ETV Bharat / state

ಮೂಗೂರು ಏತ ನೀರಾವರಿ ಯೋಜನೆ ಸ್ಥಳ ಪರಿಶೀಲಿಸಿದ ಸಚಿವ ಮಾಧುಸ್ವಾಮಿ - ಸೊರಬ ತಾಲೂಕಿನ ಮೂಗೂರು ನ್ಯೂಸ್

ಸೊರಬ ತಾಲೂಕಿನ ಮೂಗೂರಿಗೆ ಭೇಟಿ ನೀಡಿದ್ದ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಬಹು ದಿನದ ಬೇಡಿಕೆಯಾದ ಮೂಗೂರು ಏತ ನೀರಾವರಿ ಯೋಜನಾ ಸ್ಥಳವನ್ನು ಪರಿಶೀಲಿಸಿದ್ರು.

Madhuswamy, ಮಾಧುಸ್ವಾಮಿ
author img

By

Published : Nov 7, 2019, 9:22 PM IST

ಶಿವಮೊಗ್ಗ: ಸೊರಬ ತಾಲೂಕಿನ ಬಹು ದಿನಗಳ ಬೇಡಿಕೆಯಾಗಿರುವ ಮೂಗೂರು ಏತ ನೀರಾವರಿ ಯೋಜನಾ ಸ್ಥಳವನ್ನು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಇಂದು ಪರಿಶೀಲಿಸಿದರು.

ಮೂಗೂರು ಏತ ನೀರಾವರಿ ಯೋಜನೆ ಸ್ಥಳ ಪರಿಶೀಲನೆ ನಡೆಸಿದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ

ಸೊರಬ ತಾಲೂಕಿಗೆ ಭೇಟಿ ನೀಡಿದ್ದ ಸಚಿವರು, ಏತ ನೀರಾವರಿ ಯೋಜನಾ ಸ್ಥಳವನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಸುಮಾರು 105 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದಾಗಿ ಸೊರಬದ ಮಳೆಯಾಶ್ರಿತ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು ಸಹಾಯಕವಾಗುತ್ತದೆ.

ಈ ಯೋಜನೆಯಿಂದ ತಾಲೂಕಿನ‌ 40 ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬಹುದಾಗಿದೆ. ಇದಕ್ಕಾಗಿ ಸಾಕಷ್ಟು‌ ರಾಜಕೀಯ ಹೋರಾಟಗಳು ಸಹ ನಡೆದಿದ್ದವು. ಈ ವೇಳೆ ಮಾಧುಸ್ವಾಮಿಗೆ ಶಾಸಕ ಕುಮಾರ್ ಬಂಗಾರಪ್ಪ ಯೋಜನೆಯ ಕುರಿತು ವಿವರ ನೀಡಿದರು. ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

ಶಿವಮೊಗ್ಗ: ಸೊರಬ ತಾಲೂಕಿನ ಬಹು ದಿನಗಳ ಬೇಡಿಕೆಯಾಗಿರುವ ಮೂಗೂರು ಏತ ನೀರಾವರಿ ಯೋಜನಾ ಸ್ಥಳವನ್ನು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಇಂದು ಪರಿಶೀಲಿಸಿದರು.

ಮೂಗೂರು ಏತ ನೀರಾವರಿ ಯೋಜನೆ ಸ್ಥಳ ಪರಿಶೀಲನೆ ನಡೆಸಿದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ

ಸೊರಬ ತಾಲೂಕಿಗೆ ಭೇಟಿ ನೀಡಿದ್ದ ಸಚಿವರು, ಏತ ನೀರಾವರಿ ಯೋಜನಾ ಸ್ಥಳವನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಸುಮಾರು 105 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದಾಗಿ ಸೊರಬದ ಮಳೆಯಾಶ್ರಿತ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು ಸಹಾಯಕವಾಗುತ್ತದೆ.

ಈ ಯೋಜನೆಯಿಂದ ತಾಲೂಕಿನ‌ 40 ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬಹುದಾಗಿದೆ. ಇದಕ್ಕಾಗಿ ಸಾಕಷ್ಟು‌ ರಾಜಕೀಯ ಹೋರಾಟಗಳು ಸಹ ನಡೆದಿದ್ದವು. ಈ ವೇಳೆ ಮಾಧುಸ್ವಾಮಿಗೆ ಶಾಸಕ ಕುಮಾರ್ ಬಂಗಾರಪ್ಪ ಯೋಜನೆಯ ಕುರಿತು ವಿವರ ನೀಡಿದರು. ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

Intro:ಸೊರಬ ಮೂಗೂರು ಏತ ನೀರಾವರಿ ಯೋಜನೆ ಸ್ಥಳ ಪರಿಶೀಲನೆ ನಡೆಸಿದ ಸಣ್ಣ‌ ನೀರಾವರಿ ಸಚಿವ ಮಾಧುಸ್ವಾಮಿ.

ಶಿವಮೊಗ್ಗ: ಸೊರಬ ತಾಲೂಕಿನ ಬಹು ದಿನದ ಬೇಡಿಕೆಯಾದ ಮೂಗೂರು ಏತ ನೀರಾವರಿ ಯೋಜನಾ ಸ್ಥಳವನ್ನು ಇಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಪರಿಶೀಲನೆ ನಡೆಸಿದರು. ಸುಮಾರು 105 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆ ಇದಾಗಿದೆ. ಈ ಯೋಜನೆಯಿಂದಾಗಿ ಸೊರಬದ ಮಳೆಯಾಶ್ರಿತ ಗ್ರಾಮಗಳಿಗೆ ನೀರಾವರಿ ಕಲ್ಪಿಸಿದಂತೆ ಆಗುತ್ತದೆ.Body:ತಾಲೂಕಿನ‌ 40 ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬಹುದಾಗಿದೆ. ಈ ಯೋಜನೆಗಾಗಿ ಸಾಕಷ್ಟು‌ ರಾಜಕೀಯ ಹೋರಾಟಗಳು ಸಹ ನಡೆದಿದ್ದವು. ಸಣ್ಣ ನೀರಾವರಿ ಸಚಿವರಿಗೆ ಶಾಸಕ ಕುಮಾರ್ ಬಂಗಾರಪ್ಪನವರು ಯೋಜನೆಯ ಕುರಿತು ವಿವರ ನೀಡಿದರು.Conclusion:ಸಣ್ಣ ನೀರಾವರಿ ಸಚಿವರಿಗೆ ಶಾಸಕ ಕುಮಾರ್ ಬಂಗಾರಪ್ಪನವರು ಯೋಜನೆಯ ಕುರಿತು ವಿವರ ನೀಡಿದರು. ಬ್ಯಾರೇಜ್ ನಿರ್ಮಾಣ ಮಾಡಿದರೆ ಮಳೆಗಾಲದಲ್ಲಿ ನೀರು ಸಂಗ್ರಹವಾದಾಗ ಅದನ್ನು ಏತ ನೀರಾವರಿಯ ಕೆರೆಗಳಿಗೆ ಹಾಯಿಸುವ ಮೂಲಕ ಕೆರೆಗಳನ್ನು ತುಂಬಿಸಿ, ಈ ಭಾಗದ ರೈತರಿಗೆ ಸಹಾಯ ಮಾಡುವ ಯೋಜನೆ ಇದಾಗಿದೆ ಎಂದು ವಿವರಿಸಿದರು. ಈ ವೇಳೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.