ETV Bharat / state

ಮಾರಿಕಾಂಬ ಗದ್ದುಗೆ ಜಾಗಕ್ಕಾಗಿ ಮಾರಾಮಾರಿ: ಕಲ್ಲು ತೂರಾಟ, ಮಚ್ಚಿನಿಂದ ಹಲ್ಲೆ - ಎರಡು ಕೋಮುಗಳ ನಡುವೆ ಗಲಾಟೆ ಲೆಟೆಸ್ಟ್ ನ್ಯೂಸ್

ಮಾರಿಕಾಂಬ ದೇವಿಯ ಗದ್ದುಗೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ಮಧ್ಯೆ ಮಾರಾಮಾರಿ ನಡೆದಿದೆ.

Marikamba land dispute: stone pelting between two groups
ಮಾರಿಕಾಂಬ ಗದ್ದುಗೆ ಜಾಗಕ್ಕಾಗಿ ಮಾರಾಮಾರಿ: ಕಲ್ಲು ತೂರಾಟ, ಮಚ್ಚಿನಿಂದ ಹಲ್ಲೆ
author img

By

Published : Dec 15, 2019, 1:30 PM IST

ಶಿವಮೊಗ್ಗ: ಜಿಲ್ಲೆಯ ಹಾರನಹಳ್ಳಿ ಗ್ರಾಮದಲ್ಲಿ ಎರಡು ಕೋಮುಗಳ ಮಧ್ಯೆ ಮಾರಿಕಾಂಬ ದೇವಿಯ ಗದ್ದುಗೆ ಜಾಗದ ವಿಚಾರಕ್ಕೆ ಗುದ್ದಾಟ ನಡೆದಿದ್ದು, ಪರಸ್ಪರ ಕಲ್ಲು ತೂರಾಟ ನಡೆದಿದೆ.

ಗಲಾಟೆ ವೇಳೆ ರಾಮರಾವ್ ಕೋರೆ ಎಂಬುವರ ಮೇಲೆ ಮತ್ತೊಂದು ಗುಂಪಿನವರು ಮಚ್ಚಿನಿಂದ ಹಲ್ಲೆ ಮಾಡಿದ್ದು, ರಾಮರಾವ್ ಕೋರೆ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರಿಕಾಂಬ ಗದ್ದುಗೆ ಜಾಗಕ್ಕಾಗಿ ಮಾರಾಮಾರಿ: ಕಲ್ಲು ತೂರಾಟ, ಮಚ್ಚಿನಿಂದ ಹಲ್ಲೆ

ಗಲಾಟೆಯಿಂದಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಎಸ್​ಪಿ ಶಾಂತರಾಜು, ಎಎಸ್​ಪಿ ಶೇಖರ್, ಶಾಸಕ ಅಶೋಕ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾರಿ ಗದ್ದುಗೆ ಜಾಗ ನಮ್ಮದು ನಮ್ಮದು ಎಂದು ಎರಡು ಕೋಮಿನ ಮಧ್ಯೆ ಗಲಾಟೆ ಆರಂಭವಾಗಿದೆ. ಕೆಲ ತಿಂಗಳ ಹಿಂದೆ‌ ಮಾರಿ ಕೋಣದ ವಿಷಯಕ್ಕೆ ಸಂಬಂಧಿಸಿದಂತೆಯೂ ಇಲ್ಲಿ ಎರಡು ಊರುಗಳ ನಡುವೆಯೇ ಗಲಾಟೆಯಾಗಿತ್ತು. ಇನ್ನು ಇದೇ ತಿಂಗಳ ಅಂತ್ಯದಲ್ಲಿ‌ ಹಾರನಹಳ್ಳಿ ಮಾರಿಜಾತ್ರೆ ನಡೆಯಲಿದೆ.

ಶಿವಮೊಗ್ಗ: ಜಿಲ್ಲೆಯ ಹಾರನಹಳ್ಳಿ ಗ್ರಾಮದಲ್ಲಿ ಎರಡು ಕೋಮುಗಳ ಮಧ್ಯೆ ಮಾರಿಕಾಂಬ ದೇವಿಯ ಗದ್ದುಗೆ ಜಾಗದ ವಿಚಾರಕ್ಕೆ ಗುದ್ದಾಟ ನಡೆದಿದ್ದು, ಪರಸ್ಪರ ಕಲ್ಲು ತೂರಾಟ ನಡೆದಿದೆ.

