ETV Bharat / state

ಶಿವಮೊಗ್ಗ: ಇಎಸ್ಐಸಿ 100 ಬೆಡ್ ಗಳ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ

author img

By

Published : Apr 23, 2021, 2:48 PM IST

ಶಿವಮೊಗ್ಗ ಜಿಲ್ಲೆಯ ಬಹು ದಿನದ ಬೇಡಿಕೆಯಾದ ಇಎಸ್ಐಸಿ ಆಸ್ಪತ್ರೆ ಕಟ್ಡಡದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದ್ದಾರೆ.

Drive to ESIC 100 Bed Hospital Building in Shimoga
ಇಎಸ್ಐಸಿ 100 ಬೆಡ್ ಗಳ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ

ಶಿವಮೊಗ್ಗ: ಜಿಲ್ಲೆಯ ಕಾರ್ಮಿಕರ ಬಹು ದಿನದ ಬೇಡಿಕೆಯಾದ ಇಎಸ್ಐಸಿ ಆಸ್ಪತ್ರೆ ಕಟ್ಡಡದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದ್ದಾರೆ. ನಗರದ ಹೊರ ವಲಯ ರಾಗಿಗುಡ್ಡದಲ್ಲಿ ಇಎಸ್ಐಸಿ ಅಸ್ಪತ್ರೆಯ 100 ಬೆಡ್​​​​​ಗಳ‌ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 2019ರಲ್ಲಿ ಗುದ್ದಲಿ ಪೂಜೆ ನಡೆಸಲಾಗಿತ್ತು. ಈಗ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಗಿಗುಡ್ಡದ ಕೆಳ ಭಾಗದಲ್ಲಿ ಎರಡು ವರ್ಷಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಲಿದೆ.

ಕೋವಿಡ್ ಸಂದರ್ಭದಲ್ಲಿ ದೇಶದ ಎಲ್ಲ ಯೋಜನೆಗಳಿಗೆ ಬ್ರೇಕ್ ಹಾಕುವ ಅನಿವಾರ್ಯ ಸಂದರ್ಭ ಬಂದಿದೆ. ಆದರೂ ಕೇಂದ್ರದ ಕಾರ್ಮಿಕ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಲಾಗಿದೆ. ಈ ಯೋಜನೆ ಕೈ ಬಿಟ್ಟು ಹೋಗುತ್ತದೆ ಎಂಬ ಆಂತಕ ನಮ್ಮ ಕಾರ್ಮಿಕ ವಲಯದಲ್ಲಿ ಇತ್ತು. ಆದರೆ, ಆಸ್ಪತ್ರೆ ಮಾಡಲೇಬೇಕೆಂದು ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಆಸ್ಪತ್ರೆ ಕೇವಲ ಶಿವಮೊಗ್ಗ ಜಿಲ್ಲೆಗಷ್ಟೆ ಅಲ್ಲದೇ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಜನತೆಗೂ ಅನುಕೂಲವಾಗಲಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಕಟ್ಟಡ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಮುಗಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಎರಡು ವರ್ಷದ ಒಳಗೆ ಕಾಮಗಾರಿ ಮುಗಿಸಿದರೆ ಬೋನಸ್ ನೀಡಲಾಗುವುದು. ಇಎಸ್ಐಸಿ ಆಸ್ಪತ್ರೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗೆ ಒಂದು ಮೈಲಿಗಲ್ಲು ಆಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ , ನಮ್ಮ ಸಂಸದರು, ಜಿಲ್ಲೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಳೆದ ಲೋಕಸಭ ಚುನಾವಣೆಯಲ್ಲಿ ನಟರಾಜ್ ಹಾಗೂ ಇತರರು ಇಎಸ್ಐಸಿ ಆಸ್ಪತ್ರೆ ಮಾಡುವ ಕುರಿತು ಆಶ್ವಾಸನೆ ನೀಡಿ ಪ್ರಚಾರ ನಡೆಸಿದ್ದರು. ಈಗ ಅದು ಜಾರಿಗೆ ಬರುತ್ತಿದೆ. ಇದು ಒಂದು ರೀತಿ ಋಣ ತೀರಿಸಿದಂತೆ ಎಂದರು.

ಓದಿ : ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ‌ ಬೆಡ್-ಆಕ್ಸಿಜನ್​ ಇಲ್ಲ: ಕೊರೊನಾ ರೋಗಿಗಳ ಗೋಳು ಕೇಳೋರಿಲ್ಲ! ವಿಡಿಯೋ

ನಮ್ಮ ರಾಜ್ಯದಿಂದ ಯಾವುದೇ ಯೋಜನೆ ತೆಗೆದುಕೊಂಡು ಹೋದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲ ಎಂದು ಹೇಳುವುದಿಲ್ಲ. ಆದರೆ, ನಮ್ಮ ರಾಜ್ಯದ ವಿರೋಧ ಪಕ್ಷದವರಿಗೆ ಇದು ಗೂತ್ತೆ ಇಲ್ಲ. ಸುಮ್ಮನೆ ನಮ್ಮ ರಾಜ್ಯದ ವಿರೋಧ ಪಕ್ಷದವರು ಕೇವಲ ಟೀಕೆ ಮಾಡುವುದನ್ನೆ ಕೆಲಸ ಮಾಡಿದ್ದಾರೆ. ಅಭಿವೃದ್ದಿ ಕೆಲಸದ ಕುರಿತು ಸಲಹೆ ನೀಡಿದ್ರೆ ಸ್ವೀಕಾರ ಮಾಡುತ್ತೇವೆ ಎಂದರು.‌

