ETV Bharat / state

ನಮ್ಮನ್ನ ಬೈದಿದ್ದು ಸಾಕು, ಕಾರ್ಯಕ್ರಮಕ್ಕೆ ಬನ್ನಿ ... ನಗುತ್ತಲೇ ಖಾದರ್​ಗೆ ಆಹ್ವಾನವಿತ್ತ ಈಶ್ವರಪ್ಪ

ಖಾದರ್ ಸುದ್ದಿಗೋಷ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ನಮ್ಮನ್ನು ಬೈದಿದ್ದು ಸಾಕು. ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ನಗು ಮುಖದಿಂದಲೇ ಈಶ್ವರಪ್ಪ ಆಹ್ವಾನ ನೀಡಿದರು. ಈ ವೇಳೆ ಗಲಿಬಿಲಿಗೊಂಡ ಸಚಿವ ಖಾದರ್, ಈಶ್ವರಪ್ಪಗೆ ಪತ್ಯುತ್ತರ ನೀಡಿ ಅವರನ್ನು ಅಲ್ಲಿಂದ ಕಳಿಸಿಕೊಟ್ಟರು.

author img

By

Published : Feb 24, 2019, 9:06 PM IST

Updated : Feb 24, 2019, 9:14 PM IST

ಖಾದರ್​ , ಈಶ್ವರಪ್ಪ

ಶಿವಮೊಗ್ಗ: ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಟಿ ನಡೆಸಿ ಕೇಂದ್ರದ ವಿರುದ್ಧ ಮಾತನಾಡುತ್ತಿದ್ದ ವೇಳೆ ಈಶ್ವರಪ್ಪ ಸ್ಥಳಕ್ಕಾಗಮಿಸಿದರು. ಆ ನಗು ನಗುತ್ತಲೇ, ಬೈದಿದ್ದು ಸಾಕು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದ ಸನ್ನಿವೇಶವೊಂದು ಕಂಡುಬಂತು.

ಈಶ್ವರಪ್ಪ ಖಾದರ್​ ಸುದ್ದಿಗೋಷ್ಟಿ

ಖಾದರ್ ಸುದ್ದಿಗೋಷ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ನಮ್ಮನ್ನು ಬೈದಿದ್ದು ಸಾಕು. ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ನಗು ಮುಖದಿಂದಲೇ ಈಶ್ವರಪ್ಪ ಆಹ್ವಾನ ನೀಡಿದರು. ಈ ವೇಳೆ ಗಲಿಬಿಲಿಗೊಂಡ ಸಚಿವ ಖಾದರ್, ಈಶ್ವರಪ್ಪಗೆ ಪತ್ಯುತ್ತರ ನೀಡಿ ಅವರನ್ನು ಅಲ್ಲಿಂದ ಕಳಿಸಿಕೊಟ್ಟರು.

ಈಶ್ವರಪ್ಪ ಖಾದರ್​ ಸುದ್ದಿಗೋಷ್ಟಿ

ನಂತರ ಮಾತನಾಡಿದ ಖಾದರ್, ದೇಶದ ಹಿತ ಕಾಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ನರೇಂದ್ರ ಮೋದಿಯವರು ಚುನಾವಣೆಯ ಮುಂಚೆ ಹೇಳಿದ್ದ ಒಂದು ಮಾತನ್ನೂ ಈಡೇರಿಸಿಲ್ಲ. ದೇಶದ ಭವಿಷ್ಯಕ್ಕೆ ಬೇಕಾದ ಒಂದು ದೊಡ್ಡ ಯೋಜನೆಯನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜಾರಿಗೆ ತರಲಿಲ್ಲ. ಹಾಗೇನಾದ್ರೂ ತಂದಿದ್ದರೆ ಆದನ್ನು ತೋರಿಸಲಿ ಎಂದರು ಎಂದು ಸವಾಲು ಹಾಕಿದರು.

