ETV Bharat / state

ದೇವಾಲಯದಲ್ಲಿ ಕಾವಲುಗಾರನ ಥಳಿಸಿ ಹುಂಡಿ ದೋಚಿದ ಐವರ ಬಂಧನ: ಪಿಸ್ತೂಲ್, ಜೀವಂತ ಗುಂಡುಗಳು ವಶ

author img

By

Published : Dec 6, 2019, 11:12 PM IST

ಶಿವಮೊಗ್ಗ ತಾಲೂಕು ಬಿದರೆ ಗ್ರಾಮದ ಸಾಯಿಬಾಬ ದೇವಾಲಯದಲ್ಲಿ ನವೆಂಬರ್ 25 ರಂದು ಕಳ್ಳತನವಾಗಿತ್ತು. ಕಳ್ಳತನಕ್ಕೆ ಬಂದಿದ್ದ ಐವರು ಆರೋಪಿಗಳು ದೇವಾಲಯದ ಕಾವಲುಗಾರರನ್ನು ಥಳಿಸಿ, ಕಂಬಕ್ಕೆ ಕಟ್ಟಿ ನಂತರ ಗುಡಿಯೊಳಗೆ ನುಗ್ಗಿ ಕಾಣಿಕೆ ಹುಂಡಿ ಒಡೆದು ಹಣ ಎಗರಿಸಿಕೊಂಡು ಹೋಗಿದ್ದರು.

smg
ದೇವಾಲಯದಲ್ಲಿ ದರೋಡೆ ಮಾಡಿದ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ : ಶಿವಮೊಗ್ಗ ಹೊರವಲಯ ಬಿದಿರೆ ಗ್ರಾಮದಲ್ಲಿ ಸಾಯಿಬಾಬ ಗುಡಿಯಲ್ಲಿ ಕಾವಲುಗಾರನ ಮೇಲೆ ಹಲ್ಲೆ ನಡೆಸಿ, ಕಾಣಿಕೆ ಹುಂಡಿ ಕದ್ದು ಪರಾರಿಯಾಗಿದ್ದ ಐವರು ಖದೀಮರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದೇವಾಲಯದಲ್ಲಿ ದರೋಡೆ ನಡೆಸಿದ ಐವರು ಆರೋಪಿಗಳ ಬಂಧನ

ಶಿವಮೊಗ್ಗ ತಾಲೂಕು ಬಿದರೆ ಗ್ರಾಮದ ಸಾಯಿಬಾಬ ದೇವಾಲಯದಲ್ಲಿ ನವೆಂಬರ್ 25 ರಂದು ಕಳ್ಳತನವಾಗಿತ್ತು. ಕಳ್ಳತನಕ್ಕೆ ಬಂದಿದ್ದ ಐವರು ದೇವಾಲಯದ ಕಾವಲುಗಾರರನ್ನು ಥಳಿಸಿ, ಕಂಬಕ್ಕೆ ಕಟ್ಟಿ ನಂತರ ಗುಡಿಯ ಒಳಗೆ ನುಗ್ಗಿ ಕಾಣಿಕೆ ಹುಂಡಿ ಒಡೆದು ಹಣ ತೆಗೆದುಕೊಂಡು ಹೋಗಿದ್ದರು.

ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮೊಹಮದ್ ಗೌಸ್(34), ಪ್ರೇಮನಾಥ(18) , ತೌಸೀಫ್ ಅಹಮದ್(30) ಹಾಗೂ ತಿಮ್ಮಯ್ಯ(58) ಎಂದು ಗುರುತಿಸಲಾಗಿದೆ.

