ETV Bharat / state

ಅಭಯಾರಣ್ಯದಲ್ಲಿ 3.50 ಲಕ್ಷ ಮೌಲ್ಯದ ಮರಗಳ ಕಳ್ಳತನ : ಇಬ್ಬರ ಬಂಧನ - ಶಿವಮೊಗ್ಗದ ಅರಣ್ಯದಲ್ಲಿ ಮರಗಳ ಕಡಿತಲೆ

ನಾಗರಾಜ್​ಗೆ ಅರಣ್ಯ ಇಲಾಖೆಯ ಸಹಾಯವಿಲ್ಲದೇ ಈ ಕೃತ್ಯ ಮಾಡಲು ಆಗುವುದಿಲ್ಲ ಎಂದು ತಿಳಿದಿರುವ ವನ್ಯಜೀವಿ ವಿಭಾಗದ ಡಿಎಫ್​ಓ ಐ. ಎಂ ನಾಗರಾಜ್ ತಮ್ಮ ಸಿಬ್ಬಂದಿ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಕೃತ್ಯಕ್ಕೆ ದಿನಗೂಲಿ ನೌಕರರು ಸಹಾಯವಿಲ್ಲದೇ ಮಾಡಲು ಸಾಧ್ಯವಿಲ್ಲ. ನಮಗೆ ಎಲ್ಲ ಸಿಬ್ಬಂದಿ ಇದ್ದು, ಚೆಕ್ ಪೋಸ್ಟ್​ಗಳಿದ್ರೂ ಸಹ ಇಷ್ಟೊಂದು ಅರಣ್ಯ ಲೂಟಿ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

two-accused-arrest-for-allegation-of-tree-cutting-in-shivamogga
ಕಡಿದ ಮರಗಳನ್ನು ವಶಕ್ಕೆ ಪಡೆದಿರುವುದು
author img

By

Published : Apr 1, 2022, 7:19 PM IST

ಶಿವಮೊಗ್ಗ: ಹಣಗೆರೆ ಅಭಯಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಮಾಡಿದ್ದ ಇಬ್ಬರನ್ನು ಬಂಧಿಸಿ ಅವರಿಂದ 3.50 ಲಕ್ಷ ರೂ. ಮೌಲ್ಯದ ಮರಗಳನ್ನು ಶಿವಮೊಗ್ಗ ವಲಯ ವನ್ಯಜೀವಿ ವಿಭಾಗಾಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ. ಹಣಗೆರೆ ಅರಣ್ಯ ಪ್ರದೇಶವು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ.

ಡಿಎಫ್​ಓ ಐ. ಎಂ ನಾಗರಾಜ್ ಮಾತನಾಡಿದರು

ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಬಳಿಯ ರಸ್ತೆ ಪಕ್ಕದಲ್ಲಿನ ಅರಣ್ಯ ಪ್ರದೇಶದ ಮರಗಳನ್ನು ಕಡಿಯಲಾಗಿತ್ತು. ಆಡಿನಕೊಟ್ಟಿಗೆ ಬಳಿ ಕಡಿತಲೆ ಮಾಡಿದ ಮರಗಳನ್ನು ಸಾಗರ ಪಟ್ಟಣಕ್ಕೆ ರವಾನೆ ಮಾಡಿ, ಅಲ್ಲಿನ ಸಾಮಿಲ್​ನಲ್ಲಿ ಮರಗಳನ್ನು ನಾಟವನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಸಾಗರದ ಸಾಮಿಲ್​ನಿಂದ ಶಿವಮೊಗ್ಗದ ವೆಂಕಟೇಶ್ ನಗರದ ಕಾಶಿನಾಥ್ ಕಲಾಮಂದಿರದಲ್ಲಿ ಸಂಗ್ರಹಿಸಲಾಗಿತ್ತು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಣಗೆರೆಕಟ್ಟೆ ಅರಣ್ಯ ವಿಭಾಗದ ಆರ್​ಎಫ್​ಓ ಜಗದೀಶ್ ಅವರು ತಮ್ಮ ತಂಡದೊಂದಿಗೆ ದಾಳಿ ನಡೆಸಿ ಮರ ಹಾಗೂ ಸಂಗ್ರಹಿಸಿಟ್ಟಿದ್ದ ರೇವಣಪ್ಪ ಹಾಗೂ ನಿಂಗೋಜಿರಾವ್ ಎಂಬುವರನ್ನು ಬಂಧಿಸಲಾಗಿದೆ. ನಾಗರಾಜ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ನಾಗರಾಜ್ ಮರಗಳ್ಳನಾಗಿದ್ದು, ಈತ ಮರಗಳನ್ನು ಕಡಿದು ಸಾಗಿಸಿ, ನಾಟವನ್ನಾಗಿ ಮಾಡಿದ್ದಾನೆ.

