ETV Bharat / state

ಶಿವಮೊಗ್ಗ: ಅಪರಿಚಿತ ವಾಹನ ಡಿಕ್ಕಿ, ಉದಯೋನ್ಮುಖ ಕ್ರಿಕೆಟರ್ ಸ್ಥಳದಲ್ಲೇ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಉದಯೋನ್ಮುಖ ಕ್ರಿಕೆಟರ್ ಮೃತಪಟ್ಟಿದ್ದಾರೆ.

author img

By

Published : Dec 30, 2021, 10:05 PM IST

Updated : Dec 30, 2021, 10:53 PM IST

young cricketer died in accident
ಉದಯೋನ್ಮುಖ ಕ್ರಿಕೆಟಿಗ ಸಾವು

ಶಿವಮೊಗ್ಗ: ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲೆಯ ಸೊರಬ ತಾಲೂಕಿನ ಉದಯೋನ್ಮುಖ ಕ್ರಿಕೆಟರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನವಟ್ಟಿ ಪಟ್ಟಣದ ಚಾಮರಾಜ ಬಡಾವಣೆಯ ತರುಣ್ (18) ಮೃತ ಕ್ರಿಕೆಟರ್​.

ಸೊರಬ ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಆನವಟ್ಟಿಯಿಂದ ಶಿರಾಳಕೊಪ್ಪ ಮಾರ್ಗವಾಗಿ ತರುಣ್​ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

young cricketer died in accident
ಉದಯೋನ್ಮುಖ ಕ್ರಿಕೆಟಿಗ ತರುಣ್ ಸಾವು

ತರುಣ್ ಆನವಟ್ಟಿಯ ಭವಾನಿ ಹಾರ್ಡ್ ವೇರ್ ಮಾಲೀಕರ ಪುತ್ರನಾಗಿದ್ದು, ಉದಯೋನ್ಮುಖ ಕ್ರಿಕೆಟ್ ಆಟಗಾರನಾಗಿದ್ದರು.

ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ: ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲೆಯ ಸೊರಬ ತಾಲೂಕಿನ ಉದಯೋನ್ಮುಖ ಕ್ರಿಕೆಟರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನವಟ್ಟಿ ಪಟ್ಟಣದ ಚಾಮರಾಜ ಬಡಾವಣೆಯ ತರುಣ್ (18) ಮೃತ ಕ್ರಿಕೆಟರ್​.

ಸೊರಬ ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಆನವಟ್ಟಿಯಿಂದ ಶಿರಾಳಕೊಪ್ಪ ಮಾರ್ಗವಾಗಿ ತರುಣ್​ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

young cricketer died in accident
ಉದಯೋನ್ಮುಖ ಕ್ರಿಕೆಟಿಗ ತರುಣ್ ಸಾವು

ತರುಣ್ ಆನವಟ್ಟಿಯ ಭವಾನಿ ಹಾರ್ಡ್ ವೇರ್ ಮಾಲೀಕರ ಪುತ್ರನಾಗಿದ್ದು, ಉದಯೋನ್ಮುಖ ಕ್ರಿಕೆಟ್ ಆಟಗಾರನಾಗಿದ್ದರು.

ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Dec 30, 2021, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.