ETV Bharat / state

ಫುಡ್ ಇನ್ಸ್​ಪೆಕ್ಟರ್ ಆತ್ಮಹತ್ಯೆ ಪ್ರಕರಣ: ತಹಶೀಲ್ದಾರ್ ಸೇರಿ 7 ಜನರ ವಿರುದ್ಧ ದೂರು - ಹೊಸನಗರದ ಫುಡ್ ಇನ್ಸ್​ಪೆಕ್ಟರ್ ಆತ್ಮಹತ್ಯೆ ಪ್ರಕರಣ ಲೆಟೆಸ್ಟ್ ನ್ಯೂಸ್​

ಹೊಸನಗರದ ಫುಡ್ ಇನ್ಸ್​ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಸೇರಿದಂತೆ ಏಳು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಫುಡ್ ಇನ್ಸ್​ಪೆಕ್ಟರ್ ಆತ್ಮಹತ್ಯೆ ಪ್ರಕರಣ
Food inspector suicide case
author img

By

Published : Dec 8, 2019, 12:27 PM IST

ಶಿವಮೊಗ್ಗ: ಹೊಸನಗರದ ಫುಡ್ ಇನ್ಸ್​ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಸೇರಿದಂತೆ ಏಳು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೊಸನಗರದ ಫುಡ್ ಇನ್ಸ್​ಪೆಕ್ಟರ್ ದತ್ತಾತ್ರೇಯ ತುಂಗಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್ ಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಇವರ ಆತ್ಮಹತ್ಯೆಗೆ ಹೊಸನಗರ ತಹಶೀಲ್ದಾರ್ ಶ್ರೀಧರಮೂರ್ತಿ ಸೇರಿದಂತೆ ಆನಂದ್ ಕಾರ್ವಿ, ನಾಗೇಂದ್ರ, ವಿಠಲ್, ಮುರುಗೇಶ್, ಶಶಿಕಲಾ, ವನಜಾಕ್ಷಿ ಎಂಬ ಏಳು ಜನ ಕಾರಣ ಎಂದು ಆರೋಪಿಸಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದತ್ತಾತ್ರೇಯರ ಪತ್ನಿ ಅನುಸೂಯ ದೂರು ನೀಡಿದ್ದಾರೆ. ಅಲ್ಲದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಅವರು ಕಳೆದ ವರ್ಷ ನಗರ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ದತ್ತಾತ್ರೇಯ ಇತ್ತಿಚೇಗಷ್ಟೆ ಫುಡ್ ಇನ್ಸ್​ಪೆಕ್ಟರ್ ಆಗಿ ಬಡ್ತಿ ಹೊಂದಿದ್ದರು. ಕಂದಾಯ ನಿರೀಕ್ಷಕರಾಗಿದ್ದಾಗ ಇವರ ಮೇಲೆ ಎರಡು ಪ್ರಕರಣಗಳು​ ದಾಖಲಾಗಿದ್ದವು. ಈ ಪ್ರಕರಣವನ್ನು ಖುಲಾಸೆ ಮಾಡಲು ಆರು ಜನರ ಬಳಿ ತಹಶೀಲ್ದಾರ್ ಹಣಕ್ಕಾಗಿ ಹೇಳಿ ಕಳುಹಿಸುತ್ತಿದ್ದರಂತೆ. ಇದರಿಂದ ನೊಂದು ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರ ಬಳಿ ಮಾತನಾಡಿಕೊಂಡು ಬರುವುದಾಗಿ ಹೋಗಿದ್ದ ದತ್ತಾತ್ರೇಯ, ಪತ್ನಿಗೆ ಫೋನ್ ಮಾಡಿ ನಾನು ತೀರ್ಥಹಳ್ಳಿಗೆ ಹೋಗಿಲ್ಲ. ನಾನು ಮುಡುಬ ಬಳಿ ಇದ್ದೇನೆ. ನೀವು ಬನ್ನಿ ಎಂದು ಹೇಳಿ ಬರುವುದರೊಳಗೆ ಶವವಾಗಿ ನದಿಯಲ್ಲಿ ಪತ್ತೆಯಾಗಿದ್ದರು.