ಗಲಾಟೆ ವೇಳೆ ರಾಮರಾವ್ ಕೋರೆ ಎಂಬುವರ ಮೇಲೆ ಮತ್ತೊಂದು ಗುಂಪಿನವರು ಮಚ್ಚಿನಿಂದ ಹಲ್ಲೆ ಮಾಡಿದ್ದು, ರಾಮರಾವ್ ಕೋರೆ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರಿಕಾಂಬ ಗದ್ದುಗೆ ಜಾಗಕ್ಕಾಗಿ ಮಾರಾಮಾರಿ: ಕಲ್ಲು ತೂರಾಟ, ಮಚ್ಚಿನಿಂದ ಹಲ್ಲೆ

ಗಲಾಟೆಯಿಂದಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಎಸ್​ಪಿ ಶಾಂತರಾಜು, ಎಎಸ್​ಪಿ ಶೇಖರ್, ಶಾಸಕ ಅಶೋಕ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾರಿ ಗದ್ದುಗೆ ಜಾಗ ನಮ್ಮದು ನಮ್ಮದು ಎಂದು ಎರಡು ಕೋಮಿನ ಮಧ್ಯೆ ಗಲಾಟೆ ಆರಂಭವಾಗಿದೆ. ಕೆಲ ತಿಂಗಳ ಹಿಂದೆ‌ ಮಾರಿ ಕೋಣದ ವಿಷಯಕ್ಕೆ ಸಂಬಂಧಿಸಿದಂತೆಯೂ ಇಲ್ಲಿ ಎರಡು ಊರುಗಳ ನಡುವೆಯೇ ಗಲಾಟೆಯಾಗಿತ್ತು. ಇನ್ನು ಇದೇ ತಿಂಗಳ ಅಂತ್ಯದಲ್ಲಿ‌ ಹಾರನಹಳ್ಳಿ ಮಾರಿಜಾತ್ರೆ ನಡೆಯಲಿದೆ.

Intro:ಶಿವಮೊಗ್ಗ ಬ್ರೇಕಿಂಗ್

ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗುದ್ದಾಟ.

ಮಾರಿಕಾಂಬ ಗದ್ದುಗೆ ಜಾಗಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಗಲಾಟೆ.

ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡಿರುವ ಎರಡು ಕೋಮಿನವರು.

ಗಲಾಟೆ ವೇಳೆ ರಾಮರಾವ್ ಕೋರೆ ಎಂಬುವರ ಮೇಲೆ ಮಚ್ಚಿನಿಂದ ದಾಳಿ‌ನಡೆಸಿದ ಇನ್ನೊಂದು ಕೋಮಿನವರು.

ರಾಮರಾವ್ ಕೋರೆ ಅವರ ತಲೆ ಹಾಗೂ ಕೈಗೆ ಗಂಭೀರ ಗಾಯ.

ಗಾಯಾಳು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು.

ಸ್ಥಳದಲ್ಲಿ ಪ್ರಕ್ಷುಪ್ತ ವಾತಾವರಣ ನಿರ್ಮಾಣ.

ಸ್ಥಳಕ್ಕೆ ಎಸ್ ಪಿ ಶಾಂತರಾಜು, ಎಎಸ್ ಪಿ ಶೇಖರ್, ಶಾಸಕ ಅಶೋಕ ನಾಯ್ಕ ಭೇಟಿ ಹಾಗೂ ಪರಿಶೀಲನೆ.

ಮಾರಿ ಗದ್ದುಗೆ ಜಾಗಕ್ಕೆ ಸಂಬಂಧಿಸಿದಂತೆ ಆರಂಭಗೊಂಡ ಗಲಾಟೆ.

ಹಿಂದುಗಳು‌ಜಾಗ ನಮ್ಮದೆಂದು ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನೊಂದು ಕೋಮಿನವರು ಜಾಗ ನಮ್ಮದೆಂದು ಗಲಾಟೆ.

ಕೆಲ ತಿಂಗಳ ಹಿಂದೆ‌ಮಾರಿ ಕೋಣದ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ಎರಡು ಊರುಗಳ ನಡುವೆ ಗಲಾಟೆಯಾಗಿತ್ತು.

ಇದೇ ತಿಂಗಳ ಅಂತ್ಯದಲ್ಲಿ‌ ನಡೆಯಲಿರುವ ಹಾರನಹಳ್ಳಿ ಮಾರಿಜಾತ್ರೆ

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.