ETV Bharat / state

ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವ ವೇಳೆ ಶಿಕ್ಷಕ ಹೃದಯಾಘಾತದಿಂದ ಸಾವು

author img

By

Published : Jul 15, 2020, 2:52 PM IST

Updated : Jul 15, 2020, 4:07 PM IST

teacher died
ಶಿಕ್ಷಕ ಸಾವು

14:44 July 15

ಹೃದಯಾಘಾತದಿಂದ ಶಿಕ್ಷಕ ಸಾವು

ಶಿಕ್ಷಕ ಸಾವು

ಶಿವಮೊಗ್ಗ: ಎಸ್ಎಸ್ಎಲ್​​ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕನೋರ್ವ ಮೌಲ್ಯ‌ಮಾಪನ ಕೇಂದ್ರದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಇಲ್ಲಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಮೌಲ್ಯ ಮಾಪನ ಮಾಡುತ್ತಿದ್ದ ಶಿಕ್ಷಕ‌ ಕುಮಾರ್(48) ವರ್ಷ ಸಾವನ್ನಪ್ಪಿದ್ದು, ಭದ್ರಾವತಿಯ ಜನ್ನಾಪುರದ ಕುಮದ್ವತಿ ಪ್ರೌಢಶಾಲೆಯ ಶಿಕ್ಷಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. 

ಇಂದು ಬೆಳಗ್ಗೆ ಅವಧಿಯ ಮೌಲ್ಯಮಾಪನ ಮುಗಿಸಿ, ಊಟಕ್ಕೆ ಹೊರಡಲು ಸಿದ್ದವಾಗಿ ಎದ್ದು ಹೋದಾಗ ದಿಢೀರ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಶಿಕ್ಷಕರ ಸಾವಿಗೆ ಸಹದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸದ್ಯಕ್ಕೆ ಶವವನ್ನು ಮೆಗ್ಗಾನ್​​ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಆಸ್ಪತ್ರೆಗೆ ಡಿಡಿಪಿಐ ರಮೇಶ್​ ಭೇಟಿ ನೀಡಿದ್ದಾರೆ. 

14:44 July 15

ಹೃದಯಾಘಾತದಿಂದ ಶಿಕ್ಷಕ ಸಾವು

ಶಿಕ್ಷಕ ಸಾವು

ಶಿವಮೊಗ್ಗ: ಎಸ್ಎಸ್ಎಲ್​​ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕನೋರ್ವ ಮೌಲ್ಯ‌ಮಾಪನ ಕೇಂದ್ರದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಇಲ್ಲಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಮೌಲ್ಯ ಮಾಪನ ಮಾಡುತ್ತಿದ್ದ ಶಿಕ್ಷಕ‌ ಕುಮಾರ್(48) ವರ್ಷ ಸಾವನ್ನಪ್ಪಿದ್ದು, ಭದ್ರಾವತಿಯ ಜನ್ನಾಪುರದ ಕುಮದ್ವತಿ ಪ್ರೌಢಶಾಲೆಯ ಶಿಕ್ಷಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. 

ಇಂದು ಬೆಳಗ್ಗೆ ಅವಧಿಯ ಮೌಲ್ಯಮಾಪನ ಮುಗಿಸಿ, ಊಟಕ್ಕೆ ಹೊರಡಲು ಸಿದ್ದವಾಗಿ ಎದ್ದು ಹೋದಾಗ ದಿಢೀರ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಶಿಕ್ಷಕರ ಸಾವಿಗೆ ಸಹದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸದ್ಯಕ್ಕೆ ಶವವನ್ನು ಮೆಗ್ಗಾನ್​​ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಆಸ್ಪತ್ರೆಗೆ ಡಿಡಿಪಿಐ ರಮೇಶ್​ ಭೇಟಿ ನೀಡಿದ್ದಾರೆ. 

Last Updated : Jul 15, 2020, 4:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.