ಶಿವಮೊಗ್ಗ: ತಮ್ಮೂರಿನ ದಾರಿ ಮರೆತು ರಸ್ತೆಯಲ್ಲಿ ತಿರುಗಾಡುತ್ತಿದ್ದ ವೃದ್ದನಿಗೆ ಮಾಜಿ ಶಾಸಕರೊಬ್ಬರು ಧನ ಸಹಾಯ ಮಾಡಿ ಮನೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ತಾಲೂಕು ನಿಟ್ಟೂರು ಕಡೆ ಹೋಗುವಾಗ ವೃದ್ದರೊಬ್ಬರು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿ, ಕಾರಿನಿಂದ ಇಳಿದು ವಿಚಾರಿಸಿದ್ದಾರೆ. ಈ ವೇಳೆ ವೃದ್ಧ ದಾರಿ ತಪ್ಪಿರುವ ವಿಷಯ ತಿಳಿಯುತ್ತದೆ.
ಹೀಗಾಗಿ ವೃದ್ಧನಿಗೆ ಹಣ ನೀಡಿ, ಊರಿಗೆ ಹೋಗಲು ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಮಾಜಿ ಶಾಸಕರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.