ETV Bharat / state

ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಉಪ ಲೋಕಾಯುಕ್ತರ ಅನಿರೀಕ್ಷಿತ ಭೇಟಿ, ಪರಿಶೀಲನೆ - ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ಇಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಶಾಕ್​ ನೀಡಿದರು.

ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್
Deputy Lokayukta Justice BS Patel, surprise visit
author img

By

Published : Jan 9, 2020, 6:53 PM IST

ಶಿವಮೊಗ್ಗ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಇಂದು ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಅಧಿಕಾರಿ ಹಾಗು ಸಿಬ್ಬಂದಿ ವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ಇಂದು ಮತ್ತು ನಾಳೆ ಉಪ ಲೋಕಾಯುಕ್ತರು ಜಿಲ್ಲಾ ಪ್ರವಾಸದಲ್ಲಿದ್ದಾರೆ. ಇಂದು ನಗರದ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವ ವಿಚಾರವನ್ನು ಗೌಪ್ಯವಾಗಿಟ್ಟಿದ್ದು, ದಿಢೀರ್​ ಅಂತ ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲಿಸಿದರು.

ಸರ್ಕಾರಿ ಶಾಲೆ, ಹಾಸ್ಟೆಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ:
ಉಪ ಲೋಕಾಯುಕ್ತರು ಮೊದಲು ಗಾಡಿಕೊಪ್ಪದ ಸರ್ಕಾರಿ ಫ್ರೌಢಶಾಲೆಗೆ ಭೇಟಿ ನೀಡಿ ಕೊಠಡಿ ಸೇರಿದಂತೆ ಅಡುಗೆ ಕೋಣೆ, ದಿನಸಿ‌ ದಾಸ್ತಾನು ಕೊಠಡಿ ಹಾಗೂ ಉಗ್ರಾಣ ಪರಿಶೀಲಿಸಿದರು. ಈ ವೇಳೆ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು ಶಿಕ್ಷಕರು ಹಾಜರಿ ಹಾಕಿ ಶಾಲೆಯಿಂದ ಹೊರ ಹೋಗಿದ್ದರು. ಈ ಬೇಜವಾಬ್ದಾರಿಯನ್ನು ಕಂಡ ಉಪ ಲೋಕಾಯುಕ್ತರು ಶಿಕ್ಷಕರಿಗೆ ಕ್ಲಾಸ್​​ ತೆಗೆದುಕೊಂಡರು. ಬಳಿಕ ಮೊಹಲ್ಲಾದ ಸರ್ಕಾರಿ ಬಾಲಕಿಯರ ಹಾಸ್ಟೆಲ್​ಗೆ ಭೇಟಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ, ಪರಿಶೀಲನೆ:
ಬಾಪೂಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ಇಲ್ಲಿನ ವೈದ್ಯರು, ನರ್ಸ್ ಸೇರಿದಂತೆ ರೋಗಿಗಳ ಬಳಿ ಇರುವ ಕುಂದು ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಔಷಧ ದಾಸ್ತಾನು ಎಷ್ಟಿದೆ ಎಂಬುದರ ಬಗ್ಗೆ ಪ್ರಶ್ನಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ. ಜಿ.ಎಸ್.ಪಾಟೀಲ್​, ಇದು ವರ್ಷದ ಮೊದಲ ಅನಿರೀಕ್ಷಿತ ಭೇಟಿಯಾಗಿದೆ. ಇನ್ನೂ ಮುಂದೆ ಇದೇ ರೀತಿ ಪ್ರತಿ ಜಿಲ್ಲೆಗೂ ಭೇಟಿ ನೀಡಲಾಗುವುದು. ಆಡಳಿತವನ್ನು‌ ಸುಗಮವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರುತ್ತದೆ. ನಮ್ಮ ಉದ್ದೇಶ ಸರ್ಕಾರಿ ಯೋಜನೆ ಜನಸಾಮಾನ್ಯರಿಗೆ ತಲುಪುತ್ತಿದೆಯೇ ಎಂಬುದನ್ನು ಗಮನಿಸುವುದಾಗಿದೆ ಎಂದರು.

