ETV Bharat / state

ನ.16ರಿಂದ ನಡೆಯುವ ಹೊಸಗುಂದ ಉತ್ಸವ: ಉತ್ಸವದ ಪೋಸ್ಟರ್ ಬಿಡುಗಡೆ

author img

By

Published : Nov 3, 2019, 10:07 PM IST

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ನ.16ರಿಂದ18ರವರೆಗೆ ಸಾಗರ ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ಹೊಸಗುಂದ ಉತ್ಸವ ಹಾಗೂ ಲಕ್ಷ ದೀಪೋತ್ಸವದ ಪೋಸ್ಟರ್​ನ್ನು ಬಿಡುಗಡೆ ಗೊಳಿಸಲಾಯಿತು.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್

ಶಿವಮೊಗ್ಗ: ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಹೊಸಗುಂದ ಉತ್ಸವ ಹಾಗೂ ಲಕ್ಷ ದೀಪೋತ್ಸವದ ಪೋಸ್ಟರ್​ನ್ನು ಇಂದು ಬಿಡುಗಡೆ ಗೊಳಿಸಲಾಯಿತು.

ನ.16ರಿಂದ ನಡೆಯುವ ಹೊಸಗುಂದ ಉತ್ಸವ: ಉತ್ಸವದ ಪೋಸ್ಟರ್ ಬಿಡುಗಡೆ

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಟ್ರಸ್ಟ್​ನ ಸಂಸ್ಥಾಪಕರು ಮತ್ತು ಮಾನ್ಯೇಜಿಂಗ್‌ ಟ್ರಸ್ಟಿ ಸಿ.ಎಂ.ಎನ್ ಶಾಸ್ತ್ರಿ ಮಾತನಾಡಿ, ಹಂಪಿ ಉತ್ಸವದ ಮಾದರಿಯಲ್ಲಿ ಈ ಹೊಸಗುಂದ ಉತ್ಸವವನ್ನು ಆಚರಿಸಲಾಗುತ್ತಿದೆ. ನ.16ರಿಂದ18ರವರೆಗೆ ಸಾಗರ ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 1200 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಕಾರ್ಯಕ್ರಮದ ಕುರಿತ ವಿವರ:
ನ.16ರಂದು ಶಿಥಿಲಾವಸ್ಥೆಯ ದೇಗುಲಗಳು ಮತ್ತೆ ಮೈದಳೆಯವ ಕುರಿತು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ವಿಚಾರ ಸಂಕಿರಣ ನಡೆಯಲಿದೆ. ಪ್ರಾಚೀನ ದೇಗುಲಗಳ ಛಾಯಾಚಿತ್ರ ಪ್ರದರ್ಶನ, ಹೊಸಗುಂದದ ಪಕ್ಷಿನೋಟ ಕುರಿತು ಸಂಶೋಧಕರ ಅಭಿಪ್ರಾಯ ಮತ್ತು ವಿಚಾರ ವಿನಿಮಯ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ನಿವೃತ್ತ ನಿರ್ದೇಶಕರಾದ ಡಾ.ಸಿದ್ದನಗೌಡರ್, ಡಾ.ಎಸ್,ಜಿ ಸಾಮಕ್ ಭಾಗವವಹಿಸಲಿದ್ದಾರೆ ಎಂದರು.

