ETV Bharat / state

ಮಾಸ್ಕ್ ಧರಿಸುವ ವಿಚಾರದಲ್ಲಿ ಮಾಜಿ ಸೈನಿಕನ ಮೇಲೆ ಪೊಲೀಸರ ಹಲ್ಲೆ ಆರೋಪ! - ಮಾಜಿ ಯೋಧನ ಮೇಲೆ ಹಲ್ಲೆ

ದಾವಣಗೆರೆ ತಾಲೂಕಿನ ಆನಗೋಡು ಬಳಿ‌ ಕಳೆದ 26 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಬೆನ್ನಲ್ಲೇ ಮಾಜಿ ಸೈನಿಕ ವೀರಪ್ಪನವರ ಭುಜ ಹಾಗೂ ಕಾಲಿನ ಪಾದದ ಮೂಳೆ ಮುರಿದು ಹೋಗಿವೆ. ದಂಡ ಕಟ್ಟಿದ್ದಕ್ಕೆ ರಸೀದಿ ಕೇಳಿದ್ದಕ್ಕೆ ವೀರಪ್ಪ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿ ನಂತರ ರಸೀದಿ ಕೊಟ್ಟಿದ್ದಾರಂತೆ.

Davanagere police assault on ex soldier
Davanagere police assault on ex soldier
author img

By

Published : May 1, 2021, 7:04 PM IST

Updated : May 1, 2021, 10:24 PM IST

ದಾವಣಗೆರೆ: ಜಿಲ್ಲೆಯಲ್ಲಿ ಮಾಸ್ಕ್ ಧರಿಸುವ ವಿಚಾರವಾಗಿ ಪೊಲೀಸರು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಯೋಧ ಬಿ. ಎಸ್. ವೀರಪ್ಪ ಎಂಬುವರು ಮೇಲೆ ದಾವಣಗೆರೆ ಗ್ರಾಮಾಂತರ ಸರ್ಕಲ್ ಇನ್ಸ್​​​ಪೆಕ್ಟರ್ ನಿಂಗನಗೌಡ ನೆಗಳೂರು ಹಾಗು ನಾಲ್ಕು‌ ಜನ ಕಾನ್ಸ್​​​​​ಟೇಬಲ್​ ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಖದ್ದು ಆರೋಪ ಮಾಡಿದ್ದಾರೆ.

ರಸೀದಿ ಕೇಳಿದ್ದಕ್ಕೆ ವೀರಪ್ಪ ನವರ ಮೇಲೆ ಪೊಲೀಸರು ಹಲ್ಲೆ

ಮಾಸ್ಕ್ ಹಾಕಿಲ್ಲ ಎಂದು ಪೈನ್ ಹಾಕಿದ ಬಳಿಕ ನಂತರ ಮಾತಿಗೆ ಮಾತು ಬೆಳೆದು ರಶೀದಿ‌ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆಯಂತೆ. ದಾವಣಗೆರೆ ತಾಲೂಕಿನ ಆನಗೋಡು ಬಳಿ‌ ಕಳೆದ 26 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಬೆನ್ನಲ್ಲೇ ಮಾಜಿ ಸೈನಿಕ ವೀರಪ್ಪ ಅವರ ಭುಜ ಹಾಗೂ ಕಾಲಿನ ಪಾದದ ಮೂಳೆ ಮುರಿದು ಹೋಗಿವೆ. ದಂಡ ಕಟ್ಟಿದ್ದಕ್ಕೆ ರಸೀದಿ ಕೇಳಿದ್ದಕ್ಕೆ ವೀರಪ್ಪ ನವರ ಮೇಲೆ ಪೊಲೀಸರು ಹಲ್ಲೆ ನಡೆಸಿ ನಂತರ ರಸೀದಿ ಕೊಟ್ಟಿದ್ದಾರಂತೆ.

ಮಾಸ್ಕ್ ಧರಿಸುವ ವಿಚಾರದಲ್ಲಿ ಮಾಜಿ ಸೈನಿಕನ ಮೇಲೆ ಪೊಲೀಸರ ಹಲ್ಲೆ ಆರೋಪ
ಹಲ್ಲೆಗೊಳಗಾಗದ ವೀರಪ್ಪ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದ್ರೆ ಕೇಸ್ ರಿಜಿಸ್ಟರ್ ಮಾಡಿಕೊಳ್ಳದ ಐಜಿಪಿ, ಎಸ್ಪಿ ಭೇಟಿಗೂ ಅವಕಾಶ ನೀಡದೇ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಮಾಜಿ ಸೈನಿಕ ವೀರಪ್ಪನವರು ಮಾಧ್ಯಮಗಳ ಮುಂದೆ ಬಂದು ತಮ್ಮ ಅಳಲು ತೋಡಿಕೊಂಡರು. ಇನ್ನು ಜೀವನ ನಡೆಸುವುದು ಕಷ್ಟವಾಗಿದೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಸೈನಿಕರ ಸಂಘದ ಮೊರೆ ಹೋದ ವೀರಪ್ಪಪೋಲಿಸರಿಂದ ಹಲ್ಲೆಗೊಳಗಾದ ಮಾಜಿ ಸೈನಿಕ ವೀರಪ್ಪ ಮಾಜಿ ಸೈನಿಕರ ಸಂಘದ ಮೊರೆ ಹೋಗಿದ್ದು, ಮಾಜಿ ಸೈನಿಕರು ಇವರ ಬೆನ್ನಿಗೆ ನಿಂತಿದ್ದಾರೆ. ಹೈಕೋರ್ಟ್ ಮುಖಾಂತರ ಎಫ್ಐಆರ್ ಮಾಡಿಸಿ ಕಾನೂನಿನ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಎಸ್ಪಿ ಐಜಿಪಿ ಯವರ ಭೇಟಿಗೆ ನಿರಾಕರಿಸಿದ್ದರಿಂದ ಮಾಜಿ ಸೈನಿಕ ವೀರಪ್ಪ ಕೋರ್ಟ್ ಮುಖಾಂತರ ಹೋರಾಟ ಮಾಡಲು ಸಜ್ಜಾಗಿದ್ದಾರೆ.

