ETV Bharat / state

ಯುವತಿಗೆ ವಿಷವುಣಿಸಿ ಕೊಲೆಗೆ ಯತ್ನಿಸಿದ ಯುವಕ: ಪೊಲೀಸರಿಗೆ ದೂರು ನೀಡಿದ ಪೋಷಕರು - Accused who poisoned a young woman and attempted murder in Tumkur

ಯುವಕನೊಬ್ಬ ತನ್ನ ಪ್ರೇಯಸಿಗೆ ವಿಷಕಾರಿ ವಸ್ತುವನ್ನು ತಿನ್ನಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿ ಬಂದಿದೆ.

a-young-man-who-poisoned-a-young-woman-and-attempted-murder-in-tumkur
ಯುವತಿಗೆ ವಿಷವುಣಿಸಿ ಕೊಲೆಗೆ ಯತ್ನಿಸಿದ ಯುವಕ
author img

By

Published : Feb 9, 2021, 10:53 PM IST

ತುಮಕೂರು: ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ವಿಷಕಾರಿ ವಸ್ತುವನ್ನು ತಿನ್ನಿಸಿ ಕೊಲೆ ಮಾಡಲು ಯತ್ನಿಸಿರುವ ಆರೋಪ ನಗರದಲ್ಲಿ ಕೇಳಿ ಬಂದಿದೆ.

ಕಾಜಲ್​(ಹೆಸರು ಬದಲಿಸಲಾಗಿದೆ) ಎಂಬ ಯುವತಿ ವಿಷ ಸೇವಿಸಿದ್ದು, ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ತುಮಕೂರಿನ ಗಿರಿನಗರ ಬಡಾವಣೆಯ ಸೈಮಾನ್ ಎಂಬಾತ ಮೂರು ವರ್ಷಗಳಿಂದ ತಮ್ಮ ಮಗಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆತ ಹಲವಾರು ಬಾರಿ ಗಲಾಟೆ ಮಾಡುವುದು ಮತ್ತು ಹಲ್ಲೆ ಮಾಡುವುದನ್ನು ಮುಂದುವರೆಸಿದ್ದ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದರೂ ಪ್ರಾಣಾಪಾಯದಿಂದ ಪಾರಾದ ಯುವಕ!

ಫೆಬ್ರವರಿ 5ರಂದು 3.40ರ ಸಮಯದಲ್ಲಿ ಸೈಮಾನ್ ಎಂಬಾತ ಮಗಳನ್ನು ಆತನ ಮನೆಗೆ ಕರೆಸಿಕೊಂಡಿದ್ದಾನೆ. ನಂತರ 4 ಗಂಟೆಗೆ ಮನೆಗೆ ಹಿಂದುರಿಗಿದ ಮಗಳು ನೇರವಾಗಿ ಕೊಠಡಿಯೊಳಗೆ ಹೋಗಿದ್ದಳು. ಅನುಮಾನಗೊಂಡು ಪರಿಶೀಲಿಸಿದಾಗ ಆಕೆಯ ಬಾಯಿಂದ ನೊರೆ ಬರುತ್ತಿತ್ತು. ನಂತರ ಕೊಠಡಿಯಲ್ಲಿ ಹುಡುಕಾಡಿದಾಗ ಯಾವುದೇ ವಿಷದ ಬಾಟಲಿ ಪತ್ತೆಯಾಗಲಿಲ್ಲ. ಹೀಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದಾರೆ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ತುಮಕೂರು: ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ವಿಷಕಾರಿ ವಸ್ತುವನ್ನು ತಿನ್ನಿಸಿ ಕೊಲೆ ಮಾಡಲು ಯತ್ನಿಸಿರುವ ಆರೋಪ ನಗರದಲ್ಲಿ ಕೇಳಿ ಬಂದಿದೆ.

ಕಾಜಲ್​(ಹೆಸರು ಬದಲಿಸಲಾಗಿದೆ) ಎಂಬ ಯುವತಿ ವಿಷ ಸೇವಿಸಿದ್ದು, ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ತುಮಕೂರಿನ ಗಿರಿನಗರ ಬಡಾವಣೆಯ ಸೈಮಾನ್ ಎಂಬಾತ ಮೂರು ವರ್ಷಗಳಿಂದ ತಮ್ಮ ಮಗಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆತ ಹಲವಾರು ಬಾರಿ ಗಲಾಟೆ ಮಾಡುವುದು ಮತ್ತು ಹಲ್ಲೆ ಮಾಡುವುದನ್ನು ಮುಂದುವರೆಸಿದ್ದ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದರೂ ಪ್ರಾಣಾಪಾಯದಿಂದ ಪಾರಾದ ಯುವಕ!

ಫೆಬ್ರವರಿ 5ರಂದು 3.40ರ ಸಮಯದಲ್ಲಿ ಸೈಮಾನ್ ಎಂಬಾತ ಮಗಳನ್ನು ಆತನ ಮನೆಗೆ ಕರೆಸಿಕೊಂಡಿದ್ದಾನೆ. ನಂತರ 4 ಗಂಟೆಗೆ ಮನೆಗೆ ಹಿಂದುರಿಗಿದ ಮಗಳು ನೇರವಾಗಿ ಕೊಠಡಿಯೊಳಗೆ ಹೋಗಿದ್ದಳು. ಅನುಮಾನಗೊಂಡು ಪರಿಶೀಲಿಸಿದಾಗ ಆಕೆಯ ಬಾಯಿಂದ ನೊರೆ ಬರುತ್ತಿತ್ತು. ನಂತರ ಕೊಠಡಿಯಲ್ಲಿ ಹುಡುಕಾಡಿದಾಗ ಯಾವುದೇ ವಿಷದ ಬಾಟಲಿ ಪತ್ತೆಯಾಗಲಿಲ್ಲ. ಹೀಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದಾರೆ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.