ಮಹಮದ್ ಇಸ್ಮಾಯಿಲ್ (49) ಎಂಬವನನ್ನು ಸಕ್ರೆಬೈಲು ಬಳಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಹಮದ್ ತಾವೆಲ್ಲರೂ ಸೇರಿ ಕಳ್ಳತನ ಮಾಡಿದ್ದು ಹಾಗೂ ತನ್ನ ಸಹಚರರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ನಂತರ ಉಳಿದ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಂದು ನಾಡ ಪಿಸ್ತೂಲ್, 9 ಜೀವಂತ ಗುಂಡುಗಳು, 24,500 ಹಣ, ಕೃತ್ಯಕ್ಕೆ ಬಳಸಿದ ರೇನ್ ಕೊಟ್, ಜರ್ಕಿನ್ ಹಾಗೂ ಮಂಕಿಕ್ಯಾಪ್, ಕಬ್ಬಿಣದ ರಾಡು, ಆಕ್ಸೆಲ್ ಬ್ಲೇಡ್​ಗಳ ಜೊತೆ ಒಂದು ಮಹೀಂದ್ರ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಳ್ಳತನ ನಡೆದ 10 ದಿನದೊಳಗೆ ಕಳ್ಳರನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಸಿಪಿಐ ಲೋಕೇಶ್, ಪಿಎಸ್ಐ ಮಂಜುನಾಥ ಕುಪ್ಪೆಲೂರು ಹಾಗೂ ಅವರ ತಂಡಕ್ಕೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿ, 20 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.

ಶಿವಮೊಗ್ಗ : ಶಿವಮೊಗ್ಗ ಹೊರವಲಯ ಬಿದಿರೆ ಗ್ರಾಮದಲ್ಲಿ ಸಾಯಿಬಾಬ ಗುಡಿಯಲ್ಲಿ ಕಾವಲುಗಾರನ ಮೇಲೆ ಹಲ್ಲೆ ನಡೆಸಿ, ಕಾಣಿಕೆ ಹುಂಡಿ ಕದ್ದು ಪರಾರಿಯಾಗಿದ್ದ ಐವರು ಖದೀಮರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದೇವಾಲಯದಲ್ಲಿ ದರೋಡೆ ನಡೆಸಿದ ಐವರು ಆರೋಪಿಗಳ ಬಂಧನ

ಶಿವಮೊಗ್ಗ ತಾಲೂಕು ಬಿದರೆ ಗ್ರಾಮದ ಸಾಯಿಬಾಬ ದೇವಾಲಯದಲ್ಲಿ ನವೆಂಬರ್ 25 ರಂದು ಕಳ್ಳತನವಾಗಿತ್ತು. ಕಳ್ಳತನಕ್ಕೆ ಬಂದಿದ್ದ ಐವರು ದೇವಾಲಯದ ಕಾವಲುಗಾರರನ್ನು ಥಳಿಸಿ, ಕಂಬಕ್ಕೆ ಕಟ್ಟಿ ನಂತರ ಗುಡಿಯ ಒಳಗೆ ನುಗ್ಗಿ ಕಾಣಿಕೆ ಹುಂಡಿ ಒಡೆದು ಹಣ ತೆಗೆದುಕೊಂಡು ಹೋಗಿದ್ದರು.

ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮೊಹಮದ್ ಗೌಸ್(34), ಪ್ರೇಮನಾಥ(18) , ತೌಸೀಫ್ ಅಹಮದ್(30) ಹಾಗೂ ತಿಮ್ಮಯ್ಯ(58) ಎಂದು ಗುರುತಿಸಲಾಗಿದೆ.

ಮಹಮದ್ ಇಸ್ಮಾಯಿಲ್ (49) ಎಂಬವನನ್ನು ಸಕ್ರೆಬೈಲು ಬಳಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಹಮದ್ ತಾವೆಲ್ಲರೂ ಸೇರಿ ಕಳ್ಳತನ ಮಾಡಿದ್ದು ಹಾಗೂ ತನ್ನ ಸಹಚರರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ನಂತರ ಉಳಿದ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಂದು ನಾಡ ಪಿಸ್ತೂಲ್, 9 ಜೀವಂತ ಗುಂಡುಗಳು, 24,500 ಹಣ, ಕೃತ್ಯಕ್ಕೆ ಬಳಸಿದ ರೇನ್ ಕೊಟ್, ಜರ್ಕಿನ್ ಹಾಗೂ ಮಂಕಿಕ್ಯಾಪ್, ಕಬ್ಬಿಣದ ರಾಡು, ಆಕ್ಸೆಲ್ ಬ್ಲೇಡ್​ಗಳ ಜೊತೆ ಒಂದು ಮಹೀಂದ್ರ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಳ್ಳತನ ನಡೆದ 10 ದಿನದೊಳಗೆ ಕಳ್ಳರನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಸಿಪಿಐ ಲೋಕೇಶ್, ಪಿಎಸ್ಐ ಮಂಜುನಾಥ ಕುಪ್ಪೆಲೂರು ಹಾಗೂ ಅವರ ತಂಡಕ್ಕೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿ, 20 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ.

