ETV Bharat / state

ಅರಳಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ : ಗ್ರಾಪಂ ಸದಸ್ಯ ಬಲಿ

author img

By

Published : May 3, 2022, 4:48 PM IST

ಅರಳಗೋಡು ಗ್ರಾಮದಲ್ಲಿ ಮಂಗನ ಕಾಯಿಲೆಗೆ ಒಬ್ಬರು ಮೃತ ಪಟ್ಟಿದ್ದಾರೆ. 2019-20ರಲ್ಲಿ ಅರಳಗೋಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿಯೇ ಸುಮಾರು 23 ಜನ ಮಂಗನಕಾಯಿಲೆಗೆ ಬಲಿಯಾಗಿದ್ದರು. ಇಷ್ಟಾದರೂ ಜಿಲ್ಲಾ ಆರೋಗ್ಯ ಇಲಾಖೆ ಚುಚ್ಚು ಮದ್ದು ನೀಡುವಲ್ಲಿ ವಿಫಲವಾಗಿದೆ..

monkey fever gram panchayat member died in sagar taluk in shivamogga
ಅರಳಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ

ಶಿವಮೊಗ್ಗ: ಅರಳಗೋಡು ಗ್ರಾಮದಲ್ಲಿ ಮತ್ತೆ ಮಂಗನಕಾಯಿಲೆ ಕಾಣಿಸಿದೆ. ಮಂಗನಕಾಯಿಲೆಯಿಂದ ಅರಳಗೋಡು ಗ್ರಾಪಂ ಸದಸ್ಯ ರಾಮಸ್ವಾಮಿ ಕರುಮನೆ(55) ಸಾವನ್ನಪ್ಪಿದ್ದಾರೆ. ರಾಮಸ್ವಾಮಿ ಅವರಿಗೆ ಏಪ್ರಿಲ್ 24ರಂದು ಜ್ವರ ಕಾಣಿಸಿತ್ತು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಸಾಗರ ಆಸ್ಪತ್ರೆಯಲ್ಲಿ ಜ್ವರ ಗುಣಮುಖವಾಗದ ಕಾರಣ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಏಪ್ರಿಲ್ 26ರಂದು ದಾಖಲಾಗಿದ್ದರು. ಅಲ್ಲಿ ರಾಮಸ್ವಾಮಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಣಿಪಾಲದಲ್ಲಿ ಸ್ವಲ್ಪ ಕೊಂಚ ಚೇತರಿಕೆ ಕಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

monkey fever gram panchayat member died in sagar taluk in shivamogga
ಮೃತ ಗ್ರಾಪಂ ಸದಸ್ಯ ರಾಮಸ್ವಾಮಿ ಕರುಮನೆ

2019-20ರಲ್ಲಿ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿಯೇ ಸುಮಾರು 23 ಜನ ಮಂಗನಕಾಯಿಲೆಗೆ ಬಲಿಯಾಗಿದ್ದರು. ಸರ್ಕಾರ ಮೃತರಿಗೆ ಪರಿಹಾರವನ್ನು ಸಹ ನೀಡಿದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆಯು ಕೆಎಫ್​ಡಿಗೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ತೋರಿತೆ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಬಸವಣ್ಣನ ಆದರ್ಶಗಳ‌ ಪಾಲನೆ ಅಗತ್ಯ: ಅಬಕಾರಿ ಸಚಿವ

ಶಿವಮೊಗ್ಗ: ಅರಳಗೋಡು ಗ್ರಾಮದಲ್ಲಿ ಮತ್ತೆ ಮಂಗನಕಾಯಿಲೆ ಕಾಣಿಸಿದೆ. ಮಂಗನಕಾಯಿಲೆಯಿಂದ ಅರಳಗೋಡು ಗ್ರಾಪಂ ಸದಸ್ಯ ರಾಮಸ್ವಾಮಿ ಕರುಮನೆ(55) ಸಾವನ್ನಪ್ಪಿದ್ದಾರೆ. ರಾಮಸ್ವಾಮಿ ಅವರಿಗೆ ಏಪ್ರಿಲ್ 24ರಂದು ಜ್ವರ ಕಾಣಿಸಿತ್ತು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಸಾಗರ ಆಸ್ಪತ್ರೆಯಲ್ಲಿ ಜ್ವರ ಗುಣಮುಖವಾಗದ ಕಾರಣ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಏಪ್ರಿಲ್ 26ರಂದು ದಾಖಲಾಗಿದ್ದರು. ಅಲ್ಲಿ ರಾಮಸ್ವಾಮಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಣಿಪಾಲದಲ್ಲಿ ಸ್ವಲ್ಪ ಕೊಂಚ ಚೇತರಿಕೆ ಕಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

monkey fever gram panchayat member died in sagar taluk in shivamogga
ಮೃತ ಗ್ರಾಪಂ ಸದಸ್ಯ ರಾಮಸ್ವಾಮಿ ಕರುಮನೆ

2019-20ರಲ್ಲಿ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿಯೇ ಸುಮಾರು 23 ಜನ ಮಂಗನಕಾಯಿಲೆಗೆ ಬಲಿಯಾಗಿದ್ದರು. ಸರ್ಕಾರ ಮೃತರಿಗೆ ಪರಿಹಾರವನ್ನು ಸಹ ನೀಡಿದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆಯು ಕೆಎಫ್​ಡಿಗೆ ಚುಚ್ಚುಮದ್ದು ನೀಡುವಲ್ಲಿ ನಿರ್ಲಕ್ಷ್ಯ ತೋರಿತೆ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಬಸವಣ್ಣನ ಆದರ್ಶಗಳ‌ ಪಾಲನೆ ಅಗತ್ಯ: ಅಬಕಾರಿ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.