ನಾಗರಾಜ್​ಗೆ ಅರಣ್ಯ ಇಲಾಖೆಯ ಸಹಾಯವಿಲ್ಲದೇ ಈ ಕೃತ್ಯ ಮಾಡಲು ಆಗುವುದಿಲ್ಲ ಎಂದು ತಿಳಿದಿರುವ ವನ್ಯಜೀವಿ ವಿಭಾಗದ ಡಿಎಫ್​ಓ ಐ. ಎಂ ನಾಗರಾಜ್ ತಮ್ಮ ಸಿಬ್ಬಂದಿ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಇಂದು ಕೇವಲ ಮರವನ್ನು ಕಡಿತಲೆ ಮಾಡಿದಕ್ಕೆ ಮಾತ್ರವಲ್ಲ ಮರಕಡಿತಲೆ ಮಾಡಿದ್ದರಿಂದ ಪರಿಸರಕ್ಕೆ ಆಗುವ ನಷ್ಟವನ್ನು ಪರಿಗಣಿಸಲಾಗುವುದು ಎಂದು ವನ್ಯಜೀವಿ ವಿಭಾಗದ ಡಿಎಫ್ಓ ಐ. ಎಂ ನಾಗರಾಜ್ ತಿಳಿಸಿದ್ದಾರೆ.

ಓದಿ: ತುಮಕೂರು: ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಅಮಿತ್ ಶಾ

ಶಿವಮೊಗ್ಗ: ಹಣಗೆರೆ ಅಭಯಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಮಾಡಿದ್ದ ಇಬ್ಬರನ್ನು ಬಂಧಿಸಿ ಅವರಿಂದ 3.50 ಲಕ್ಷ ರೂ. ಮೌಲ್ಯದ ಮರಗಳನ್ನು ಶಿವಮೊಗ್ಗ ವಲಯ ವನ್ಯಜೀವಿ ವಿಭಾಗಾಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ. ಹಣಗೆರೆ ಅರಣ್ಯ ಪ್ರದೇಶವು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ.

ಡಿಎಫ್​ಓ ಐ. ಎಂ ನಾಗರಾಜ್ ಮಾತನಾಡಿದರು

ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಬಳಿಯ ರಸ್ತೆ ಪಕ್ಕದಲ್ಲಿನ ಅರಣ್ಯ ಪ್ರದೇಶದ ಮರಗಳನ್ನು ಕಡಿಯಲಾಗಿತ್ತು. ಆಡಿನಕೊಟ್ಟಿಗೆ ಬಳಿ ಕಡಿತಲೆ ಮಾಡಿದ ಮರಗಳನ್ನು ಸಾಗರ ಪಟ್ಟಣಕ್ಕೆ ರವಾನೆ ಮಾಡಿ, ಅಲ್ಲಿನ ಸಾಮಿಲ್​ನಲ್ಲಿ ಮರಗಳನ್ನು ನಾಟವನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಸಾಗರದ ಸಾಮಿಲ್​ನಿಂದ ಶಿವಮೊಗ್ಗದ ವೆಂಕಟೇಶ್ ನಗರದ ಕಾಶಿನಾಥ್ ಕಲಾಮಂದಿರದಲ್ಲಿ ಸಂಗ್ರಹಿಸಲಾಗಿತ್ತು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಣಗೆರೆಕಟ್ಟೆ ಅರಣ್ಯ ವಿಭಾಗದ ಆರ್​ಎಫ್​ಓ ಜಗದೀಶ್ ಅವರು ತಮ್ಮ ತಂಡದೊಂದಿಗೆ ದಾಳಿ ನಡೆಸಿ ಮರ ಹಾಗೂ ಸಂಗ್ರಹಿಸಿಟ್ಟಿದ್ದ ರೇವಣಪ್ಪ ಹಾಗೂ ನಿಂಗೋಜಿರಾವ್ ಎಂಬುವರನ್ನು ಬಂಧಿಸಲಾಗಿದೆ. ನಾಗರಾಜ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ನಾಗರಾಜ್ ಮರಗಳ್ಳನಾಗಿದ್ದು, ಈತ ಮರಗಳನ್ನು ಕಡಿದು ಸಾಗಿಸಿ, ನಾಟವನ್ನಾಗಿ ಮಾಡಿದ್ದಾನೆ.

ನಾಗರಾಜ್​ಗೆ ಅರಣ್ಯ ಇಲಾಖೆಯ ಸಹಾಯವಿಲ್ಲದೇ ಈ ಕೃತ್ಯ ಮಾಡಲು ಆಗುವುದಿಲ್ಲ ಎಂದು ತಿಳಿದಿರುವ ವನ್ಯಜೀವಿ ವಿಭಾಗದ ಡಿಎಫ್​ಓ ಐ. ಎಂ ನಾಗರಾಜ್ ತಮ್ಮ ಸಿಬ್ಬಂದಿ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಇಂದು ಕೇವಲ ಮರವನ್ನು ಕಡಿತಲೆ ಮಾಡಿದಕ್ಕೆ ಮಾತ್ರವಲ್ಲ ಮರಕಡಿತಲೆ ಮಾಡಿದ್ದರಿಂದ ಪರಿಸರಕ್ಕೆ ಆಗುವ ನಷ್ಟವನ್ನು ಪರಿಗಣಿಸಲಾಗುವುದು ಎಂದು ವನ್ಯಜೀವಿ ವಿಭಾಗದ ಡಿಎಫ್ಓ ಐ. ಎಂ ನಾಗರಾಜ್ ತಿಳಿಸಿದ್ದಾರೆ.

ಓದಿ: ತುಮಕೂರು: ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಅಮಿತ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.