ETV Bharat / state

ಜಿಲ್ಲೆಯಲ್ಲಿ ನೆಲ, ಜಲ ಉಳಿವಿಗಾಗಿ ಜಿಲ್ಲಾ ಜೆಡಿಎಸ್ ಯಾವಾಗಲೂ ಬದ್ಧ: ಆರ್.ಎಂ.ಮಂಜುನಾಥ ಗೌಡ - undefined

ಜುಲೈ 10 ರಂದು ನಡೆಯುವ ಶರಾವತಿಗಾಗಿ ಶಿವಮೊಗ್ಗ ಜಿಲ್ಲಾ ಬಂದ್​​ಗೆ ಜೆಡಿಎಸ್ ಹಾಗೂ ವಕೀಲರ ಸಂಘ ಬೆಂಬಲ ಸೂಚಿಸಿವೆ.

ಬಂದ್​​ಗೆ ಜೆಡಿಎಸ್ ಹಾಗೂ ವಕೀಲರ ಸಂಘ ಬೆಂಬಲ
author img

By

Published : Jun 28, 2019, 12:57 PM IST

ಶಿವಮೊಗ್ಗ: ಜಿಲ್ಲೆಯ ನೆಲ, ಜಲ ಉಳಿವಿಗಾಗಿ ಜಿಲ್ಲಾ ಜೆಡಿಎಸ್ ಯಾವಾಗಲೂ ಬದ್ಧವಾಗಿದೆ. ಜುಲೈ 10 ರಂದು ನಡೆಯುವ ಶರಾವತಿಗಾಗಿ ಶಿವಮೊಗ್ಗ ಜಿಲ್ಲಾ ಬಂದ್​​ಗೆ ಜೆಡಿಎಸ್ ಬೆಂಬಲವಾಗಿ ನಿಲ್ಲುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.

ಪ್ರೆಸ್ ಟ್ರಸ್ಟ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ ಅವರು, ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಅವೈಜ್ಞಾನಿಕವಾಗಿದೆ. ಈ ಯೋಜನೆ ಕೈ ಬಿಟ್ಟು ಮಲೆನಾಡಿನ ಹಿತ ಕಾಯುವಂತೆ ಆಗಬೇಕು ಎಂದು ಸಿಎಂ ಕುಮಾರಸ್ವಾಮಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಮನವಿಗೆ ಸಿಎಂ ಪೂರಕವಾಗಿ ಸ್ಪಂದಿಸಿದ್ದು, ಈ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿ ಇದೆ. ಶರಾವತಿ ನದಿ ನೀರು ಕುರಿತು ಹೋರಾಟಗಾರರ ಜೊತೆ ಅಮೆರಿಕದಿಂದ ಬಂದ ನಂತ್ರ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದರು.

ಬಂದ್​​ಗೆ ಜೆಡಿಎಸ್ ಹಾಗೂ ವಕೀಲರ ಸಂಘ ಬೆಂಬಲ

ಇನ್ನು ಈ ಬಂದ್​​ಗೆ ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿ, ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಿದ್ದಾರೆ. ಜುಲೈ 10 ರಂದು ನಡೆಯುವ ಶಿವಮೊಗ್ಗ ಜಿಲ್ಲಾ ಬಂದ್​​ಗೆ ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿ, ಅಂದು ಕೋರ್ಟ್ ಕಲಾಪ ಬಹಿಷ್ಕಾರ ಮಾಡಲಾಗುವುದು ಎಂದು ತಿಳಿಸಿದೆ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಧು ಅವರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು. ವಿದ್ಯುತ್​ಗಾಗಿ ಮೀಸಲಾಗಿಟ್ಟಿರುವ ಯೋಜನೆ ಕುಡಿವ ನೀರಿಗಾಗಿ ಬಳಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ವಕೀಲರ ಸಂಘ ಪ್ರಶ್ನೆ ಮಾಡಿದೆ.

ಶಿವಮೊಗ್ಗ: ಜಿಲ್ಲೆಯ ನೆಲ, ಜಲ ಉಳಿವಿಗಾಗಿ ಜಿಲ್ಲಾ ಜೆಡಿಎಸ್ ಯಾವಾಗಲೂ ಬದ್ಧವಾಗಿದೆ. ಜುಲೈ 10 ರಂದು ನಡೆಯುವ ಶರಾವತಿಗಾಗಿ ಶಿವಮೊಗ್ಗ ಜಿಲ್ಲಾ ಬಂದ್​​ಗೆ ಜೆಡಿಎಸ್ ಬೆಂಬಲವಾಗಿ ನಿಲ್ಲುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.