ನ.17ರಂದು ಸಾವಯವ ಕೃಷಿ, ಬದುಕು ಕುರಿತ ವಿಚಾರ ವಿನಿಮಯ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಮೇರಿಕಾದ ಮೌಂಟೇನ್ ರೋಸ್ ಹರ್ಬ್ಸ್ ಸಿಓಓ ಜೆನ್ನಿಫರ್ ಜರ‍್ರಿಟ್ ಉದ್ಘಾಟಿಸಲಿದ್ದಾರೆ. ಜೀವ ಚೈತನ್ಯ ಕೃಷಿ ಕುರಿತು ಬಯೋ ಡೈನಾಮಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷರಾದ ಡಾ.ಸಂದೀಪ್ ಕಾಮತ್ ಹಾಗೂ ಎಲ್ಲರ ಒಳಿತಿಗಾಗಿ ಸಾವಯವ ಕೃಷಿ ಬಗ್ಗೆ ಜಯರಾಂ ಹೆಚ್.ಆರ್ ಮತ್ತು ಶೂನ್ಯ ಬಂಡವಾಳದ ಸಹಜ ಕೃಷಿ ಹಾಗೂ ಕೃಷಿಯಲ್ಲಿ ಅಗ್ನಿಹೋತ್ರದ ಪಾತ್ರದ ಬಗ್ಗೆ ಪ್ರಗತಿ ಪರ ರೈತ ಹರ್ಷವರ್ಧನ್​ ಸಿ.ಜೆ ವಿಚಾರ ಮಂಡಿಸಲಿದ್ದಾರೆ ಎಂದರು.

ಅದೇ ದಿನ ಸಂಜೆ ನಟಿ, ನಿರೂಪಕಿ ಅನುಶ್ರೀ ನೇತೃತ್ವದಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ, ಚೆನ್ನಪ್ಪ, ಸುಹಾನ, ಸುನೀಲ್, ಪೃಥ್ವಿ ಭಟ್, ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಸುಮಧುರ ಸಂಗೀತ ಸಂಜೆ ನಡೆಯಲಿದೆ ಎಂದರು.

ನ.18 ರಂದು ಸಸ್ಯ ಸಂಪತ್ತಿನ ಅರಿವು ಮೂಡಿಸಲು ಪರಿಸರ ಪ್ರವಾಸ, ಸಂಜೆ ಜಾನಪದ ಸಂಭ್ರಮ, ನಂತರ ಆನೂರು ಅನಂತಕಷ್ಣ ಶರ್ಮ ಮತ್ತು ಸ್ಯಾಕ್ಸೋಫೋನ್ ಖ್ಯಾತಿಯ ಶ್ರೀಧರ್ ರಿಂದ ವಾದ್ಯ ಸಂಗೀತ ನಂತರ ಯಕ್ಷಗಾನ ನಡೆಯಲಿದೆ. ಅಂದು ಸಂಜೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಣ್ಣೂರು ಡಾಕಪ್ಪ, ಬಸಪ್ಪಗೌಡ್ರು, ರವಿ, ಗಾಜನೂರ ಗಣೇಶ್ ಮತ್ತಿತರರು ಇದ್ದರು.

ಶಿವಮೊಗ್ಗ: ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಹೊಸಗುಂದ ಉತ್ಸವ ಹಾಗೂ ಲಕ್ಷ ದೀಪೋತ್ಸವದ ಪೋಸ್ಟರ್​ನ್ನು ಇಂದು ಬಿಡುಗಡೆ ಗೊಳಿಸಲಾಯಿತು.