Intro:ಗುಡಿಯಲ್ಲಿ‌ ದರೋಡೆ ನಡೆಸಿದ ಐವರು ಬಂಧನ: ಬಂಧಿತರಿಂದ ಪಿಸ್ತೂಲ್, ಜೀವಂತ ಗುಂಡು ವಶ.

ಶಿವಮೊಗ್ಗ : ಶಿವಮೊಗ್ಗ ಹೊರ ವಲಯ ಬಿದಿರೆ ಗ್ರಾಮದಲ್ಲಿ ಸಾಯಿಬಾಬ ಗುಡಿಯಲ್ಲಿ ವಾಚ್ ಮೆನ್ ಮೇಲೆ ಹಲ್ಲೆ ನಡೆಸಿ, ಕಾಣಿಕೆ ಹುಂಡಿಯನ್ನು ಕದ್ದು ಪರಾರಿಯಾಗಿದ್ದ ಐವರು ಕದೀಮರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಅಂದರ್ ಮಾಡಿದ್ದಾರೆ. ಶಿವಮೊಗ್ಗ ತಾಲೂಕು ಬಿದರೆ ಗ್ರಾಮದ ಸಾಯಿಬಾಬ ಗುಡಿಯಲ್ಲಿ ನವೆಂಬರ್ 25 ರಂದು ಕಳ್ಳತನವಾಗಿತ್ತು. ಕಳ್ಳತನಕ್ಕೆ ಬಂದಿದ್ದ ಐವರ ತಂಡ ಗುಡಿಯ ವಾವ್ ಮೆನ್ ನನ್ನು ಥಳಿಸಿ, ಕಂಬಕ್ಕೆ ಕಟ್ಟಿ ನಂತ್ರ ಗುಡಿಯ ಒಳಗೆ ನುಗ್ಗಿ ಕಾಣಿಕೆಯನ್ನು ಹೊಡೆದು ಹಣವನ್ನು ಎಗರಿಸಿ ಕೊಂಡು ಹೋಗಿದ್ದರು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.Body:ಮೊಹಮದ್ ಗೌಸ್(34), ಪ್ರೇಮನಾಥ(18) ,ತೌಸೀಫ್ ಅಹಮದ್(30) ಹಾಗೂ ತಿಮ್ಮಯ್ಯ(58) ಬಂಧಿಸಲಾಗಿದೆ. ಇದಕ್ಕೂ ಮೊದಲು ಮಹಮದ್ ಇಸ್ಮಾಯಿಲ್ (49) ನನ್ನು ಸಕ್ರೆಬೈಲು ಬಳಿ ವಶಕ್ಕೆ ತೆಗೆದು ವಿಚಾರಣೆ ನಡೆಸಿದಾಗ ಮಹಮದ್ ಕಳ್ಳತನ ಹಾಗೂ ತನ್ನ ಸಹಚರರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ನಂತ್ರ ಉಳಿದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಕಂಟ್ರಿಮೆಂಟ್ ಮೆಡ್ ಪಿಸ್ತೂಲ್, 09 ಜೀವಂತ ಗುಂಡುಗಳು, 24.500 ಹಣ, ಕೃತ್ಯಕ್ಕೆ ಬಳಸಿದ ರೇನ್ ಕೊಟ್, ಜರ್ಕಿನ್ ಹಾಗೂ ಮಂಕಿಕ್ಯಾಪ್, ಕಬ್ಬಿಣದ ರಾಡು, ಆಕ್ಸೆಲ್ ಬ್ಲೇಡ್ ಗಳ ಜೊತೆ ಒಂದು ಮಹೀಂದ್ರ XUV ಕಾರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.Conclusion:ಕಳ್ಳತನ ನಡೆದು 10 ದಿನದ ಒಳಗೆ ಕಳ್ಳರನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಸಿಪಿಐ ಲೋಕೇಶ್, ಪಿಎಸ್ಐ ಮಂಜು ಕುಪ್ಪೆಲೂರು ಹಾಗೂ ಅವರ ತಂಡಕ್ಕೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿ, 20 ಸಾವಿರ ರೂ ಬಹುಮಾನ ನೀಡಿದ್ದಾರೆ.

ಬೈಟ್: ಶಾಂತರಾಜು.‌ಎಸ್ಪಿ. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.