ಶಿವಮೊಗ್ಗ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಇಂದು ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಅಧಿಕಾರಿ ಹಾಗು ಸಿಬ್ಬಂದಿ ವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ಇಂದು ಮತ್ತು ನಾಳೆ ಉಪ ಲೋಕಾಯುಕ್ತರು ಜಿಲ್ಲಾ ಪ್ರವಾಸದಲ್ಲಿದ್ದಾರೆ. ಇಂದು ನಗರದ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವ ವಿಚಾರವನ್ನು ಗೌಪ್ಯವಾಗಿಟ್ಟಿದ್ದು, ದಿಢೀರ್​ ಅಂತ ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲಿಸಿದರು.

ಸರ್ಕಾರಿ ಶಾಲೆ, ಹಾಸ್ಟೆಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ:
ಉಪ ಲೋಕಾಯುಕ್ತರು ಮೊದಲು ಗಾಡಿಕೊಪ್ಪದ ಸರ್ಕಾರಿ ಫ್ರೌಢಶಾಲೆಗೆ ಭೇಟಿ ನೀಡಿ ಕೊಠಡಿ ಸೇರಿದಂತೆ ಅಡುಗೆ ಕೋಣೆ, ದಿನಸಿ‌ ದಾಸ್ತಾನು ಕೊಠಡಿ ಹಾಗೂ ಉಗ್ರಾಣ ಪರಿಶೀಲಿಸಿದರು. ಈ ವೇಳೆ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು ಶಿಕ್ಷಕರು ಹಾಜರಿ ಹಾಕಿ ಶಾಲೆಯಿಂದ ಹೊರ ಹೋಗಿದ್ದರು. ಈ ಬೇಜವಾಬ್ದಾರಿಯನ್ನು ಕಂಡ ಉಪ ಲೋಕಾಯುಕ್ತರು ಶಿಕ್ಷಕರಿಗೆ ಕ್ಲಾಸ್​​ ತೆಗೆದುಕೊಂಡರು. ಬಳಿಕ ಮೊಹಲ್ಲಾದ ಸರ್ಕಾರಿ ಬಾಲಕಿಯರ ಹಾಸ್ಟೆಲ್​ಗೆ ಭೇಟಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ, ಪರಿಶೀಲನೆ:
ಬಾಪೂಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು ಇಲ್ಲಿನ ವೈದ್ಯರು, ನರ್ಸ್ ಸೇರಿದಂತೆ ರೋಗಿಗಳ ಬಳಿ ಇರುವ ಕುಂದು ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಔಷಧ ದಾಸ್ತಾನು ಎಷ್ಟಿದೆ ಎಂಬುದರ ಬಗ್ಗೆ ಪ್ರಶ್ನಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ. ಜಿ.ಎಸ್.ಪಾಟೀಲ್​, ಇದು ವರ್ಷದ ಮೊದಲ ಅನಿರೀಕ್ಷಿತ ಭೇಟಿಯಾಗಿದೆ. ಇನ್ನೂ ಮುಂದೆ ಇದೇ ರೀತಿ ಪ್ರತಿ ಜಿಲ್ಲೆಗೂ ಭೇಟಿ ನೀಡಲಾಗುವುದು. ಆಡಳಿತವನ್ನು‌ ಸುಗಮವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರುತ್ತದೆ. ನಮ್ಮ ಉದ್ದೇಶ ಸರ್ಕಾರಿ ಯೋಜನೆ ಜನಸಾಮಾನ್ಯರಿಗೆ ತಲುಪುತ್ತಿದೆಯೇ ಎಂಬುದನ್ನು ಗಮನಿಸುವುದಾಗಿದೆ ಎಂದರು.

Intro:ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಿಗ ಅನಿರೀಕ್ಷಿತ ಭೇಟಿ ಮಾಡಲಾಗುವುದು: ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್.