ಶಿವಮೊಗ್ಗ: ಹೊಸನಗರದ ಫುಡ್ ಇನ್ಸ್​ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಸೇರಿದಂತೆ ಏಳು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೊಸನಗರದ ಫುಡ್ ಇನ್ಸ್​ಪೆಕ್ಟರ್ ದತ್ತಾತ್ರೇಯ ತುಂಗಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್ ಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಇವರ ಆತ್ಮಹತ್ಯೆಗೆ ಹೊಸನಗರ ತಹಶೀಲ್ದಾರ್ ಶ್ರೀಧರಮೂರ್ತಿ ಸೇರಿದಂತೆ ಆನಂದ್ ಕಾರ್ವಿ, ನಾಗೇಂದ್ರ, ವಿಠಲ್, ಮುರುಗೇಶ್, ಶಶಿಕಲಾ, ವನಜಾಕ್ಷಿ ಎಂಬ ಏಳು ಜನ ಕಾರಣ ಎಂದು ಆರೋಪಿಸಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದತ್ತಾತ್ರೇಯರ ಪತ್ನಿ ಅನುಸೂಯ ದೂರು ನೀಡಿದ್ದಾರೆ. ಅಲ್ಲದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಅವರು ಕಳೆದ ವರ್ಷ ನಗರ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ದತ್ತಾತ್ರೇಯ ಇತ್ತಿಚೇಗಷ್ಟೆ ಫುಡ್ ಇನ್ಸ್​ಪೆಕ್ಟರ್ ಆಗಿ ಬಡ್ತಿ ಹೊಂದಿದ್ದರು. ಕಂದಾಯ ನಿರೀಕ್ಷಕರಾಗಿದ್ದಾಗ ಇವರ ಮೇಲೆ ಎರಡು ಪ್ರಕರಣಗಳು​ ದಾಖಲಾಗಿದ್ದವು. ಈ ಪ್ರಕರಣವನ್ನು ಖುಲಾಸೆ ಮಾಡಲು ಆರು ಜನರ ಬಳಿ ತಹಶೀಲ್ದಾರ್ ಹಣಕ್ಕಾಗಿ ಹೇಳಿ ಕಳುಹಿಸುತ್ತಿದ್ದರಂತೆ. ಇದರಿಂದ ನೊಂದು ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರ ಬಳಿ ಮಾತನಾಡಿಕೊಂಡು ಬರುವುದಾಗಿ ಹೋಗಿದ್ದ ದತ್ತಾತ್ರೇಯ, ಪತ್ನಿಗೆ ಫೋನ್ ಮಾಡಿ ನಾನು ತೀರ್ಥಹಳ್ಳಿಗೆ ಹೋಗಿಲ್ಲ. ನಾನು ಮುಡುಬ ಬಳಿ ಇದ್ದೇನೆ. ನೀವು ಬನ್ನಿ ಎಂದು ಹೇಳಿ ಬರುವುದರೊಳಗೆ ಶವವಾಗಿ ನದಿಯಲ್ಲಿ ಪತ್ತೆಯಾಗಿದ್ದರು.

Intro:ಪುಡ್ ಇನ್ಸ್ಪೆಕ್ಟರ್ ಆತ್ಮಹತ್ಯೆ: ತಹಶೀಲ್ದಾರ್ ಸೇರಿ 7 ಜನರ ವಿರುದ್ದ ಕೇಸ್..

