ETV Bharat / state

ಶೂಟಿಂಗ್​ನಲ್ಲಿ ಭಾಗವಹಿಸಿದ್ದ ಸಕ್ರೆಬೈಲಿನ ಆನೆ ದಿಢೀರ್​ ಸಾವು... ಕಾರಣ ನಿಗೂಢ..! - ಶಿವಮೊಗ್ಗ ಸುದ್ದಿ

ರಾಜ್ಯದ ಪ್ರಸಿದ್ಧ ಆನೆ ಬಿಡಾರಗಳಲ್ಲಿ ಒಂದಾಗಿರುವ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಾವು ಮುಂದುವರೆದಿದೆ. ಇಲ್ಲಿನ ಅಂದಾಜು 30 ವರ್ಷದ ನಾಗಣ್ಣ ಎಂಬ ಆನೆ ಸಕ್ರೆಬೈಲು ಆನೆ ಬಿಡಾರದ ಬಳಿಯ ಅರಣ್ಯದಲ್ಲಿ ಇಂದು ಮೃತಪಟ್ಟಿದೆ.

ಸಕ್ರೆಬೈಲಿನಲ್ಲಿ ಮುಂದುವರೆದ ಆನೆಗಳ ಸಾವು
author img

By

Published : Aug 23, 2019, 10:50 PM IST

ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಾವು ಮುಂದುವರೆದಿದೆ. ಇಲ್ಲಿನ ಅಂದಾಜು 30 ವರ್ಷದ ನಾಗಣ್ಣ ಎಂಬ ಆನೆ ಸಕ್ರೆಬೈಲು ಆನೆ ಬಿಡಾರದ ಬಳಿಯ ಅರಣ್ಯದಲ್ಲಿ ಇಂದು ಸಾವನ್ನಪ್ಪಿದೆ.

ಸಕ್ರೆಬೈಲಿನಲ್ಲಿ ಮುಂದುವರೆದ ಆನೆಗಳ ಸಾವು

ನಾಗಣ್ಣ ಆನೆಯನ್ನು ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು ತರಲಾಗಿತ್ತು. ಇದನ್ನು ತಂದು ಸುಮಾರು 6 ತಿಂಗಳ ಕಾಲ ತರಬೇತಿ ನೀಡಿ ಪಳಗಿಸಲಾಗಿತ್ತು. ಮೃತ ಆನೆಯನ್ನು ಕುದರತ್ ಪಾಷ ಎಂಬ ಮಾವುತ ನೋಡಿಕೊಳ್ಳುತ್ತಿದ್ದ.

ನಾಗಣ್ಣ ಆನೆ ನಿನ್ನೆಯವರೆಗೂ ಆಯುಷ್ಮಾನಭವ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿತ್ತು. ಇಂದು ಬೆಳಗ್ಗೆ ಆಹಾರ ಸೇವಿಸದ ಕಾರಣ ಆನೆಗೆ ಹೊಟ್ಟೆ ನೋವು ಇರಬಹುದು ಎಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆಹಾರ ಸೇವಿಸದೆ ಕೇವಲ ನೀರನ್ನು ಮಾತ್ರ ಕುಡಿದಿತ್ತು.

ಆನೆ ಬಿಡಾರದ ವೈದ್ಯ ವಿನಯ್ ಚಿಕಿತ್ಸೆ ನೀಡುತ್ತಿದ್ದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವನ್ನಪ್ಪಿದೆ. ಕಳೆದ ಎರಡು ವರ್ಷಗಳಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಎರಡು ಮರಿಯಾನೆಗಳು ಸೇರಿದಂತೆ ಕಾಡಿನಲ್ಲಿ ಸೆರೆ ಹಿಡಿದಿದ್ದ ಮೂರಕ್ಕೂ ಹೆಚ್ಚು ದೊಡ್ಡ ಆನೆಗಳು ಸಾವನ್ನಪ್ಪಿವೆ. ಇವುಗಳ ಸಾವಿಗೆ ವನ್ಯಜೀವಿ ವಿಭಾಗ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.

ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಾವು ಮುಂದುವರೆದಿದೆ. ಇಲ್ಲಿನ ಅಂದಾಜು 30 ವರ್ಷದ ನಾಗಣ್ಣ ಎಂಬ ಆನೆ ಸಕ್ರೆಬೈಲು ಆನೆ ಬಿಡಾರದ ಬಳಿಯ ಅರಣ್ಯದಲ್ಲಿ ಇಂದು ಸಾವನ್ನಪ್ಪಿದೆ.

ಸಕ್ರೆಬೈಲಿನಲ್ಲಿ ಮುಂದುವರೆದ ಆನೆಗಳ ಸಾವು

ನಾಗಣ್ಣ ಆನೆಯನ್ನು ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು ತರಲಾಗಿತ್ತು. ಇದನ್ನು ತಂದು ಸುಮಾರು 6 ತಿಂಗಳ ಕಾಲ ತರಬೇತಿ ನೀಡಿ ಪಳಗಿಸಲಾಗಿತ್ತು. ಮೃತ ಆನೆಯನ್ನು ಕುದರತ್ ಪಾಷ ಎಂಬ ಮಾವುತ ನೋಡಿಕೊಳ್ಳುತ್ತಿದ್ದ.