ನ.16ರಿಂದ ನಡೆಯುವ ಹೊಸಗುಂದ ಉತ್ಸವ: ಉತ್ಸವದ ಪೋಸ್ಟರ್ ಬಿಡುಗಡೆ

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಟ್ರಸ್ಟ್​ನ ಸಂಸ್ಥಾಪಕರು ಮತ್ತು ಮಾನ್ಯೇಜಿಂಗ್‌ ಟ್ರಸ್ಟಿ ಸಿ.ಎಂ.ಎನ್ ಶಾಸ್ತ್ರಿ ಮಾತನಾಡಿ, ಹಂಪಿ ಉತ್ಸವದ ಮಾದರಿಯಲ್ಲಿ ಈ ಹೊಸಗುಂದ ಉತ್ಸವವನ್ನು ಆಚರಿಸಲಾಗುತ್ತಿದೆ. ನ.16ರಿಂದ18ರವರೆಗೆ ಸಾಗರ ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 1200 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಕಾರ್ಯಕ್ರಮದ ಕುರಿತ ವಿವರ:
ನ.16ರಂದು ಶಿಥಿಲಾವಸ್ಥೆಯ ದೇಗುಲಗಳು ಮತ್ತೆ ಮೈದಳೆಯವ ಕುರಿತು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ವಿಚಾರ ಸಂಕಿರಣ ನಡೆಯಲಿದೆ. ಪ್ರಾಚೀನ ದೇಗುಲಗಳ ಛಾಯಾಚಿತ್ರ ಪ್ರದರ್ಶನ, ಹೊಸಗುಂದದ ಪಕ್ಷಿನೋಟ ಕುರಿತು ಸಂಶೋಧಕರ ಅಭಿಪ್ರಾಯ ಮತ್ತು ವಿಚಾರ ವಿನಿಮಯ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ನಿವೃತ್ತ ನಿರ್ದೇಶಕರಾದ ಡಾ.ಸಿದ್ದನಗೌಡರ್, ಡಾ.ಎಸ್,ಜಿ ಸಾಮಕ್ ಭಾಗವವಹಿಸಲಿದ್ದಾರೆ ಎಂದರು.

ನ.17ರಂದು ಸಾವಯವ ಕೃಷಿ, ಬದುಕು ಕುರಿತ ವಿಚಾರ ವಿನಿಮಯ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಮೇರಿಕಾದ ಮೌಂಟೇನ್ ರೋಸ್ ಹರ್ಬ್ಸ್ ಸಿಓಓ ಜೆನ್ನಿಫರ್ ಜರ‍್ರಿಟ್ ಉದ್ಘಾಟಿಸಲಿದ್ದಾರೆ. ಜೀವ ಚೈತನ್ಯ ಕೃಷಿ ಕುರಿತು ಬಯೋ ಡೈನಾಮಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷರಾದ ಡಾ.ಸಂದೀಪ್ ಕಾಮತ್ ಹಾಗೂ ಎಲ್ಲರ ಒಳಿತಿಗಾಗಿ ಸಾವಯವ ಕೃಷಿ ಬಗ್ಗೆ ಜಯರಾಂ ಹೆಚ್.ಆರ್ ಮತ್ತು ಶೂನ್ಯ ಬಂಡವಾಳದ ಸಹಜ ಕೃಷಿ ಹಾಗೂ ಕೃಷಿಯಲ್ಲಿ ಅಗ್ನಿಹೋತ್ರದ ಪಾತ್ರದ ಬಗ್ಗೆ ಪ್ರಗತಿ ಪರ ರೈತ ಹರ್ಷವರ್ಧನ್​ ಸಿ.ಜೆ ವಿಚಾರ ಮಂಡಿಸಲಿದ್ದಾರೆ ಎಂದರು.

ಅದೇ ದಿನ ಸಂಜೆ ನಟಿ, ನಿರೂಪಕಿ ಅನುಶ್ರೀ ನೇತೃತ್ವದಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ, ಚೆನ್ನಪ್ಪ, ಸುಹಾನ, ಸುನೀಲ್, ಪೃಥ್ವಿ ಭಟ್, ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಸುಮಧುರ ಸಂಗೀತ ಸಂಜೆ ನಡೆಯಲಿದೆ ಎಂದರು.

ನ.18 ರಂದು ಸಸ್ಯ ಸಂಪತ್ತಿನ ಅರಿವು ಮೂಡಿಸಲು ಪರಿಸರ ಪ್ರವಾಸ, ಸಂಜೆ ಜಾನಪದ ಸಂಭ್ರಮ, ನಂತರ ಆನೂರು ಅನಂತಕಷ್ಣ ಶರ್ಮ ಮತ್ತು ಸ್ಯಾಕ್ಸೋಫೋನ್ ಖ್ಯಾತಿಯ ಶ್ರೀಧರ್ ರಿಂದ ವಾದ್ಯ ಸಂಗೀತ ನಂತರ ಯಕ್ಷಗಾನ ನಡೆಯಲಿದೆ. ಅಂದು ಸಂಜೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಣ್ಣೂರು ಡಾಕಪ್ಪ, ಬಸಪ್ಪಗೌಡ್ರು, ರವಿ, ಗಾಜನೂರ ಗಣೇಶ್ ಮತ್ತಿತರರು ಇದ್ದರು.