ಶಿವಮೊಗ್ಗ: ಉಪ ಲೋಕಾಯುಕ್ತ-೨ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ರವರು ಇಂದು ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ‌ ಅಚ್ಚರಿಗೆ ಕಾರಣರಾದರು. ಇಂದು ಮತ್ತು ನಾಳೆ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿ ಇರುವ ಉಪಲೋಕಾಯುಕ್ತರು ಇಂದು ಶಿವಮೊಗ್ಗದ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವ ವರೆಗೂ ಗೌಪ್ಯವಾಗಿಟ್ಟಿದ್ದರು. ತಾವು ಎಲ್ಲಿ ಭೇಟಿ ನೀಡುತ್ತೆವೆ ಎಂದು ತಿಳಿಸಿರಲಿಲ್ಲ. ಬೆಳಗ್ಗೆ
ಜಿಲ್ಲಾ ಪಂಚಾಯತ್ ನಿಂದ ಹೊರಡುವುವಾಗ ಯಾವ ಸಂಸ್ಥೆಗೆ ಭೇಟಿ ನೀಡುತ್ತೆನೆ ಎಂದು ತಿಳಿಸದೆ ಇರುವುದರಿಂದ ಎಲ್ಲಾ ಅಧಿಕಾರಿಗಳು ಉಪ ಲೋಕಾಯುಕ್ತರ ಕಾರನ್ನು ಹಿಂಬಾಲಿಸುವಂತೆ ಆಯಿತು.


Body:ಸರ್ಕಾರಿ ಶಾಲೆ, ಹಾಸ್ಟೆಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದಿಢೀರ್ ಭೇಟಿ:
ಉಪ ಲೋಕಾಯುಕ್ತ ಜಿ.ಎಸ್.ಪಾಟೀಲರವರು ತಾವು ಎಲ್ಲಿಗೆ ಭೇಟಿ ನೀಡುತ್ತೆವೆ ಎಂದು ತಿಳಿಸದರೆ ಅಲ್ಲಿನ ಅಧಿಕಾರಿಗಳು ಅಲರ್ಟ್ ಆಗುತ್ತಾರೆ ಎಂದು ತಿಳಿದು ಯಾರಿಗೂ ಯಾವ ಕಡೆ ಭೇಟಿ ಅಂತ ತಿಳಿಸಿರಲಿಲ್ಲ. ಇದರಿಂದ ಮಾಧ್ಯಮದವರು ಸೇರಿದಂತೆ ಅಧಿಕಾರಿಗಳು ಅವರನ್ನು ಹಿಂಬಾಲಿಸುವಂತೆ ಆಯಿತು. ಉಪ ಲೋಕಾಯುಕ್ತರು ಮೊದಲು ಗಾಡಿಕೊಪ್ಪದ ಸರ್ಕಾರಿ ಫ್ರೌಢಶಾಲೆಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದರು. ಶಾಲೆಗೆ ಹಾಜರಾದ ಶಿಕ್ಷಕರ ಹಾಜರಾತಿ ಪುಸ್ತಕ ಪಡೆದು ನೋಡಿದಾಗ ಶಾಲೆಯ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು‌ ಶಿಕ್ಷಕರು ಹಾಜರಿ ಹಾಕಿ ಶಾಲೆಯಿಂದ ಹೊರಗೆ ಹೋಗಿದ್ದರು. ಇದರಿಂದ ಹಾಜರಾತಿ ಪುಸ್ತಕದ ಜೆರಾಕ್ಸ್ ಪಡೆದು ಕೊಂಡರು. ನಂತ್ರ ಮಕ್ಕಳ ಬಳಿ ತೆರಳಿ ಪಾಠ ಹೇಗೆ ನಡೆಯುತ್ತಿದೆ. ಶಿಕ್ಷಕರು ತರಗತಿಗೆ ಹಾಜರಾಗುತ್ತಿದ್ದಾರಾ ಎಂದು ಕೇಳಿ ತಿಳಿದು ಕೊಂಡರು. ಈ ವೇಳೆ ಹತ್ತನೆ ತರಗತಿ ಮಕ್ಕಳ ಹಾಜರಾತಿ‌ ಪುಸ್ತಕ ನೋಡಿ ಕಳೆದ ಒಂದು ತಿಂಗಳಿನಿಂದ ಕೆಲ ಮಕ್ಕಳು ಶಾಲೆಗೆ ಬರುತ್ತಿಲ್ಲವಲ್ಲ ಎಂದು ಶಿಕ್ಷಕರನ್ನು ಕೇಳಿದರು. ಈ ವೇಳೆ ಮಕ್ಕಳ ಮನೆಗೆ ಭೇಟಿ ನೀಡಿ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ಪಡೆದು ಕೊಂಡರು. ಬಿಸಿಯೂಟ, ದಿನಸಿ ದಾಸ್ತಾನು‌ ಪರಿಶೀಲಿಸಿ ಅಲ್ಲಿಂದ ಟ್ಯಾಂಕ್ ಮೊಹಲ್ಲದ ಸರ್ಕಾರಿ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿದರು. ಇಲ್ಲಿ ಮಕ್ಕಳ ಕೊಠಡಿ, ಅಡುಗೆ ಕೋಣೆ, ದಿನಸಿ‌ ದಾಸ್ತಾನು ಕೊಠಡಿ ಹಾಗೂ ಸ್ಟಾಕ್ ಪರಿಶೀಲಿಸಿದರು. ಈ ವೇಳೆ ಶೌಚಾಲಯಕ್ಕೆ ಭೇಟಿ ನೀಡಿ ಹಾಸ್ಟೆಲ್ ವಾರ್ಡನ್ ಗೆ ಶಬ್ಬಾಷ್ ನೀಡಿದರು.