ಕೇಂದ್ರದ ನೀತಿಗಳಿಂದ ನೀತಿ ಆಯೋಗದ ಅಧ್ಯಕ್ಷರು, ಅದರಂತೆ ರಿಸರ್ವ್​ ಬ್ಯಾಂಕ್ ಅಧ್ಯಕ್ಷರು ಸಹ ರಾಜೀನಾಮೆ ಕೊಟ್ಟು ಹೋಗುವಂತಾಯಿತು. ಇನ್ನು ಪಾಕಿಸ್ತಾನದ ವಿಚಾರದಲ್ಲಿ ನರೇಂದ್ರ ಮೋದಿ ಸ್ವಲ್ಪವಾದರೂ ಸಹ ಇಂದಿರಗಾಂಧಿಯಂತೆ ನಡೆದುಕೊಳ್ಳಲಿ ಎಂದು ಖಾದರ್​ ಆಗ್ರಹಿಸಿದರು.

ಚುನಾವಣೆಗೂ ಮುನ್ನ ಓರ್ವ ಯೋಧನ ತಲೆ ಹೋದ್ರೆ ನಾಲ್ಕು ತಲೆ ತರುವುದಾಗಿ ಹೇಳಿದ್ದ ಮೋದಿ ಪುಲ್ವಾಮಾ ದಾಳಿಯ ನಂತ್ರ ಸುಮ್ಮನೆ ಇರುವುದು ಏಕೆ? ಪಂಜಾಬ್​ನ ಪಠಾಣ್ ಕೋಟ್ ದಾಳಿಯ ನಂತ್ರ ಪಾಕಿಸ್ತಾನದ ಐಎಸ್ಐ ತಂಡವನ್ನು ಭಾರತಕ್ಕೆ ಬಿಟ್ಟು ತನಿಖೆ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದು ಎಷ್ಟು‌ ಸರಿ. ಈ ವಿಚಾರಗಳ ಚರ್ಚೆ ಆಗಬೇಕಿದೆ ಎಂದು ಖಾದರ್​ ಒತ್ತಾಯಿಸಿದರು.

ಕಳೆದ ಎಂಟು ತಿಂಗಳಲ್ಲಿ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ‌ ವಿಫಲರಾಗಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದರೆ ನಾವು ಒನ್ ಡೇ ಮ್ಯಾಚ್ ಆಡುತ್ತೇವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ವಿಫಲಕ್ಕೆ ಸಚಿವ ಖಾದರ್​ ಟಾಂಗ್ ನೀಡಿದ್ರು.

ಶಿವಮೊಗ್ಗ: ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಟಿ ನಡೆಸಿ ಕೇಂದ್ರದ ವಿರುದ್ಧ ಮಾತನಾಡುತ್ತಿದ್ದ ವೇಳೆ ಈಶ್ವರಪ್ಪ ಸ್ಥಳಕ್ಕಾಗಮಿಸಿದರು. ಆ ನಗು ನಗುತ್ತಲೇ, ಬೈದಿದ್ದು ಸಾಕು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದ ಸನ್ನಿವೇಶವೊಂದು ಕಂಡುಬಂತು.

ಈಶ್ವರಪ್ಪ ಖಾದರ್​ ಸುದ್ದಿಗೋಷ್ಟಿ

ಖಾದರ್ ಸುದ್ದಿಗೋಷ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ನಮ್ಮನ್ನು ಬೈದಿದ್ದು ಸಾಕು. ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ನಗು ಮುಖದಿಂದಲೇ ಈಶ್ವರಪ್ಪ ಆಹ್ವಾನ ನೀಡಿದರು. ಈ ವೇಳೆ ಗಲಿಬಿಲಿಗೊಂಡ ಸಚಿವ ಖಾದರ್, ಈಶ್ವರಪ್ಪಗೆ ಪತ್ಯುತ್ತರ ನೀಡಿ ಅವರನ್ನು ಅಲ್ಲಿಂದ ಕಳಿಸಿಕೊಟ್ಟರು.