Intro:ಶಿವಮೊಗ್ಗ,


೩ದಿನಗಳ ಕಾಲ ಹೊಸಗುಂದ ಉತ್ಸವ ಹಾಗೂ ವೈಭವದ ಲಕ್ಷ ದೀಪೋತ್ಸವದ ಪೋಸ್ಟರ್ ಬಿಡುಗಡೆ.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ (ರಿ) ವತಿಯಿಂದ ೩ದಿನಗಳ ಕಾಲ ಹೊಸಗುಂದ ಉತ್ಸವ ಹಾಗೂ ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ನ.೧೭,೧೮ ಮತ್ತು ೧೯ರಂದು ಸಾಗರ  ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಉಮಾಮಹೇಶ್ವರ ಸೇವಾಟ್ರಸ್ಟ್ನ ಸಂಸ್ಥಾಪಕರು ಮತ್ತು ಮಾನ್ಯೇಜಿಂಗ್‌ಟ್ರಸ್ಟಿ ಸಿ.ಎಂ.ಎನ್ ಶಾಸ್ತ್ರಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಹಂಪಿ ಉತ್ಸವದ ಮಾದರಿಯಲ್ಲಿ ಈ ಹೊಸಗುಂದ ಉತ್ಸವವನ್ನು ಆಚರಿಸಲಾಗುತ್ತಿದ್ದು, ೧೨೦೦ ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ವಿಚಾರ ಸಂಕಿರಣ:ಸಾಂಸ್ಕೃತಿಕ ಸಂಭ್ರಮ
ನ.೧೬ ರಂದು ಬೆಳಿಗ್ಗೆ ೧೦.೩೦ಕ್ಕೆ ಶಿಥಿಲಾವಸ್ಥೆಯ ದೇಗುಲಗಳ ಮತ್ತೆ ಮೈದಳೆಯವ ಬಗೆ ಕುರಿತು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ವಿಚಾರ ಸಂಕಿರಣ ನಡೆಯಲಿದೆ ಅಲ್ಲದೇ,ಈತನಕ ಸಂರಕ್ಷಿಸಲ್ಪಟ್ಟ ಪ್ರಾಚೀನ ದೇಗುಲಗಳ ಛಾಯಚಿತ್ರ ಪ್ರದರ್ಶನ ನಡೆಯಲಿದೆ.ಹೊಸಗುಂದದ ಪಕ್ಷಿನೋಟ ಕುರಿತು ಸಂಶೋಧಕರ ಅಭಿಪ್ರಾಯ  ಮತ್ತು ವಿಚಾರ ವಿನಿಮಯ ನಡೆಯಲಿದೆ.ಈ ಸಮಾರಂಭವನ್ನು ಪ್ರಾಚ್ಯವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ನಿವೃತ್ತ ನಿರ್ದೇಶಕರಾದ ಡಾ.ಸಿದ್ದನಗೌಡರ್,ಪುರಾತತ್ವ ಶಾಸ್ತçಜ್ಣರಾದ ಡಾ.ಎಸ್,ಜಿ ಸಾಮಕ್ ಭಾಗವವಹಿಸಲಿದ್ದಾರೆ ಎಂದರು.
ನ.೧೬ ರ ಸಂಜೆ ೬ ಗಂಟೆಯಿAದ ೭ರವೆರೆಗೆ ಸ್ಥಳೀಯ ಜಾನಪದ ಕಲಾ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಹಾಗೂ ಅದೇ ದಿನ ರಾತ್ರಿ ೭ ಗಂಟೆಯಿAದ ೯ ಗಂಟೆಯವರೆಗೆ ಗಂಗಾವತಿ ಪ್ರಾಣೇಶ್ ತಂಡದಿAದ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದರು.