ಶಿವಮೊಗ್ಗ: ಹೊಸನಗರದ ಪುಡ್ ಇನ್ಸ್ ಪೆಕ್ಟರ್ ದತ್ತಾತ್ರೇಯ ತುಂಗಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು. ದತ್ತಾತ್ರೇಯ ರವರ ನಿವೃತ್ತಿಗೆ ಇನ್ನೂ ಮೂರು ತಿಂಗಳು ಬಾಕಿ ಇತ್ತು. ಇವರ ಆತ್ಮಹತ್ಯೆಗೆ ಹೊಸನಗರ ತಹಶೀಲ್ದಾರ್ ಶ್ರೀಧರ ಮೂರ್ತಿ ಸೇರಿದಂತೆ ಇತರೆ ಏಳು ಜನ ಕಾರಣ ಎಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ದತ್ತಾತ್ರೇಯ ರವರ ಪತ್ನಿ ಅನುಸೂಯ ರವರು ದೂರು ನೀಡಿ, ಇವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೃತ ದತ್ತಾತ್ರೇಯ ರವರ ಆತ್ಮಹತ್ಯೆಗೆ ಕಾರಣ ಎಂದು ಆನಂದ್ ಕಾರ್ವಿ, ನಾಗೇಂದ್ರ, ವಿಠಲ್, ಮುರುಗೇಶ್, ಶಶಿಕಲಾ, ವನಜಾಕ್ಷಿ, ತಹಶೀಲ್ದಾರ್ ಶ್ರೀಧರ್ ಮೂರ್ತಿ ವಿರುದ್ದ ದೂರು ನೀಡಲಾಗಿದೆ. ದೂರಿನಲ್ಲಿ ನಲ್ಲಿ ತಹಶೀಲ್ದಾರ್ ಏಳನೇ ಆರೋಪಿಯಾಗಿದ್ದಾರೆ. ಮೃತ ದತ್ತಾತ್ರೇಯ ರವರು ಕಳೆದ ವರ್ಷ ನಗರ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದರು. ಇತ್ತಿಚೇಗಷ್ಟೆ ಪುಡ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಹೊಂದಿದ್ದರು. ಕಂದಾಯ ನಿರೀಕ್ಷಕರಾಗಿದ್ದ ವೇಳೆ ಇವರ
ಮೇಲೆ ಎರಡು ಕೇಸು ದಾಖಲಾಗಿತ್ತು. ಈ ಕೇಸ್ ನ್ನು ಖುಲಾಸೆ ಮಾಡಲು ಸದ್ಯ ದತ್ತಾತ್ರೇಯ ರವರ ಪತ್ನಿ ದೂರು ನೀಡಿರುವ ಆರು ಜನರ ಬಳಿ ತಹಶೀಲ್ದಾರ್ ಹಣಕ್ಕಾಗಿ ಹೇಳಿ ಕಳುಹಿಸುತ್ತಿದ್ದರು. ಇದರಿಂದ ತಮ್ಮ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೇಸ್ ನ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ರವರ ಬಳಿ ಮಾತನಾಡಿ ಕೊಂಡು ಬರುವುದಾಗಿ ಹೋಗಿದ್ದ ದತ್ತಾತ್ರೇಯ ರವರು ಪತ್ನಿಗೆ ಪೋನ್ ಮಾಡಿ ನಾನು ತೀರ್ಥಹಳ್ಳಿಗೆ ಹೋಗಿಲ್ಲ, ನಾನು ಮುಡುಬ ಬಳಿ ಇದ್ದೆನೆ. ನೀವು ಬನ್ನಿ ಎಂದು ಹೇಳಿ ಪೋನ್ ಮಾಡಿದ್ದರು. ಪೋನ್ ಕಾಲ್ ನಂತ್ರ ಅಲ್ಲಿಗೆ ಹೋದಾಗ ದತ್ತಾತ್ರೇಯ ರವರು ಶವ ನದಿಯಲ್ಲಿ ತೇಲುತ್ತಿತ್ತು.Body:ದತ್ತಾತ್ರೇಯ ರವರ ವಿರುದ್ದ ಎರಡು ಕೇಸುಗಳಿದ್ದವು: ಮೃತ ದತ್ತಾತ್ರೇಯ ರವರು ನಗರ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ವೇಳೆ ಅಕ್ರಮ ಸಕ್ರಮದಲ್ಲಿ ಅಕ್ರಮ ಜಾಗ ಹಾಗೂ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದವರಿಗೆ ನಕಲಿ ಹಕ್ಕುಪತ್ರ ನೀಡಿದ್ದಾರೆ ಎಂದು ಇಬ್ಬರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಕೇಸ್ ನ್ನು ಬಗೆಹರಿಸುವುದಕ್ಕೆ ಹಣದ ಬೇಡಿಕೆಯನ್ನು ಮುರುಗೇಶ್ ಹಾಗೂ ಇತರರ ಬಳಿ ತಹಶೀಲ್ದಾರ್ ರವರು ಹೇಳಿ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.Conclusion:

ಮೃತ ಸಂಬಂಧಿಗಳ ಆಕ್ರೋಶ-

ಮೃತ ದತ್ತಾತ್ರೇಯ ರವರ ಮೃತರಾದ ವಿಷಯ ತಿಳಿದು ಬಂದಿದ್ದರು ಸಹ ತಹಶೀಲ್ದಾರ್ ಕಚೇರಿಯ ಯಾವ ಸಿಬ್ಬಂದಿಗಳು ಸಹ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕೆಲಸ‌ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಳೆ ಶವವನ್ನು ಹೊಸನಗರ ತಹಶೀಲ್ದಾರ್‌ ಕಚೇರಿಗೆ ತೆಗೆದು ಕೊಂಡು ಹೋಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.