ದಾವಣಗೆರೆ: ಜಿಲ್ಲೆಯಲ್ಲಿ ಮಾಸ್ಕ್ ಧರಿಸುವ ವಿಚಾರವಾಗಿ ಪೊಲೀಸರು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಯೋಧ ಬಿ. ಎಸ್. ವೀರಪ್ಪ ಎಂಬುವರು ಮೇಲೆ ದಾವಣಗೆರೆ ಗ್ರಾಮಾಂತರ ಸರ್ಕಲ್ ಇನ್ಸ್​​​ಪೆಕ್ಟರ್ ನಿಂಗನಗೌಡ ನೆಗಳೂರು ಹಾಗು ನಾಲ್ಕು‌ ಜನ ಕಾನ್ಸ್​​​​​ಟೇಬಲ್​ ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಖದ್ದು ಆರೋಪ ಮಾಡಿದ್ದಾರೆ.

ರಸೀದಿ ಕೇಳಿದ್ದಕ್ಕೆ ವೀರಪ್ಪ ನವರ ಮೇಲೆ ಪೊಲೀಸರು ಹಲ್ಲೆ

ಮಾಸ್ಕ್ ಹಾಕಿಲ್ಲ ಎಂದು ಪೈನ್ ಹಾಕಿದ ಬಳಿಕ ನಂತರ ಮಾತಿಗೆ ಮಾತು ಬೆಳೆದು ರಶೀದಿ‌ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆಯಂತೆ. ದಾವಣಗೆರೆ ತಾಲೂಕಿನ ಆನಗೋಡು ಬಳಿ‌ ಕಳೆದ 26 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಬೆನ್ನಲ್ಲೇ ಮಾಜಿ ಸೈನಿಕ ವೀರಪ್ಪ ಅವರ ಭುಜ ಹಾಗೂ ಕಾಲಿನ ಪಾದದ ಮೂಳೆ ಮುರಿದು ಹೋಗಿವೆ. ದಂಡ ಕಟ್ಟಿದ್ದಕ್ಕೆ ರಸೀದಿ ಕೇಳಿದ್ದಕ್ಕೆ ವೀರಪ್ಪ ನವರ ಮೇಲೆ ಪೊಲೀಸರು ಹಲ್ಲೆ ನಡೆಸಿ ನಂತರ ರಸೀದಿ ಕೊಟ್ಟಿದ್ದಾರಂತೆ.

ಮಾಸ್ಕ್ ಧರಿಸುವ ವಿಚಾರದಲ್ಲಿ ಮಾಜಿ ಸೈನಿಕನ ಮೇಲೆ ಪೊಲೀಸರ ಹಲ್ಲೆ ಆರೋಪ
ಹಲ್ಲೆಗೊಳಗಾಗದ ವೀರಪ್ಪ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದ್ರೆ ಕೇಸ್ ರಿಜಿಸ್ಟರ್ ಮಾಡಿಕೊಳ್ಳದ ಐಜಿಪಿ, ಎಸ್ಪಿ ಭೇಟಿಗೂ ಅವಕಾಶ ನೀಡದೇ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಮಾಜಿ ಸೈನಿಕ ವೀರಪ್ಪನವರು ಮಾಧ್ಯಮಗಳ ಮುಂದೆ ಬಂದು ತಮ್ಮ ಅಳಲು ತೋಡಿಕೊಂಡರು. ಇನ್ನು ಜೀವನ ನಡೆಸುವುದು ಕಷ್ಟವಾಗಿದೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಸೈನಿಕರ ಸಂಘದ ಮೊರೆ ಹೋದ ವೀರಪ್ಪಪೋಲಿಸರಿಂದ ಹಲ್ಲೆಗೊಳಗಾದ ಮಾಜಿ ಸೈನಿಕ ವೀರಪ್ಪ ಮಾಜಿ ಸೈನಿಕರ ಸಂಘದ ಮೊರೆ ಹೋಗಿದ್ದು, ಮಾಜಿ ಸೈನಿಕರು ಇವರ ಬೆನ್ನಿಗೆ ನಿಂತಿದ್ದಾರೆ. ಹೈಕೋರ್ಟ್ ಮುಖಾಂತರ ಎಫ್ಐಆರ್ ಮಾಡಿಸಿ ಕಾನೂನಿನ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಎಸ್ಪಿ ಐಜಿಪಿ ಯವರ ಭೇಟಿಗೆ ನಿರಾಕರಿಸಿದ್ದರಿಂದ ಮಾಜಿ ಸೈನಿಕ ವೀರಪ್ಪ ಕೋರ್ಟ್ ಮುಖಾಂತರ ಹೋರಾಟ ಮಾಡಲು ಸಜ್ಜಾಗಿದ್ದಾರೆ.
Last Updated : May 1, 2021, 10:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.