ನ.೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ಸಾವಯವ ಕಷಿ, ಬದುಕು ಕುರಿತ ವಿಚಾರ ವಿನಿಮಯ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.ಈ ಕಾರ್ಯಕ್ರಮವನ್ನು ಅಮೇರಿಕಾದ ಮೌಂಟೇನ್ ರೋಸ್ ಹರ್ಬ್ಸ್ ಸಿಓಓ ಜೆನ್ನಿಫರ್ ಜರ‍್ರಿಟ್ ಉದ್ಘಾಟಿಸಲಿದ್ದಾರೆ.ಜೀವ ಚೈತನ್ಯ ಕೃಷಿ ಕುರಿತು ಬಯೋಡೈನಾಮಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷರಾದ ಡಾ.ಸಂದೀಪ್ ಕಾಮತ್ ಹಾಗೂ ಎಲ್ಲರ ಒಳಿತಿಗಾಗಿ ಸಾವಯವ ಕೃಷಿ ಬಗ್ಗೆ ಜಯರಾಂ ಹೆಚ್.ಆರ್ ಮತ್ತು ಶೂನ್ಯಬಂಡವಾಳದ ಸಹಜ ಕೃಷಿ ಹಾಗೂ ಕೃಷಿಯಲ್ಲಿ ಅಗ್ನಿಹೋತ್ರದ ಪಾತ್ರದ ಬಗ್ಗೆ ಪ್ರಗತಿ ಪರ ರೈತ ಹರ್ಷವರ್ದನ ಸಿ.ಜೆ ವಿಚಾರ ಮಂಡಿಸಲಿದ್ದಾರೆ ಎಂದರು.
ಅದೇ ದಿನ ಸಂಜೆ ೭ ಗಂಟೆಯಿAದ ನಟಿ,ನಿರೂಪಕಿ ಅನುಶ್ರೀ ನೇತೃತ್ವದಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ,ಚೆನ್ನಪ್ಪ,ಸುಹಾನ,ಸುನೀಲ್,ಪೃಥ್ವಿ ಭಟ್,ಸಾಧ್ವಿನಿ ಕೊಪ್ಪ ಮತ್ತು ತಂಡದವರಿAದ ಸುಮಧುರ ಸಂಗೀತ ಸಂಜೆ ನಡೆಯಲಿದ ಎಎಂದರು.
ನ.೧೮ ರಂದು ಸಸ್ಯ ಸಂಪತ್ತಿನ ಅರಿವು ಮೂಡಿಸಲು ಪರಿಸರ ಪ್ರವಾಸ, ಸಂಜೆ ಜಾನಪದ ಸಂಭ್ರಮ,  ನಂತರ ಆನೂರು ಅನಂತಕಷ್ಣ ಶರ್ಮ ಮತ್ತು ಸ್ಯಾಕ್ಸೋಫೋನ್ ಖ್ಯಾತಿಯ ಶ್ರೀಧರ್ ರಿಂದ ವಾದ್ಯ ಸಂಗೀತ ನಂತರ ಯಕ್ಷಗಾನ ನಡೆಯಲಿದೆ. ಅಂದು ಸಂಜೆ ೬ ಗಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.
 ಸುದ್ದಿಗೋಷ್ಟಿಯಲ್ಲಿ  ಪ್ರಮಖರಾದ ಕಣ್ಣೂರು ಡಾಕಪ್ಪ,ಬಸಪ್ಪಗೌಡ್ರು,ರವಿ,ಗಾಜನೂರ ಗಣೇಶ್ ಮತ್ತಿತರರು ಇದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.