಧರ್ಮ ಮಲೇರಿಯಾ, ಡೆಂಘಿ ಇದ್ದಂತೆ, ಹಾಗಾಗಿ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದು ಮಿಶ್ರ ಪ್ರತಿಕ್ರಿಯೆಗೂ ಕಾರಣವಾಗಿತ್ತು . ಉದಯನಿಧಿ ಸ್ಟಾಲಿನ್​ ಹೇಳಿಕೆ ದೇಶಾದ್ಯಂತ ಸಾಕಷ್ಟು ಟೀಕೆಗೆ ಗುರಿಯಾದ ಬಳಿಕವೂ ಇದನ್ನೇ ಮತ್ತೆ ಮತ್ತೆ ಹೇಳುವೆ ಎಂದು ಕೂಡ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಲೇ ಇದೆ. ಇದೀಗ ನಟ ಚೇತನ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಒಂದಿಬ್ಬರ ಹೇಳಿಕೆಗೆ ಮಹತ್ವಕೊಡುವುದು ಬೇಡ: ಸ್ಪೀಕರ್ ಯು ಟಿ ಖಾದರ್

ನಟ ಚೇತನ್

ತುಮಕೂರು: ನಾನು ಸನಾತನ ಧರ್ಮದ ವಿರೋಧಿಯಲ್ಲ. ನಾನು ಧರ್ಮದಲ್ಲಿನ ಅಸಮಾನತೆಯ ವಿರೋಧಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ ಎಂದು ನಟ ಚೇತನ್ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಸಚಿವ ಉದಯನಿಧಿ ಸ್ಟಾಲಿನ್​ ಅವರು ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು ಎಂದು ತಿಳಿಸಿದರು.

''ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಮಾತನಾಡಿದವ್ರ ಮೇಲೆ ಎಫ್​ ಐ ಆರ್​ ಹಾಕಿಸಿ, ಕಪಾಳ ಮೋಕ್ಷ ಮಾಡಿಸಿ ಎಂದೆಲ್ಲಾ ಹೇಳೋದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸಚಿವ ಉದಯನಿಧಿ ಸ್ಟಾಲಿನ್​ ಅವರಿಗೂ ಇದೆ, ನಮ್ಮೆಲ್ಲರಿಗೂ ಇದೆ, ಕಾಂಗ್ರೆಸ್​ ಬಿಜೆಪಿಗೂ ಇದೆ. ಯಾರಿಗೇ ಆದರೂ ಯಾವುದೇ ಧರ್ಮವನ್ನು ಆಚರಿಸುವ ಹಕ್ಕಿದೆ. ಅದನ್ನು ಪೂಜಿಸುವ ಹಕ್ಕಿದೆ. ಆದ್ರೆ ಈ ಮೂರು ಧರ್ಮಗಳು ಅಸಮಾನತೆಯ ಸಿದ್ಧಾಂತಗಳು. ಶ್ರೇಣೀಕೃತ ಅಸಮಾನತೆ ಇದೆ. ನಮ್ಮ ದೇಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈವಿಧ್ಯತೆ ಹೆಚ್ಚಾದಷ್ಟು ಒಳ್ಳೆಯದೇ. ಆದ್ರೆ ಸದ್ಯ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಅಸಮಾನತೆಯನ್ನು ಹೋಗಲಾಡಿಸಬೇಕು'' - ನಟ ಚೇತನ್.​

ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ: ಇನ್ನೂ ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆಗೆ ನನ್ನ ಸಹಮತ ಇದೆ. ಅದು ಸಮ ಸಮಾಜದ ಸಿವಿಲ್ ಕೋಡ್ ಆಗಿರಬೇಕು ಎಂದರು. ಕಮ್ಯೂನಿಸ್ಟರು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದು ನಟ ಚೇತನ್​ ತಿಳಿಸಿದರು.

ಕಾಂಗ್ರೆಸ್​ ಗ್ಯಾರಂಟಿ ತೇಪೆ ಹಚ್ಚುವ ಕೆಲಸ: ಕಾಂಗ್ರೆಸ್​ನವರು ತಂದಿರುವ ಐದು ಗ್ಯಾರಂಟಿ ತೇಪೆ ಹಚ್ಚುವ ಕೆಲಸ. ಅದನ್ನು ದೇವರಾಜ್ ಅರಸರ ಆಡಳಿತಕ್ಕೆ ಹೋಲಿಸಬೇಡಿ. ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಸದ್ಯ ರೈತರ ಭೂಮಿಯನ್ನು ಮೈನಿಂಗ್​ಗೆ ಕೊಟ್ಟಿದ್ದಾರೆ. ಮೈನಿಂಗ್ ವಿರುದ್ಧವೇ 2010ರಲ್ಲಿ ಸಿದ್ದರಾಮಯ್ಯನವರೇ ಪಾದಯಾತ್ರೆ ಮಾಡಿದ್ರು. ಈ ರೀತಿಯಾಗಿ ಕಾಂಗ್ರೆಸ್ ಸರ್ಕಾರ ಅನೇಕ ವೈರುಧ್ಯಗಳಿಂದ ಕೂಡಿದ್ದು, ಕಾಂಗ್ರೆಸ್ ಪಕ್ಷದ ನೀತಿ ನಿಲುವುಗಳನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರಾವಣ, ಕಂಸನಿಂದ ಸನಾತನ ಧರ್ಮ ಅಳಿಸಲು ಸಾಧ್ಯವಾಗಿಲ್ಲ, ಅಧಿಕಾರ ದಾಹದ ಪರಾವಲಂಬಿಗಳಿಂದಲೂ ಧಕ್ಕೆಯಾಗದು: ಸಿಎಂ ಯೋಗಿ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್​ ಅವರು ಸನಾತನ ಧರ್ಮದ ಕುರಿತು ಹೇಳಿಕೆ ಕೊಟ್ಟಿದ್ದರು. ಸನಾತನ ಧರ್ಮ ಮಲೇರಿಯಾ, ಡೆಂಘಿ ಇದ್ದಂತೆ, ಹಾಗಾಗಿ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದು ಮಿಶ್ರ ಪ್ರತಿಕ್ರಿಯೆಗೂ ಕಾರಣವಾಗಿತ್ತು . ಉದಯನಿಧಿ ಸ್ಟಾಲಿನ್​ ಹೇಳಿಕೆ ದೇಶಾದ್ಯಂತ ಸಾಕಷ್ಟು ಟೀಕೆಗೆ ಗುರಿಯಾದ ಬಳಿಕವೂ ಇದನ್ನೇ ಮತ್ತೆ ಮತ್ತೆ ಹೇಳುವೆ ಎಂದು ಕೂಡ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಲೇ ಇದೆ. ಇದೀಗ ನಟ ಚೇತನ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಒಂದಿಬ್ಬರ ಹೇಳಿಕೆಗೆ ಮಹತ್ವಕೊಡುವುದು ಬೇಡ: ಸ್ಪೀಕರ್ ಯು ಟಿ ಖಾದರ್

Last Updated : Sep 8, 2023, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.