ETV Bharat / state

ಪ್ರತಿಭಟನೆಗೆ ಮಣಿದು ವಿಐಎಸ್ಎಲ್​​ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ - ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ

ದೇಶದ ಹೆಮ್ಮೆಯ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಮಿಕ ಸಂಘಟನೆಯ ಪ್ರತಿಭಟನೆ ನಂತರ ವಿಐಎಸ್ಎಲ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ.

ಸ್ವಾತಂತ್ರ್ಯ ದಿನಾಚರಣೆ
author img

By

Published : Aug 15, 2019, 5:04 PM IST

ಶಿವಮೊಗ್ಗ: ಇಂದು ದೇಶಾದ್ಯಂತ 73ನೇ ಸ್ವಾತಂತ್ರೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಮಾತ್ರ ಸ್ವಾತಂತ್ರ್ಯ ದಿನಾಚರಣೆಗಾಗಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ವತಿಯಿಂದ ಪ್ರತಿ ವರ್ಷ ವಿಐಎಸ್ಎಲ್​ನ ಮೈದಾನದಲ್ಲಿ ಅದ್ದೂರಿಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿರುವುದರಿಂದ ಕಾರ್ಮಿಕರು ಈ ಕುರಿತು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಅಧಿಕಾರಿ ವರ್ಗ ಕಾರ್ಮಿಕರನ್ನು ದೂರವಿಟ್ಟು, ಕಾರ್ಖಾನೆಯ ಒಳಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಇದರಿಂದ ಆಕ್ರೋಶಗೊಂಡಿರುವ ಕಾರ್ಮಿಕರು, ಕಾರ್ಯಪಾಲಕ ನಿರ್ದೇಶಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ‌ ಎಲ್.‌ಪ್ರವೀಣ್ ಕುಮಾರ್ ಮನೆ ಮುಂದೆ ಧರಣಿ ನಡೆಸಿದರು.

ವಿಐಎಸ್ಎಲ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ ಆಗಮಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರ ಧರಣಿ ಹಾಗೂ ಶಾಸಕರ ಮಾತುಕತೆಯಿಂದ VISL ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಮೈದಾನದಲ್ಲಿ ಆಚರಿಸಿದರು.

ಶಿವಮೊಗ್ಗ: ಇಂದು ದೇಶಾದ್ಯಂತ 73ನೇ ಸ್ವಾತಂತ್ರೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಮಾತ್ರ ಸ್ವಾತಂತ್ರ್ಯ ದಿನಾಚರಣೆಗಾಗಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ವತಿಯಿಂದ ಪ್ರತಿ ವರ್ಷ ವಿಐಎಸ್ಎಲ್​ನ ಮೈದಾನದಲ್ಲಿ ಅದ್ದೂರಿಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿರುವುದರಿಂದ ಕಾರ್ಮಿಕರು ಈ ಕುರಿತು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಅಧಿಕಾರಿ ವರ್ಗ ಕಾರ್ಮಿಕರನ್ನು ದೂರವಿಟ್ಟು, ಕಾರ್ಖಾನೆಯ ಒಳಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಇದರಿಂದ ಆಕ್ರೋಶಗೊಂಡಿರುವ ಕಾರ್ಮಿಕರು, ಕಾರ್ಯಪಾಲಕ ನಿರ್ದೇಶಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ‌ ಎಲ್.‌ಪ್ರವೀಣ್ ಕುಮಾರ್ ಮನೆ ಮುಂದೆ ಧರಣಿ ನಡೆಸಿದರು.

ವಿಐಎಸ್ಎಲ್​​ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ ಆಗಮಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರ ಧರಣಿ ಹಾಗೂ ಶಾಸಕರ ಮಾತುಕತೆಯಿಂದ VISL ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಮೈದಾನದಲ್ಲಿ ಆಚರಿಸಿದರು.

Intro:ಪ್ರತಿಭಟನೆ ನಂತ್ರ ವಿಐಎಸ್ಎಲ್ ನಲ್ಲಿ ಸ್ವಾತಂತ್ರ ದಿನಾಚರಣೆ.

ಶಿವಮೊಗ್ಗ: ದೇಶದ ಹೆಮ್ಮೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕ ಸಂಘಟನೆಯ ಪ್ರತಿಭಟನೆಯ ನಂತ್ರ ವಿಐಎಸ್ಎಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ. ಇಂದು ದೇಶದ್ಯಾಂತ 73 ನೇ ಸ್ವಾತಂತ್ರೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಿರುವಾಗ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಮಾತ್ರ ಕಾರ್ಖಾನೆಯ ಒಳಗೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಗಿತ್ತು.Body: ಆದ್ರೆ, ಕಾರ್ಖಾನೆ ವತಿಯಿಂದ ಪ್ರತಿ ವರ್ಷ ವಿಐಎಸ್ಎಲ್ ನ ಮೈದಾನದಲ್ಲಿ ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿತ್ತು. ಆದ್ರೆ, ಈಗಲಾಗಲೇ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿರುವುದನ್ನೆ ಬಳಸಿ ಕೊಂಡಿರುವ ಕಾರ್ಖಾನೆಯ ಅಧಿಕಾರಿ ವರ್ಗ ಕಾರ್ಮಿಕರನ್ನು ದೂರವಿಟ್ಟು
ಕಾರ್ಯಪಾಲಕ ನಿರ್ದೇಶಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ‌ ಎಲ್.‌ಪ್ರವೀಣ್ ಕುಮಾರ್ ಮನೆ ಮುಂದೆ ಧರಣಿ ನಡೆಸಿದರು.Conclusion: ಕಾರ್ಮಿಕರ ಧರಣಿ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ ರವರು ಆಗಮಿಸಿ ಅಧಿಕಾರಿಗಳ ಜೊತೆ ಮಾತುಕಥೆ ನಡೆಸಿದರು. ಕಾರ್ಮಿಕರ ಧರಣಿ ಹಾಗೂ ಶಾಸಕರ ಮಾತುಕಥೆಯಿಂದ VISL ಅಧಿಕಾರಿಗಳು ನಂತ್ರ ಸ್ವಾತಂತ್ರ ದಿನಾಚರಣೆಯನ್ನು ವಿಐಎಸ್ಎಲ್ ಮೈದಾನದಲ್ಲೆ ಸ್ವಾತಂತ್ರ ದಿನಾಚರಣೆ ನಡೆಸಲಾಯಿತು.‌ ಈ ವೇಳೆ ಕಾರ್ಮಿಕ ಮುಖಂಡರುಗಳು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.