ಶಿವಮೊಗ್ಗ: ಜಿಲ್ಲೆಯ ಕಾರ್ಮಿಕರ ಬಹು ದಿನದ ಬೇಡಿಕೆಯಾದ ಇಎಸ್ಐಸಿ ಆಸ್ಪತ್ರೆ ಕಟ್ಡಡದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದ್ದಾರೆ. ನಗರದ ಹೊರ ವಲಯ ರಾಗಿಗುಡ್ಡದಲ್ಲಿ ಇಎಸ್ಐಸಿ ಅಸ್ಪತ್ರೆಯ 100 ಬೆಡ್​​​​​ಗಳ‌ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 2019ರಲ್ಲಿ ಗುದ್ದಲಿ ಪೂಜೆ ನಡೆಸಲಾಗಿತ್ತು. ಈಗ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಗಿಗುಡ್ಡದ ಕೆಳ ಭಾಗದಲ್ಲಿ ಎರಡು ವರ್ಷಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಲಿದೆ.

ಕೋವಿಡ್ ಸಂದರ್ಭದಲ್ಲಿ ದೇಶದ ಎಲ್ಲ ಯೋಜನೆಗಳಿಗೆ ಬ್ರೇಕ್ ಹಾಕುವ ಅನಿವಾರ್ಯ ಸಂದರ್ಭ ಬಂದಿದೆ. ಆದರೂ ಕೇಂದ್ರದ ಕಾರ್ಮಿಕ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಲಾಗಿದೆ. ಈ ಯೋಜನೆ ಕೈ ಬಿಟ್ಟು ಹೋಗುತ್ತದೆ ಎಂಬ ಆಂತಕ ನಮ್ಮ ಕಾರ್ಮಿಕ ವಲಯದಲ್ಲಿ ಇತ್ತು. ಆದರೆ, ಆಸ್ಪತ್ರೆ ಮಾಡಲೇಬೇಕೆಂದು ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಆಸ್ಪತ್ರೆ ಕೇವಲ ಶಿವಮೊಗ್ಗ ಜಿಲ್ಲೆಗಷ್ಟೆ ಅಲ್ಲದೇ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಜನತೆಗೂ ಅನುಕೂಲವಾಗಲಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಕಟ್ಟಡ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಮುಗಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಎರಡು ವರ್ಷದ ಒಳಗೆ ಕಾಮಗಾರಿ ಮುಗಿಸಿದರೆ ಬೋನಸ್ ನೀಡಲಾಗುವುದು. ಇಎಸ್ಐಸಿ ಆಸ್ಪತ್ರೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗೆ ಒಂದು ಮೈಲಿಗಲ್ಲು ಆಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ , ನಮ್ಮ ಸಂಸದರು, ಜಿಲ್ಲೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಳೆದ ಲೋಕಸಭ ಚುನಾವಣೆಯಲ್ಲಿ ನಟರಾಜ್ ಹಾಗೂ ಇತರರು ಇಎಸ್ಐಸಿ ಆಸ್ಪತ್ರೆ ಮಾಡುವ ಕುರಿತು ಆಶ್ವಾಸನೆ ನೀಡಿ ಪ್ರಚಾರ ನಡೆಸಿದ್ದರು. ಈಗ ಅದು ಜಾರಿಗೆ ಬರುತ್ತಿದೆ. ಇದು ಒಂದು ರೀತಿ ಋಣ ತೀರಿಸಿದಂತೆ ಎಂದರು.

ಓದಿ : ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ‌ ಬೆಡ್-ಆಕ್ಸಿಜನ್​ ಇಲ್ಲ: ಕೊರೊನಾ ರೋಗಿಗಳ ಗೋಳು ಕೇಳೋರಿಲ್ಲ! ವಿಡಿಯೋ

ನಮ್ಮ ರಾಜ್ಯದಿಂದ ಯಾವುದೇ ಯೋಜನೆ ತೆಗೆದುಕೊಂಡು ಹೋದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲ ಎಂದು ಹೇಳುವುದಿಲ್ಲ. ಆದರೆ, ನಮ್ಮ ರಾಜ್ಯದ ವಿರೋಧ ಪಕ್ಷದವರಿಗೆ ಇದು ಗೂತ್ತೆ ಇಲ್ಲ. ಸುಮ್ಮನೆ ನಮ್ಮ ರಾಜ್ಯದ ವಿರೋಧ ಪಕ್ಷದವರು ಕೇವಲ ಟೀಕೆ ಮಾಡುವುದನ್ನೆ ಕೆಲಸ ಮಾಡಿದ್ದಾರೆ. ಅಭಿವೃದ್ದಿ ಕೆಲಸದ ಕುರಿತು ಸಲಹೆ ನೀಡಿದ್ರೆ ಸ್ವೀಕಾರ ಮಾಡುತ್ತೇವೆ ಎಂದರು.‌

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.