Conclusion:ನಂತ್ರ ಬಾಪೊಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು. ಇಲ್ಲಿನ ವೈದ್ಯರು, ನರ್ಸ್ ಸೇರಿದಂತೆ ರೋಗಿಗಳ ಬಳಿ ಇರುವ ಕುಂದು ಕೊರತೆಯ ಬಗ್ಗೆ ಚರ್ಚೆ ನಡೆಸಿದರು. ಔಷಧ ದಾಸ್ತಾನು ಮಾಹಿತಿಯನ್ನು ಜಿಲ್ಲಾ ಆರೋಗ್ಯಧಿಕಾರಿ ರಾಜೇಶ್ ರವರಿಂದ ಪಡೆದು ಕೊಂಡರು. ನಂತ್ರ ಮಾತನಾಡಿದ ಉಪ ಲೋಕಾಯುಕ್ತ ಜಿ.ಎಸ್.ಪಾಟೀಲ್ ರವರು, ಇದು ವರ್ಷದ ಮೊದಲ ಜಿಲ್ಲೆಯ ಪ್ರಥಮ ಅನಿರೀಕ್ಷಿತ ಭೇಟಿಯಾಗಿದೆ. ಇನ್ನೂ ಮುಂದೆ ಇದೇ ರೀತಿ ಪ್ರತಿ ಜಿಲ್ಲೆಯಲ್ಲೂ ಭೇಟಿ ನೀಡಲಾಗುವುದು. ಆಡಳಿತವನ್ನು‌ ಸುಗಮವಾಗಿ ನಡೆಸಿ ಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರುತ್ತದೆ. ಇಂದು ಶಾಲೆಗೆ ಭೇಟಿ ನೀಡಿದಾಗ ನಿರಾಸೆ ಆಯ್ತು. ಹಾಸ್ಟೆಲ್ ಹಾಗೂ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಪರವಾಗಿಲ್ಲ ಎಂದೆನಿಸಿದೆ ಇದೆ ರೀತಿ ಇರುತ್ತದೆ. ನಮ್ಮ ಉದ್ದೇಶ ಸರ್ಕಾರಿ ಯೋಜನೆ ಜನ ಸಾಮಾನ್ಯರಿಗೆ ತಲುಪುತ್ತಿದೆಯೇ ಎಂಬುದನ್ನು ಗಮನಿಸುವುದಾಗಿದೆ ಎಂದರು. ನಂತ್ರ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ರವರು ಉಪ ಲೋಕಾಯುಕ್ತರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.

ಬೈಟ್: ಜಿ.ಎಸ್.ಪಾಟೀಲ್. ಉಪಲೋಕಾಯುಕ್ತ-೨(ಕೋಟ್ ಹಾಕಿರುವವರು).

ಬೈಟ್: ರಾಜೇಶ್ ಸುರಗಿಹಳ್ಳಿ. ಡಿಹೆಚ್ಓ. ಶಿವಮೊಗ್ಗ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.