ಈಶ್ವರಪ್ಪ ಖಾದರ್​ ಸುದ್ದಿಗೋಷ್ಟಿ

ನಂತರ ಮಾತನಾಡಿದ ಖಾದರ್, ದೇಶದ ಹಿತ ಕಾಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ನರೇಂದ್ರ ಮೋದಿಯವರು ಚುನಾವಣೆಯ ಮುಂಚೆ ಹೇಳಿದ್ದ ಒಂದು ಮಾತನ್ನೂ ಈಡೇರಿಸಿಲ್ಲ. ದೇಶದ ಭವಿಷ್ಯಕ್ಕೆ ಬೇಕಾದ ಒಂದು ದೊಡ್ಡ ಯೋಜನೆಯನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜಾರಿಗೆ ತರಲಿಲ್ಲ. ಹಾಗೇನಾದ್ರೂ ತಂದಿದ್ದರೆ ಆದನ್ನು ತೋರಿಸಲಿ ಎಂದರು ಎಂದು ಸವಾಲು ಹಾಕಿದರು.

ಕೇಂದ್ರದ ನೀತಿಗಳಿಂದ ನೀತಿ ಆಯೋಗದ ಅಧ್ಯಕ್ಷರು, ಅದರಂತೆ ರಿಸರ್ವ್​ ಬ್ಯಾಂಕ್ ಅಧ್ಯಕ್ಷರು ಸಹ ರಾಜೀನಾಮೆ ಕೊಟ್ಟು ಹೋಗುವಂತಾಯಿತು. ಇನ್ನು ಪಾಕಿಸ್ತಾನದ ವಿಚಾರದಲ್ಲಿ ನರೇಂದ್ರ ಮೋದಿ ಸ್ವಲ್ಪವಾದರೂ ಸಹ ಇಂದಿರಗಾಂಧಿಯಂತೆ ನಡೆದುಕೊಳ್ಳಲಿ ಎಂದು ಖಾದರ್​ ಆಗ್ರಹಿಸಿದರು.

ಚುನಾವಣೆಗೂ ಮುನ್ನ ಓರ್ವ ಯೋಧನ ತಲೆ ಹೋದ್ರೆ ನಾಲ್ಕು ತಲೆ ತರುವುದಾಗಿ ಹೇಳಿದ್ದ ಮೋದಿ ಪುಲ್ವಾಮಾ ದಾಳಿಯ ನಂತ್ರ ಸುಮ್ಮನೆ ಇರುವುದು ಏಕೆ? ಪಂಜಾಬ್​ನ ಪಠಾಣ್ ಕೋಟ್ ದಾಳಿಯ ನಂತ್ರ ಪಾಕಿಸ್ತಾನದ ಐಎಸ್ಐ ತಂಡವನ್ನು ಭಾರತಕ್ಕೆ ಬಿಟ್ಟು ತನಿಖೆ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದು ಎಷ್ಟು‌ ಸರಿ. ಈ ವಿಚಾರಗಳ ಚರ್ಚೆ ಆಗಬೇಕಿದೆ ಎಂದು ಖಾದರ್​ ಒತ್ತಾಯಿಸಿದರು.

ಕಳೆದ ಎಂಟು ತಿಂಗಳಲ್ಲಿ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ‌ ವಿಫಲರಾಗಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದರೆ ನಾವು ಒನ್ ಡೇ ಮ್ಯಾಚ್ ಆಡುತ್ತೇವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ವಿಫಲಕ್ಕೆ ಸಚಿವ ಖಾದರ್​ ಟಾಂಗ್ ನೀಡಿದ್ರು.