ಪ್ರೆಸ್ ಟ್ರಸ್ಟ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ ಅವರು, ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಅವೈಜ್ಞಾನಿಕವಾಗಿದೆ. ಈ ಯೋಜನೆ ಕೈ ಬಿಟ್ಟು ಮಲೆನಾಡಿನ ಹಿತ ಕಾಯುವಂತೆ ಆಗಬೇಕು ಎಂದು ಸಿಎಂ ಕುಮಾರಸ್ವಾಮಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಮನವಿಗೆ ಸಿಎಂ ಪೂರಕವಾಗಿ ಸ್ಪಂದಿಸಿದ್ದು, ಈ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿ ಇದೆ. ಶರಾವತಿ ನದಿ ನೀರು ಕುರಿತು ಹೋರಾಟಗಾರರ ಜೊತೆ ಅಮೆರಿಕದಿಂದ ಬಂದ ನಂತ್ರ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದರು.

ಬಂದ್​​ಗೆ ಜೆಡಿಎಸ್ ಹಾಗೂ ವಕೀಲರ ಸಂಘ ಬೆಂಬಲ

ಇನ್ನು ಈ ಬಂದ್​​ಗೆ ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿ, ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಿದ್ದಾರೆ. ಜುಲೈ 10 ರಂದು ನಡೆಯುವ ಶಿವಮೊಗ್ಗ ಜಿಲ್ಲಾ ಬಂದ್​​ಗೆ ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿ, ಅಂದು ಕೋರ್ಟ್ ಕಲಾಪ ಬಹಿಷ್ಕಾರ ಮಾಡಲಾಗುವುದು ಎಂದು ತಿಳಿಸಿದೆ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಧು ಅವರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು. ವಿದ್ಯುತ್​ಗಾಗಿ ಮೀಸಲಾಗಿಟ್ಟಿರುವ ಯೋಜನೆ ಕುಡಿವ ನೀರಿಗಾಗಿ ಬಳಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ವಕೀಲರ ಸಂಘ ಪ್ರಶ್ನೆ ಮಾಡಿದೆ.

Intro:ಜಿಲ್ಲೆಯ ನೆಲ,ಜಲ ಉಳಿವಿಗಾಗಿ ಜಿಲ್ಲಾ ಜೆಡಿಎಸ್ ಯಾವಾಗಲೂ ಬದ್ದವಾಗಿದೆ. ಜುಲೈ 10 ರಂದು ನಡೆಯುವ ಶರಾವತಿಗಾಗಿ ಶಿವಮೊಗ್ಗ ಜಿಲ್ಲಾ ಬಂದ್ ಗೆ ಜೆಡಿಎಸ್ ಬೆಂಬಲವಾಗಿ ನಿಲ್ಲುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಘೋಷಿಸಿದ್ದಾರೆ. ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಜುನಾಥ ಗೌಡ ರವರು, ಶರಾವತಿ ನೀರು ಬೆಂಗಳೂರಿಗೆ ತೆಗೆದು ಕೊಂಡು ಹೋಗುವುದು ಅವೈಜ್ಞಾನಿಕವಾಗಿದೆ. ಈ ಯೋಜನೆ ಕೈ ಬಿಟ್ಟು ಮಲೆನಾಡಿನ ಹಿತ ಕಾಯುವಂತೆ ಆಗಬೇಕು ಎಂದು ಸಿಎಂ ಕುಮಾರಸ್ವಾಮಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.


Body:ನಮ್ಮ ಮನವಿಗೆ ಸಿಎಂ ಪೂರಕವಾಗಿ ಸ್ಪಂದಿಸಿದ್ದು, ಈ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿ ಇದೆ. ಶರಾವತಿ ನದಿ ನೀರು ಕುರಿತು ಹೋರಾಟಗಾರರ ಜೊತೆ ಅಮೆರಿಕಾದಿಂದ ಬಂದ ನಂತ್ರ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದರು.


Conclusion:ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟೆ ಕಟ್ಟಿ ಕೇವಲ‌ ವಿದ್ಯುತ್ ಉತ್ಪಾದನೆಗಾಗಿ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿತ್ತು. ಇದರಿಂದ ಶರಾವತಿ ನದಿ ನೀರನ್ನು ವಿದ್ಯುತ್ ಬಳಕೆಗೆ ಮಾತ್ರ ಬಳಸಿಕೊಳ್ಳಬೇಕು. ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಲಿಂಗನಮಕ್ಕಿ ಅಣೆಕಟ್ಟೆಯ ಗೌರವವನ್ನು ಉಳಿಸಬೇಕಿದೆ. ಈಗಾಗಲೇ ಸಿಎಂ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೈಟ್: ಆರ್.ಎಂ.ಮಂಜುನಾಥ ಗೌಡ. ಜೆಡಿಎಸ್ ಜಿಲ್ಲಾಧ್ಯಕ್ಷರು.

ಕಿರಣ್ ಕುಮಾರ್. ಶಿವಮೊಗ್ತ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.