ನಾಗಣ್ಣ ಆನೆ ನಿನ್ನೆಯವರೆಗೂ ಆಯುಷ್ಮಾನಭವ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿತ್ತು. ಇಂದು ಬೆಳಗ್ಗೆ ಆಹಾರ ಸೇವಿಸದ ಕಾರಣ ಆನೆಗೆ ಹೊಟ್ಟೆ ನೋವು ಇರಬಹುದು ಎಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆಹಾರ ಸೇವಿಸದೆ ಕೇವಲ ನೀರನ್ನು ಮಾತ್ರ ಕುಡಿದಿತ್ತು.

ಆನೆ ಬಿಡಾರದ ವೈದ್ಯ ವಿನಯ್ ಚಿಕಿತ್ಸೆ ನೀಡುತ್ತಿದ್ದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವನ್ನಪ್ಪಿದೆ. ಕಳೆದ ಎರಡು ವರ್ಷಗಳಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಎರಡು ಮರಿಯಾನೆಗಳು ಸೇರಿದಂತೆ ಕಾಡಿನಲ್ಲಿ ಸೆರೆ ಹಿಡಿದಿದ್ದ ಮೂರಕ್ಕೂ ಹೆಚ್ಚು ದೊಡ್ಡ ಆನೆಗಳು ಸಾವನ್ನಪ್ಪಿವೆ. ಇವುಗಳ ಸಾವಿಗೆ ವನ್ಯಜೀವಿ ವಿಭಾಗ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.

Intro:ಸಕ್ರೆಬೈಲಿನಲ್ಲಿ ಮುಂದುವರೆದ ಆನೆಗಳ ಸಾವು.

ಶಿವಮೊಗ್ಗ: ರಾಜ್ಯದ ಪ್ರಸಿದ್ದ ಆನೆ ಬಿಡಾರಗಳಲ್ಲಿ ಒಂದಾದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಾವು ಮುಂದುವರೆದಿದೆ. ಸಕ್ರೆಬೈಲಿನ ಅಂದಾಜು 30 ವರ್ಷದ ನಾಗಣ್ಣ ಎಂಬ ಆನೆ ಸಕ್ರೆಬೈಲು ಆನೆ ಬಿಡಾರದ ಬಳಿಯ ಅರಣ್ಯದಲ್ಲಿ ಸಾವನ್ನಪ್ಪಿದೆ. ನಾಗಣ್ಣ ಆನೆಯನ್ನು ಕಳೆದ ಎರಡು ವರ್ಷದ ಹಿಂದೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು ತರಲಾಗಿತ್ತು.Body: ಇದನ್ನು ಸಕ್ರೆಬೈಲಿಗೆ ತಂದು ಸುಮಾರು 6 ತಿಂಗಳ ಕಾಲ ತರಬೇತಿ ನೀಡಿ ಪಳಗಿಸಲಾಗಿತ್ತು. ಮೃತ ಆನೆಯನ್ನು ಕುದರತ್ ಪಾಷ ಎಂಬ ಮಾವುತ ಆನೆಯನ್ನು ನೋಡಿ ಕೊಳ್ಳುತ್ತಿದ್ದ. ನಾಗಣ್ಣ ಆನೆ ನಿನ್ನೆಯವರೆಗೂ ಆಯುಷ್ಮಾನಭವ್ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿತ್ತು. ಇಂದು ಬೆಳಗ್ಗೆ ಆಹಾರ ಸೇವಿಸದ ಕಾರಣ ಆನೆಗೆ ಹೊಟ್ಟೆ ನೋವು ಇರಬಹುದು ಎಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆಹಾರ ಸೇವಿಸದೆ ಕೇವಲ ನೀರು ಕುಡಿಯುತಿತ್ತು. Conclusion: ಆನೆ ಬಿಡಾರದ ಡಾ. ವಿನಯ್ ಚಿಕಿತ್ಸೆ ನೀಡುತ್ತಿದ್ದರು. ಆನೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವನ್ನಪ್ಪಿದೆ. ಕಳೆದ ಎರಡು ವರ್ಷಗಳಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಎರಡು ಮರಿಯಾನೆಗಳು ಸೇರಿದಂತೆ ಕಾಡಿನಲ್ಲಿ ಸೆರೆ ಹಿಡಿದಿದ್ದ ಮೂರಕ್ಕೂ ಹೆಚ್ಚು ದೊಡ್ಡ ಆನೆಗಳು ಸಾವನ್ನಪ್ಪಿವೆ. ಆನೆಗಳ ಸಾವಿಗೆ ವನ್ಯಜೀವಿ ವಿಭಾಗ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.