Intro:ಕೇಂದ್ರದ ಹಿತ ಕಾಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಕೇಂದ್ರದ ವಿರುದ್ದ ಶಿವಮೊಗ್ಗದಲ್ಲಿ ಹರಿಹಾಯ್ದಿದ್ದಾರೆ. ನರೇಂದ್ರ ಮೋದಿರವರು ಚುನಾವಣೆಯ ಮುಂಚೆ ಹೇಳಿದ ಒಂದು ಮಾತನ್ನು ಈಡೇರಿಸಿಲ್ಲ. ದೇಶದ ಭವಿಷ್ಯಕ್ಕೆ ಬೇಕಾದ ಒಂದು ದೊಡ್ಡ ಯೋಜನೆಯನ್ನು ಕಳೆದ ನಾಲ್ಕುವರೆ ವರ್ಷದಲ್ಲಿ ಜಾರಿಗೆ ತರಲಿಲ್ಲ. ಹಾಗೇನಾದ್ರೂ ತಂದಿದ್ದರೆ ಆದನ್ನು ತೋರಿಸಲಿ ಎಂದರು ಈ ವೇಳೆ ಖಾದರ್ ರವರು ಸುದ್ದಿಗೋಷ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ನಮ್ಮನ್ನು ಬೈದಿದ್ದು ಸಾಕು ಕಾರ್ಯಕ್ರಮಕ್ಕೆ ಬನ್ನಿ ಎಂದು ನಗು ಮುಖದಿಂದಲೇ ಆಹ್ವಾನ ನೀಡಿದರು. ಈ ವೇಳೆ ಗಲಿಬಿಲಿ ಗೊಂಡ ಸಚಿವ ಖಾದರ್ ಬರುತ್ತೆನೆ ಎಂದು ಹೇಳಿದರು. ನಂತ್ರ ಪಕ್ಕದ ರೂಂನಲ್ಲಿ ಈಶ್ವರಪ್ಪ ಕುಳಿತು ಕೊಂಡರು. ಹಾಲಿ ಮಾಜಿ ಸಚಿವರ ಮಾತುಕಥೆ ನೆರೆದಿದ್ದರಿಗೆ ನಗು ತರಿಸುವಂತೆ ಆಯಿತು.


Body:ಇವರ ಅವಧಿಯಲ್ಲಿ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಆದ್ರೆ, ಇವರ ನೀತಿಗಳಿಂದ ನೀತಿ ಆಯೋಗದ ಅಧ್ಯಕ್ಷರು ಅದರಂತೆ ರಿಸರ್ವ ಬ್ಯಾಂಕ್ ಅಧ್ಯಕ್ಷರು ಸಹ ರಾಜೀನಾಮೆ ಕೊಟ್ಟು ಹೋಗುವಂತೆ ಮಾಡಿದ್ದರು. ಪಾಕಿಸ್ತಾನದ ವಿಚಾರದಲ್ಲಿ ನರೇಂದ್ರ ಮೋದಿ ಸ್ವಲ್ಪವಾದರೂ ಸಹ ಇಂದಿರಗಾಂಧಿಯಂತೆ ನಡೆದು ಕೊಳ್ಳಲಿ ಎಂದರು. ಚುನಾವಣೆಗೂ ಮುನ್ನಾ ಓರ್ವ ಯೋಧನ ತಲೆ ಹೋದ್ರೆ ನಾಲ್ಕು ತಲೆ ತರುವುದಾಗಿ ಹೇಳಿದ್ದ ಮೋದಿ ಪುಲ್ವಾಮ ದಾಳಿಯ ನಂತ್ರ ಸುಮ್ಮನೆ ಇರುವುದು ಏಕೆ ಪ್ರಶ್ನೆ ಮಾಡಿದರು.


Conclusion:ಪಂಜಾಬ್ ನ ಪಠಾಣ್ ಕೋಟ್ ದಾಳಿಯ ನಂತ್ರ ಪಾಕಿಸ್ತಾನದ ಐಎಸ್ಐ ತಂಡವನ್ನು ಭಾರತಕ್ಕೆ ಬಿಟ್ಟು ತನಿಖೆ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದು ಎಷ್ಟು‌ ಸರಿ. ಈ ವಿಚಾರಗಳ ಚರ್ಚೆ ಆಗಬೇಕಿದೆ ಎಂದರು. ಮುಂಬರುವ ಲೋಕಸಭ ಚುನಾವಣೆಯಲ್ಲಿ ಎರಡು ಪಕ್ಷದ ಹೈಕಮಾಂಡ್ ರವರು ಕುಳಿತು ಟಿಕೇಟ್ ಹಂಂಚಿಕೆ ಮಾಡಲಿದ್ದಾರೆ ಎಂದರು. ಅಲ್ಲದೆ ಕಳೆದ ಎಂಟು ತಿಂಗಳಲ್ಲಿ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ‌ ವಿಫಲರಾಗಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿ ಕೊಂಡಿದ್ದಾರೆ. ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದರೆ ನಾವು ಒನ್ ಡೇ ಮ್ಯಾಚ್ ಆಡುತ್ತೆವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ವಿಫಲಕ್ಕೆ ಬಿಜೆಪಿಗೆ ಟಾಂಗ್ ನೀಡಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
Last Updated : Feb 24, 2019, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.